AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿಕೆಟ್ ಬೆಲೆ ನಿರ್ಧರಿಸುವ ಹಕ್ಕು ನಿರ್ಮಾಪಕರಿಗೆ: ತೆಲುಗು ರಾಜ್ಯಗಳಲ್ಲಿ ಹೊಸ ಬೇಡಿಕೆ

Movie ticket: ಆಂಧ್ರ-ತೆಲಂಗಾಣಗಳಲ್ಲಿ ಸರ್ಕಾರಗಳು ಆದೇಶದಂತೆ ನಿಗದಿತ ದಿನಗಳ ಮಟ್ಟಿಗೆ ಟಿಕೆಟ್ ಬೆಲೆ ಹೆಚ್ಚು ಮಾಡಿಕೊಳ್ಳಬಹುದಾಗಿದೆ. ಈ ಅವಕಾಶ ಎಲ್ಲ ಸಿನಿಮಾಗಳಿಗೂ ಇರುವುದಿಲ್ಲ ಬದಲಿಗೆ ಕೆಲ ದೊಡ್ಡ ಸಿನಿಮಾಗಳಿಗೆ ಮಾತ್ರವೇ ಇದರ ಲಾಭ ದೊರಕುತ್ತಿದೆ. ಆದರೆ ಈಗ ನಿರ್ಮಾಪಕರು ಸ್ವತಂತ್ರ್ಯವಾಗಿ ತಮ್ಮ ಸಿನಿಮಾಗಳಿಗೆ ಟಿಕೆಟ್ ದರ ನಿಗದಿಕೊಳಿಸಿಕೊಳ್ಳುವ ಅವಕಾಶ ಮಾಡಿಕೊಡಬೇಕು ಎಂದು ನಿರ್ಮಾಪಕರು ಒತ್ತಾಯಿಸಿದ್ದಾರೆ.

ಟಿಕೆಟ್ ಬೆಲೆ ನಿರ್ಧರಿಸುವ ಹಕ್ಕು ನಿರ್ಮಾಪಕರಿಗೆ: ತೆಲುಗು ರಾಜ್ಯಗಳಲ್ಲಿ ಹೊಸ ಬೇಡಿಕೆ
Theater
ಮಂಜುನಾಥ ಸಿ.
|

Updated on:Jul 17, 2026 | 8:22 AM

Share

ಸಿನಿಮಾ (Cinema) ಟಿಕೆಟ್ ಬೆಲೆ, ಶೋ ಟೈಮಿಂಗ್ಸ್, ಶೋ ಸಂಖ್ಯೆ, ಲಾಭ ಹಂಚಿಕೆ ಇನ್ನಿತರೆಗಳ ಕುರಿತಾಗಿ ಆಂಧ್ರ ಮತ್ತು ತೆಲಂಗಾಣ ಹಾಗೂ ಆಂಧ್ರ ಪ್ರದೇಶದಲ್ಲಿ ತಿಂಗಳುಗಳಿಂದಲೂ ಚರ್ಚೆ, ವಾಗ್​ವಾದ ನಡೆಯುತ್ತಲೇ ಇದೆ. ಈಗ ಪ್ರತಿ ಬಾರಿ ಸಿನಿಮಾ ಬಿಡುಗಡೆ ಆಗುವಾಗಲೂ ನಿರ್ಮಾಪಕರು, ವಿತರಕರು ಸರ್ಕಾರ ಬಳಿ ಅರ್ಜಿ ಹಾಕಿಕೊಳ್ಳಬೇಕಿದೆ. ಸರ್ಕಾರಗಳು ಆದೇಶದಂತೆ ನಿಗದಿತ ದಿನಗಳ ಮಟ್ಟಿಗೆ ಟಿಕೆಟ್ ಬೆಲೆ ಹೆಚ್ಚು ಮಾಡಿಕೊಳ್ಳಬಹುದಾಗಿದೆ. ಈ ಅವಕಾಶ ಎಲ್ಲ ಸಿನಿಮಾಗಳಿಗೂ ಇರುವುದಿಲ್ಲ ಬದಲಿಗೆ ಕೆಲ ದೊಡ್ಡ ಸಿನಿಮಾಗಳಿಗೆ ಮಾತ್ರವೇ ಇದರ ಲಾಭ ದೊರಕುತ್ತಿದೆ. ಆದರೆ ಈಗ ನಿರ್ಮಾಪಕರು ಸ್ವತಂತ್ರ್ಯವಾಗಿ ತಮ್ಮ ಸಿನಿಮಾಗಳಿಗೆ ಟಿಕೆಟ್ ದರ ನಿಗದಿಕೊಳಿಸಿಕೊಳ್ಳುವ ಅವಕಾಶ ಮಾಡಿಕೊಡಬೇಕು ಎಂದು ನಿರ್ಮಾಪಕರು ಒತ್ತಾಯಿಸಿದ್ದಾರೆ.

