AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Revathy Sampath: ಲೈಂಗಿಕ ಕಿರುಕುಳ ನೀಡಿದ 14 ಜನರ ಹೆಸರು ಬಹಿರಂಗ ಮಾಡಿ ಸಂಚಲನ ಸೃಷ್ಟಿಸಿದ ನಟಿ ರೇವತಿ

ನಟಿ ರೇವತಿ ಸಂಪತ್​ ಅವರಿಗೆ ಈಗ 27 ವರ್ಷ ವಯಸ್ಸು. 2019ರಲ್ಲಿ ಅವರು ಸಿನಿಮಾರಂಗಕ್ಕೆ ಕಾಲಿಟ್ಟರು. ಚಿತ್ರರಂಗಕ್ಕೆ ಎಂಟ್ರಿ ನೀಡಿ 2 ವರ್ಷ ಕಳೆಯುವುದರೊಳಗೆ ಕಾಮಕಾಂಡವನ್ನು ಬಯಲಿಗೆ ಎಳೆದಿದ್ದಾರೆ.

Revathy Sampath: ಲೈಂಗಿಕ ಕಿರುಕುಳ ನೀಡಿದ 14 ಜನರ ಹೆಸರು ಬಹಿರಂಗ ಮಾಡಿ ಸಂಚಲನ ಸೃಷ್ಟಿಸಿದ ನಟಿ ರೇವತಿ
ರೇವತಿ ಸಂಪತ್​
Follow us
TV9 Web
| Updated By: Digi Tech Desk

Updated on:Jun 17, 2021 | 9:18 AM

ಭಾರತದಲ್ಲಿ ಮೀಟೂ ಅಭಿಯಾನದ ಕಿಡಿ ಆಗಾಗ ಹೊತ್ತಿಕೊಳ್ಳುತ್ತಲೇ ಇರುತ್ತದೆ. ಎಲ್ಲ ಕ್ಷೇತ್ರದಲ್ಲೂ ಮಹಿಳೆಯರು ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ಹೇಳಿಕೊಳ್ಳುತ್ತಲೇ ಬಂದಿದ್ದಾರೆ. ಅದರಲ್ಲೂ ಪ್ರಮುಖವಾಗಿ ಚಿತ್ರರಂಗದಲ್ಲಿನ ಕಾಮುಕರ ಬಗ್ಗೆ ಅನೇಕ ನಟಿಯರು ಬಾಯಿ ಬಿಟ್ಟಿದ್ದುಂಟು. ಆದರೆ ನೇರವಾಗಿ ಹೆಸರು ಬಹಿರಂಗಪಡಿಸಿದವರು ಕಡಿಮೆ. ಈಗ ಮಲಯಾಳಂ ನಟಿ ರೇವತಿ ಸಂಪತ್​ ಅವರು ಮೀಟೂ ಅಭಿಯಾನದಲ್ಲಿ ದೊಡ್ಡ ಕಿಚ್ಚು ಹಚ್ಚಿದ್ದಾರೆ. ತಮಗೆ ಕಿರುಕುಳ ನೀಡಿದ 14 ಜನರ ಹೆಸರನ್ನು ಸೋಷಿಯಲ್​ ಮೀಡಿಯಾ ಮೂಲಕ ಜಗಜ್ಜಾಹೀರುಗೊಳಿಸಿದ್ದಾರೆ.

ಜನಪ್ರಿಯ ನಟ ಸಿದ್ಧಿಖಿ ಅವರನ್ನೂ ಒಳಗೊಂಡಂತೆ ತಮಗೆ ಅನೇಕರಿಂದ ಲೈಂಗಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಮತ್ತು ಮೌಕಿಕವಾಗಿ ಕಿರುಕುಳ ಆಗಿದೆ ಎಂದು ರೇವತಿ ಸಂಪತ್​ ಆರೋಪಿಸಿದ್ದಾರೆ. ಕೇವಲ ಕಿರುಕುಳ ಆಗಿದೆ ಅಂತ ಹೇಳಿ ಅವರು ಸುಮ್ಮನಾಗಿಲ್ಲ. ಕಿರುಕುಳ ನೀಡಿದ ಎಲ್ಲ ವ್ಯಕ್ತಿಗಳ ಹೆಸರನ್ನು ಅವರು ಬಯಲಿಗೆ ಎಳೆದಿದ್ದಾರೆ. ರೇವತಿ ನೀಡಿರುವ ಪಟ್ಟಿ ಹೀಗಿದೆ:

