AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸ್ಪೈಡರ್​ ಮ್ಯಾನ್​’ ಅಭಿಮಾನಿಗಳಿಗೆ ಕಹಿ ಸುದ್ದಿ; ಸರಣಿ ಅಂತ್ಯವಾಗಲಿದೆ ಎಂದ ಟಾಮ್​ ಹಾಲೆಂಡ್​

Spider Man No Way Home: ಈವರೆಗೆ ಹಲವು ರೂಪದಲ್ಲಿ ಸ್ಪೈಡರ್ ಮ್ಯಾನ್​ ಪಾತ್ರ ಮೂಡಿಬಂದಿದೆ. ಈ ಸಿನಿಮಾ ಸರಣಿಗೆ ಅಂತ್ಯ ಹಾಡುವ ಕಾಲ ಬಂದಿದೆಯೇ? ನಟ ಟಾಮ್​ ಹಾಲೆಂಡ್​ ಮಾತುಗಳಿಂದ ಇಂಥ ಅನುಮಾನ ಮೂಡಿದೆ.

‘ಸ್ಪೈಡರ್​ ಮ್ಯಾನ್​’ ಅಭಿಮಾನಿಗಳಿಗೆ ಕಹಿ ಸುದ್ದಿ; ಸರಣಿ ಅಂತ್ಯವಾಗಲಿದೆ ಎಂದ ಟಾಮ್​ ಹಾಲೆಂಡ್​
ಸ್ಪೈಡರ್ ಮ್ಯಾನ್: ನೋ ವೇ ಹೋಮ್
TV9 Web
| Edited By: |

Updated on: Oct 17, 2021 | 12:49 PM

Share

ಸಿನಿಮಾ ಜಗತ್ತಿನ ಮೋಸ್ಟ್​ ಸೆಲೆಬ್ರೇಟೆಡ್​ ಸೂಪರ್​ ಹೀರೋಗಳಲ್ಲಿ ಸ್ಪೈಡರ್​ ಮ್ಯಾನ್​ ಹೆಸರು ಕೂಡ ಮುಂಚೂಣಿಯಲ್ಲಿದೆ. ಅನೇಕ ದಶಕಗಳಿಂದ ಈ ಪಾತ್ರವನ್ನು ತೆರೆಮೇಲೆ ನೋಡಿ ಜನರು ಎಂಜಾಯ್​ ಮಾಡುತ್ತಿದ್ದಾರೆ. ಅನೇಕ ಹೀರೋಗಳು ಸ್ಪೈಡರ್​ ಮ್ಯಾನ್​ ಅವತಾರ ತಾಳಿ ಜನರನ್ನು ರಂಜಿಸಿದ್ದಾರೆ. ಸಿನಿಮಾ ಮಾತ್ರವಲ್ಲದೇ, ಧಾರಾವಾಹಿ ರೂಪದಲ್ಲೂ ಸ್ಪೈಡರ್​ ಮ್ಯಾನ್​ ಫೇಮಸ್​. ಇತ್ತೀಚಿನ ವರ್ಷಗಳಲ್ಲಿ ತೆರೆಕಂಡ ಈ ಸರಣಿಯ ಸಿನಿಮಾಗಳಲ್ಲಿ ಸ್ಪೈಡರ್​ ಮ್ಯಾನ್​ ಪಾತ್ರವನ್ನು ಮಾಡುವ ಅವಕಾಶ ಟಾಮ್​ ಹಾಲೆಂಡ್​ ಅವರಿಗೆ ಸಿಕ್ಕಿತು. ಅವರು ಈಗೊಂದು ಶಾಕಿಂಗ್​ ನ್ಯೂಸ್​ ಹಂಚಿಕೊಂಡಿದ್ದಾರೆ.

2016ರಲ್ಲಿ ತೆರೆಕಂಡ ‘ಕ್ಯಾಪ್ಟನ್​ ಅಮೆರಿಕ: ಸಿವಿಲ್​ ವಾರ್’ ಸಿನಿಮಾದಲ್ಲಿ ‘ಸ್ಪೈಡರ್​ಮ್ಯಾನ್​’ ಪಾತ್ರ ಮಾಡುವ ಅವಕಾಶ ಟಾಮ್​ ಹಾಲೆಂಡ್​ ಅವರಿಗೆ ಒಲಿಯಿತು. ನಂತರ ಅವರು ‘ಸ್ಪೈಡರ್​ ಮ್ಯಾನ್​ ಹೋಮ್​ ಕಮಿಂಗ್​’, ‘ಸ್ಪೈಡರ್​ ಮ್ಯಾನ್: ಫಾರ್​ ಫ್ರಮ್​​ ಹೋಮ್’​, ‘ಅವೆಂಜರ್ಸ್​ ಇನ್ಫಿನಿಟಿ ವಾರ್​’ ಚಿತ್ರಗಳಲ್ಲಿ ಈ ಪಾತ್ರಕ್ಕೆ ಬಣ್ಣ ಹಚ್ಚಿದರು. ಇತ್ತೀಚೆಗೆ ಅವರು ‘ಸ್ಪೈಡರ್​ ಮ್ಯಾನ್​: ನೋ ವೇ ಹೋಮ್​’ ಚಿತ್ರದ ಕೊನೇ ದಿನದ ಶೂಟಿಂಗ್​ನಲ್ಲಿ ಭಾಗವಹಿಸಿದ್ದರು.

