AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಾಕಿದ್ದಾರೆ ಕೀಟ; ಸುದೀಪ್​ ಎದುರು ಹೇಳಿಕೊಂಡ ಸಂಬರಗಿ

ಪ್ರಶಾಂತ್​ ಸಂಬರಗಿ ಬಿಗ್​ ಬಾಸ್​ ಮನೆ ಸೇರಿದಾಗಿನಿಂದಲೂ ಅನ್ಯಾಯದ ವಿರುದ್ಧ ಹೋರಾಟ ಎಂದು ಕೂಗಾಡಿಕೊಂಡಿದ್ದರು. ಪ್ರತಿ ವಾರ ಬಿಗ್​ ಬಾಸ್​ ಮನೆಯಲ್ಲಿ ಈ ವಿಚಾರ ಚರ್ಚೆ ಆಗುತ್ತಿತ್ತು. ‘

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಾಕಿದ್ದಾರೆ ಕೀಟ; ಸುದೀಪ್​ ಎದುರು ಹೇಳಿಕೊಂಡ ಸಂಬರಗಿ
ಬಿಗ್​ ಬಾಸ್​ ಕನ್ನಡ - ಕಿಚ್ಚ ಸುದೀಪ್​
TV9 Web
| Edited By: |

Updated on:Jul 18, 2021 | 4:22 PM

Share

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಂಬರಗಿ ಅನೇಕ ವಿಚಾರಗಳಿಗೆ ಸುದ್ದಿಯಾಗುತ್ತಾರೆ. ಮನೆಯಲ್ಲಿ ಅವರು ಮಾತನಾಡುವ ವಿಚಾರ ವೀಕೆಂಡ್​ನಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತದೆ.  ಈ ವಾರ ನೊಣದ ವಿಚಾರ ಚರ್ಚೆಯಾಗಿದೆ. ಬಿಗ್​ ಬಾಸ್​ ಮನೆಯಲ್ಲಿ ಒಂದು ನೊಣ ಇದೆ. ಅದಕ್ಕೆ ಪ್ರಶಾಂತ್​ ಪ್ರೀತಿಯಿಂದ ಹೆಸರನ್ನು ಕೂಡ ಇಟ್ಟಿದ್ದಾರೆ.

ಪ್ರಶಾಂತ್​ ಸಂಬರಗಿ ಬಿಗ್​ ಬಾಸ್​ ಮನೆ ಸೇರಿದಾಗಿನಿಂದಲೂ ಅನ್ಯಾಯದ ವಿರುದ್ಧ ಹೋರಾಟ ಎಂದು ಕೂಗಾಡಿಕೊಂಡಿದ್ದರು. ಪ್ರತಿ ವಾರ ಬಿಗ್​ ಬಾಸ್​ ಮನೆಯಲ್ಲಿ ಈ ವಿಚಾರ ಚರ್ಚೆ ಆಗುತ್ತಿತ್ತು. ‘ನಿಮ್ಮಲ್ಲಿ ಮಗುವಿನಂತಹ ಮನಸ್ಸು ಇದೆ. ಅದನ್ನು ಕಳೆದುಕೊಳ್ಳಬೇಡಿ’ ಎಂದಿದ್ದರು ಸುದೀಪ್​. ಇದಾದ ನಂತರದಲ್ಲಿ ಚಕ್ರವರ್ತಿ ಸಾಕಷ್ಟು ಬದಲಾಗಿದ್ದಾರೆ.

‘ನೀವು ಮಾಡುವ ಹೋರಾಟ ಗೊತ್ತಿದೆ. ಆದರೆ, ನೊಣ ಸಾಕುವ ಹವ್ಯಾಸ ಗೊತ್ತಿರಲಿಲ್ಲ. ಇದನ್ನು ಯಾವಾಗಿಂದ ಆರಂಭವಾಗಿದೆ’ ಎಂದು ಪ್ರಶ್ನೆ ಮಾಡಿದರು ಸುದೀಪ್​. ‘ಬಿಗ್​ ಬಾಸ್​ ಮನೆಯಲ್ಲಿ ಇರೋದು ಒಂದೇ ನೊಣ ಇದೆ. ಆ ನೊಣ ಬಂದು ಕೈ ಮೇಲೆ ಕೂರುತ್ತದೆ. ಹೊಡೆದರೂ ಹೋಗಲ್ಲ. ಇದಕ್ಕೆ ಭಯವೇ ಇಲ್ಲವಲ್ಲ ಎಂದುಕೊಂಡೆ. ಎಲ್ಲಿದ್ರೂ ಬಂದು ಕೈ ಮೇಲೆ ಬಂದು ಕೂರುತ್ತದೆ. ನಾವು ನಾಯಿಮರಿಯಂತೆ ಅದಕ್ಕೆ ಹೆಸರಿಟ್ಟಿದ್ದೇವೆ. ಆ ನೊಣವನ್ನು ಪ್ರೀತಿಂದ ಚಿನ್ನುಮರಿ ಎಂದು ಹೆಸರು ಇಟ್ಟಿದ್ದೇವೆ’ ಎಂದು ವಿವರಣೆ ನೀಡಿದರು ಚಕ್ರವರ್ತಿ.

‘ಶನಿವಾರದ ಎಪಿಸೋಡ್​ ನಡೆಸಿಕೊಡ್ತಾ ಇರ್ತೀವಿ. ಹೋಗಿ ನೊಣವನ್ನು ಕರೆದುಕೊಂಡು ಬನ್ನಿ’ ಎಂದರು ಸುದೀಪ್. ಇದಕ್ಕೆ ಮನೆ ಮಂದಿ ಎಲ್ಲರೂ ನಕ್ಕರು.

ಈ ಮೊದಲು ಸೊಳ್ಳೆ ವಿಚಾರಕ್ಕೆ ಪ್ರಶಾಂತ್​ ಚರ್ಚೆಯಾಗಿದ್ದರು. ‘ಕಟ್ಟಡದ ಎತ್ತರಕ್ಕೆ ಹೋದಂತಲ್ಲ ಸೊಳ್ಳೆ ಇರಲ್ಲ. ಗಾಳಿಗೆ ಅವು ಮೇಲೆ ಬರೋಲ್ಲ. ಆದರೆ, ಲಿಫ್ಟ್​ನಲ್ಲಿ ಏರಿಕೊಂಡು ಮೇಲೆ ಬರ್ತವೆ. ನನಗೆ ಇದು ಅನುಭವ ಆಗಿದೆ’ ಎಂದು ಪ್ರಶಾಂತ್​ ಹೇಳಿದ್ದರು. ಈ ವಿಚಾರದಲ್ಲಿ ಸುದೀಪ್​ ಸಾಕಷ್ಟು ನಗೆ ಚಟಾಕಿ ಹಾರಿಸಿದ್ದರು.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್ ಪ್ರತಿಭಟನೆ; ಸುದೀಪ್ ತೆಗೆದುಕೊಂಡ್ರು ಅಚ್ಚರಿಯ ನಿಲುವು

ಬಿಗ್​ ಬಾಸ್​ ಮನೆಯಲ್ಲಿ ಹಾರಿತು ಕಪ್ಪು ಬಾವುಟ; ಏಕಾಂಗಿಯಾದ ಚಕ್ರವರ್ತಿ ಚಂದ್ರಚೂಡ್​?

Published On - 4:19 pm, Sun, 18 July 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್