ಸೆಲ್ಫಿ ಕೇಳಲು ಬಂದಾಗ ಈ ಸೆಲೆಬ್ರಿಟಿಗಳು ನಡೆದುಕೊಂಡಿದ್ದನ್ನು ಯಾರೂ ಕ್ಷಮಿಸಲ್ಲ..

ಸಲ್ಮಾನ್ ಖಾನ್ ಅವರು ಯಾವಾಗಲೂ ಕೂಲ್ ಆಗಿರುವುದಿಲ್ಲ. ಅವರ ಬಳಿ ಸೆಲ್ಫಿ ತೆಗೆದುಕೊಳ್ಳಲು ಬಂದಾಗ ಅವರ ಬಾಡಿಗಾರ್ಡ್​ ಸಲ್ಲು ಅಭಿಮಾನಿಗಳನ್ನು ಅನೇಕ ಬಾರಿ ತಳ್ಳಿದ್ದಿದೆ. ಸೋಶಿಯಲ್ ಮೀಡಿಯಾದಲ್ಲಿ ಅನೇಕ ಬಾರಿ ವಿಡಿಯೋ ವೈರಲ್ ಆಗಿತ್ತು.  

ಸೆಲ್ಫಿ ಕೇಳಲು ಬಂದಾಗ ಈ ಸೆಲೆಬ್ರಿಟಿಗಳು ನಡೆದುಕೊಂಡಿದ್ದನ್ನು ಯಾರೂ ಕ್ಷಮಿಸಲ್ಲ..
ಸೆಲ್ಫಿ ಕೇಳಲು ಬಂದಾಗ ಈ ಸೆಲೆಬ್ರಿಟಿಗಳು ನಡೆದುಕೊಂಡಿದ್ದನ್ನು ಯಾರೂ ಕ್ಷಮಿಸಲ್ಲ..
Follow us
| Edited By: Rajesh Duggumane

Updated on:Nov 19, 2023 | 11:05 AM

ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳೋಕೆ ಮುಗಿಬೀಳುತ್ತಾರೆ. ಆದರೆ, ಈ ಸಂದರ್ಭದಲ್ಲಿ ಸೆಲೆಬ್ರಿಟಿಗಳ ಮೂಡ್ ಹೇಗಿರುತ್ತದೆ ಎಂದು ಹೇಳೋಕೆ ಸಾಧ್ಯವಿಲ್ಲ. ಒಳ್ಳೆಯ ಮೂಡ್​ನಲ್ಲಿದ್ದರೆ ಫೋಟೋ ಕೊಡುತ್ತಾರೆ. ಇಲ್ಲದಿದ್ದರೆ ಅಭಿಮಾನಿಗಳನ್ನು ತಳ್ಳಿ ಮುಂದೆ ಹೋಗುತ್ತಾರೆ. ಈ ರೀತಿ ತಳ್ಳಿ ಹೋದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ (Social Media) ಹಲವು ಬಾರಿ ವೈರಲ್ ಆಗಿದ್ದಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ನಾನಾ ಪಾಟೇಕರ್

ನಾನಾ ಪಾಟಕೇರ್ ಅವರು ಅಭಿಮಾನಿಗೆ ಹೊಡೆದ ವಿಡಿಯೋ ಇತ್ತೀಚೆಗೆ ವೈರಲ್ ಆಗಿದೆ. ನಾನಾ ಪಾಟೇಕರ್ ಅವರ ಬಳಿ ಅಭಿಮಾನಿ ಸೆಲ್ಫಿ ಕೇಳೋಕೆ ಬಂದಿದ್ದಾನೆ. ಆಗ ನಾನಾ ಪಾಟೇಕರ್ ಅವರು ಹೊಡೆದಿದ್ದಾರೆ. ಈ ವಿಡಿಯೋ ಸಂಚಲನ ಸೃಷ್ಟಿ ಮಾಡಿತ್ತು. ಪರಿಸ್ಥಿತಿ ಗಂಭೀರತೆ ಅರ್ಥವಾದ ಬಳಿಕ ನಾನಾ ಪಾಟೇಕರ್ ಅವರು ಕ್ಷಮೆ ಕೇಳಿದ್ದರು. ಅಲ್ಲದೆ, ಇದು ಗೊಂದಲದಿಂದ ಆದ ಘಟನೆ ಎಂದು ಅವರು ಸ್ಪಷ್ಟನೆ ನೀಡಿದ್ದರು.

