AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

9 ಕೆಜಿ ತೂಕ ಇಳಿಸಿಕೊಂಡ ಕೀರ್ತಿ ಸುರೇಶ್; ನಟಿಯ ಡಯಟ್ ಬಗ್ಗೆ ಇಲ್ಲಿದೆ ವಿವರ

ದಕ್ಷಿಣ ಭಾರತದ ನಟಿ ಕೀರ್ತಿ ಸುರೇಶ್ ತಮ್ಮ ತೂಕ ಇಳಿಕೆಯ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಕ್ರ್ಯಾಶ್ ಡಯಟ್ ಮಾಡದೆ, ಕೇವಲ ನೈಸರ್ಗಿಕ ಪ್ರೋಟೀನ್ ಯುಕ್ತ ಆಹಾರ ಹಾಗೂ ಸರಿಯಾದ ವರ್ಕೌಟ್ ಮೂಲಕ 9 ಕೆಜಿ ತೂಕ ಕಳೆದುಕೊಂಡ ಕೀರ್ತಿ, ಫಿಟ್‌ನೆಸ್ ಪ್ರಿಯರಿಗೆ ಪ್ರೇರಣೆಯಾಗಿದ್ದಾರೆ. ಅವರ ಸರಳ ಹಾಗೂ ಆರೋಗ್ಯಕರ ಡಯಟ್ ಶೈಲಿಯ ಸಂಪೂರ್ಣ ಮಾಹಿತಿ ಇಲ್ಲಿದೆ.

9 ಕೆಜಿ ತೂಕ ಇಳಿಸಿಕೊಂಡ ಕೀರ್ತಿ ಸುರೇಶ್; ನಟಿಯ ಡಯಟ್ ಬಗ್ಗೆ ಇಲ್ಲಿದೆ ವಿವರ
ಕೀರ್ತಿ ಸುರೇಶ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Sep 01, 2026 | 8:05 AM

Share

ಮುಖ್ಯಾಂಶಗಳು

  • 9 ಕೆಜಿ ತೂಕ ಇಳಿಸಿದ 'ಮಹಾನಟಿ'
  • ಶಾರ್ಟ್‌ಕಟ್ ಇಲ್ಲದ ವರ್ಕೌಟ್ ಸೀಕ್ರೆಟ್
  • ಕೀರ್ತಿ ಸುರೇಶ್ ನೈಸರ್ಗಿಕ ಡಯಟ್ ಪ್ಲಾನ್

ದಕ್ಷಿಣ ಭಾರತದ ಖ್ಯಾತ ನಟಿ, ‘ಮಹಾನಟಿ’ ಕೀರ್ತಿ ಸುರೇಶ್ ತಮ್ಮ ಅದ್ಭುತ ಅಭಿನಯದ ಜೊತೆಗೆ ಫಿಟ್‌ನೆಸ್ ವಿಷಯದಲ್ಲೂ ಸದಾ ಸುದ್ದಿಯಲ್ಲಿರುತ್ತಾರೆ. ಸದ್ಯ ‘ದಿ ಪ್ಯಾರಡೈಸ್’ ಚಿತ್ರದ  ವಿಶೇಷ ಹಾಡಿನಲ್ಲಿ ಸದ್ದು ಮಾಡಲು ಸಜ್ಜಾಗಿರುವ ಅವರು, ತಮ್ಮ ಸೀಕ್ರೆಟ್ ಫಿಟ್‌ನೆಸ್ ಹಾಗೂ ತೂಕ ಇಳಿಕೆಯ ದಿನಚರಿಯಿಂದ ಅಭಿಮಾನಿಗಳಿಗೆ ಮಾದರಿಯಾಗಿದ್ದಾರೆ. ಸಿನಿಮಾ ಒಂದರ ಪಾತ್ರಕ್ಕಾಗಿ ಯಾವುದೇ ಶಾರ್ಟ್‌ಕಟ್ ಬಳಸದೆ ರೂಪಾಂತರ ಹೊಂದಿದ್ದ ಕೀರ್ತಿ, ಸುಮಾರು 9 ಕೆಜಿ ತೂಕ ಇಳಿಸಿಕೊಂಡು ಎಲ್ಲರನ್ನೂ ಬೆರಗುಗೊಳಿಸಿದ್ದರು.

