ರಜನಿ ಯಶಸ್ವಿ ಚಿತ್ರದ ಬಗ್ಗೆ ಟೀಕೆ; ಅಭಿಮಾನಿಗಳ ಕೋಪಕ್ಕೆ ಕಾರಣ ಆಯ್ತು ನಿರ್ದೇಶಕನ ಮಾತು

ವಿಷ್ಣುವರ್ಧನ್ ಅವರು ರಜನಿಕಾಂತ್ ನಟನೆಯ ‘ಬಿಲ್ಲಾ’ ಸಿನಿಮಾ ಬಗ್ಗೆ ಮಾಡಿದ ಟೀಕೆಗೆ ರಜನಿಕಾಂತ್ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಷ್ಣುವರ್ಧನ್ ಅವರು ‘ಬಿಲ್ಲಾ’ ಹಿಟ್ ಆಗಿರಲಿಲ್ಲ ಎಂದು ಹೇಳಿದ್ದನ್ನು ಅಭಿಮಾನಿಗಳು ತಳ್ಳಿಹಾಕಿದ್ದು, ಚಿತ್ರದ ಸಿಲ್ವರ್ ಜುಬಿಲಿ ಸಾಧನೆಯನ್ನು ಸಾಕ್ಷಿಯಾಗಿ ನೀಡಿದ್ದಾರೆ .

ರಜನಿ ಯಶಸ್ವಿ ಚಿತ್ರದ ಬಗ್ಗೆ ಟೀಕೆ; ಅಭಿಮಾನಿಗಳ ಕೋಪಕ್ಕೆ ಕಾರಣ ಆಯ್ತು ನಿರ್ದೇಶಕನ ಮಾತು
ರಜಿನಿಕಾಂತ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Jan 14, 2025 | 8:03 AM

ರಜನಿಕಾಂತ್ ಅವರಿಗೆ ವಿಶ್ವಾದ್ಯಂತ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಅವರು ಏನೇ ಮಾಡಿದರೂ ಫ್ಯಾನ್ಸ್ ಸಂಭ್ರಮಿಸುತ್ತಾರೆ. ಸಿನಿಮಾ ಬಂದಾಗ ಫ್ಯಾನ್ಸ್ ಸಂಭ್ರಮಿಸುತ್ತಾರೆ. ಅದೇ ರಿತಿ ಅವರ ಬಗ್ಗೆ ಯಾರಾದರೂ ನೆಗೆಟಿವ್ ಆಗಿ ಮಾತನಾಡಿದರೆ ಫ್ಯಾನ್ಸ್ ಅದನ್ನು ಸಹಿಸುವುದಿಲ್ಲ. ಈಗ ಆಗಿದ್ದೂ ಅದೇ. ಖ್ಯಾತ ನಿರ್ದೇಶಕ ವಿಷ್ಣುವರ್ಧನ ಅವರು ರಜನಿಕಾಂತ್ ಸಿನಿಮಾ ಬಗ್ಗೆ ಟೀಕೆ ಮಾಡಿದ್ದರು. ಇದನ್ನು ಅಭಿಮಾನಿಗಳು ಸಹಿಸಿಲ್ಲ.

ರಜನಿಕಾಂತ್ ನಟನೆಯ ‘ಬಿಲ್ಲಾ’ ಸಿನಿಮಾ ಹಿಟ್ ಆಗಿತ್ತು. ಆದರೆ, ವಿಷ್ಣುವರ್ಧನ್ ಅವರು ‘ಬಿಲ್ಲ ಸಿನಿಮಾ ರಿಲೀಸ್ ಆದಾಗ ಹಿಟ್ ಆಗಿರಲಿಲ್ಲ’ ಎಂದಿದ್ದರು. ಇದು ಸಾಕಷ್ಟು ಚರ್ಚೆಗೆ ಕಾರಣ ಆಗಿದೆ. ಈ ಸಿನಿಮಾನ ಅದೇ ಹೆಸರಲ್ಲಿ ವಿಷ್ಣುವರ್ಧನ ರಿಮೇಕ್ ಮಾಡಿದ್ದರು.

