AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜನ ನಾಯಗನ್’ ಸಿನಿಮಾನಲ್ಲಿವೆ ಹಲವು ವಿಶೇಷ ದೃಶ್ಯ, ಟೈಟಲ್ ಕಾರ್ಡ್​​ ನೋಡಿ ಫ್ಯಾನ್ಸ್ ಹ್ಯಾಪಿ

Thalapathy Vijay movie: ಸಿನಿಮಾ ಬಿಡುಗಡೆಗೆ ನಿಗದಿ ಆಗಿದ್ದ ದಿನಕ್ಕೂ ಈಗ ಬಿಡುಗಡೆ ಆಗುತ್ತಿರುವ ದಿನದ ಮಧ್ಯೆ ಹಲವಾರು ಘಟನೆಗಳು ನಡೆದು ಹೋಗಿವೆ. ವಿಜಯ್ ಸಿಎಂ ಆಗಿದ್ದಾರೆ. ಸಾಕಷ್ಟು ಜನ ಪರ ಕೆಲಸಗಳನ್ನು ಈಗಾಗಲೇ ಘೋಷಿಸಿದ್ದಾರೆ. ವಿಜಯ್ ಜನಪ್ರಿಯತೆ ತುತ್ತ ತುದಿಯಲ್ಲಿದೆ. ಇದರ ಮಧ್ಯೆ ಸಿನಿಮಾ ರಿಲೀಸ್ ಆಗಿದೆ. ಸಿನಿಮಾನಲ್ಲಿ ಅಭಿಮಾನಿಗಳಿಗೆ ಇಷ್ಟವಾಗುವ ಹಲವು ಸಂಗತಿಗಳಿವೆ.

‘ಜನ ನಾಯಗನ್’ ಸಿನಿಮಾನಲ್ಲಿವೆ ಹಲವು ವಿಶೇಷ ದೃಶ್ಯ, ಟೈಟಲ್ ಕಾರ್ಡ್​​ ನೋಡಿ ಫ್ಯಾನ್ಸ್ ಹ್ಯಾಪಿ
Thalapathy Vijay
ಮಂಜುನಾಥ ಸಿ.
|

Updated on: Jul 23, 2026 | 5:41 PM

Share

ವಿಜಯ್ (Vijay) ನಟನೆಯ ‘ಜನ ನಾಯಗನ್’ ಸಿನಿಮಾ ಬಿಡುಗಡೆ ಆಗಿದ್ದು, ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಕಳೆದ ಏಳು ತಿಂಗಳುಗಳಿಂದಲೂ ವಿಜಯ್ ಅಭಿಮಾನಿಗಳು ಈ ಸಿನಿಮಾಕ್ಕಾಗಿ ಕಾಯುತ್ತಿದ್ದಾರೆ. ಸಿನಿಮಾ ಬಿಡುಗಡೆಗೆ ನಿಗದಿ ಆಗಿದ್ದ ದಿನಕ್ಕೂ ಈಗ ಬಿಡುಗಡೆ ಆಗುತ್ತಿರುವ ದಿನದ ಮಧ್ಯೆ ಹಲವಾರು ಘಟನೆಗಳು ನಡೆದು ಹೋಗಿವೆ. ವಿಜಯ್ ಸಿಎಂ ಆಗಿದ್ದಾರೆ. ಸಾಕಷ್ಟು ಜನ ಪರ ಕೆಲಸಗಳನ್ನು ಈಗಾಗಲೇ ಘೋಷಿಸಿದ್ದಾರೆ. ವಿಜಯ್ ಜನಪ್ರಿಯತೆ ತುತ್ತ ತುದಿಯಲ್ಲಿದೆ. ಇದರ ಮಧ್ಯೆ ಸಿನಿಮಾ ರಿಲೀಸ್ ಆಗಿದೆ. ಸಿನಿಮಾನಲ್ಲಿ ಅಭಿಮಾನಿಗಳಿಗೆ ಇಷ್ಟವಾಗುವ ಹಲವು ಸಂಗತಿಗಳಿವೆ.

