‘ದೇವರ’ ಚಿತ್ರತಂಡ ಉದ್ದೇಶಪೂರ್ವಕವಾಗಿ ಇವೆಂಟ್ ರದ್ದು ಮಾಡಿತೆ?

Devera: ಭಾನುವಾರ ಆಯೋಜನೆಗೊಂಡಿದ್ದ ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ರದ್ದಾಗಿರುವುದು ವಿವಾದಕ್ಕೆ ಕಾರಣವಾಗಿದೆ. ಇವೆಂಟ್ ಅನ್ನು ಉದ್ದೇಶಪೂರ್ವಕವಾಗಿ ರದ್ದು ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

‘ದೇವರ’ ಚಿತ್ರತಂಡ ಉದ್ದೇಶಪೂರ್ವಕವಾಗಿ ಇವೆಂಟ್ ರದ್ದು ಮಾಡಿತೆ?
ಜೂ ಎನ್​ಟಿಆರ್
Follow us
|

Updated on: Sep 24, 2024 | 10:56 AM

ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾ ಇನ್ನು ಎರಡು ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾಕ್ಕಾಗಿ ಭರ್ಜರಿ ಪ್ರಚಾರ ಮಾಡಿರುವ ಜೂ ಎನ್​ಟಿಆರ್, ಸೆಪ್ಟೆಂಬರ್ 22 ರ ಭಾನುವಾರದಂದು ಹೈದರಾಬಾದ್​ನಲ್ಲಿ ಪ್ರೀ ರಿಲೀಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಟಿಕೆಟ್ ಮಾರಾಟ ಸಹ ಮಾಡಲಾಗಿತ್ತು. ಆದರೆ ಕಾರ್ಯಕ್ರಮವನ್ನು ರದ್ದು ಮಾಡಲಾಯ್ತು. 5000 ಜನ ಸೇರಬೇಕಿದ್ದ ಜಾಗದಲ್ಲಿ 15 ಸಾವಿರ ಮಂದಿ ಬಂದ ಕಾರಣದಿಂದಾಗಿ ಜನರನ್ನು ನಿಯಂತ್ರಿಸುವುದು ಕಷ್ಟವಾದ ಕಾರಣ ಇವೆಂಟ್ ಅನ್ನು ರದ್ದು ಮಾಡಬೇಕಾಯ್ತು ಎಂದು ಆಯೋಜಕರು ಹೇಳಿದರು. ಜೂ ಎನ್​ಟಿಆರ್ ಸಹ ಈ ಬಗ್ಗೆ ವಿಷಾಧ ವ್ಯಕ್ತಪಡಿಸಿದರು. ಆದರೆ ಈ ಇವೆಂಟ್ ಅನ್ನು ರದ್ದು ಮಾಡುವ ಉದ್ದೇಶದಿಂದಲೇ ಆಯೋಜನೆ ಮಾಡಲಾಗಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ.

‘ದೇವರ’ ಚಿತ್ರತಂಡ ಅಭಿಮಾನಿಗಳನ್ನು ಮೂರ್ಖರನ್ನಾಗಿಸಿದೆ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ. ಜೂ ಎನ್​ಟಿಆರ್ ಅದೆಷ್ಟು ದೊಡ್ಡ ಸ್ಟಾರ್ ನಟ, ಹೈದರಾಬಾದ್​ನಂಥಹಾ ಪ್ರಮುಖ ನಗರದಲ್ಲಿ ಅವರ ಕಾರ್ಯಕ್ರಮ ಆಯೋಜಿಸುತ್ತಿರುವಾಗ ದೊಡ್ಡ ಜಾಗದಲ್ಲಿ ಆಯೋಜಿಸಬೇಕು ಎಂಬುದು ಕನಿಷ್ಟ ಕಾಮನ್​ಸೆನ್ಸ್​ನ ವಿಷಯ ಹಾಗಿದ್ದರೂ ಸಹ ಹೋಟೆಲ್​ನಲ್ಲಿ ಕಾರ್ಯಕ್ರಮ ಆಯೋಜಿಸಲು ಕಾರಣವೇನು ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದಾರೆ.

