AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೂಲಿ’ ಚಿತ್ರದ ನಿರ್ಮಾಪಕರಿಗೆ 5 ಕೋಟಿ ರೂ. ಉಳಿಸಿದ ನಿರ್ದೇಶಕ ಲೋಕೇಶ್ ಕನಗರಾಜ್

ಲೋಕೇಶ್ ಕನಗರಾಜ್ ಅವರ ನಿರ್ದೇಶನದ ‘ಕೂಲಿ’ ಸಿನಿಮಾ ನಿಗದಿತ ಬಜೆಟ್ ಮತ್ತು ಸಮಯದೊಳಗೆ ಪೂರ್ಣಗೊಂಡಿದೆ. ನಾಗಾರ್ಜುನ ಅವರು ಬ್ಯಾಂಕಾಕ್‌ನಲ್ಲಿನ ಚಿತ್ರೀಕರಣದ ಬಗ್ಗೆ ಮಾತನಾಡಿ, ಒಂದು ದಿನ ವಿಳಂಬವಾದರೂ 5 ಕೋಟಿ ರೂಪಾಯಿ ಹೆಚ್ಚುವರಿ ವೆಚ್ಚವಾಗುತ್ತಿತ್ತೆಂದು ಹೇಳಿದರು. ಲೋಕೇಶ್ ಅವರ ಪ್ಲ್ಯಾನಿಂಗ್ ಮತ್ತು ಸಮಯಪ್ರಜ್ಞೆಯನ್ನು ಇತರ ನಿರ್ದೇಶಕರು ಅನುಸರಿಸಬೇಕೆಂದು ಅವರು ಸೂಚಿಸಿದರು.

‘ಕೂಲಿ’ ಚಿತ್ರದ ನಿರ್ಮಾಪಕರಿಗೆ 5 ಕೋಟಿ ರೂ. ಉಳಿಸಿದ ನಿರ್ದೇಶಕ ಲೋಕೇಶ್ ಕನಗರಾಜ್
ರಜನಿಕಾಂತ್-ಲೋಕೇಶ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Aug 05, 2025 | 9:07 AM

Share

ಸಿನಿಮಾ ಆರಂಭಿಸುವಾಗ ಒಂದು ಬಜೆಟ್ ಎಂಬುದು ಫಿಕ್ಸ್ ಆಗಿರುತ್ತದೆ. ಆದರೆ, ಆ ಬಜೆಟ್​ನಲ್ಲಿ ಸಿನಿಮಾ ಮಾಡಿ ಮುಗಿಸೋದು ಎಂದರೆ ಅದು ದೊಡ್ಡ ಸವಾಲೇ ಆಗಿರುತ್ತದೆ. ಅಲ್ಲದೆ, ದಿನಗಳು ಕೂಡ ವಿಸ್ತರಣೆ ಆದ ಉದಾಹರಣೆ ಇದೆ. ಆದರೆ, ನಿರ್ದೇಶಕ ಲೋಕೇಶ್ ಕನಗರಾಜ್ (Lokesh Kanagaraj) ಅವರು ಇದಕ್ಕೆ ಭಿನ್ನ. ಅನೇಕ ಸ್ಟಾರ್ ನಿರ್ದೇಶಕರು ವಿದೇಶಕ್ಕೆ ಶೂಟ್​ಗೆ ತೆರಳಿದರೆ ಹೆಚ್ಚಿನ ದಿನ ತೆಗೆದುಕೊಳ್ಳುತ್ತಾರೆ. ಆದರೆ, ಲೋಕೇಶ್ ಕನಗರಾಜ್ ಹಾಗಲ್ಲ. ‘ಕೂಲಿ’ ಸಿನಿಮಾವನ್ನು ಅವರು ನಿರ್ದೇಶನ ಮಾಡಿದ್ದು, ಅಕ್ಕಿನೇನಿ ನಾಗಾರ್ಜುನ ಈ ವಿಚಾರ ರಿವೀಲ್ ಮಾಡಿದರು.