‘ಜನ ನಾಯಗನ್’ ಸಿನಿಮಾದ ಟೈಟಲ್​ ಕಾರ್ಡಿನಿಂದಲೇ ಅಭಿಮಾನಿಗಳಿಗೆ ಥ್ರಿಲ್ ನೀಡುವುದನ್ನು ಆರಂಭಿಸಿದ್ದಾರೆ ನಿರ್ದೇಶಕ. ಸಿನಿಮಾದ ಟೈಟಲ್​​ ಕಾರ್ಡ್​​ನಲ್ಲಿ ‘ಹಾನರೆಬಲ್ ಸಿಎಂ’ ಎಂದಿದೆ. ಈ ಹಿಂದೆಲ್ಲ ‘ದಳಪತಿ ವಿಜಯ್’ ಎಂದಷ್ಟೆ ಇರುತ್ತಿತ್ತು ಆದರೆ ಈ ಬಾರಿ ‘ಹಾನರೆಬಲ್ ಸಿಎಂ’ ವಿಜಯ್ ಎಂದು ಬದಲಾಯಿಸಲಾಗಿದೆ. ಟೈಟಲ್ ಕಾರ್ಡ್ ನೋಡಿ ಫ್ಯಾನ್ಸ್ ಖುಷ್ ಆಗಿದ್ದಾರೆ.

ಇನ್ನು ಸಿನಿಮಾನಲ್ಲಿ ಸಹ ಅಭಿಮಾನಿಗಳಿಗಾಗಿ ಕೆಲವು ವಿಶೇಷ ಸನ್ನಿವೇಷಗಳನ್ನು ಸೃಷ್ಟಿಸಲಾಗಿದೆ. ವಿಜಯ್ ಅವರ ಹಳೆಯ ಸಿನಿಮಾದ ಡೈಲಾಗ್​​ಗಳು, ಕೆಲವು ರಾಜಕೀಯದ ರೆಫೆರೆನ್ಸ್​​ಗಳು, ಹಾಡುಗಳನ್ನು ಸಹ ಸಿನಿಮಾನಲ್ಲಿ ಸೇರಿಸಲಾಗಿದೆ. ವಿಜಯ್ ತಮ್ಮ ಭಾಷಣದಲ್ಲಿ ಹೇಳಿದ್ದ ಡೈಲಾಗ್, ‘ವಾಟ್ ಬ್ರೋ, ವೆರಿ ಬ್ಯಾಡ್ ಬ್ರೋ’ ಡೈಲಾಗ್ ಸಿನಿಮಾನಲ್ಲಿದೆ. ಡೈಲಾಗ್ ಬಂದ ಕೂಡಲೇ ಅಭಿಮಾನಿಗಳು ಶಿಳ್ಳೆಗಳು ಮುಗಿಲು ಮುಟ್ಟುತ್ತವೆ.

ಇದನ್ನೂ ಓದಿ:ಎಂಜಿಆರ್​​ To ದಳಪತಿ ವಿಜಯ್: ಸಿಎಂ ಕುರ್ಚಿಯಲ್ಲಿ ಕುಳಿತ ಬಳಿಕ ಪ್ರೇಕ್ಷಕರ ಮುಂದೆ ಬಂದ ನಾಯಕರು

‘ದಳಪತಿ ಕಚೇರಿ’ ಹಾಡಿನಲ್ಲಿ ವಿಜಯ್ ಜೊತೆಗೆ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್, ಡ್ಯಾನ್ಸ್ ಮಾಸ್ಟರ್ ಶೇಖರ್ ಸಹ ಎಂಟ್ರಿ ಕೊಟ್ಟು ಸಖತ್ ಸ್ಟೆಪ್ಪು ಹಾಕಿದ್ದಾರೆ. ಮತ್ತೂ ವಿಶೇಷವೆಂದರೆ ಸಿನಿಮಾದ ನಿರ್ಮಾಪಕ ಕೆವಿನ್ ವೆಂಟಕ್ ಸಹ ವಿಜಯ್ ಜೊತೆಗೆ ಅದೇ ಹಾಡಿನಲ್ಲಿ ಸ್ಟೆಪ್ಪು ಹಾಕಿದ್ದಾರೆ. ಆ ಹಾಡಿನ ಕೊನೆಯಲ್ಲಿ ಅಭಿಮಾನಿಗಳಿಗಾಗಿ ವಿಜಯ್ ವಿಶೇಷವಾಗಿ ಡ್ಯಾನ್ಸ್ ಮಾಡಿದ್ದಾರೆ. ಆ ಡ್ಯಾನ್ಸ್​​​ನಲ್ಲಿ ಅವರ ಕೆಲವು ಹಳೆಯ ಸಿನಿಮಾಗಳ ಸ್ಟೆಪ್ಪುಗಳು ಸಹ ಇವೆ.

