AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಾಕಿದ್ದಾರೆ ಕೀಟ; ಸುದೀಪ್​ ಎದುರು ಹೇಳಿಕೊಂಡ ಸಂಬರಗಿ

ಪ್ರಶಾಂತ್​ ಸಂಬರಗಿ ಬಿಗ್​ ಬಾಸ್​ ಮನೆ ಸೇರಿದಾಗಿನಿಂದಲೂ ಅನ್ಯಾಯದ ವಿರುದ್ಧ ಹೋರಾಟ ಎಂದು ಕೂಗಾಡಿಕೊಂಡಿದ್ದರು. ಪ್ರತಿ ವಾರ ಬಿಗ್​ ಬಾಸ್​ ಮನೆಯಲ್ಲಿ ಈ ವಿಚಾರ ಚರ್ಚೆ ಆಗುತ್ತಿತ್ತು. ‘

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಾಕಿದ್ದಾರೆ ಕೀಟ; ಸುದೀಪ್​ ಎದುರು ಹೇಳಿಕೊಂಡ ಸಂಬರಗಿ
ಬಿಗ್​ ಬಾಸ್​ ಕನ್ನಡ - ಕಿಚ್ಚ ಸುದೀಪ್​
TV9 Web
| Edited By: |

Updated on:Jul 18, 2021 | 4:22 PM

Share

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಂಬರಗಿ ಅನೇಕ ವಿಚಾರಗಳಿಗೆ ಸುದ್ದಿಯಾಗುತ್ತಾರೆ. ಮನೆಯಲ್ಲಿ ಅವರು ಮಾತನಾಡುವ ವಿಚಾರ ವೀಕೆಂಡ್​ನಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತದೆ.  ಈ ವಾರ ನೊಣದ ವಿಚಾರ ಚರ್ಚೆಯಾಗಿದೆ. ಬಿಗ್​ ಬಾಸ್​ ಮನೆಯಲ್ಲಿ ಒಂದು ನೊಣ ಇದೆ. ಅದಕ್ಕೆ ಪ್ರಶಾಂತ್​ ಪ್ರೀತಿಯಿಂದ ಹೆಸರನ್ನು ಕೂಡ ಇಟ್ಟಿದ್ದಾರೆ.

ಪ್ರಶಾಂತ್​ ಸಂಬರಗಿ ಬಿಗ್​ ಬಾಸ್​ ಮನೆ ಸೇರಿದಾಗಿನಿಂದಲೂ ಅನ್ಯಾಯದ ವಿರುದ್ಧ ಹೋರಾಟ ಎಂದು ಕೂಗಾಡಿಕೊಂಡಿದ್ದರು. ಪ್ರತಿ ವಾರ ಬಿಗ್​ ಬಾಸ್​ ಮನೆಯಲ್ಲಿ ಈ ವಿಚಾರ ಚರ್ಚೆ ಆಗುತ್ತಿತ್ತು. ‘ನಿಮ್ಮಲ್ಲಿ ಮಗುವಿನಂತಹ ಮನಸ್ಸು ಇದೆ. ಅದನ್ನು ಕಳೆದುಕೊಳ್ಳಬೇಡಿ’ ಎಂದಿದ್ದರು ಸುದೀಪ್​. ಇದಾದ ನಂತರದಲ್ಲಿ ಚಕ್ರವರ್ತಿ ಸಾಕಷ್ಟು ಬದಲಾಗಿದ್ದಾರೆ.

‘ನೀವು ಮಾಡುವ ಹೋರಾಟ ಗೊತ್ತಿದೆ. ಆದರೆ, ನೊಣ ಸಾಕುವ ಹವ್ಯಾಸ ಗೊತ್ತಿರಲಿಲ್ಲ. ಇದನ್ನು ಯಾವಾಗಿಂದ ಆರಂಭವಾಗಿದೆ’ ಎಂದು ಪ್ರಶ್ನೆ ಮಾಡಿದರು ಸುದೀಪ್​. ‘ಬಿಗ್​ ಬಾಸ್​ ಮನೆಯಲ್ಲಿ ಇರೋದು ಒಂದೇ ನೊಣ ಇದೆ. ಆ ನೊಣ ಬಂದು ಕೈ ಮೇಲೆ ಕೂರುತ್ತದೆ. ಹೊಡೆದರೂ ಹೋಗಲ್ಲ. ಇದಕ್ಕೆ ಭಯವೇ ಇಲ್ಲವಲ್ಲ ಎಂದುಕೊಂಡೆ. ಎಲ್ಲಿದ್ರೂ ಬಂದು ಕೈ ಮೇಲೆ ಬಂದು ಕೂರುತ್ತದೆ. ನಾವು ನಾಯಿಮರಿಯಂತೆ ಅದಕ್ಕೆ ಹೆಸರಿಟ್ಟಿದ್ದೇವೆ. ಆ ನೊಣವನ್ನು ಪ್ರೀತಿಂದ ಚಿನ್ನುಮರಿ ಎಂದು ಹೆಸರು ಇಟ್ಟಿದ್ದೇವೆ’ ಎಂದು ವಿವರಣೆ ನೀಡಿದರು ಚಕ್ರವರ್ತಿ.

‘ಶನಿವಾರದ ಎಪಿಸೋಡ್​ ನಡೆಸಿಕೊಡ್ತಾ ಇರ್ತೀವಿ. ಹೋಗಿ ನೊಣವನ್ನು ಕರೆದುಕೊಂಡು ಬನ್ನಿ’ ಎಂದರು ಸುದೀಪ್. ಇದಕ್ಕೆ ಮನೆ ಮಂದಿ ಎಲ್ಲರೂ ನಕ್ಕರು.

ಈ ಮೊದಲು ಸೊಳ್ಳೆ ವಿಚಾರಕ್ಕೆ ಪ್ರಶಾಂತ್​ ಚರ್ಚೆಯಾಗಿದ್ದರು. ‘ಕಟ್ಟಡದ ಎತ್ತರಕ್ಕೆ ಹೋದಂತಲ್ಲ ಸೊಳ್ಳೆ ಇರಲ್ಲ. ಗಾಳಿಗೆ ಅವು ಮೇಲೆ ಬರೋಲ್ಲ. ಆದರೆ, ಲಿಫ್ಟ್​ನಲ್ಲಿ ಏರಿಕೊಂಡು ಮೇಲೆ ಬರ್ತವೆ. ನನಗೆ ಇದು ಅನುಭವ ಆಗಿದೆ’ ಎಂದು ಪ್ರಶಾಂತ್​ ಹೇಳಿದ್ದರು. ಈ ವಿಚಾರದಲ್ಲಿ ಸುದೀಪ್​ ಸಾಕಷ್ಟು ನಗೆ ಚಟಾಕಿ ಹಾರಿಸಿದ್ದರು.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್ ಪ್ರತಿಭಟನೆ; ಸುದೀಪ್ ತೆಗೆದುಕೊಂಡ್ರು ಅಚ್ಚರಿಯ ನಿಲುವು

ಬಿಗ್​ ಬಾಸ್​ ಮನೆಯಲ್ಲಿ ಹಾರಿತು ಕಪ್ಪು ಬಾವುಟ; ಏಕಾಂಗಿಯಾದ ಚಕ್ರವರ್ತಿ ಚಂದ್ರಚೂಡ್​?

Published On - 4:19 pm, Sun, 18 July 21

Follow Us
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ
ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!
ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ
ಇಂದು ಗುರು ಪೂರ್ಣಿಮೆ ಶುಭ ದಿನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ
ಇಂದು ಗುರು ಪೂರ್ಣಿಮೆ ಶುಭ ದಿನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