ಸಲ್ಮಾನ್ ಖಾನ್

ಸಲ್ಮಾನ್ ಖಾನ್ ಅವರು ಯಾವಾಗಲೂ ಕೂಲ್ ಆಗಿರುವುದಿಲ್ಲ. ಅವರ ಬಳಿ ಸೆಲ್ಫಿ ತೆಗೆದುಕೊಳ್ಳಲು ಬಂದಾಗ ಅವರ ಬಾಡಿಗಾರ್ಡ್​ ಸಲ್ಲು ಅಭಿಮಾನಿಗಳನ್ನು ಅನೇಕ ಬಾರಿ ತಳ್ಳಿದ್ದಿದೆ. ಸೋಶಿಯಲ್ ಮೀಡಿಯಾದಲ್ಲಿ ಅನೇಕ ಬಾರಿ ವಿಡಿಯೋ ವೈರಲ್ ಆಗಿತ್ತು.

ಶಾರುಖ್ ಖಾನ್

ಶಾರುಖ್ ಖಾನ್ ಅವರು ಅಭಿಮಾನಿಗಳ ಜೊತೆ ಯಾವಾಗಲೂ ಪ್ರೀತಿಯಿಂದ ನಡೆದುಕೊಳ್ಳುತ್ತಾರೆ. ಅವರು ಇತ್ತೀಚೆಗೆ ಅಭಿಮಾನಿಗಳ ವಿರುದ್ಧ ಗರಂ ಆಗಿದ್ದರು. ಏರ್​ಪೋರ್ಟ್​ನಲ್ಲಿ ಸೆಲ್ಫಿ ಕೇಳಿದ ಅಭಿಮಾನಿಯ ಮೇಲೆ ಅವರು ಕೋಪ ಮಾಡಿಕೊಂಡಿದ್ದರು. ಶಾರುಖ್ ನಡೆಯನ್ನು ಅನೇಕರು ಖಂಡಿಸಿದ್ದರು.

ಹೃತಿಕ್ ರೋಷನ್

ಹೃತಿಕ್ ರೋಷನ್ ಅವರು ಅವರು ಅಭಿಮಾನಿಗಳ ಜೊತೆ ಹೆಚ್ಚು ಕ್ಲೋಸ್ ಆಗೋಕೆ ಬಯಸಲ್ಲ. ಅವರ ಜೊತೆ ಸೆಲ್ಫಿ ಕೇಳೋಕೆ ಬಂದಾಗ ಅವರು ಸಿಟ್ಟಾಗಿದ್ದಿದೆ. ಈ ವಿಡಿಯೋಗಳು ಹರಿದಾಡಿದ್ದವು. ಆದಾಗ್ಯೂ ಅವರ ಮೇಲಿದ್ದ ಅಭಿಮಾನ ಕಡಿಮೆ ಆಗಿಲ್ಲ.

ನಯನತಾರಾ

ನಯನತಾರಾ ಅವರ ವಿಡಿಯೋ ಒಂದು ವೈರಲ್ ಆಗಿತ್ತು. ಸೆಲ್ಫಿ ಕೇಳಿಕೊಂಡು ಬಂದ ಅಭಿಮಾನಿಯ ಮೊಬೈಲ್​ನ ಎಸೆಯಲು ಅವರು ಮುಂದಾಗಿದ್ದರು. ಅನೇಕರು ಅವರನ್ನು ಟೀಕೆ ಮಾಡಿದ್ದರು.