ಅದರಲ್ಲೂ ಎರಡೂ ರಾಜ್ಯಗಳ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಟಿಕೆಟ್ ದರಗಳನ್ನು ಸಿನಿಮಾದ ನಿರ್ಮಾಪಕರೇ ನಿಗದಿ ಪಡಿಸುವಂತೆ ಆದೇಶವನ್ನು ಹೊರಡಿಸಬೇಕು ಎಂದು ನಿರ್ಮಾಪಕರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಅಸಲಿಗೆ ಸರ್ಕಾರಗಳು ಸಹ ಈ ಬಗ್ಗೆ ಯೋಚನೆ ನಡೆಸುತ್ತಿವೆ ಎನ್ನಲಾಗುತ್ತಿದ್ದು, ಈ ಬಗ್ಗೆ ಈಗಾಗಲೇ ಒಂದು ಹಂತದ ಚರ್ಚೆ ಸಹ ನಡೆದಿದೆ.

150 ರೂ ನಿಂದ ಹಿಡಿದು 300 ರೂಪಾಯಿ ವರೆಗೆ ಸಿಂಗಲ್ ಸ್ಕ್ರೀನ್​​ ಚಿತ್ರಮಂದಿರದ ಟಿಕೆಟ್ ದರ ನಿಗದಿಪಡಿಸಿಕೊಳ್ಳುವ ಹಕ್ಕನ್ನು ಸರ್ಕಾರಗಳು ನಿರ್ಮಾಪಕರಿಗೆ ನೀಡಲಿದೆ ಎನ್ನಲಾಗುತ್ತಿದೆ. ಯಾವುದೇ ಸಿನಿಮಾಕ್ಕೆ ಕನಿಷ್ಟ 150 ರೂಪಾಯಿಯಿಂದ 300 ರೂಪಾಯಿ ವರೆಗೆ ಟಿಕೆಟ್ ದರವನ್ನು ನಿರ್ಮಾಪಕರು ನಿಗದಿಪಡಿಸಿಕೊಳ್ಳಬಹುದಾಗಿರುತ್ತದೆ. ಇದರಿಂದ ನಿರ್ಮಾಪಕರು, ಚಿತ್ರಮಂದಿರ ಮಾಲೀಕರು ಮತ್ತು ವಿತರಕರು ಮೂವರಿಗೂ ಲಾಭ ಆಗಲಿದೆ.

ಇದನ್ನೂ ಓದಿ:‘ರಾಮಾಯಣ ಸಿನಿಮಾ ನೋಡಬೇಡಿ’; ಆಸ್ಟ್ರೇಲಿಯಾದಲ್ಲಿ 15 ವರ್ಷದೊಳಗಿನ ಮಕ್ಕಳಿಗೆ ಸಲಹೆ; ಕಾರಣ ಏನು?

ಆದರೆ ಈ ಹಿಂದೆ ತೆಲಂಗಾಣದಲ್ಲಿ ಕೆಟಿಆರ್ ಸರ್ಕಾರವಿದ್ದಾಗ ಇದೇ ಮಾದರಿಯ ಅಧಿಕಾರ ನಿರ್ಮಾಪಕರಿಗೆ ಇತ್ತು. ಆದರೆ ಎಲ್ಲ ನಿರ್ಮಾಪಕರು ಸಹ ಗರಿಷ್ಠ ಟಿಕೆಟ್ ದರವನ್ನೇ ತಮ್ಮ ಸಿನಿಮಾಗಳಿಗೆ ನಿಗದಿ ಮಾಡಿದರು. ಸಣ್ಣ ಸಿನಿಮಾಗಳ ನಿರ್ಮಾಪಕರು ಸಹ ಗರಿಷ್ಠ ಟಿಕೆಟ್ ದರವನ್ನೇ ನಿಗದಿ ಮಾಡಿ, ಸಿನಿಮಾಗಳು ಫ್ಲಾಪ್ ಆದವು, ಸಿನಿಮಾ ಪ್ರೇಮಿಗಳಿಂದ ಟೀಕೆ ಎದುರಾಯ್ತು. ಸರ್ಕಾರಕ್ಕೂ ಟೀಕೆ ಎದುರಾಯ್ತು. ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಆ ಆದೇಶವನ್ನು ಹಿಂಪಡೆಯಲಾಯ್ತು. ಈಗ ಸರ್ಕಾರದ ಅನುಮತಿ ಪಡೆದು ನಿಗದಿತ ದಿನಗಳ ವರೆಗೆ ಮಾತ್ರವೇ ಟಿಕೆಟ್ ದರವನ್ನು ಹೆಚ್ಚು ಮಾಡಿಕೊಳ್ಳಬೇಕಿದೆ. ಆಂಧ್ರದಲ್ಲಿಯೂ ಬಹುತೇಕ ಇದೇ ಪದ್ಧತಿ ಜಾರಿಯಲ್ಲಿದೆ.

