Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅನ್ನಪೂರ್ಣಿ’ ವಿವಾದ, ನಯನತಾರಾ ಬೆಂಬಲಕ್ಕೆ ವೆಟ್ರಿಮಾರನ್

Annapoorani: ವಿವಾದಕ್ಕೆ ಈಡಾಗಿರುವ ನಯನತಾರಾ ನಟನೆಯ ‘ಅನ್ನಪೂರ್ಣಿ’ ಸಿನಿಮಾವನ್ನು ನೆಟ್​ಫ್ಲಿಕ್ಸ್​ನಿಂದ ತೆಗೆದು ಹಾಕಿರುವುದಕ್ಕೆ ವೆಟ್ರಿಮಾರನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಅನ್ನಪೂರ್ಣಿ’ ವಿವಾದ, ನಯನತಾರಾ ಬೆಂಬಲಕ್ಕೆ ವೆಟ್ರಿಮಾರನ್
Follow us
ಮಂಜುನಾಥ ಸಿ.
|

Updated on: Jan 17, 2024 | 4:56 PM

ನಯನತಾರಾ (Nayanatara) ನಟಿಸಿರುವ ‘ಅನ್ನಪೂರ್ಣಿ’ ಸಿನಿಮಾ ವಿವಾದ ಎಬ್ಬಿಸಿದೆ. ಡಿಸೆಂಬರ್ 1ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಸಾಧಾರಣ ಯಶಸ್ಸನ್ನಷ್ಟೆ ಕಂಡಿತು. ಬಳಿಕ ಅದೇ ತಿಂಗಳು 29ಕ್ಕೆ ಒಟಿಟಿಯಲ್ಲಿ ಬಿಡುಗಡೆ ಆಯ್ತು. ಒಟಿಟಿಗೆ ಬಂದ ಬಳಿಕ ಹಲವು ಈ ಸಿನಿಮಾ ವೀಕ್ಷಿಸಿದರು. ಆದರೆ ಸಿನಿಮಾದ ಕಂಟೆಂಟ್, ಕೆಲವು ಸಂಭಾಷಣೆಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಯ್ತು. ನೆಟ್​ಫ್ಲಿಕ್ಸ್​, ನಯನತಾರಾ ಸೇರಿದಂತೆ ಚಿತ್ರತಂಡದ ಇನ್ನೂ ಕೆಲವರ ವಿರುದ್ಧ ದೂರುಗಳು ಸಹ ದಾಖಲಾದವು. ಕೊನೆಗೆ ಸಿನಿಮಾವನ್ನು ಒಟಿಟಿಯಿಂದ ಡಿಲೀಟ್ ಮಾಡಲಾಯ್ತು. ವಿವಾದ ಎಬ್ಬಿಸಿದ ಈ ಸಿನಿಮಾದ ಬೆಂಬಲಕ್ಕೆ ಖ್ಯಾತ ನಿರ್ದೇಶಕ ವೆಟ್ರಿಮಾರನ್ ನಿಂತಿದ್ದಾರೆ.

ಭಾರತದ ಪ್ರತಿಭಾವಂತ ನಿರ್ದೇಶಕರ ಸಾಲಿನಲ್ಲಿ ಗುರುತಿಸಲಾಗುವ ವೆಟ್ರಿಮಾರನ್, ‘ಅನ್ನಪೂರ್ಣಿ’ ಸಿನಿಮಾಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ‘ಭಾರತದಲ್ಲಿ ಸೆನ್ಸಾರ್ ಇಲ್ಲದ ಸೃಜನಾತ್ಮಕ ಸ್ವಾತಂತ್ರ್ಯ ಎಂಬುದು ಇಲ್ಲ. OTT ಯಲ್ಲಿ ಬಿಡುಗಡೆಯಾದ ಚಿತ್ರಗಳಿಗೂ ಸಹ ಇದು ಅನ್ವಯಿಸುತ್ತದೆ. ಸೆನ್ಸಾರ್ ಮಂಡಳಿಯಿಂದ ಚಲನಚಿತ್ರವನ್ನು ಅನುಮೋದಿಸಿದರೂ ಸಹ, ಬಾಹ್ಯ ಒತ್ತಡಗಳಿಗೆ ಮಣಿದು ಅದನ್ನು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಂದ ತೆಗೆದುಹಾಕಬಹುದು ಅದು ಭಾರತದಲ್ಲಿ ಮಾತ್ರ ಸಾಧ್ಯ’ ಎಂದು ಕುಟುಕಿದ್ದಾರೆ.