ಇವೆಂಟ್​ ಆಯೋಜಿಸಿದ್ದ ಸ್ಥಳದಲ್ಲಿ 5000 ಮಂದಿಗಷ್ಟೆ ಕೆಪಾಸಿಟಿ ಇದ್ದ ಮೇಲೆ 10-15 ಸಾವಿರ ಟಿಕೆಟ್​ಗಳನ್ನು ಮಾರಾಟ ಮಾಡಲು ಕಾರಣವೇನು? ಅಷ್ಟು ಜನರಿಗೆ ಸ್ಥಳಾವಕಾಶವೇ ಇಲ್ಲ ಎಂದ ಮೇಲೆ ಅಷ್ಟೋಂದು ಟಿಕೆಟ್​ಗಳನ್ನು ಮಾರಾಟ ಮಾಡಿದ್ದು ಹೇಗೆ? ಎಂದು ಸಹ ಕೆಲವರು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಈಗ ಮಾರಾಟವಾದ ಟಿಕೆಟ್​ಗಳಿಗೆ ಕೊಡಲಾಗಿರುವ ಹಣದ ರೀಫಂಡ್ ಹೇಗೆ ಎಂಬ ಬಗ್ಗೆ ಈ ವರೆಗೆ ಮಾಹಿತಿ ನೀಡಲಾಗಿಲ್ಲವಂತೆ.

ಇದನ್ನೂ ಓದಿ:ಜೂ ಎನ್​ಟಿಆರ್ ಮನವಿಗೆ ಸ್ಪಂದಿಸಿದ ನಿರ್ದೇಶಕ ವೆಟ್ರಿಮಾರನ್

ಕಾರ್ಯಕ್ರಮ ರದ್ದಾಗುತ್ತದೆ ಎಂಬುದು ಮೊದಲೇ ಗೊತ್ತಿದ್ದರಿಂದ ಸಿನಿಮಾದ ನಾಯಕಿ ಜಾನ್ಹವಿ ಕಪೂರ್ ಆಗಲಿ, ನಟ ಸೈಫ್ ಅಲಿ ಖಾನ್ ಇನ್ನಿತರರು ಹೈದರಾಬಾದ್​ಗೆ ಆಗಮಿಸಿಯೇ ಇರಲಿಲ್ಲ ಎನ್ನಲಾಗುತ್ತಿದೆ. ಸೈಫ್ ಅಲಿ ಖಾನ್ ಹಾಗೂ ಜಾನ್ಹವಿ ಮುಂಬೈನಲ್ಲಿಯೇ ಇದ್ದರಂತೆ. ಇವೆಂಟ್ ರದ್ದಾಗುತ್ತದೆ ಎಂಬುದು ಅವರಿಗೆ ಮೊದಲೇ ಗೊತ್ತಿತ್ತಾದ್ದರಿಂದಲೇ ಅವರು ಹೈದರಾಬಾದ್​ಗೆ ಬಂದಿರಲಿಲ್ಲ ಎನ್ನಲಾಗುತ್ತಿದೆ.