ಇದನ್ನು ರಜನಿಕಾಂತ್ ಫ್ಯಾನ್ಸ್ ಗಂಭೀರವಾಗಿ ಸ್ವೀಕರಿಸಿದ್ದಾರೆ. ‘ಬಿಲ್ಲ ಸಿನಿಮಾ ಹಿಟ್ ಆಗಿತ್ತು’ ಎಂದಿದ್ದಾರೆ. ಇದಕ್ಕೆ ಸಾಕ್ಷಿಗಳನ್ನು ಕೂಡ ನೀಡಿದ್ದಾರೆ.  ರಜನಿ ಪಿಆರ್​ಒ ರಿಯಾಜ್ ಅಹ್ಮದ್ ಸೋಶಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡಿದ್ದಾರೆ. ‘1980ರಲ್ಲಿ ರಿಲೀಸ್ ಆದ ಬಿಲ್ಲ ಸಿಲ್ವರ್ ಜುಬ್ಲಿ ಹಿಟ್ ಸಿನಿಮಾ.  ಇದನ್ನು ಸಿನಿಮಾ ನಿರ್ಮಾಪಕ ಸುರೇಶ್ ಬಾಲಾಜಿ ಜೊತೆ ಚರ್ಚಿಸಿ ಖಾತ್ರಿ ಮಾಡಿಕೊಳ್ಳಬಹುದು. ತಪ್ಪು ಮಾಹಿತಿ ಹರಡದಿರಲು ನಿಮ್ಮ ಮಾತುಗಳಲ್ಲಿ ನಿಖರತೆಯನ್ನು ಇರಲಿ ಎಂದು ಮನವಿ ಮಾಡಿಕೊಳ್ಳುತ್ತೇನೆ’ ಎಂದಿದ್ದಾರೆ.  ಇದಕ್ಕೆ ವಿಷ್ಣುವರ್ಧನ ಅವರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ನಟನಾಗುವುದಕ್ಕೂ ಮೊದಲು ಗ್ಯಾರೆಜ್​ನಲ್ಲಿ ಕೆಲಸ ಮಾಡಿದ್ದ ಅಜಿತ್

ವಿಷ್ಣವರ್ಧನ ಅವರು ತೆಲುಗು ಸಿನಿಮಾಗಳನ್ನು ನಿರ್ದೇಶನ ಮಾಡಿ ಗಮನ ಸೆಳೆದವರು. 2021ರಲ್ಲಿ ‘ಶೇರ್ಷಾ’ ಹೆಸರಿನ ಸಿನಿಮಾ ಮಾಡಿ ಗಮನ ಸೆಳೆದರು. ಈ ಚಿತ್ರ ಹಿಟ್ ಆಯಿತು. ಅವರ ನಿರ್ದೇಶನದ ‘ನೆಸಿಪ್ಪಯ’ ಇಂದು ರಿಲೀಸ್ ಆಗಿದೆ. ವಿಷ್ಣುವರ್ಧನ ಕೂಡ ತಮಿಳಿನಲ್ಲಿ ‘ಬಿಲ್ಲ’ ಹೆಸರಿನ ಸಿನಿಮಾ ಮಾಡಿದ್ದರು. ಈ ಚಿತ್ರದಲ್ಲಿ ಅಜಿತ್ ಕುಮಾರ್ ಅವರು ನಟಿಸಿದ್ದರು. ರಜನಿಕಾಂತ್ ನಟನೆಯ ಚಿತ್ರದ ರಿಮೇಕ್ ಇದಾಗಿದೆ. ಸದ್ಯ ವಿಷ್ಣುವರ್ಧನ ಅವರು ಸೋಶಿಯಲ್ ಮೀಡಿಯಾದಲ್ಲಿ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಅವರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:03 am, Tue, 14 January 25