ಸಿನಿಮಾನಲ್ಲಿ ಎಂಜಿಆರ್ ಅವರ ಕ್ಯಾಮಿಯೋ ಅನ್ನು ಸಹ ಬಳಸಿಕೊಳ್ಳಲಾಗಿದೆ. ಎಂಜಿಆರ್ ಸಹ, ಸ್ಟಾರ್ ನಟನಾಗಿ ಬಳಿಕ ಸಿಎಂ ಆದವರು. ವಿಜಯ್ ಅವರ ಪಾತ್ರ, ವಿಲನ್ ಮನೆಗೆ ಹೋದಾಗ ಅಲ್ಲಿ ಎಂಜಿಆರ್ ಚಿತ್ರ ಇರುತ್ತದೆ. ವಿಜಯ್ ಅವರು ಚಿತ್ರದ ಮುಂದೆ ನಡೆದು ಬರುವಾಗ ಫೋಟೊ ಮೂಲಕವೇ ಎಂಜಿಆರ್, ವಿಜಯ್ ಜೊತೆ ಮಾತನಾಡುವಂತೆ ಹಾಗೂ ಅವರೇ ವಿಜಯ್​​ ಕೈಗೆ ದುಷ್ಟರನ್ನು ಶಿಕ್ಷಿಸಲು ಹಂಟರ್ ಕೊಡುವ ದೃಶ್ಯವಿದೆ. ಅದು ಮಾತ್ರವೇ ಅಲ್ಲದೆ, ಸಿನಿಮಾದ ದೃಶ್ಯವೊಂದರಲ್ಲಿ ವಿಜಯ್, ಎಂಜಿಆರ್ ಅವರ ಹಳೆಯ ಸಿನಿಮಾದ ಜನಪ್ರಿಯ ಹಾಡೊಂದನ್ನು ಸಹ ಹಾಡುತ್ತಾರೆ.

ಸಿನಿಮಾದ ಕೊನೆಯಲ್ಲಿ ನಿರ್ದೇಶಕರುಗಳಾದ ಲೋಕೇಶ್ ಕನಗರಾಜ್, ಅಟ್ಲಿ ಮತ್ತು ದಿಲೀಪ್ ನೆಲ್ಸನ್ ಅವರುಗಳು ಪತ್ರಕರ್ತರ ಪಾತ್ರದಲ್ಲಿ ಎಂಟ್ರಿ ಕೊಡುತ್ತಾರೆ. ಆ ದೃಶ್ಯವೂ ಸಹ ಮಜವಾಗಿದೆ. ಇಂಟರ್ವೆಲ್ ದೃಶ್ಯದಲ್ಲಿ, ‘ನೀವು ಎಷ್ಟೇ ಹೀಗಳೆದರು, ಬೆದರಿಸಿದರು ನಾನು ಮರಳಿ ಹೋಗುವುದಿಲ್ಲ’ ಎಂಬ ಸಂಭಾಷಣೆ ಹೇಳುತ್ತಾರೆ, ಅದು ರಾಜಕೀಯ ವಿರೋಧಿಗಳಿಗೆ ಹೇಳಿದ ಸಂಭಾಷಣೆಯಂತಿದೆ. ಜೊತೆಗೆ ಅದೇ ದೃಶ್ಯದಲ್ಲಿ ವಿಜಯ್ ಅವರು ಸೆಲ್ಫಿ ತೆಗೆದು ಕೊಳ್ಳುವ ದೃಶ್ಯವೂ ಇದೆ. ವಿಜಯ್ ಅವರು ಅಭಿಮಾನಿಗಳೊಟ್ಟಿಗೆ ತೆಗೆದುಕೊಂಡಿದ್ದ ಸೆಲ್ಫಿ ರೆಕಾರ್ಡ್​​ಗಳನ್ನು ಸೃಷ್ಟಿಸಿತ್ತು. ಅದಕ್ಕೆ ಆ ದೃಶ್ಯವನ್ನು ಲಿಂಕ್ ಮಾಡಲಾಗಿದೆ.

