AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಲ್ಕಿ’ ಸಿನಿಮಾಕ್ಕೆ ಪ್ರಭಾಸ್ ಅನ್ನೇ ಆಯ್ಕೆ ಮಾಡಿದ್ದೇಕೆ: ನಿರ್ದೇಶಕ ಕೊಟ್ಟ ಕಾರಣವಿದು?

‘ಕಲ್ಕಿ 2898 ಎಡಿ’ ಸಿನಿಮಾ ಬಿಡುಗಡೆ ಆಗಿ ಭಾರಿ ದೊಡ್ಡ ಹಿಟ್ ಆಗುವತ್ತ ದಾಪುಗಾಲು ಹಾಕುತ್ತಿದೆ. ಇದರ ನಡುವೆ ನಿರ್ದೇಶಕ ನಾಗ್ ಅಶ್ವಿನ್ ಪ್ರಭಾಸ್ ಬಗ್ಗೆ ಮಾತನಾಡಿರುವ ವಿಡಿಯೋ ಒಂದು ವೈರಲ್ ಆಗಿದೆ. ವಿಡಿಯೋನಲ್ಲಿ ತಾವು ಈ ಸಿನಿಮಾಕ್ಕೆ ಪ್ರಭಾಸ್ ಅವರನ್ನೇ ಆಯ್ಕೆ ಮಾಡಿಕೊಂಡಿದ್ದೇಕೆ ಎಂದು ಹೇಳಿದ್ದಾರೆ.

‘ಕಲ್ಕಿ’ ಸಿನಿಮಾಕ್ಕೆ ಪ್ರಭಾಸ್ ಅನ್ನೇ ಆಯ್ಕೆ ಮಾಡಿದ್ದೇಕೆ: ನಿರ್ದೇಶಕ ಕೊಟ್ಟ ಕಾರಣವಿದು?
ಮಂಜುನಾಥ ಸಿ.
|

Updated on: Jun 28, 2024 | 6:28 PM

Share

ತೆಲುಗು ಚಿತ್ರರಂಗದಲ್ಲಿ ದೊಡ್ಡ ಸಂಖ್ಯೆಯ ಸ್ಟಾರ್ ನಟರಿದ್ದಾರೆ. ಪರಭಾಷೆಯ ಚಿತ್ರರಂಗಗಳಿಗೆ ಹೋಲಿಸಿದರೆ ತೆಲುಗು ಚಿತ್ರರಂಗ ಹೊಂದಿರುವ ಸ್ಟಾರ್ ನಟರ ಸಂಖ್ಯೆ ತುಸು ಹೆಚ್ಚು, ಅದಕ್ಕೆ ತಕ್ಕಂತೆ ಭಾರಿ ಬಜೆಟ್​ನ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿಯಮಿತವಾಗಿ ನೀಡುತ್ತಲೇ ಬಂದಿದೆ ತೆಲುಗು ಚಿತ್ರರಂಗ. ಇದೀಗ ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಬಿಡುಗಡೆ ಆಗಿದ್ದು ಭಾರಿ ದೊಡ್ಡ ಹಿಟ್ ಎನಿಸಿಕೊಂಡಿದೆ. ಸತತ ಸೋಲು ಕಂಡಿದ್ದ ಪ್ರಭಾಸ್​ಗೆ ಭಾರಿ ಗೆಲುವನ್ನು ‘ಕಲ್ಕಿ’ ನೀಡಲಿದೆ ಎನ್ನಲಾಗುತ್ತಿದೆ. ಕಲ್ಕಿ ಸಿನಿಮಾದ ಪಾತ್ರಕ್ಕೆ ಪ್ರಭಾಸ್ ಅದ್ಭುತವಾಗಿ ಸೂಟ್ ಸಹ ಆಗಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಅಷ್ಟೋಂದು ಸೂಪರ್ ಸ್ಟಾರ್​ಗಳಿರುವಾಗ ‘ಕಲ್ಕಿ’ ಸಿನಿಮಾಕ್ಕೆ ಪ್ರಭಾಸ್ ಅವರನ್ನೇ ಆರಿಸಿಕೊಂಡಿದ್ದೇಕೆ? ನಿರ್ದೇಶಕ ನಾಗ್ ಅಶ್ವಿನ್ ಉತ್ತರ ನೀಡಿದ್ದಾರೆ.