ಹೈದರಾಬಾದ್​​ನಲ್ಲಿ ‘ಕೂಲಿ’ ಸಿನಿಮಾದ ಪ್ರೀ-ರಿಲೀಸ್ ಈವೆಂಟ್ ನಡೆಯಿತು. ಈ ವೇಳೆ ‘ಕೂಲಿ’ ಸಿನಿಮಾದಲ್ಲಿ ನಟಿಸಿದ ನಾಗಾರ್ಜುನ ಅವರು ಈ ಸಿನಿಮಾ ಬಗ್ಗೆ ಮಾತನಾಡಿದರು. ‘ಕೂಲಿ’ ಸಿನಿಮಾದ ಫೈನಲ್ ಶೆಡ್ಯೂಲ್ ಬ್ಯಾಂಕಾಕ್​ನಲ್ಲಿ ಇತ್ತಂತೆ. ಈ ಚಿತ್ರಕ್ಕೆ ಎಷ್ಟು ದಿನ ಪ್ಲ್ಯಾನ್ ಮಾಡಲಾಗಿತ್ತೋ ಅಷ್ಟೇ ದಿನಕ್ಕೆ ಶೂಟ್ ಪೂರ್ಣಗೊಳಿಸಿದರಂತೆ ಲೋಕೇಶ್. ಒಂದೊಮ್ಮೆ ಒಂದು ದಿನ ವಿಸ್ತರಣೆ ಆಗಿದ್ದರೂ ನಿರ್ಮಾಪಕರಿಗೆ 5 ಕೋಟಿ ರೂಪಾಯಿಯಷ್ಟು ಹೊರೆ ಆಗುತ್ತಿತ್ತು ಎಂದು ನಾಗಾರ್ಜುನ ವಿವರಿಸಿದರು.

ಲೋಕೇಶ್ ಕನಗರಾಜ್ ಅವರು ಎಲ್ಲವನ್ನೂ ಸರಿಯಾಗಿ ಪ್ಲ್ಯಾನ್ ಮಾಡುತ್ತಾರೆ. ಯಾವ ರೀತಿಯಲ್ಲಿ ಸಿನಿಮಾ ಮೂಡಿ ಬರಬೇಕು ಎಂಬುದನ್ನು ಮೊದಲೇ ಯೋಚಿಸಿರುತ್ತಾರೆ. ಈ ರೀತಿಯ ಸ್ಮಾರ್ಟ್ ಪ್ಲ್ಯಾನ್​ನ ಎಲ್ಲರೂ ಮಾಡಬೇಕಿದೆ ಎಂದು ನಾಗಾರ್ಜುನ ಅವರು ಅಭಿಪ್ರಾಯ ಪಟ್ಟರು.

ಇದನ್ನೂ ಓದಿ
Image
‘ನೀವು ಗ್ಯಾಂಗ್ ಮಾಡಿ ಬ್ರದರ್’; ‘ಶೆಟ್ಟಿ ಮಾಫಿಯಾ’ ಎಂದವರಿಗೆ ರಾಜ್ ಉತ್ತರ
Image
ತಗ್ಗೋ ಮಾತೇ ಇಲ್ಲ; 50 ಕೋಟಿ ರೂ. ಕ್ಲಬ್ ಸೇರಲಿದೆ ‘ಸು ಫ್ರಮ್ ಸೋ’
Image
ಕೆಟ್ಟದಾಗಿ ಕಮೆಂಟ್ ಮಾಡಿದವರ ವಿರುದ್ಧ ರಮ್ಯಾ ರೀತಿಯೇ ಕೇಸ್ ಹಾಕಿದ ನಟಿ
Image
ನಟಿ ಕಾಜೋಲ್ ಬಳಿ ಆಸ್ತಿ ಇಷ್ಟೊಂದಾ? ಅಜಯ್ ದಂಪತಿ ಪೈಕಿ ಯಾರು ಶ್ರೀಮಂತರು?

