AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bhuj: ನಾನು ಬದುಕಿರುವುದು ಪ್ರಾಣ ತ್ಯಾಗಕ್ಕಾಗಿ; ನನ್ನ ಹೆಸರೇ ಸಿಪಾಯಿ- ಎನ್ನುತ್ತಿದ್ದಾರೆ ಅಜಯ್ ದೇವ್​ಗನ್

ಬಹು ನಿರೀಕ್ಷಿತ ಭುಜ್: ದಿ ಪ್ರೈಡ್ ಆಫ್ ಇಂಡಿಯಾ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಭಾರತೀಯ ವಾಯು ಸೇನೆಯ ಮುಖ್ಯಸ್ಥನಾಗಿ ಕಾಣಿಸಿಕೊಳ್ಳುತ್ತಿರುವ ಅಜಯ್ ದೇವಗನ್ ತಮ್ಮ ಅಭಿನಯ ಹಾಗೂ ಸಂಭಾಷಣೆಯಿಂದ ಎಲ್ಲರ ಗಮನಸೆಳೆದಿದ್ದಾರೆ.

Bhuj: ನಾನು ಬದುಕಿರುವುದು ಪ್ರಾಣ ತ್ಯಾಗಕ್ಕಾಗಿ; ನನ್ನ ಹೆಸರೇ ಸಿಪಾಯಿ- ಎನ್ನುತ್ತಿದ್ದಾರೆ ಅಜಯ್ ದೇವ್​ಗನ್
ಭುಜ್ ಚಿತ್ರದ ಪೋಸ್ಟರ್
TV9 Web
| Updated By: shivaprasad.hs|

Updated on: Jul 11, 2021 | 6:01 PM

Share

ಭಾರತ ಮತ್ತು ಪಾಕಿಸ್ತಾನದ ನಡುವಿನ 1971ರ ನಡುವಿನ ಯುದ್ಧದ ಕತೆಯನ್ನೊಳಗೊಂಡ ಭುಜ್ ಚಲನಚಿತ್ರದ ಟೀಸರ್ ಬಿಡುಗಡೆಯಾಗಿದೆ. ಇದರಲ್ಲಿ ಅಜಯ್ ದೇವಗನ್, ಸಂಜಯ್ ದತ್, ಸೋನಾಕ್ಷಿ ಸಿನ್ಹಾ, ನೋರಾ ಫತೇಹಿ, ಶರದ ಕೇಲ್ಕರ್, ಪ್ರಣೀತಾ ಸುಭಾಷ್ ಮೊದಲಾದ ದೊಡ್ಡ ತಾರಾಗಣವೇ ಇದೆ. ಭರ್ಜರಿ ಆಕ್ಷನ್ ದೃಶ್ಯಗಳ ಸಣ್ಣ ಸಣ್ಣ ತುಣುಕುಗಳು ಹಾಗೂ ಭಾವಪೂರ್ಣ ಸನ್ನಿವೇಶಗಳ ತುಣುಕುಗಳನ್ನು ಸೇರಿಸಿ ಟೀಸರ್ ಅನ್ನು ಕತ್ತರಿಸಲಾಗಿದೆ. ಚಿತ್ರವು ನೋಡುಗರನ್ನು ಕುರ್ಚಿಯ ಮೇಲೆ ಹಿಡಿದು ಕೂರಿಸುವುದು ಖಂಡಿತ ಎಂದು ಸಿನಿಮಾ ಪಂಡಿತರು ಲೆಕ್ಕಾಚಾರ ಹಾಕುತ್ತಿದ್ದಾರೆ.