ಸ್ಪೈಡರ್​ ಮ್ಯಾನ್​ ಸರಣಿ ಸಿನಿಮಾಗಳಲ್ಲಿ ‘ಹೋಮ್​ ಕಮಿಂಗ್​’, ‘ಫಾರ್​ ಫ್ರಮ್​ ಹೋಮ್​’ ಮತ್ತು ‘ನೋ ವೇ ಹೋಮ್​’ ಚಿತ್ರಗಳು ಟ್ರಿಲಜಿ ರೀತಿ ಮೂಡಿಬಂದಿದೆ. ಈ ಸರಣಿ ಇಲ್ಲಿಗೆ ಅಂತ್ಯವಾಗಲಿದೆ ಎಂದು ಟಾಮ್​ ಹಾಲೆಂಡ್​ ಹೇಳಿದ್ದಾರೆ.

‘ಈ ಸಿನಿಮಾಗಳನ್ನು ನಾವು ಕಳೆದ 5 ವರ್ಷದಿಂದ ಮಾಡುತ್ತಾ ಬಂದೆವು. ನಮ್ಮ ನಡುವೆ ಒಳ್ಳೆಯ ಬಾಂಧವ್ಯ ಇತ್ತು. ಇದು ನಾವು ಕೊನೆ ಬಾರಿಗೆ ಜೊತೆಯಾಗಿ ನಟಿಸುತ್ತಿರುವುದು ಅನಿಸುತ್ತದೆ. ಬೇಜಾರಾಗುತ್ತದೆ, ಆದರೂ ಕೂಡ ಜೀವನದ ಮುಂದಿನ ಘಟ್ಟಕ್ಕೆ ನಾವು ಕಾಲಿಡುತ್ತಿದ್ದೇವೆ. ‘ಸ್ಪೈಡರ್​ ಮ್ಯಾನ್​: ನೋ ವೇ ಹೋಮ್​’ ಚಿತ್ರವನ್ನೇ ಈ ಸರಣಿಯ ಕೊನೇ ಸಿನಿಮಾ ಎಂಬಂತೆ ನಾವು ಪರಿಗಣಿಸುತ್ತಿದ್ದೇವೆ’ ಎಂದು ಟಾಮ್​ ಹಾಲೆಂಡ್​ ಹೇಳಿರುವುದರಿಂದ ಸ್ಪೈಡರ್​ ಮ್ಯಾನ್​ ಪಾತ್ರದ ಭವಿಷ್ಯವೇನು ಎಂಬ ಪ್ರಶ್ನೆ ಮೂಡಿದೆ.

ಇದನ್ನೂ ಓದಿ:

ಪಬ್​ನಲ್ಲಿ ಪಾತ್ರೆ ತೊಳೆಯುತ್ತಿದ್ದ ಯುವಕ ‘ಸ್ಪೈಡರ್​ ಮ್ಯಾನ್​’ ಆದ; ನಟ ಟಾಮ್​ ಹಾಲೆಂಡ್​ ಲೈಫ್​ ಸ್ಟೋರಿ

ದಾನಿಶ್​ ಸೇಠ್​ ಸಹೋದರಿ ಕುಬ್ರಾ ಸೇಠ್​ಗೆ ‘ಫೌಂಡೇಶನ್​’ ಅವಕಾಶ; ಹಾಲಿವುಡ್​ ಕಲಾವಿದರ ಜತೆ ನಟನೆ

Follow Us
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!
ಸಲೂನ್‌ನಲ್ಲಿ ಶಿಸ್ತಿನಿಂದ ಕೇಶ ವಿನ್ಯಾಸ ಮಾಡಿಸಿಕೊಂಡ ಮಂಗ!
ಸಲೂನ್‌ನಲ್ಲಿ ಶಿಸ್ತಿನಿಂದ ಕೇಶ ವಿನ್ಯಾಸ ಮಾಡಿಸಿಕೊಂಡ ಮಂಗ!
ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದು ಮನೆಗೆ ಬೆಂಕಿ ಹಚ್ಚಿದ ಕಳ್ಳರು!
ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದು ಮನೆಗೆ ಬೆಂಕಿ ಹಚ್ಚಿದ ಕಳ್ಳರು!