ಇದನ್ನೂ ಓದಿ:   ನಿವೃತ್ತಿ ಪಡೆಯುವ ಬಗ್ಗೆ ಶಾಕಿಂಗ್​ ಹೇಳಿಕೆ ನೀಡಿದ ‘ಕೈದಿ’, ‘ವಿಕ್ರಮ್​’, ‘ಲಿಯೋ’ ಚಿತ್ರಗಳ ನಿರ್ದೇಶಕ ಲೋಕೇಶ್​ ಕನಗರಾಜ್​

ತೆಲುಗಿನಲ್ಲಿ ಪುರಿ ಜಗನ್ನಾಥ್, ಅನಿಲ್ ರವಿಪುಡಿ ಮೊದಲಾದವರು ಇದೇ ರೀತಿಯ ರೆಪ್ಯುಟೇಷನ್ ಇಟ್ಟುಕೊಂಡಿದ್ದಾರೆ ಎನ್ನಬಹುದು. ಈಗ ಈ ಸಾಲಿಗೆ ತಮಿಳು ನಿರ್ದೇಶಕ ಲೋಕೇಶ್ ಕನರಾಜ್ ಹೆಸರು ಕೂಡ ಸೇರ್ಪಡೆ ಆಗಿದೆ. ‘ಕೂಲಿ’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದಲ್ಲಿ ರಜನಿಕಾಂತ್ ಜೊತೆ ಉಪೇಂದ್ರ, ಆಮಿರ್ ಖಾನ್, ಅಕ್ಕಿನೇನಿ ನಾಗಾರ್ಜುನ ಮೊದಲಾದವರು ನಟಿಸಿದ್ದಾರೆ. ಆಗಸ್ಟ್ 14ರಂದು ಚಿತ್ರವು ತೆರೆಗೆ ಬರಲಿದೆ. ಈ ಸಿನಿಮಾ ಹಿಂದಿಯ ಹೃತಿಕ್ ರೋಷನ್ ಹಾಗೂ ಜೂನಿಯರ್ ಎನ್​ಟಿಆರ್ ನಟನೆಯ  ‘ವಾರ್ 2’ ಹಾಗೂ ಕನ್ನಡದ ರಾಜ್ ಬಿ ಶೆಟ್ಟಿ, ಉಪೇಂದ್ರ, ಶಿವರಾಜ್​ಕುಮಾರ್ ಅಭಿನಯದ ‘45’ ಚಿತ್ರದ ಜೊತೆ ಸ್ಪರ್ಧೆಗೆ ಇಳಿದಿದೆ. ಸಿನಿಮಾ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಚಿನ್ನದ ಸರ ಕಸಿದು ಪರಾರಿಯಾಗಲು ಯತ್ನಿಸಿದ ಕಳ್ಳ; ಮುಂದೇನಾಯಿತು ನೋಡಿ
ಚಿನ್ನದ ಸರ ಕಸಿದು ಪರಾರಿಯಾಗಲು ಯತ್ನಿಸಿದ ಕಳ್ಳ; ಮುಂದೇನಾಯಿತು ನೋಡಿ
LPG ಕೊರತೆ: 3 ಸ್ಟಾರ್ ಹೋಟೆಲ್​​ನಲ್ಲಿ ಅಡುಗೆ ಮಾಡಲು ಸೌದೆ ತಂದ ಸಿಬ್ಬಂದಿ
LPG ಕೊರತೆ: 3 ಸ್ಟಾರ್ ಹೋಟೆಲ್​​ನಲ್ಲಿ ಅಡುಗೆ ಮಾಡಲು ಸೌದೆ ತಂದ ಸಿಬ್ಬಂದಿ
