AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hide and Seek Review: ಕಿಡ್ನಾಪಿಂಗ್​ ಲೋಕದ ರಹಸ್ಯ ತೆರೆದಿಟ್ಟ ‘ಹೈಡ್ ಆ್ಯಂಡ್​ ಸೀಕ್​’

‘ಹೈಡ್​ ಆ್ಯಂಡ್​ ಸೀಕ್​’ ಸಿನಿಮಾದಲ್ಲಿ ಕಥಾನಾಯಕನೇ ಕಿಡ್ನಾಪರ್​. ಆದರೆ ಅವನಿಗಿಂತಲೂ ದೊಡ್ಡ ಮಾಸ್ಟರ್​ ಮೈಂಡ್​ ಒಬ್ಬ ಇದ್ದಾನೆ. ಆತ ಯಾರು ಎಂಬುದನ್ನು ಪತ್ತೆ ಹಚ್ಚುವುದೇ ಪೊಲೀಸರಿಗೆ ಇರುವ ಟಾರ್ಗೆಟ್​. ಅನೂಪ್​ ರೇವಣ್ಣ, ಧನ್ಯಾ ರಾಮ್​ಕುಮಾರ್​ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಹೈಡ್​ ಆ್ಯಂಡ್​ ಸೀಕ್​’ ಸಿನಿಮಾದ ವಿಮರ್ಶೆ ಇಲ್ಲಿದೆ.

Hide and Seek Review: ಕಿಡ್ನಾಪಿಂಗ್​ ಲೋಕದ ರಹಸ್ಯ ತೆರೆದಿಟ್ಟ ‘ಹೈಡ್ ಆ್ಯಂಡ್​ ಸೀಕ್​’
ಅನೂಪ್​ ರೇವಣ್ಣ
ಮದನ್​ ಕುಮಾರ್​
|

Updated on: Mar 15, 2024 | 7:32 PM

Share

ಸಿನಿಮಾ: ಹೈಡ್​ ಆ್ಯಂಡ್​ ಸೀಕ್​. ನಿರ್ಮಾಣ: ವಸಂತ್​ ರಾವ್​ ಎಂ. ಕುಲಕರ್ಣಿ, ಪುನೀತ್​ ನಾಗರಾಜು. ನಿರ್ದೇಶನ: ಪುನೀತ್​ ನಾಗರಾಜು. ಪಾತ್ರವರ್ಗ: ಅನೂಪ್​ ರೇವಣ್ಣ, ಧನ್ಯಾ ರಾಮ್​ಕುಮಾರ್​, ರಾಜೇಶ್​ ನಟರಂಗ, ಕೃಷ್ಣ ಹೆಬ್ಬಾಳೆ, ಅರವಿಂದ್​ ರಾವ್​, ಮೈತ್ರಿ ಜಗ್ಗಿ, ಬಲರಾಜ್​ ವಾಡಿ ಮುಂತಾದವರು. ಸ್ಟಾರ್​: 3/5

ನಟ ಅನೂಪ್​ ರೇವಣ್ಣ ಅವರು ಒಂದು ದೀರ್ಘ ಗ್ಯಾಪ್​ನ ಬಳಿಕ ದೊಡ್ಡ ಪರದೆಯಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ. ಅವರು ನಟಿಸಿರುವ ‘ಹೈಡ್​ ಆ್ಯಂಡ್​ ಸೀಕ್​’ ಸಿನಿಮಾ ಮಾರ್ಚ್​ 15ರಂದು ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಒಂದು ಸಸ್ಪೆನ್ಸ್​ ಥ್ರಿಲ್ಲರ್​ ಕಥೆಯಿದೆ. ಪುನೀತ್​ ನಾಗರಾಜು ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಡಾ. ರಾಜ್​ಕುಮಾರ್​ ಮೊಮ್ಮಗಳು ಧನ್ಯಾ ರಾಮ್​ಕುಮಾರ್​ ಅವರು ‘ಹೈಡ್​ ಆ್ಯಂಡ್​ ಸೀಕ್​’ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಅಪಹರಣದ ಕಥೆಯನ್ನು ಕುತೂಹಲಭರಿತವಾಗಿ ವಿವರಿಸುವ ಈ ಸಿನಿಮಾದ ವಿಮರ್ಶೆ ಓದಿ..