ವೈಷಮ್ಯ, ಹೆಣ್ಣು ಮತ್ತು ಮಣ್ಣು-ಬಾಗಪ್ಪ ಕೊಲೆ ಹಿಂದಿನ ಕಾರಣಗಳು: ಎಸ್​ಪಿ
ವೈಷಮ್ಯ, ಹೆಣ್ಣು ಮತ್ತು ಮಣ್ಣು-ಬಾಗಪ್ಪ ಕೊಲೆ ಹಿಂದಿನ ಕಾರಣಗಳು: ಎಸ್​ಪಿ
ಕಳ್ಳರ ಹಾವಳಿ‌ ತಡೆಯಲು ಮಹಿಳೆಯರ ರಾತ್ರಿ ಗಸ್ತು
ಕಳ್ಳರ ಹಾವಳಿ‌ ತಡೆಯಲು ಮಹಿಳೆಯರ ರಾತ್ರಿ ಗಸ್ತು
ವಿದ್ಯಾರ್ಥಿಗಳಿಗೆ ಅನುಕೂಲವಾಗದ ನಮ್ಮ ಮೆಟ್ರೊ ಟಿಕೆಟ್ ದರ ಪರಿಷ್ಕರಣೆ
ವಿದ್ಯಾರ್ಥಿಗಳಿಗೆ ಅನುಕೂಲವಾಗದ ನಮ್ಮ ಮೆಟ್ರೊ ಟಿಕೆಟ್ ದರ ಪರಿಷ್ಕರಣೆ
ಚಾಲಕ ಇಳಿದು ಹೋಗುತ್ತಿದ್ದಂತೆ ಆತನ ಹಿಂದೆಯೇ ಚಲಿಸಿದ ಡೀಸೆಲ್ ಟ್ಯಾಂಕರ್!
ಚಾಲಕ ಇಳಿದು ಹೋಗುತ್ತಿದ್ದಂತೆ ಆತನ ಹಿಂದೆಯೇ ಚಲಿಸಿದ ಡೀಸೆಲ್ ಟ್ಯಾಂಕರ್!
ಕೆಆರ್ ಮಾರುಕಟ್ಟೆ ಫ್ಲೈಓವರ್​ನಲ್ಲಿ ಬಿಎಂಟಿಸಿ ಬಸ್​, ಬೈಕ್ ಡಿಕ್ಕಿ
ಕೆಆರ್ ಮಾರುಕಟ್ಟೆ ಫ್ಲೈಓವರ್​ನಲ್ಲಿ ಬಿಎಂಟಿಸಿ ಬಸ್​, ಬೈಕ್ ಡಿಕ್ಕಿ
ಮನೆಯಲ್ಲಿ ಡೈನಿಂಗ್ ಟೇಬಲ್ ಎಲ್ಲಿದ್ದರೆ ಉತ್ತಮ ತಿಳಿಯಲು ಈ ವಿಡಿಯೋ ನೋಡಿ
ಮನೆಯಲ್ಲಿ ಡೈನಿಂಗ್ ಟೇಬಲ್ ಎಲ್ಲಿದ್ದರೆ ಉತ್ತಮ ತಿಳಿಯಲು ಈ ವಿಡಿಯೋ ನೋಡಿ
ಈ ರಾಶಿಯವರು ಇಂದು ಶಕ್ತಿಯ ಆರಾಧನೆ ಮಾಡಿದ್ರೆ ಶುಭ ಸುದ್ದಿ ಕೇಳುವರು
ಈ ರಾಶಿಯವರು ಇಂದು ಶಕ್ತಿಯ ಆರಾಧನೆ ಮಾಡಿದ್ರೆ ಶುಭ ಸುದ್ದಿ ಕೇಳುವರು
ಕೇರಳದ ದೇವಾಲಯದ ಉತ್ಸವದಲ್ಲಿ ರೊಚ್ಚಿಗೆದ್ದ ಆನೆಗಳು; ಮೂವರು ಸಾವು
ಕೇರಳದ ದೇವಾಲಯದ ಉತ್ಸವದಲ್ಲಿ ರೊಚ್ಚಿಗೆದ್ದ ಆನೆಗಳು; ಮೂವರು ಸಾವು
ಪ್ರಧಾನಿ ಮೋದಿ ಜೊತೆಗಿನ ಸಭೆಗೆ ಬ್ಲೇರ್​ ಹೌಸ್​ಗೆ ಆಗಮಿಸಿದ ಎಲಾನ್ ಮಸ್ಕ್
ಪ್ರಧಾನಿ ಮೋದಿ ಜೊತೆಗಿನ ಸಭೆಗೆ ಬ್ಲೇರ್​ ಹೌಸ್​ಗೆ ಆಗಮಿಸಿದ ಎಲಾನ್ ಮಸ್ಕ್
ಮಗನ ಅರಿಶಿನ ಶಾಸ್ತ್ರದಲ್ಲಿ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಡ್ಯಾನ್ಸ್
ಮಗನ ಅರಿಶಿನ ಶಾಸ್ತ್ರದಲ್ಲಿ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಡ್ಯಾನ್ಸ್