ಸಿನಿಮಾ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published On - 8:21 am, Fri, 17 July 26

Follow Us
ಮೊದಲ ಆಷಾಢ ಶುಕ್ರವಾರ ಹಿನ್ನೆಲೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ
ಮೊದಲ ಆಷಾಢ ಶುಕ್ರವಾರ ಹಿನ್ನೆಲೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ
ಉದ್ಘಾಟನೆಗೂ ಮುನ್ನವೇ ಸೋರುತ್ತಿದೆ ಕೊಪ್ಪಳ ರೈಲು ನಿಲ್ದಾಣ!
ಉದ್ಘಾಟನೆಗೂ ಮುನ್ನವೇ ಸೋರುತ್ತಿದೆ ಕೊಪ್ಪಳ ರೈಲು ನಿಲ್ದಾಣ!
ಆಷಾಢ ಶುಕ್ರವಾರ, ದಕ್ಷಿಣಾಯನವೂ ಶುರು: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಆಷಾಢ ಶುಕ್ರವಾರ, ದಕ್ಷಿಣಾಯನವೂ ಶುರು: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಜೆಸಿಬಿ ಜೊತೆ ಆನೆಯ ಕಾಳಗ; ಇದು ನನ್ನ ಕಾಡು ಎಂದ ಗಜರಾಜ
ಜೆಸಿಬಿ ಜೊತೆ ಆನೆಯ ಕಾಳಗ; ಇದು ನನ್ನ ಕಾಡು ಎಂದ ಗಜರಾಜ
ಥಾಣೆಯಲ್ಲಿ ಕಟ್ಟಡದಿಂದ ವಾಹನಗಳ ಮೇಲೆ ಬಿದ್ದ ಕ್ರೇನ್, ಓರ್ವ ಸಾವು
ಥಾಣೆಯಲ್ಲಿ ಕಟ್ಟಡದಿಂದ ವಾಹನಗಳ ಮೇಲೆ ಬಿದ್ದ ಕ್ರೇನ್, ಓರ್ವ ಸಾವು
ಆಧುನೀಕರಣಗೊಂಡ 75 ರೈಲ್ವೆ ನಿಲ್ದಾಣಗಳು ನಾಳೆ ಮೋದಿಯಿಂದ ಲೋಕಾರ್ಪಣೆ
ಆಧುನೀಕರಣಗೊಂಡ 75 ರೈಲ್ವೆ ನಿಲ್ದಾಣಗಳು ನಾಳೆ ಮೋದಿಯಿಂದ ಲೋಕಾರ್ಪಣೆ
ಅಯೋಧ್ಯೆ ಹಗರಣ: ರಾಜ್ಯದ ಎಲ್ಲಾ ದೇವಾಲಯದ ಹುಂಡಿಗಳ ರಕ್ಷಣೆಗೆ ಬಿಗಿ ಭದ್ರತೆ
ಅಯೋಧ್ಯೆ ಹಗರಣ: ರಾಜ್ಯದ ಎಲ್ಲಾ ದೇವಾಲಯದ ಹುಂಡಿಗಳ ರಕ್ಷಣೆಗೆ ಬಿಗಿ ಭದ್ರತೆ
ನ್ಯಾಯಬೆಲೆ ಅಂಗಡಿಯಲ್ಲಾಗುವ ಮೋಸ ತಡೆಯಲು ಬರಲಿದೆ ಹೊಸ ಯೋಜನೆ: ಏನದು?
ನ್ಯಾಯಬೆಲೆ ಅಂಗಡಿಯಲ್ಲಾಗುವ ಮೋಸ ತಡೆಯಲು ಬರಲಿದೆ ಹೊಸ ಯೋಜನೆ: ಏನದು?
ಪೂಜೆ ನೆಪದಲ್ಲಿ 43 ಗ್ರಾಂ ಚಿನ್ನ, ನಗದು ಕದ್ದು ಸ್ವಾಮೀಜಿ ಎಸ್ಕೇಪ್​​!
ಪೂಜೆ ನೆಪದಲ್ಲಿ 43 ಗ್ರಾಂ ಚಿನ್ನ, ನಗದು ಕದ್ದು ಸ್ವಾಮೀಜಿ ಎಸ್ಕೇಪ್​​!
ರೇಷನ್ ಕಾರ್ಡ್ ಕರೆಕ್ಟ್ ಮಾಡಿಕೊಳ್ಳಲು 15 ದಿನ ಟೈಮ್ ಕೊಟ್ಟ ಮುನಿಯಪ್ಪ
ರೇಷನ್ ಕಾರ್ಡ್ ಕರೆಕ್ಟ್ ಮಾಡಿಕೊಳ್ಳಲು 15 ದಿನ ಟೈಮ್ ಕೊಟ್ಟ ಮುನಿಯಪ್ಪ