ಬಲೆ ಭಾರವಾಗ್ತಿದೆ ಮೀನಿರಬಹುದು ಎಂದು ಎಳೆದವರಿಗೆ ಸಿಕ್ಕಿದ್ದು ಹೆಬ್ಬಾವು
ಬಲೆ ಭಾರವಾಗ್ತಿದೆ ಮೀನಿರಬಹುದು ಎಂದು ಎಳೆದವರಿಗೆ ಸಿಕ್ಕಿದ್ದು ಹೆಬ್ಬಾವು
ಆಟಿಕೆಯ ರೀತಿ ಹಾವಿನ ಜತೆ ಆಟವಾಡಿದ ಪೋರ
ಆಟಿಕೆಯ ರೀತಿ ಹಾವಿನ ಜತೆ ಆಟವಾಡಿದ ಪೋರ
ವಿಲ್ಲಾ ಗ್ಯಾಂಗ್ ರೇಪ್ ಕೇಸ್: ಪೊಲೀಸ್ ತನಿಖೆಯಲ್ಲಿ ಸ್ಫೋಟಕ ಮಾಹಿತಿ ರಿವೀಲ್​
ವಿಲ್ಲಾ ಗ್ಯಾಂಗ್ ರೇಪ್ ಕೇಸ್: ಪೊಲೀಸ್ ತನಿಖೆಯಲ್ಲಿ ಸ್ಫೋಟಕ ಮಾಹಿತಿ ರಿವೀಲ್​
ಎಲ್​ಪಿಜಿ ಪೂರೈಕೆ ವ್ಯತ್ಯಯ: ಮೈಸೂರಲ್ಲೂ ಹೋಟೆಲ್ ಬಂದ್ ಆತಂಕ
ಎಲ್​ಪಿಜಿ ಪೂರೈಕೆ ವ್ಯತ್ಯಯ: ಮೈಸೂರಲ್ಲೂ ಹೋಟೆಲ್ ಬಂದ್ ಆತಂಕ
ಮಿಡಲ್ ಕ್ಲಾಸ್ ಹುಡುಗ UPSC ಪರೀಕ್ಷೆ ಪಾಸ್ ಮಾಡಿದ್ಹೇಗೆ?
ಮಿಡಲ್ ಕ್ಲಾಸ್ ಹುಡುಗ UPSC ಪರೀಕ್ಷೆ ಪಾಸ್ ಮಾಡಿದ್ಹೇಗೆ?
ರೇಣುಕಾಸ್ವಾಮಿ ಅಲ್ಲ, ಶಿವಸ್ವಾಮಿ ಕೊಲೆ ಕೇಸ್; ‘ಬಾಸ್’ ಸಿನಿಮಾ ಕಥೆ ರಿವೀಲ್
ರೇಣುಕಾಸ್ವಾಮಿ ಅಲ್ಲ, ಶಿವಸ್ವಾಮಿ ಕೊಲೆ ಕೇಸ್; ‘ಬಾಸ್’ ಸಿನಿಮಾ ಕಥೆ ರಿವೀಲ್
ಬೆಂಗಳೂರಿನಲ್ಲಿ ಬಹುತೇಕ ಹೋಟೆಲ್​ಗಳು​​ ಬಂದ್​​​ ಸಾಧ್ಯತೆ
ಬೆಂಗಳೂರಿನಲ್ಲಿ ಬಹುತೇಕ ಹೋಟೆಲ್​ಗಳು​​ ಬಂದ್​​​ ಸಾಧ್ಯತೆ
ಗೇಟ್ ತೆಗೆಯಲು ಬಾರದಂತೆ ವಾಹನ ಪಾರ್ಕ್​ ಮಾಡ್ತಿದ್ದಾರಾ ಈ ಟ್ರಿಕ್ ನೋಡಿ
ಗೇಟ್ ತೆಗೆಯಲು ಬಾರದಂತೆ ವಾಹನ ಪಾರ್ಕ್​ ಮಾಡ್ತಿದ್ದಾರಾ ಈ ಟ್ರಿಕ್ ನೋಡಿ