ಇನ್ನು ಸಿನಿಮಾ ಮುಗಿಯುವ ಸಮಯದಲ್ಲಿ ವಿಜಯ್, ಓಟು ಹಾಕಿ ಮತಗಟ್ಟೆಯಿಂದ ಹೊರಗೆ ಬರುವ ದೃಶ್ಯವಿದೆ. ಆಗ ತನ್ನ ಮತ ಹಾಕಿದ ಬೆರಳು ತೋರಿಸಿ, ‘ಎಲ್ಲವೂ ಇಲ್ಲಿಂದಲೇ ಶುರು’ ಎನ್ನುತ್ತಾರೆ. ಆ ಮೂಲಕ ಮತದಾನದ ದಿನವನ್ನು ನೆನಪಿಸಿದ್ದಾರೆ. ಸಿನಿಮಾ ಎಲ್ಲ ಮುಗಿದ ಬಳಿಕ ವಿಜಯ್ ಅವರ ಹಳೆಯ ಸಿನಿಮಾಗಳ ದೃಶ್ಯಗಳನ್ನು ಸಹ ಪ್ರದರ್ಶಿಸಲಾಗಿದೆ. ಇದು ವಿಜಯ್ ಅವರ ಕೊನೆಯ ಸಿನಿಮಾ ಎಂಬ ಕಾರಣಕ್ಕೆ ಒಂದು ಭಾವುಕ ವಿದಾಯವನ್ನು ವಿಜಯ್ ಅವರಿಗೆ ನೀಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಪ್ರವಾಹ: ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ಅಂಗಡಿ ಮುಂಗಟ್ಟುಗಳು
ಪ್ರವಾಹ: ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ಅಂಗಡಿ ಮುಂಗಟ್ಟುಗಳು
ಕಾಂಗ್ರೆಸ್ ಕಚೇರಿಗೆ ಇಟ್ಟಿಗೆ ಎಸೆದ ಬಿಜೆಪಿ ಎಂಎಲ್​​​ಸಿ
ಕಾಂಗ್ರೆಸ್ ಕಚೇರಿಗೆ ಇಟ್ಟಿಗೆ ಎಸೆದ ಬಿಜೆಪಿ ಎಂಎಲ್​​​ಸಿ
ನದಿಗೆ ಬಿದ್ದಿದ್ದ ಯುವತಿಯ ಪ್ರಾಣ ಉಳಿಸಿದ ಯುವಕ
ನದಿಗೆ ಬಿದ್ದಿದ್ದ ಯುವತಿಯ ಪ್ರಾಣ ಉಳಿಸಿದ ಯುವಕ
ಮಂಗಳೂರಲ್ಲಿ ಜನವಸತಿ ಕಟ್ಟಡಗಳ ಸಮೀಪವೇ ಹಾರಾಡಿದ ಸೇನಾ ಹೆಲಿಕಾಪ್ಟರ್‌ಗಳು!
ಮಂಗಳೂರಲ್ಲಿ ಜನವಸತಿ ಕಟ್ಟಡಗಳ ಸಮೀಪವೇ ಹಾರಾಡಿದ ಸೇನಾ ಹೆಲಿಕಾಪ್ಟರ್‌ಗಳು!
ಮೆಣಸಿನಕಾಯಿ ದರ ಕುಸಿತ, 3 ಎಕರೆಯಲ್ಲಿ ಬೆಳೆದಿದ್ದ ಬೆಳೆ ನಾಶ ಮಾಡಿದ ರೈತ!
ಮೆಣಸಿನಕಾಯಿ ದರ ಕುಸಿತ, 3 ಎಕರೆಯಲ್ಲಿ ಬೆಳೆದಿದ್ದ ಬೆಳೆ ನಾಶ ಮಾಡಿದ ರೈತ!
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ನಡೆಯುತ್ತೆ ಪ್ರತಿಭಟನೆ: ದೀಪ್ಕೆ
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ನಡೆಯುತ್ತೆ ಪ್ರತಿಭಟನೆ: ದೀಪ್ಕೆ
ಬೊಮ್ಮಸಂದ್ರದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಸಿಲಿಂಡರ್ ಸ್ಫೋಟ!
ಬೊಮ್ಮಸಂದ್ರದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಸಿಲಿಂಡರ್ ಸ್ಫೋಟ!