ಕೀರ್ತಿ ಸುರೇಶ್ ಅವರ ಈ ತೂಕ ಇಳಿಕೆಯ ಪಯಣದಲ್ಲಿ ಯಾವುದೇ ಕಟ್ಟುನಿಟ್ಟಾದ ಆಹಾರ ನಿಯಮಗಳು ಅಥವಾ ಕ್ರ್ಯಾಶ್ ಡಯಟ್‌ಗಳಿರಲಿಲ್ಲ. ಆರಂಭದಲ್ಲಿ ಕ್ಯಾಲೊರಿ ಕರಗಿಸಲು ಸಂಪೂರ್ಣವಾಗಿ ಕಾರ್ಡಿಯೋ ವ್ಯಾಯಾಮಗಳನ್ನೇ ನೆಚ್ಚಿಕೊಂಡಿದ್ದ ಅವರು, ಇದರಿಂದ ಸ್ನಾಯುಗಳ ಶಕ್ತಿ ಕಡಿಮೆಯಾಗುವುದನ್ನು ಗಮನಿಸಿ ತಕ್ಷಣ ತಮ್ಮ ವರ್ಕೌಟ್ ಶೈಲಿಯನ್ನು ಬದಲಾಯಿಸಿಕೊಂಡರು. ಪ್ರಸ್ತುತ ಅವರು ಕಾರ್ಡಿಯೋ ಜೊತೆಗೆ ವೇಟ್ ಟ್ರೇನಿಂಗ್ ಹಾಗೂ ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಇದು ಅವರ ದೇಹಕ್ಕೆ ಉತ್ತಮ ಶಕ್ತಿ ಮತ್ತು ನಮ್ಯತೆಯನ್ನು ನೀಡಿದೆ.

ಡಯಟ್ ವಿಷಯಕ್ಕೆ ಬಂದರೆ, ಕೀರ್ತಿ ‘ಕೀಟೋ’ದಂತಹ ಯಾವುದೇ ತೀವ್ರ ಸ್ವರೂಪದ ಪದ್ಧತಿಗಳನ್ನು ಅನುಸರಿಸಲಿಲ್ಲ. ಬದಲಾಗಿ ನೈಸರ್ಗಿಕವಾಗಿ ಸಿಗುವ ಹೆಚ್ಚಿನ ಪ್ರೋಟೀನ್ ಮತ್ತು ಕಡಿಮೆ ಕಾರ್ಬೋಹೈಡ್ರೇಟ್ ಇರುವ ಆಹಾರಗಳನ್ನು ಆಯ್ಕೆ ಮಾಡಿಕೊಂಡರು. ಯಾವುದೇ ರೀತಿಯ ಕೃತಕ ಪ್ರೋಟೀನ್ ಶೇಕ್ ಅಥವಾ ಸಪ್ಲಿಮೆಂಟ್ಸ್‌ಗಳನ್ನು ಬಳಸದೆ, ಕೇವಲ ನೈಸರ್ಗಿಕ ಆಹಾರ ಪದಾರ್ಥಗಳಿಂದಲೇ ಪ್ರೋಟೀನ್ ಪಡೆಯುವುದು ಅವರ ಮುಖ್ಯ ಆದ್ಯತೆಯಾಗಿತ್ತು.

ಅವರ ದಿನನಿತ್ಯದ ಆಹಾರದಲ್ಲಿ ಪ್ರೋಟೀನ್ ಪಡೆಯಲು 6 ರಿಂದ 7 ಮೊಟ್ಟೆಯ ಬಿಳಿಭಾಗವನ್ನು ಸೇವಿಸುತ್ತಿದ್ದರು. ಇದರೊಂದಿಗೆ ಪನೀರ್, ಟೋಫು, ಸೋಯಾ ಹಾಗೂ ಕಡಲೆಯಂತಹ ಸಸ್ಯಹಾರಿ ಪ್ರೋಟೀನ್ ಮೂಲಗಳನ್ನು ಯಥೇಚ್ಛವಾಗಿ ಸೇರಿಸಿಕೊಂಡಿದ್ದರು. ಸಂಸ್ಕರಿಸಿದ ಆಹಾರ (ಪ್ರೊಸೆಸ್ಡ್ ಫುಡ್), ಸಕ್ಕರೆ ಮತ್ತು ಹೆಚ್ಚು ಕಾರ್ಬೋಹೈಡ್ರೇಟ್ ಇರುವ ಪದಾರ್ಥಗಳಿಂದ ಸಂಪೂರ್ಣ ದೂರವಿದ್ದು ನೈಸರ್ಗಿಕ ಪೋಷಕಾಂಶಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರು.