ಹಾಟ್​ಸ್ಟಾರ್​ ವಿಐಪಿಯಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದ ಟೀಸರ್ ಹಾಟ್​ಸ್ಟಾರ್ ಯೂಟ್ಯೂಬ್ ಚಾನಲ್​ನಲ್ಲಿ ಬಿಡುಗಡೆಯಾಗಿದೆ. ಈ ಚಿತ್ರವು ಭಾರತೀಯ ಸ್ಕ್ವಾರ್ಡನ್ ವಾಯು ಸೇನೆಯ ಮುಖ್ಯಸ್ಥರಾಗಿದ್ದ ವಿಜಯ್ ಕಾರ್ಣಿಕ್ ಅವರ ಜೀವನಗಾಥೆಯನ್ನು ಪ್ರಸ್ತುತಪಡಿಸಲಿದೆ. 1971ರಲ್ಲಿ ವಿಜಯ್ ಕಾರ್ಣಿಕ್ ಅವರು ಭುಜ್ ಏರ್​ಪೋರ್ಟ್​ನ ಉಸ್ತುವಾರಿ ವಹಿಸಿಕೊಂಡಿದ್ದರು. ದೇಶದ ರಕ್ಷಣೆಗಾಗಿ 300 ಜನ ಮಹಿಳೆಯರನ್ನು ಬಳಸಿಕೊಂಡು ಆ ವಿಮಾನ ನಿಲ್ದಾಣವನ್ನು ಹೇಗೆ ಮರು ನಿರ್ಮಿಸಿದರು ಎಂಬುದನ್ನು ಕತೆಯು ಕಟ್ಟಿಕೊಡಲಿದೆ.

1971ರ ಕಾಲ ಘಟ್ಟದ ನಿರ್ಮಾಣ, ಸಾಹಸ ದೃಶ್ಯಗಳು, ಭುಜ್​ನ ಜನರು ಮೊದಲಾದವುಗಳನ್ನು ಒಳಗೊಂಡಿರುವ ಈ ಟೀಸರ್​ನಲ್ಲಿ ಕೊನೆಗೆ ಅಜಯ್ ದೇವಗನ್ ಎದ್ದು ಬರುತ್ತಾರೆ. ಸೈನಿಕನ ಹಿರಿಮೆ ಸಾರುವ ಸಾಲುಗಳನ್ನು ಪ್ರಚುರಪಡಿಸುವ ಅವರು, ಸೈನಿಕ ಬದುಕಿರುವುದೇ ಪ್ರಾಣ ತ್ಯಾಗಕ್ಕಾಗಿ. ನನ್ನ ಹೆಸರು ಸಿಪಾಯಿ ಎನ್ನುವ ಸಂಭಾಷಣೆಯನ್ನು ಹೇಳುತ್ತಾರೆ. ದೇಶದ ಮುಂದೆ ವ್ಯಕ್ತಿ ವಿಶೇಷಣಗಳು ಗೌಣ, ನಾನು ಸೈನಿಕ ಎಂಬ ಭಾವವೊಂದೇ ಗಟ್ಟಿಯಾಗಿ ನಿಲ್ಲುವುದು ಎಂದು ಹೇಳುವ ಅವರ ಸಂಭಾಷಣೆಯಲ್ಲೇ ಚಿತ್ರ ಯಾವುದನ್ನು ಪ್ರಮುಖವಾಗಿ ಕೇಂದ್ರೀಕರಿಸಲಿದೆ ಎಂಬುದನ್ನೂ ವೀಕ್ಷಕರು ಊಹಿಸಬಹುದು.

ಚಿತ್ರವನ್ನು ಅಭಿಷೇಕ್ ದುಧೈಯಾ ನಿರ್ದೇಶಿಸುತ್ತಿದ್ದು, ಭೂಷಣ್ ಕುಮಾರ್, ಗಿನ್ನಿ ಖನುಜಾ ಸೇರಿದಂತೆ ಏಳು ಜನ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಅಸೀಮ್ ಬಜಾಜ್ ಅವರ ಛಾಯಾಗ್ರಹಣ ಹಾಗೂ ಅಮರ್ ಮೋಹಿಲೆ ಅವರ ಹಿನ್ನೆಲೆ ಸಂಗೀತವಿದೆ.