ಈ ಹಿಂದಿನ ಸಂದರ್ಶನವೊಂದರಲ್ಲಿ ನಾಗ್ ಅಶ್ವಿನ್​ಗೆ ಈ ಪ್ರಶ್ನೆ ಎದುರಾಗಿತ್ತು, ‘ಇಷ್ಟು ದೊಡ್ಡ ಬಜೆಟ್ ಭಿನ್ನ ಕತೆಯುಳ್ಳ ಸಿನಿಮಾ, ಈ ಸಿನಿಮಾಕ್ಕೆ ಪ್ರಭಾಸ್ ಅವರನ್ನೇ ಆಯ್ಕೆ ಮಾಡಿಕೊಂಡಿದ್ದೇಕೆ? ಎಂದು ಸಂದರ್ಶಕಿ ಪ್ರಶ್ನೆ ಕೇಳಿದ್ದರು. ‘ಕತೆಗೆ ಸೂಕ್ತವಾಗುತ್ತಾರೆ ಎಂಬುದು ಮಾತ್ರವೇ ಕಾರಣವಲ್ಲ, ಈ ಕತೆಯನ್ನು ಅವರು ಬಿಟ್ಟು ಇನ್ಯಾರೂ ಸಹ ಮಾಡಲು ಸಾಧ್ಯವಿಲ್ಲ. ಇದು ಬಹಳ ದೊಡ್ಡ ಕತೆ, ಭಾರವಾದ ಕತೆ, ಈ ಕತೆಯನ್ನು ಹೆಗಲ ಮೇಲೆ ಹೊರುವ ಛಾತಿ ಈಗಿರುವ ನಟರಲ್ಲಿ ಪ್ರಭಾಸ್ ಅವರನ್ನು ಬಿಟ್ಟು ಇನ್ಯಾರಿಗೂ ಇಲ್ಲ’ ಎಂದಿದ್ದರು ನಾಗ್ ಅಶ್ವಿನ್.

ಇದನ್ನೂ ಓದಿ:‘ಕಲ್ಕಿ 2898 ಎಡಿ’ ಮುರಿದ ದಾಖಲೆಗಳೆಷ್ಟು? ನಿರ್ಮಾಪಕರು ಕೊಟ್ಟರು ಉತ್ತರ

ನಾಗ್ ಅಶ್ವಿನ್ ಅವರು ಆ ಸಂದರ್ಶನದಲ್ಲಿ ಆಡಿದ ಮಾತುಗಳ ವಿಡಿಯೋ ಇಂದು ವೈರಲ್ ಆಗುತ್ತಿವೆ. ಜೂ ಎನ್​ಟಿಆರ್, ಅಲ್ಲು ಅರ್ಜುನ್, ರಾಮ್ ಚರಣ್, ಮಹೇಶ್ ಬಾಬು, ಚಿರಂಜೀವಿ, ಪವನ್ ಕಲ್ಯಾಣ್, ವಿಜಯ್ ದೇವರಕೊಂಡ ಇನ್ನೂ ಹಲವಾರು ಸ್ಟಾರ್ ನಟರನ್ನು ಹೊಂದಿರುವ ಚಿತ್ರರಂಗದಲ್ಲಿ ದೊಡ್ಡ ಕತೆಯನ್ನು ಹೊರುವ ಛಾತಿ, ಕತೆಗೆ ಪಾತ್ರಕ್ಕೆ ನ್ಯಾಯ ಒದಗಿಸುವ ಛಾತಿ ಪ್ರಭಾಸ್​ಗೆ ಮಾತ್ರವೇ ಇದೆ ಎಂದು ನಾಗ್ ಅಶ್ವಿನ್ ಸ್ಪಷ್ಟವಾಗಿ ಹೇಳಿದ್ದರು. ನಾಗ್ ಅಶ್ವಿನ್​ರ ವಿಡಿಯೋವನ್ನು ಪ್ರಭಾಸ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಖುಷಿ ಪಡುತ್ತಿದ್ದಾರೆ.