ಇದನ್ನೂ ಓದಿ:ಶ್ರೀರಾಮನಿಗೆ ಅಪಮಾನ ಆರೋಪ: ನಯನತಾರಾ ವಿರುದ್ಧ ಪ್ರಕರಣ ದಾಖಲು

‘ಚಲನಚಿತ್ರವನ್ನು ಅನುಮತಿಸುವ ಅಥವಾ ನಿರ್ಬಂಧಿಸುವ ಅಧಿಕಾರವುಳ್ಳ ಏಕೈಕ ಸಂಸ್ಥೆ ಸೆನ್ಸಾರ್ ಮಂಡಳಿ ಮತ್ತು ಸೆನ್ಸಾರ್ ಮಂಡಳಿಯಿಂದ ಅನುಮೋದಿಸಲಾದ ಚಲನಚಿತ್ರವನ್ನು ಬಾಹ್ಯ ಪ್ರಭಾವಗಳಿಂದ ತೆಗೆದುಹಾಕಲು ಹೇಗೆ ಒತ್ತಾಯಿಸಲಾಯಿತು ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ಇಂತಹ ಘಟನೆಗಳು ಸೆನ್ಸಾರ್ ಮಂಡಳಿಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತೆ ಮಾಡುತ್ತವೆ ಎಂದು ವೆಟ್ರಿಮಾರನ್ ಹೇಳಿದ್ದಾರೆ.