  1. ರಾಜೇಶ್​ (ನಿರ್ದೇಶಕ)
  2. ಸಿದ್ಧಿಖಿ (ನಟ)
  3. ಶಿಜು (ನಟ)
  4. ಆಶಿಖಿ ಮಾಹಿ (ಫೋಟೋಗ್ರಾಫರ್​)
  5. ಅಭಿಲ್​ ದೇವ್​ (ಕೇರಳ ಫ್ಯಾಷನ್​ ಲೀಗ್​ ಸ್ಥಾಪಕ)
  6. ಅಜಯ್​ ಪ್ರಭಾಕರ್​ (ನಿರ್ದೇಶಕ)
  7. ಎಂ.ಎಸ್​. ಪದುಷ್
  8. ಸೌರಭ್​ ಕೃಷ್ಣನ್​ (ಸೈಬರ್​ ಕಿರುಕುಳ ನೀಡಿದವ)
  9. ನಂದು ಅಶೋಕನ್​ (ಡಿವೈಎಫ್​ಐ ಯುನಿಟ್​ ಕಮಿಟಿ ಸದಸ್ಯ)
  10. ಮ್ಯಾಕ್ಸ್​ವೆಲ್​ ಜೋಷ್​ (ಕಿರುಚಿತ್ರ ನಿರ್ದೇಶಕ)
  11. ಶನೂಬ್​ ಕರುವತ್​ (ಜಾಹೀರಾತು ನಿರ್ದೇಶಕ)
  12. ರಗೆಂಧ್​ ಪೈ (ಕಾಸ್ಟಿಂಗ್​ ಡೈರೆಕ್ಟರ್​)
  13. ಸರುನ್​​ ಲಿಯೋ (ಬ್ಯಾಂಕ್​ ಏಜೆಂಟ್​)
  14. ಬಿನು (ಪೊಲೀಸ್​ ಅಧಿಕಾರಿ)

ನಟಿ ರೇವತಿ ಸಂಪತ್​ ಅವರಿಗೆ ಈಗ 27 ವರ್ಷ ವಯಸ್ಸು. ಪಟ್ನಾಗರ್​ ಸಿನಿಮಾ ಮೂಲಕ ಅವರು 2019ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಸಿನಿಮಾರಂಗಕ್ಕೆ ಎಂಟ್ರಿ ನೀಡಿ 2 ವರ್ಷ ಕಳೆಯುವುದರೊಳಗೆ ಕಾಮಕಾಂಡವನ್ನು ಬಯಲಿಗೆ ಎಳೆದಿದ್ದಾರೆ. ಸೈಕಾಲಜಿಯಲ್ಲಿ ಅವರು ಪದವಿ ಶಿಕ್ಷಣ ಪಡೆದುಕೊಂಡಿದ್ದಾರೆ. ತಮಗೆ ಕಿರುಕುಳ ನೀಡಿದವರ ಹೆಸರನ್ನು ಬಯಲು ಮಾಡುವಲ್ಲಿ ತಮಗೆ ಯಾವುದೇ ಭಯ ಇಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:

ಸುಶಾಂತ್​ ಪ್ರೇಯಸಿಯನ್ನು 2 ಬಾರಿ ಮಂಚಕ್ಕೆ ಕರೆದಿದ್ದ ಚಿತ್ರರಂಗದ ಕಾಮುಕರು! ಅಂಕಿತಾ ಬಾಯ್ಬಿಟ್ಟ ಕಹಿ ಸತ್ಯ

ನಟಿಯ ದೇಹದ ಖಾಸಗಿ ಅಂಗಗಳ ಬಗ್ಗೆ ಹೀಗೆಲ್ಲ ಮಾತಾಡ್ತಾರಾ ನಿರ್ದೇಶಕರು? ರಿಚಾ ಹೇಳಿದ ಕಹಿ ಸತ್ಯಗಳು