ಇದು ಅಪಹರಣದ ಕುರಿತು ಇರುವ ಸಿನಿಮಾ ಎಂಬುದನ್ನು ಟ್ರೇಲರ್​ನಲ್ಲೇ ತಿಳಿಸಲಾಗಿತ್ತು. ಸಿನಿಮಾದ ಆರಂಭದಲ್ಲೇ ಕಥಾನಾಯಕಿಯ ಕಿಡ್ನಾಪ್​ ಆಗುತ್ತದೆ. ಹಾಗಂತ ಆ ಕಿಡ್ನಾಪ್​ ಮಾಡಿರುವುದು ವಿಲನ್​ ಅಲ್ಲ. ಬದಲಿಗೆ, ಕಥಾನಾಯಕನೇ ಅಪಹರಣದ ದಂಧೆಯಲ್ಲಿ ಭಾಗಿ ಆಗಿದ್ದಾನೆ. ಶ್ರೀಮಂತರ ಮಕ್ಕಳನ್ನು ಆತ ಅಪಹರಿಸುತ್ತಾನೆ. ಆದರೆ ಈ ಕಿಡ್ನಾಪಿಂಗ್ ವ್ಯವಹಾರದಲ್ಲಿ ಆತ ಕೂಡ ಒಬ್ಬ ಕೆಲಸಗಾರ ಮಾತ್ರ. ನಿಜವಾದ ಲೀಡರ್​ ಬೇರೆಲ್ಲೋ ಇದ್ದಾನೆ. ಅವನು ಯಾರು ಎಂಬುದನ್ನು ಈತನಕ ನೋಡಿದವರು ಯಾರೂ ಇಲ್ಲ. ಅಂತಹ ವ್ಯಕ್ತಿಯನ್ನು ಪೊಲೀಸರು ಪತ್ತೆ ಹಚ್ಚುತ್ತಾರೋ ಇಲ್ಲವೋ ಎಂಬುದು ತಿಳಿಯಬೇಕಾದರೆ ಪೂರ್ತಿ ಸಿನಿಮಾ ನೋಡಬೇಕು.

ಇದನ್ನೂ ಓದಿ: Photo Movie Review: ಲಾಕ್​ಡೌನ್​ನಲ್ಲಿ ಬೆಂದ ಬಡವನ ನೋವಿನ ಸತ್ಯದರ್ಶನ

‘ಹೈಡ್​ ಆ್ಯಂಡ್​ ಸೀಕ್​’ ಸಿನಿಮಾದಲ್ಲಿ ಶ್ರೀಮಂತರ ಮನೆ ಮಗಳಾದ ಹಾಸಿನಿ ಎಂಬ ಪಾತ್ರದಲ್ಲಿ ಧನ್ಯಾ ರಾಮ್​ಕುಮಾರ್​ ನಟಿಸಿದ್ದಾರೆ. ಅಪಹರಣಕ್ಕೆ ಒಳಗಾದ ಬಳಿಕ ಹಾಸಿನಿಗೆ ಬೇರೆ ಬೇರೆ ಸತ್ಯಗಳು ತಿಳಿಯುತ್ತವೆ. ನಿಧಾನವಾಗಿ ಕಿಡ್ನಾಪರ್​ ಮೇಲೆಯೇ ಆಕೆಗೆ ಪ್ರೀತಿ ಮೂಡುತ್ತದೆ! ಇಂತಹ ಟ್ವಿಸ್ಟ್​ಗಳ ಮೂಲಕ ಪ್ರೇಕ್ಷಕರನ್ನು ಹಿಡಿದಿಡುವ ಪ್ರಯತ್ನ ಮಾಡಲಾಗಿದೆ. ಕಿಡ್ನಾಪ್​ ಮಾಡಿಸಿದ್ದು ಯಾರು ಎಂಬುದು ಮಧ್ಯಂತರದ ವೇಳೆಗೆ ಗೊತ್ತಾಗಿಬಿಡುತ್ತದೆ. ಹಾಗಂತ ಕಥೆ ಅಲ್ಲಿಗೆ ಮುಗಿಯುವುದಿಲ್ಲ. ಪಿಕ್ಚರ್ ಅಭಿ ಬಾಕಿ ಹೈ ಎಂಬಂತೆ ಮಧ್ಯಂತರದ ಬಳಿಕ ಇನ್ನೂ ಹೊಸ ವಿವರಗಳು ತೆರೆದುಕೊಳ್ಳುತ್ತವೆ.

