AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸ್ಪೈಡರ್​ ಮ್ಯಾನ್​’ ಅಭಿಮಾನಿಗಳಿಗೆ ಕಹಿ ಸುದ್ದಿ; ಸರಣಿ ಅಂತ್ಯವಾಗಲಿದೆ ಎಂದ ಟಾಮ್​ ಹಾಲೆಂಡ್​

Spider Man No Way Home: ಈವರೆಗೆ ಹಲವು ರೂಪದಲ್ಲಿ ಸ್ಪೈಡರ್ ಮ್ಯಾನ್​ ಪಾತ್ರ ಮೂಡಿಬಂದಿದೆ. ಈ ಸಿನಿಮಾ ಸರಣಿಗೆ ಅಂತ್ಯ ಹಾಡುವ ಕಾಲ ಬಂದಿದೆಯೇ? ನಟ ಟಾಮ್​ ಹಾಲೆಂಡ್​ ಮಾತುಗಳಿಂದ ಇಂಥ ಅನುಮಾನ ಮೂಡಿದೆ.

‘ಸ್ಪೈಡರ್​ ಮ್ಯಾನ್​’ ಅಭಿಮಾನಿಗಳಿಗೆ ಕಹಿ ಸುದ್ದಿ; ಸರಣಿ ಅಂತ್ಯವಾಗಲಿದೆ ಎಂದ ಟಾಮ್​ ಹಾಲೆಂಡ್​
ಸ್ಪೈಡರ್ ಮ್ಯಾನ್: ನೋ ವೇ ಹೋಮ್
TV9 Web
| Updated By: ಮದನ್​ ಕುಮಾರ್​|

Updated on: Oct 17, 2021 | 12:49 PM

Share

ಸಿನಿಮಾ ಜಗತ್ತಿನ ಮೋಸ್ಟ್​ ಸೆಲೆಬ್ರೇಟೆಡ್​ ಸೂಪರ್​ ಹೀರೋಗಳಲ್ಲಿ ಸ್ಪೈಡರ್​ ಮ್ಯಾನ್​ ಹೆಸರು ಕೂಡ ಮುಂಚೂಣಿಯಲ್ಲಿದೆ. ಅನೇಕ ದಶಕಗಳಿಂದ ಈ ಪಾತ್ರವನ್ನು ತೆರೆಮೇಲೆ ನೋಡಿ ಜನರು ಎಂಜಾಯ್​ ಮಾಡುತ್ತಿದ್ದಾರೆ. ಅನೇಕ ಹೀರೋಗಳು ಸ್ಪೈಡರ್​ ಮ್ಯಾನ್​ ಅವತಾರ ತಾಳಿ ಜನರನ್ನು ರಂಜಿಸಿದ್ದಾರೆ. ಸಿನಿಮಾ ಮಾತ್ರವಲ್ಲದೇ, ಧಾರಾವಾಹಿ ರೂಪದಲ್ಲೂ ಸ್ಪೈಡರ್​ ಮ್ಯಾನ್​ ಫೇಮಸ್​. ಇತ್ತೀಚಿನ ವರ್ಷಗಳಲ್ಲಿ ತೆರೆಕಂಡ ಈ ಸರಣಿಯ ಸಿನಿಮಾಗಳಲ್ಲಿ ಸ್ಪೈಡರ್​ ಮ್ಯಾನ್​ ಪಾತ್ರವನ್ನು ಮಾಡುವ ಅವಕಾಶ ಟಾಮ್​ ಹಾಲೆಂಡ್​ ಅವರಿಗೆ ಸಿಕ್ಕಿತು. ಅವರು ಈಗೊಂದು ಶಾಕಿಂಗ್​ ನ್ಯೂಸ್​ ಹಂಚಿಕೊಂಡಿದ್ದಾರೆ.