ಇನ್ನು ಜೂ ಎನ್​ಟಿಆರ್​ಗೆ ಭಾನುವಾರ ರಾತ್ರಿ 11 ಗಂಟೆಗೆ ಅಮೆರಿಕದ ಫ್ಲೈಟ್ ವಾರದ ಮೊದಲೇ ಬುಕ್ ಆಗಿತ್ತು. ಅಮೆರಿಕದಲ್ಲಿ ‘ದೇವರ’ ಸಿನಿಮಾದ ಮೊದಲ ಶೋ ನೋಡಲು ಅಲ್ಲಿ ಪ್ರಚಾರ ಮಾಡಲು ಜೂ ಎನ್​ಟಿಆರ್ ತೆರಳಬೇಕಿತ್ತು, ಇವೆಂಟ್ ರದ್ದಾಗಲೂ ಇದೂ ಸಹ ಒಂದು ಕಾರಣ ಎನ್ನಲಾಗುತ್ತಿದೆ. ಜೂ ಎನ್​ಟಿಆರ್, ವಿಮಾನ ಹತ್ತಲು ನಿಲ್ದಾಣಕ್ಕೆ ಬಂದ ವಿಡಿಯೋಗಳನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಭಾನುವಾರ ಇವೆಂಟ್ ರದ್ದಾದ ಬಳಿಕ ಜೂ ಎನ್​ಟಿಆರ್, ಹಂಚಿಕೊಂಡಿರುವ ವಿಡಿಯೋವನ್ನು ವಿಮಾನ ನಿಲ್ದಾಣದ ವಿಶೇಷ ಲಾಂಚ್​ನಲ್ಲಿಯೇ ಶೂಟ್ ಮಾಡಲಾಗಿದೆ ಎನ್ನಲಾಗುತ್ತಿದೆ.