ಒಂದು ವ್ಯವಸ್ಥಿತ ಜಾಲದ ಮೂಲಕ ಕಿಡ್ನಾಪ್​ಗಳು ನಡೆಯುತ್ತವೆ ಎಂಬುದನ್ನು ‘ಹೈಡ್​ ಆ್ಯಂಡ್​ ಸೀಕ್​’ ಸಿನಿಮಾದಲ್ಲಿ ತೋರಿಸಲಾಗಿದೆ. ಪ್ರೇಕ್ಷಕರು ನಿರೀಕ್ಷಿಸಿದಷ್ಟು ಸುಲಭವಾಗಿಲ್ಲ ಆ ಜಾಲ. ಅದನ್ನು ಹಂತ ಹಂತವಾಗಿ ತೆರೆದಿರುವ ಮೂಲಕ ಸಿನಿಮಾದಲ್ಲಿನ ಕೌತುಕವನ್ನು ಕಾಯ್ದುಕೊಳ್ಳಲಾಗಿದೆ. ಕಡೆಗೂ ಆ ಕಿಡ್ನಾಪಿಂಗ್​ ಜಾಲದ ಮಾಸ್ಟರ್​ ಮೈಂಡ್​ ಯಾರು ಎಂಬುದು ಗೊತ್ತಾದಾಗ ಪ್ರೇಕ್ಷಕರಿಗೆ ಅಚ್ಚರಿ ಆಗುತ್ತದೆ. ಆದರೆ ಇಡೀ ಸಿನಿಮಾದ ನಿರೂಪಣೆ ನಿಧಾನಗತಿಯಲ್ಲಿ ಇರುವುದರಿಂದ ಪ್ರೇಕ್ಷಕರಿಗೆ ತಾಳ್ಮೆ ಅಗತ್ಯ. ಇನ್ನು, ಕೆಲವು ಸಂಭಾಷಣೆಗಳು ರಿಪೀಟ್​ ಎನಿಸುವ ಕಾರಣದಿಂದಲೂ ಅವಧಿ ಹೆಚ್ಚಿದೆ ಎನಿಸುತ್ತದೆ. ಕಥೆಯ ವೇಗಕ್ಕೆ ಚುರುಕು ಮುಟ್ಟಿಸಿದ್ದರೆ ಹಾಗೂ ಕೆಲವು ಅನಗತ್ಯ ವಿಷಯಗಳಿಗೆ ಕತ್ತರಿ ಹಾಕಿದ್ದರೆ ‘ಹೈಡ್​ ಆ್ಯಂಡ್​ ಸೀಕ್​’ ಸಿನಿಮಾ ಇನ್ನೂ ಆಪ್ತವಾಗುತ್ತಿತ್ತು.