ಇದನ್ನೂ ಓದಿ: Kannada Movies: ಯೂಟ್ಯೂಬ್​ನಲ್ಲಿ ಉಚಿತವಾಗಿ ವೀಕ್ಷಿಸಬಹುದಾದ ಕನ್ನಡದ ಅತ್ಯುತ್ತಮ ಸಿನಿಮಾಗಳ ಪಟ್ಟಿ ಬೇಕೆ?

ಇದನ್ನೂ ಓದಿ: Hombale Films and Rakshith Shetty: ಅಭಿಮಾನಿಗಳ ಕಾಯುವಿಕೆಗೆ ಕೊನೆ ಹಾಡೇ ಬಿಟ್ರು ರಕ್ಷಿತ್​ ಶೆಟ್ಟಿ, ಡೈರೆಕ್ಟರ್ ಕ್ಯಾಪ್​ ಹಾಕ್ಕೊಳ್ಳೋ ಟೈಮ್ ಬಂದೇ ಬಿಡ್ತು!

(Much awaited Bhuj movie teaser released starring Ajay Devgan and Sonakshi Sinha)

ಭ್ರಷ್ಟಾಚಾರದ ಪಿತಾಮಹ ನಾನಾ ನೀನಾ ಅಂತ ಕೂಗಾಟ, ಸ್ಪೀಕರ್ ಪ್ರೇಕ್ಷಕ
ಭ್ರಷ್ಟಾಚಾರದ ಪಿತಾಮಹ ನಾನಾ ನೀನಾ ಅಂತ ಕೂಗಾಟ, ಸ್ಪೀಕರ್ ಪ್ರೇಕ್ಷಕ
ಮುಸ್ಲಿಂರನ್ನ ಓಲೈಸಿಕೊಳ್ಳಲು ಜಮೀರ್ ಬಳ್ಳಾರಿ ಉಸ್ತುವಾರಿ ಸಚಿವ: ಶ್ರೀರಾಮುಲು
ಮುಸ್ಲಿಂರನ್ನ ಓಲೈಸಿಕೊಳ್ಳಲು ಜಮೀರ್ ಬಳ್ಳಾರಿ ಉಸ್ತುವಾರಿ ಸಚಿವ: ಶ್ರೀರಾಮುಲು
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಎಸ್ಐಟಿ ಆದಷ್ಟು ಬೇಗ ತನಿಖೆಯನ್ನು ಪೂರ್ತಿಗೊಳಿಸಬೇಕು: ವಿಜಯೇಂದ್ರ
ಎಸ್ಐಟಿ ಆದಷ್ಟು ಬೇಗ ತನಿಖೆಯನ್ನು ಪೂರ್ತಿಗೊಳಿಸಬೇಕು: ವಿಜಯೇಂದ್ರ
ಮುಂದಿನ ಭಾನುವಾರ ಧರ್ಮಸ್ಥಳಕ್ಕೆ ಬಿಜೆಪಿ ತಂಡ: ವಿಜಯೇಂದ್ರ ಹೇಳಿದ್ದೇನು ನೋಡಿ
ಮುಂದಿನ ಭಾನುವಾರ ಧರ್ಮಸ್ಥಳಕ್ಕೆ ಬಿಜೆಪಿ ತಂಡ: ವಿಜಯೇಂದ್ರ ಹೇಳಿದ್ದೇನು ನೋಡಿ
ವಾಲ್ಮೀಕಿ ಸಮುದಾಯದವರಿಂದ ತುಮಕೂರುನಲ್ಲಿ ಇಂದು ಬೃಹತ್ ರ‍್ಯಾಲಿ!
ವಾಲ್ಮೀಕಿ ಸಮುದಾಯದವರಿಂದ ತುಮಕೂರುನಲ್ಲಿ ಇಂದು ಬೃಹತ್ ರ‍್ಯಾಲಿ!