2016ರಲ್ಲಿ ತೆರೆಕಂಡ ‘ಕ್ಯಾಪ್ಟನ್​ ಅಮೆರಿಕ: ಸಿವಿಲ್​ ವಾರ್’ ಸಿನಿಮಾದಲ್ಲಿ ‘ಸ್ಪೈಡರ್​ಮ್ಯಾನ್​’ ಪಾತ್ರ ಮಾಡುವ ಅವಕಾಶ ಟಾಮ್​ ಹಾಲೆಂಡ್​ ಅವರಿಗೆ ಒಲಿಯಿತು. ನಂತರ ಅವರು ‘ಸ್ಪೈಡರ್​ ಮ್ಯಾನ್​ ಹೋಮ್​ ಕಮಿಂಗ್​’, ‘ಸ್ಪೈಡರ್​ ಮ್ಯಾನ್: ಫಾರ್​ ಫ್ರಮ್​​ ಹೋಮ್’​, ‘ಅವೆಂಜರ್ಸ್​ ಇನ್ಫಿನಿಟಿ ವಾರ್​’ ಚಿತ್ರಗಳಲ್ಲಿ ಈ ಪಾತ್ರಕ್ಕೆ ಬಣ್ಣ ಹಚ್ಚಿದರು. ಇತ್ತೀಚೆಗೆ ಅವರು ‘ಸ್ಪೈಡರ್​ ಮ್ಯಾನ್​: ನೋ ವೇ ಹೋಮ್​’ ಚಿತ್ರದ ಕೊನೇ ದಿನದ ಶೂಟಿಂಗ್​ನಲ್ಲಿ ಭಾಗವಹಿಸಿದ್ದರು.

ಸ್ಪೈಡರ್​ ಮ್ಯಾನ್​ ಸರಣಿ ಸಿನಿಮಾಗಳಲ್ಲಿ ‘ಹೋಮ್​ ಕಮಿಂಗ್​’, ‘ಫಾರ್​ ಫ್ರಮ್​ ಹೋಮ್​’ ಮತ್ತು ‘ನೋ ವೇ ಹೋಮ್​’ ಚಿತ್ರಗಳು ಟ್ರಿಲಜಿ ರೀತಿ ಮೂಡಿಬಂದಿದೆ. ಈ ಸರಣಿ ಇಲ್ಲಿಗೆ ಅಂತ್ಯವಾಗಲಿದೆ ಎಂದು ಟಾಮ್​ ಹಾಲೆಂಡ್​ ಹೇಳಿದ್ದಾರೆ.

‘ಈ ಸಿನಿಮಾಗಳನ್ನು ನಾವು ಕಳೆದ 5 ವರ್ಷದಿಂದ ಮಾಡುತ್ತಾ ಬಂದೆವು. ನಮ್ಮ ನಡುವೆ ಒಳ್ಳೆಯ ಬಾಂಧವ್ಯ ಇತ್ತು. ಇದು ನಾವು ಕೊನೆ ಬಾರಿಗೆ ಜೊತೆಯಾಗಿ ನಟಿಸುತ್ತಿರುವುದು ಅನಿಸುತ್ತದೆ. ಬೇಜಾರಾಗುತ್ತದೆ, ಆದರೂ ಕೂಡ ಜೀವನದ ಮುಂದಿನ ಘಟ್ಟಕ್ಕೆ ನಾವು ಕಾಲಿಡುತ್ತಿದ್ದೇವೆ. ‘ಸ್ಪೈಡರ್​ ಮ್ಯಾನ್​: ನೋ ವೇ ಹೋಮ್​’ ಚಿತ್ರವನ್ನೇ ಈ ಸರಣಿಯ ಕೊನೇ ಸಿನಿಮಾ ಎಂಬಂತೆ ನಾವು ಪರಿಗಣಿಸುತ್ತಿದ್ದೇವೆ’ ಎಂದು ಟಾಮ್​ ಹಾಲೆಂಡ್​ ಹೇಳಿರುವುದರಿಂದ ಸ್ಪೈಡರ್​ ಮ್ಯಾನ್​ ಪಾತ್ರದ ಭವಿಷ್ಯವೇನು ಎಂಬ ಪ್ರಶ್ನೆ ಮೂಡಿದೆ.

ಇದನ್ನೂ ಓದಿ:

ಪಬ್​ನಲ್ಲಿ ಪಾತ್ರೆ ತೊಳೆಯುತ್ತಿದ್ದ ಯುವಕ ‘ಸ್ಪೈಡರ್​ ಮ್ಯಾನ್​’ ಆದ; ನಟ ಟಾಮ್​ ಹಾಲೆಂಡ್​ ಲೈಫ್​ ಸ್ಟೋರಿ

ದಾನಿಶ್​ ಸೇಠ್​ ಸಹೋದರಿ ಕುಬ್ರಾ ಸೇಠ್​ಗೆ ‘ಫೌಂಡೇಶನ್​’ ಅವಕಾಶ; ಹಾಲಿವುಡ್​ ಕಲಾವಿದರ ಜತೆ ನಟನೆ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