ನಾಗ್ ಅಶ್ವಿನ್ ಹೇಳಿರುವುದು ನಿಜ ಸಹ. ಬಾಹುಬಲಿ ಬಳಿಕ ಪ್ರಭಾಸ್​ಗೆ ಎಲ್ಲವೂ ಲಾರ್ಜರ್ ದ್ಯಾನ್ ಲೈಫ್ ಪಾತ್ರಗಳೇ ದೊರೆತಿವೆ. ಅಂಥಹಾ ಪಾತ್ರಗಳನ್ನು ಅವರನ್ನು ಬಿಟ್ಟು ಇನ್ಯಾರೂ ಮಾಡಲು ಸಾಧ್ಯವಿಲ್ಲ ಎಂಬ ನಂಬಿಕೆಯಿಂದಲೇ ಪಾತ್ರಗಳು ಪ್ರಭಾಸ್ ಅನ್ನು ಅರಸಿ ಬಂದಿವೆ. ‘ರಾಧೆ-ಶ್ಯಾಮ್’, ‘ಆದಿಪುರುಷ್’ ಸಿನಿಮಾಗಳು ಸಹ ಸಾಮಾನ್ಯ ಕತೆಗಳಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಕುಮಾರ್ ಪುತ್ರಿಯ ಕಣ್ಣೀರಿನ ವಿಡಿಯೋ ವೈರಲ್
ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಕುಮಾರ್ ಪುತ್ರಿಯ ಕಣ್ಣೀರಿನ ವಿಡಿಯೋ ವೈರಲ್
ಚಿಕ್ಕಬಳ್ಳಾಪುರ: 2 ವರ್ಷದಲ್ಲಿ 30 ಮಂದಿಯನ್ನು ಬಲಿ ಪಡೆದ ಸಾವಿನ ಹೆದ್ದಾರಿ
ಚಿಕ್ಕಬಳ್ಳಾಪುರ: 2 ವರ್ಷದಲ್ಲಿ 30 ಮಂದಿಯನ್ನು ಬಲಿ ಪಡೆದ ಸಾವಿನ ಹೆದ್ದಾರಿ
ಸಾಹುಕಾರ್ ನಿವಾಸಗಳಲ್ಲಿ 22 ಗಂಟೆಯಿಂದ ನಡೆಯುತ್ತಿದೆ ಇಡಿ ಪರಿಶೀಲನೆ
ಸಾಹುಕಾರ್ ನಿವಾಸಗಳಲ್ಲಿ 22 ಗಂಟೆಯಿಂದ ನಡೆಯುತ್ತಿದೆ ಇಡಿ ಪರಿಶೀಲನೆ
ಬೆಳಗ್ಗೆ 7ರಿಂದಲೇ ಬಿಜೆಪಿ ಕಚೇರಿಯಲ್ಲಿ ಬಿ.ಸಿ ನಾಗೇಶ್ ಅಂತಿಮ ದರ್ಶನ
ಬೆಳಗ್ಗೆ 7ರಿಂದಲೇ ಬಿಜೆಪಿ ಕಚೇರಿಯಲ್ಲಿ ಬಿ.ಸಿ ನಾಗೇಶ್ ಅಂತಿಮ ದರ್ಶನ
ಶೀತಲ ಸಪ್ತಮಿ, ತುಳಸೀದಾಸ ಜಯಂತಿ: ಈ ದಿನದ ದ್ವಾದಶ ರಾಶಿಗಳ ಭವಿಷ್ಯ ಇಲ್ಲಿದೆ
ಶೀತಲ ಸಪ್ತಮಿ, ತುಳಸೀದಾಸ ಜಯಂತಿ: ಈ ದಿನದ ದ್ವಾದಶ ರಾಶಿಗಳ ಭವಿಷ್ಯ ಇಲ್ಲಿದೆ
ಮೂವರ ಶೂಟೌಟ್​​ ಕೇಸ್​​: ಅಂದು ನಡೆದದ್ದೇನು? ಇಂಚಿಂಚೂ ಮಾಹಿತಿ ನೀಡಿದ RFO
ಮೂವರ ಶೂಟೌಟ್​​ ಕೇಸ್​​: ಅಂದು ನಡೆದದ್ದೇನು? ಇಂಚಿಂಚೂ ಮಾಹಿತಿ ನೀಡಿದ RFO
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