ನೆಚ್ಚಿನ ಆಹಾರವನ್ನು ಸಂಪೂರ್ಣವಾಗಿ ತ್ಯಜಿಸುವ ಅಗತ್ಯವಿಲ್ಲ ಎಂಬುದು ಕೀರ್ತಿ ಅವರ ಸರಳ ಸೂತ್ರ. ನಮ್ಮ ದೇಹದ ಅಗತ್ಯಕ್ಕೆ ತಕ್ಕಂತೆ ಸರಿಯಾದ ಪೌಷ್ಟಿಕ ಆಹಾರ ಸೇವಿಸುತ್ತಾ, ನಿರಂತರ ವ್ಯಾಯಾಮದಲ್ಲಿ ತೊಡಗಿಸಿಕೊಂಡರೆ ಅತ್ಯಂತ ಆರೋಗ್ಯಕರ ರೀತಿಯಲ್ಲಿ ತೂಕ ಇಳಿಸಿಕೊಳ್ಳಬಹುದು ಎಂಬುದನ್ನು ಅವರು ಪ್ರಾಯೋಗಿಕವಾಗಿ ತೋರಿಸಿಕೊಟ್ಟಿದ್ದಾರೆ.

ಇದನ್ನೂ ಓದಿ: ಮೊದಲ ಬಾರಿಗೆ ಐಟಂ ಹಾಡಿಗೆ ಸೊಂಟ ಕುಣಿಸಲಿರುವ ನಟಿ ಕೀರ್ತಿ ಸುರೇಶ್

ವಿಶೇಷ ಸೂಚನೆ: ಈ ಲೇಖನದಲ್ಲಿ ನೀಡಲಾಗಿರುವ ಫಿಟ್‌ನೆಸ್ ಹಾಗೂ ಡಯಟ್ ಸಂಬಂಧಿತ ಮಾಹಿತಿಗಳು ಸಂಪೂರ್ಣವಾಗಿ ಮಾಹಿತಿ ಉದ್ದೇಶಕ್ಕಾಗಿ ಮಾತ್ರವೇ ಹೊರತು, ಇವು ಯಾವುದೇ ರೀತಿಯ ವೃತ್ತಿಪರ ವೈದ್ಯಕೀಯ ಅಥವಾ ಫಿಟ್‌ನೆಸ್ ಉಸ್ತುವಾರಿಗೆ ಪರ್ಯಾಯವಲ್ಲ. ಪ್ರತಿಯೊಬ್ಬರ ದೇಹದ ಪ್ರಕೃತಿ, ಆರೋಗ್ಯ ಸ್ಥಿತಿ ಹಾಗೂ ಚಯಾಪಚಯ ಕ್ರಿಯೆ (ಮೈಟಾಬಾಲಿಸಂ) ಭಿನ್ನವಾಗಿರುವುದರಿಂದ ಕೀರ್ತಿ ಸುರೇಶ್ ಅವರ ಈ ಡಯಟ್ ಅಥವಾ ವರ್ಕೌಟ್ ಪದ್ಧತಿಯನ್ನು ಯಥಾವತ್ತಾಗಿ ಅನುಸರಿಸುವುದು ಸೂಕ್ತವಲ್ಲ. ಆದ್ದರಿಂದ ಯಾವುದೇ ರೀತಿಯ ತೀವ್ರತರವಾದ ಆಹಾರ ಪದ್ಧತಿ (ಡಯಟ್) ಅಥವಾ ತೂಕ ಇಳಿಕೆಯ ವ್ಯಾಯಾಮಗಳನ್ನು ಪ್ರಾರಂಭಿಸುವ ಮುನ್ನ ನಿಮ್ಮ ದೇಹದ ಅಗತ್ಯಕ್ಕೆ ಅನುಗುಣವಾಗಿ ಪ್ರಮಾಣೀಕೃತ ವೈದ್ಯರು ಅಥವಾ ಪೌಷ್ಟಿಕತಜ್ಞರ (ನ್ಯೂಟ್ರಿಷನಿಸ್ಟ್) ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಪಡೆಯುವುದು ಕಡ್ಡಾಯವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಸೆಪ್ಟೆಂಬರ್ 1, 2026: ದ್ವಾದಶ ರಾಶಿಗಳ ಮೇಲೆ ಗ್ರಹಗಳ ಪ್ರಭಾವ, ದಿನ ಭವಿಷ್ಯ
ಸೆಪ್ಟೆಂಬರ್ 1, 2026: ದ್ವಾದಶ ರಾಶಿಗಳ ಮೇಲೆ ಗ್ರಹಗಳ ಪ್ರಭಾವ, ದಿನ ಭವಿಷ್ಯ
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