ಹೈಡ್​ ಆ್ಯಂಡ್ ಸೀಕ್​ ಎಂದರೆ ಕಣ್ಣಾಮುಚ್ಚಾಲೆ. ಯಾರು, ಎಲ್ಲಿ ಅಡಗಿಕೊಂಡಿದ್ದಾರೆ ಎಂಬುದನ್ನು ಹುಡುಕಬೇಕು. ಅದೇ ರೀತಿ, ಬೇರೆಯವರ ಕಣ್ಣಿಗೆ ಕಾಣದಂತೆ ಅಡಗಿಕೊಳ್ಳಬೇಕು. ಈ ಸಿನಿಮಾದ ಕಥೆಯಲ್ಲಿ ಬರುವ ಪಾತ್ರಗಳು ಕೂಡ ಇದೇ ನಿಯಮವನ್ನು ಫಾಲೋ ಮಾಡುತ್ತವೆ. ಅಪಹರಣದ ಜಾಲದಲ್ಲಿ ಅಡಗಿಕೊಂಡವರು ಒಬ್ಬೊಬ್ಬರಾಗಿಯೇ ಹೊರಗೆ ಬರುತ್ತಾರೆ. ಹಾಗೆ ಹೊರಗೆ ಬಂದವರು ಬೇರೆಯವರನ್ನು ಹುಡುಕುತ್ತಾರೆ. ಸಿನಿಮಾ ಮುಗಿಯುವ ಹಂತಕ್ಕೆ ಬಂದಾಗ ಈ ಕಣ್ಣಾಮುಚ್ಚಾಲೆ ಆಟ ಜೋರಾಗುತ್ತದೆ. ಆದರೂ ಕೂಡ ತೀವ್ರತೆಯ ಕೊರತೆ ಕಾಣುತ್ತದೆ.

ಇದನ್ನೂ ಓದಿ: Kerebete Review: ಕುತೂಹಲಭರಿತ ಕೆರೆಬೇಟೆಯಲ್ಲಿ ಊಹಿಸಲಾಗದ ಟ್ವಿಸ್ಟ್​

ಅನೂಪ್​ ರೇವಣ್ಣ ಅವರ ಪಾತ್ರಕ್ಕೆ ಹೆಚ್ಚಿನ ಹಾವಭಾವಗಳನ್ನು ಅಭಿವ್ಯಕ್ತಿಸುವ ಅವಕಾಶ ಸಿಕ್ಕಿಲ್ಲ. ಆ ಪಾತ್ರಕ್ಕೆ ಇರುವ ಸಂಭಾಷಣೆಗಳು ಕೂಡ ಕಡಿಮೆ. ಹಾಗಾಗಿ ಇರುವ ಅವಕಾಶದಲ್ಲೇ ಅವರು ಪ್ರತಿಭೆ ತೋರಿಸಲು ಪ್ರಯತ್ನಿಸಿದ್ದಾರೆ. ಈ ಅಪಹರಣದ ಕಥೆಯಲ್ಲಿ ಗಂಭೀರತೆ ಕೊಂಚ ತಿಳಿಯಾದಂತೆ ಭಾಸವಾಗುತ್ತದೆ. ಕಾಮಿಡಿ ದೃಶ್ಯಗಳು ಈ ಚಿತ್ರಕ್ಕೆ ಹೆಚ್ಚೇನೂ ಸಹಕಾರಿ ಆಗಿಲ್ಲ. ಇಂತಹ ಕೆಲವು ಅಂಶಗಳನ್ನು ಬದಿಗಿಟ್ಟು ಕೇವಲ ಸಸ್ಪೆನ್ಸ್​ ಮತ್ತು ಟ್ವಿಸ್ಟ್​ಗಳನ್ನು ಎಂಜಾಯ್​ ಮಾಡಿದರೆ ‘ಹೈಡ್​ ಆ್ಯಂಡ್​ ಸೀಕ್​’ ಸಿನಿಮಾ ಇಷ್ಟ ಆಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