ಇಳಯರಾಜ ಹಾಡು ಬಳಸಿದರೂ ಬಿದ್ದಿಲ್ಲ ಕಾಪಿ ರೈಟ್ಸ್; ಟೆಕ್ನಿಕ್ ತಿಳಿಸಿದ ನಿರ್ದೇಶಕ
ಅನಿಲ್ ರವಿಪುಡಿ ನಿರ್ದೇಶನದ ‘ಮನ ಶಂಕರ ವರ ಪ್ರಸಾದ ಗಾರು’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರದಲ್ಲಿ ಚಿರಂಜೀವಿ ನಟಿಸಿದ್ದಾರೆ. ಈ ಚಿತ್ರದಲ್ಲಿ ನಯನತಾರಾ ನಟಿಸಿದ್ದಾರೆ. ಅವರು ಬರೋ ದೃಶ್ಯಕ್ಕೆ ‘ಸುಂದರಿ ಕಣ್ಣಾಲ್’ ಹಾಡು ಬಳಕೆ ಆಗಿದೆ. ಇದು 1991ರ ‘ದಳಪತಿ’ ಚಿತ್ರದ ಹಾಡು. ಈ ಹಾಡಿಗೆ ಇಳಯರಾಜ ಸಂಗೀತ ಸಂಯೋಜನೆ ಮಾಡಿದ್ದರು.

ಇಳಯರಾಜ ಕಂಪೋಸ್ ಮಾಡಿದ ಯಾವುದೇ ಹಾಡನ್ನು ಸಿನಿಮಾದಲ್ಲಿ ಬಳಿಸಿದರೂ ಅವರು ಕೇಸ್ ಹಾಕುತ್ತಾರೆ. ಈ ಸಂಬಂಧ ಕೋರ್ಟ್ ಮೆಟ್ಟಿಲು ಹತ್ತುತ್ತಾರೆ. ಕೇವಲ ಮ್ಯೂಸಿಕ್ ಕಂಪನಿಯ ಹಕ್ಕನ್ನು ಪಡೆದರೆ ಮಾತ್ರ ಆಗೋದಿಲ್ಲ, ತಮ್ಮ ಒಪ್ಪಿಗೆಯನ್ನು ಪಡೆಯಬೇಕು ಎಂದು ಅವರು ಹೇಳುತ್ತಾರೆ. ಈಗ ಚಿರಂಜೀವಿ ಸಿನಿಮಾದಲ್ಲಿ ಇಳಯರಾಜ ಹಾಡು ಬಳಕೆ ಮಾಡಲಾಗಿದೆ. ಆದರೂ ಕೇಸ್ ಬಿದ್ದಿಲ್ಲ. ಈ ಬಗ್ಗೆ ನಿರ್ದೇಶಕ ಮಾತನಾಡಿದ್ದಾರೆ.
ಅನಿಲ್ ರವಿಪುಡಿ ನಿರ್ದೇಶನದ ‘ಮನ ಶಂಕರ ವರ ಪ್ರಸಾದ ಗಾರು’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರದಲ್ಲಿ ಚಿರಂಜೀವಿ ನಟಿಸಿದ್ದಾರೆ. ಈ ಚಿತ್ರದಲ್ಲಿ ನಯನತಾರಾ ನಟಿಸಿದ್ದಾರೆ. ಅವರು ಬರೋ ದೃಶ್ಯಕ್ಕೆ ‘ಸುಂದರಿ ಕಣ್ಣಾಲ್’ ಹಾಡು ಬಳಕೆ ಆಗಿದೆ. ಇದು 1991ರ ‘ದಳಪತಿ’ ಚಿತ್ರದ ಹಾಡು. ಈ ಹಾಡಿಗೆ ಇಳಯರಾಜ ಸಂಗೀತ ಸಂಯೋಜನೆ ಮಾಡಿದ್ದರು.
ಇದನ್ನು ನೋಡಿದ ಅನೇಕರು, ಇಳಯರಾಜ ಸಿನಿಮಾ ಮೇಲೆ ಕೇಸ್ ಹಾಕುತ್ತಾರೆ ಎಂದುಕೊಂಡಿದ್ದರು. ಇದಕ್ಕೆ ಅನಿಲ್ ಸ್ಪಷ್ಟನೆ ನೀಡಿದ್ದಾರೆ. ‘ಇಳಯರಾಜ ಕೇಸ್ ಹಾಕ್ತಾರೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಜನರಿಗೆ ಗೊತ್ತಿಲ್ಲದ ವಿಷಯ ಒಂದಿದೆ. ಎಲ್ಲದಕ್ಕೂ ಒಂದು ಪ್ರಕ್ರಿಯೆ ಇದೆ. ನಾವು ಸಿನಿಮಾ ಮಾಡಿದ ಬಳಿಕ ಅವರ ಬಳಿ ತೆರಳಿ, ಒಪ್ಪಿಗೆ ಬೇಕಿತ್ತು ಎಂದು ಕೇಳಿದರೆ ಅವರು ಪ್ರೀತಿಯಿಂದ ಒಪ್ಪಿಕೊಳ್ಳುತ್ತಾರೆ’ ಎಂದರು.
‘ನನ್ನ ನಿರ್ಮಾಪಕರು ಅವರ ಬಳಿ ತೆರಳಿ ಒಪ್ಪಿಗೆ ಕೇಳಿದರು. ಚಿರಂಜೀವಿ ಸಿನಿಮಾದಲ್ಲಿ ನಿಮ್ಮ ಹಾಡುಬಳಸಿಕೊಳ್ಳಬೇಕು ಎಂದುಕೊಂಡಿದ್ದೇವೆ ಎಂದೆವು. ಇದಕ್ಕೆ ಅವರು ಖುಷಿಯಿಂದ ಒಪ್ಪಿದರು’ ಎಂದು ಅನಿಲ್ ರವಿಪುಡಿ ಹೇಳಿದ್ದಾರೆ. ಈ ಮೊದಲು ಅನೇಕ ಸಿನಿಮಾಗಳ ಮೇಲೆ ಇಳಯರಾಜ ಕೇಸ್ ಹಾಕಿದ್ದಾರೆ. ‘ಮಂಜುಮೇಲ್ ಬಾಯ್ಸ್’ ತಂಡ ದೊಡ್ಡ ಮೊತ್ತದ ಹಣವನ್ನು ಇಳಯರಾಜ ಅವರಿಗೆ ನೀಡಬೇಕಾದ ಪರಿಸ್ಥಿತಿ ಎದುರಾಗಿತ್ತು.
ಇದನ್ನೂ ಓದಿ: ‘ನಾನು ಕರ್ನಾಟಕದವನು, ನನ್ನ ಅವ್ವ ಇಲ್ಲೇ ಇರೋದು’: ಇಳಯರಾಜ ಕನ್ನಡ ಪ್ರೇಮ
‘ಮನ ಶಂಕರ ವರ ಪ್ರಸಾದ ಗಾರು’ ಸಿನಿಮಾ ಬಗ್ಗೆ ಹೇಳಬೇಕಾದರೆ ಈ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಚಿತ್ರ ದೊಡ್ಡ ಯಶಸ್ಸು ಕಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