ಇನ್ನು ಇವೆಂಟ್ ರದ್ದಾದ ಬಗ್ಗೆ ಆಯೋಜಕರು ನೀಡಿರುವ ಸ್ಪಷ್ಟನೆಯಲ್ಲಿ, ಮಳೆ ಬರಬಹುದೆಂಬ ಕಾರಣಕ್ಕೆ ನಾವು ಇಂಡೋರ್​ನಲ್ಲಿ ಇವೆಂಟ್ ಆಯೋಜನೆ ಮಾಡಿದ್ದೆವು. ಆದರೆ ನಮ್ಮ ನಿರೀಕ್ಷೆಗೂ ಮೀರಿ ಭಾರಿ ಸಂಖ್ಯೆಯಲ್ಲಿ ಜನ ಬಂದು, ಅಷ್ಟು ಮಂದಿಯನ್ನು ನಿಯಂತ್ರಿಸುವುದು ಅಸಾಧ್ಯ ಎಂಬ ಕಾರಣಕ್ಕೆ ನಾವು ಇವೆಂಟ್ ರದ್ದು ಮಾಡಿದೆವು ಎಂದಿದ್ದಾರೆ. ಆದರೆ ಇವೆಂಟ್ ನಡೆದ ದಿನ ಅಂದರೆ ಭಾನುವಾರ ಹೈದರಾಬಾದ್​ನಲ್ಲಿ ತುಸುವೂ ಸಹ ಮಳೆ ಬಂದಿಲ್ಲ. ಒಟ್ಟಾರೆಯಾಗಿ ಇವೆಂಟ್ ರದ್ದು ಮಾಡಿದ್ದಕ್ಕೆ ಜೂ ಎನ್​ಟಿಆರ್ ಅಭಿಮಾನಿಗಳು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಮ್ಮ ಪರ ತೀರ್ಪು ಬರದಿದ್ದರೆ ಸುಪ್ರೀಂ ಮೊರೆ ಹೋಗುತ್ತೇವೆಂದ ಸ್ನೇಹಮಯಿ ಕೃಷ್ಣ
ನಮ್ಮ ಪರ ತೀರ್ಪು ಬರದಿದ್ದರೆ ಸುಪ್ರೀಂ ಮೊರೆ ಹೋಗುತ್ತೇವೆಂದ ಸ್ನೇಹಮಯಿ ಕೃಷ್ಣ
Vijayapura Rain: ವಿಜಯಪುರದಲ್ಲಿ ಭಾರೀ ಮಳೆ, ಕೆರೆಯಂತಾದ ರಸ್ತೆಗಳು
Vijayapura Rain: ವಿಜಯಪುರದಲ್ಲಿ ಭಾರೀ ಮಳೆ, ಕೆರೆಯಂತಾದ ರಸ್ತೆಗಳು
ಕೆಸರಿನ ಗುಂಡಿಯಲ್ಲಿ ಸಿಲುಕಿದ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್​ ಕಾರು
ಕೆಸರಿನ ಗುಂಡಿಯಲ್ಲಿ ಸಿಲುಕಿದ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್​ ಕಾರು
Daily Devotional: ಎಡಗೈಯಲ್ಲಿ ಬರೆಯುತ್ತಿದ್ದರೆ ಅರ್ಥವೇನು? ವಿಡಿಯೋ ನೋಡಿ
Daily Devotional: ಎಡಗೈಯಲ್ಲಿ ಬರೆಯುತ್ತಿದ್ದರೆ ಅರ್ಥವೇನು? ವಿಡಿಯೋ ನೋಡಿ
Nithya Bhavishya: ಭಾದ್ರಪದ ಮಾಸದ 4ನೇ ಮಂಗಳವಾರದ ದಿನ ಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸದ 4ನೇ ಮಂಗಳವಾರದ ದಿನ ಭವಿಷ್ಯ ತಿಳಿಯಿರಿ
‘ಬಿಗ್ ಬಾಸ್ 11’ ಸಂಭಾವನೆ ವಿಚಾರ ಕೇಳಿದ್ದಕ್ಕೆ ಕಿಚ್ಚ ಸುದೀಪ್ ಉತ್ತರ ಏನು?
‘ಬಿಗ್ ಬಾಸ್ 11’ ಸಂಭಾವನೆ ವಿಚಾರ ಕೇಳಿದ್ದಕ್ಕೆ ಕಿಚ್ಚ ಸುದೀಪ್ ಉತ್ತರ ಏನು?
ಆಂಧ್ರಪ್ರದೇಶದ ಗದ್ದೆಯಲ್ಲೆದ್ದ ಸುಂಟರಗಾಳಿಯ ವಿಡಿಯೋ ವೈರಲ್
ಆಂಧ್ರಪ್ರದೇಶದ ಗದ್ದೆಯಲ್ಲೆದ್ದ ಸುಂಟರಗಾಳಿಯ ವಿಡಿಯೋ ವೈರಲ್
ಮರೆಯಲಾಗದ ಕ್ಷಣ; ಮೋದಿ ನ್ಯೂಯಾರ್ಕ್​ ಭೇಟಿಯ ಹೈಲೈಟ್ಸ್ ಇಲ್ಲಿದೆ
ಮರೆಯಲಾಗದ ಕ್ಷಣ; ಮೋದಿ ನ್ಯೂಯಾರ್ಕ್​ ಭೇಟಿಯ ಹೈಲೈಟ್ಸ್ ಇಲ್ಲಿದೆ
‘ಬಿಗ್ ಬಾಸ್ ಕನ್ನಡ 11’ ಶೋ ಆರಂಭಕ್ಕೂ ಮೊದಲೇ ತಿಳಿಯುತ್ತೆ ಸ್ಪರ್ಧಿಗಳ ಹೆಸರು
‘ಬಿಗ್ ಬಾಸ್ ಕನ್ನಡ 11’ ಶೋ ಆರಂಭಕ್ಕೂ ಮೊದಲೇ ತಿಳಿಯುತ್ತೆ ಸ್ಪರ್ಧಿಗಳ ಹೆಸರು
ಕಾಡಿಂದ ಹೊರಬಂದು ಎಂಜಾಯ್ ಮಾಡಿದ ಕರಡಿಗಳ ವಿಡಿಯೋ ವೈರಲ್
ಕಾಡಿಂದ ಹೊರಬಂದು ಎಂಜಾಯ್ ಮಾಡಿದ ಕರಡಿಗಳ ವಿಡಿಯೋ ವೈರಲ್