‘ಅನ್ನಪೂರ್ಣಿ’ ಸಿನಿಮಾ ಲವ್ ಜಿಹಾದ್​ಗೆ ಪರೋಕ್ಷ ಪ್ರಚಾರ ನೀಡುತ್ತಿದೆ ಎಂದು, ಮತಾಂತರಕ್ಕೆ ಪ್ರಚಾರ ನೀಡುತ್ತಿದೆ ಅಲ್ಲದೆ ಸಿನಿಮಾದಲ್ಲಿ ಶ್ರೀರಾಮನನ್ನು ಮಾಂಸಾಹಾರಿ ಎಂದು ಹೇಳಲಾಗಿದೆ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ನಟಿ ನಯನತಾರಾ ಸೇರಿದಂತೆ ಸಿನಿಮಾದ ನಿರ್ದೇಶಕ, ನಿರ್ಮಾಪಕ, ಕತೆಗಾರ, ಸಿನಿಮಾವನ್ನು ಪ್ರದರ್ಶಿಸಿದ್ದ ನೆಟ್​ಫ್ಲಿಕ್ಸ್​ ಹಾಗೂ ಅದರ ಸಿಇಓ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಮಾವಾಸ್ಯೆ - ಹುಣ್ಣಿಮೆಯಂದು ಪ್ರಯಾಣ ಮಾಡುವುದು ಕ್ಷೇಮವೇ?
ಅಮಾವಾಸ್ಯೆ - ಹುಣ್ಣಿಮೆಯಂದು ಪ್ರಯಾಣ ಮಾಡುವುದು ಕ್ಷೇಮವೇ?
Daily Horoscope: ಮೇಷ ರಾಶಿಯವರಿಗೆ ಇಂದು ಐದು ಗ್ರಹಗಳ ಶುಭಫಲ
Daily Horoscope: ಮೇಷ ರಾಶಿಯವರಿಗೆ ಇಂದು ಐದು ಗ್ರಹಗಳ ಶುಭಫಲ
ಅತ್ತೆಯ ಜೊತೆ ಬಂದು ಮಹಾಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದ ಕತ್ರಿನಾ ಕೈಫ್
ಅತ್ತೆಯ ಜೊತೆ ಬಂದು ಮಹಾಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದ ಕತ್ರಿನಾ ಕೈಫ್
ಪಾಲ್ಘರ್‌ನಲ್ಲಿ ಪಾದಚಾರಿಗೆ ಡಿಕ್ಕಿಯಾಗಿ ರಸ್ತೆಯುದ್ದಕ್ಕೂ ಎಳೆದೊಯ್ದ ಕಾರು
ಪಾಲ್ಘರ್‌ನಲ್ಲಿ ಪಾದಚಾರಿಗೆ ಡಿಕ್ಕಿಯಾಗಿ ರಸ್ತೆಯುದ್ದಕ್ಕೂ ಎಳೆದೊಯ್ದ ಕಾರು
ಡೋಲು ಬಾರಿಸಿ ಜುಮೋಯಿರ್ ಬಿನಂದಿನಿ ಕಾರ್ಯಕ್ರಮಕ್ಕೆ ಮೋದಿ ಚಾಲನೆ
ಡೋಲು ಬಾರಿಸಿ ಜುಮೋಯಿರ್ ಬಿನಂದಿನಿ ಕಾರ್ಯಕ್ರಮಕ್ಕೆ ಮೋದಿ ಚಾಲನೆ
ಮಾತೃಭಾಷೆ ಮರಾಠಿಯಾದರೂ ಕರ್ನಾಟಕದಲ್ಲಿ ಕನ್ನಡವನ್ನೇ ಮಾತಾಡಬೇಕು: ಉಮಾಶ್ರೀ
ಮಾತೃಭಾಷೆ ಮರಾಠಿಯಾದರೂ ಕರ್ನಾಟಕದಲ್ಲಿ ಕನ್ನಡವನ್ನೇ ಮಾತಾಡಬೇಕು: ಉಮಾಶ್ರೀ
ಚಾಮುಂಡೇಶ್ವರಿ ಈ ಜಾಗದಲ್ಲಿ ನೆಲೆಸಿದ್ದಾಳೆ ಎಂದ ದರ್ಶನ್ ತಾಯಿ ಮೀನಾ ತೂಗುದೀಪ
ಚಾಮುಂಡೇಶ್ವರಿ ಈ ಜಾಗದಲ್ಲಿ ನೆಲೆಸಿದ್ದಾಳೆ ಎಂದ ದರ್ಶನ್ ತಾಯಿ ಮೀನಾ ತೂಗುದೀಪ
ಕ್ರಿಕೆಟ್ ದೇವರ ದ್ವಿಶತಕಕ್ಕೆ ಭರ್ತಿ 15 ವರ್ಷ
ಕ್ರಿಕೆಟ್ ದೇವರ ದ್ವಿಶತಕಕ್ಕೆ ಭರ್ತಿ 15 ವರ್ಷ
ಕಾಂಗ್ರೆಸ್, ಬಿಜೆಪಿ-ಎರಡಕ್ಕೂ ಕನ್ನಡಿಗರ ಹಿತರಕ್ಷಣೆ ಬೇಕಿಲ್ಲ: ವಾಟಾಳ್
ಕಾಂಗ್ರೆಸ್, ಬಿಜೆಪಿ-ಎರಡಕ್ಕೂ ಕನ್ನಡಿಗರ ಹಿತರಕ್ಷಣೆ ಬೇಕಿಲ್ಲ: ವಾಟಾಳ್
ಮಂಗಳೂರು ಕಾರಾಗೃಹಕ್ಕೆ ಹೇಗೆ ಗಾಂಜಾ ಸಪ್ಲೈ ಆಗುತ್ತೆ? ಈ ವಿಡಿಯೋ ನೋಡಿ
ಮಂಗಳೂರು ಕಾರಾಗೃಹಕ್ಕೆ ಹೇಗೆ ಗಾಂಜಾ ಸಪ್ಲೈ ಆಗುತ್ತೆ? ಈ ವಿಡಿಯೋ ನೋಡಿ