Published On - 8:26 am, Thu, 17 June 21

ಒಂದು ವಾರದಲ್ಲಿ ಗೃಹ ಲಕ್ಷ್ಮಿಯರ ಖಾತೆಗೆ ಹಣ ಜಮೆ: ಲಕ್ಷ್ಮೀ ಹೆಬ್ಬಾಳ್ಕರ್​
ಒಂದು ವಾರದಲ್ಲಿ ಗೃಹ ಲಕ್ಷ್ಮಿಯರ ಖಾತೆಗೆ ಹಣ ಜಮೆ: ಲಕ್ಷ್ಮೀ ಹೆಬ್ಬಾಳ್ಕರ್​
ಕಮಲ್ ಹಾಸನ್ ಕ್ಷಮೆ ಕೇಳದಿದ್ರೆ ರಾಜ್ಯ ಬಂದ್​ಗೆ ಕರೆ ಕೊಡ್ತಿವಿ: ವಾಟಾಳ್​
ಕಮಲ್ ಹಾಸನ್ ಕ್ಷಮೆ ಕೇಳದಿದ್ರೆ ರಾಜ್ಯ ಬಂದ್​ಗೆ ಕರೆ ಕೊಡ್ತಿವಿ: ವಾಟಾಳ್​
ವೃದ್ಧೆಯನ್ನು ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ಸಾಗಿಸಿದ ಗ್ರಾಮಸ್ಥರು
ವೃದ್ಧೆಯನ್ನು ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ಸಾಗಿಸಿದ ಗ್ರಾಮಸ್ಥರು
ಸಿಎಂ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಕೇಂದ್ರ ಸಚಿವ ಸೋಮಣ್ಣ
ಸಿಎಂ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಕೇಂದ್ರ ಸಚಿವ ಸೋಮಣ್ಣ
ಚಾರ್ಮಾಡಿ ಹಸಿರು ರಾಶಿಯ ಮೇಲೆ ಮಂಜಿನ ಚಿತ್ತಾರ: ಪ್ರವಾಸಕ್ಕೆ ಸೂಕ್ತ ಸಮಯ
ಚಾರ್ಮಾಡಿ ಹಸಿರು ರಾಶಿಯ ಮೇಲೆ ಮಂಜಿನ ಚಿತ್ತಾರ: ಪ್ರವಾಸಕ್ಕೆ ಸೂಕ್ತ ಸಮಯ
ಕಮಲ್ ಹಾಸನ್ ವಿವಾದ, ಬಂದ್​ಗೆ ಕರೆ ಕೊಡುವುದಾಗಿ ವಾಟಾಳ್ ಎಚ್ಚರಿಕೆ
ಕಮಲ್ ಹಾಸನ್ ವಿವಾದ, ಬಂದ್​ಗೆ ಕರೆ ಕೊಡುವುದಾಗಿ ವಾಟಾಳ್ ಎಚ್ಚರಿಕೆ
ರೈಲ್ವೆ ಹಳಿ ಮೇಲೆ ರೀಲ್ಸ್ ಮಾಡುವಾಗ ಸ್ವಲ್ಪ ಎಚ್ಚರ ತಪ್ಪಿದ್ರೆ ಏನಾಗುತ್ತೆ??
ರೈಲ್ವೆ ಹಳಿ ಮೇಲೆ ರೀಲ್ಸ್ ಮಾಡುವಾಗ ಸ್ವಲ್ಪ ಎಚ್ಚರ ತಪ್ಪಿದ್ರೆ ಏನಾಗುತ್ತೆ??
ಮಾತೃಭಾಷೆ ಮರೆಯಲ್ಲ, ಬೇರೆ ಭಾಷೆ ಬಗ್ಗೆ ಕಮೆಂಟ್ ಮಾಡಲ್ಲ: ರಚಿತಾ ರಾಮ್
ಮಾತೃಭಾಷೆ ಮರೆಯಲ್ಲ, ಬೇರೆ ಭಾಷೆ ಬಗ್ಗೆ ಕಮೆಂಟ್ ಮಾಡಲ್ಲ: ರಚಿತಾ ರಾಮ್
ಮಂಗಳೂರು: ಗುಡ್ಡ ಕುಸಿತ ದುರಂತ ಬೆನ್ನಲ್ಲೇ ಮತ್ತೊಂದು ಗುಡ್ಡ ಕುಸಿಯುವ ಭೀತಿ!
ಮಂಗಳೂರು: ಗುಡ್ಡ ಕುಸಿತ ದುರಂತ ಬೆನ್ನಲ್ಲೇ ಮತ್ತೊಂದು ಗುಡ್ಡ ಕುಸಿಯುವ ಭೀತಿ!
ಗೃಹ ಸಚಿವ ಪರಮೇಶ್ವರ್ ಪರ ಸೋಮಣ್ಣ ಬ್ಯಾಟಿಂಗ್
ಗೃಹ ಸಚಿವ ಪರಮೇಶ್ವರ್ ಪರ ಸೋಮಣ್ಣ ಬ್ಯಾಟಿಂಗ್