ರಣವೀರ್ ಸಿಂಗ್

ರಣವೀರ್ ಸಿಂಗ್ ಅವರು ಕೆಲವು ಸಮಯ ಕೂಲ್ ಆಗಿರುತ್ತಾರೆ. ಆದರೆ, ಕೆಲವೊಮ್ಮೆ ಅವರು ಅಭಿಮಾನಿಗಳ ಮೇಲೆ ಸಿಟ್ಟಾಗಿದ್ದಿದೆ. ಇತ್ತೀಚೆಗೆ ಅವರು ಅಭಿಮಾನಿಗಳಿಗೆ ಸೆಲ್ಫಿ ಕೊಟ್ಟಿದ್ದರು. ಆ ಬಳಿಕ ಅನೇಕರು ಫೋಟೋ ಕೇಳಿಕೊಂಡು ಬಂದರು. ಇದರಿಂದ ಅವರು ಇರಿಟೇಷನ್​ಗೆ ಒಳಗಾಗಿ ಸಿಟ್ಟಾಗಿದ್ದರು.

ವರುಣ್ ಧವನ್

ವರುಣ್ ಧವನ್ ಅವರು ಕೆಲವೊಮ್ಮೆ ಅಭಿಮಾನಿಗಳ ಜೊತೆ ಕಠಿಣವಾಗಿ ನಡೆದುಕೊಂಡಿದ್ದಿದೆ. ಇತ್ತೀಚೆಗೆ ವರುಣ್ ಧವನ್ ಅವರ ಬಳಿ ಅಭಿಮಾನಿಗಳು ಸೆಲ್ಫಿ ಕೇಳಿದ್ದರು. ಆಗ ಅವರು ಸಖತ್ ರೂಡ್ ಆಗಿ ನಡೆದುಕೊಂಡಿದ್ದರು.

ಇದನ್ನೂ ಓದಿ: ‘ಇನ್ಮುಂದೆ ಹೀಗೆ ಮಾಡಲ್ಲ, ಕ್ಷಮಿಸಿ’: ಅಭಿಮಾನಿಗೆ ಹೊಡೆದು ಕ್ಷಮೆ ಕೇಳಿದ ನಾನಾ ಪಾಟೇಕರ್​

ಜಾನ್ ಅಬ್ರಾಹಂ

ಸೆಲ್ಫಿ ತೆಗೆದುಕೊಳ್ಳೋಕೆ ಬಂದ ಅಭಿಮಾನಿಗಳ ಮೊಬೈಲ್​ ಅನ್ನೇ ಜಾನ್ ಅಬ್ರಾಹಂ ಅವರು ಕಸಿದುಕೊಂಡಿದ್ದರು. ಈ ವಿಡಿಯೋ ವೈರಲ್ ಆಗಿ ಸದ್ದು ಮಾಡಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:50 am, Sun, 19 November 23

ತಾಜಾ ಸುದ್ದಿ
Telangana Assembly Polls 2023: ಮತಗಟ್ಟೆಗೆ ಆಗಮಿಸಿದ ಜ್ಯೂ. ಎನ್ ಟಿ ಆರ್
Telangana Assembly Polls 2023: ಮತಗಟ್ಟೆಗೆ ಆಗಮಿಸಿದ ಜ್ಯೂ. ಎನ್ ಟಿ ಆರ್
ಸಂಸಾರದಲ್ಲಿನ ಬಿರುಕಿಗೆ ಕಾರಣ ತಿಳಿಸಿದ ವರ್ತೂರು ಸಂತೋಷ್
ಸಂಸಾರದಲ್ಲಿನ ಬಿರುಕಿಗೆ ಕಾರಣ ತಿಳಿಸಿದ ವರ್ತೂರು ಸಂತೋಷ್
ನಾಲ್ಕನೇ ಟಿ20 ಪಂದ್ಯಕ್ಕಾಗಿ ರಾಯ್​ಪುರ ತಲುಪಿದ ಟೀಮ್ ಇಂಡಿಯಾ ಆಟಗಾರರು
ನಾಲ್ಕನೇ ಟಿ20 ಪಂದ್ಯಕ್ಕಾಗಿ ರಾಯ್​ಪುರ ತಲುಪಿದ ಟೀಮ್ ಇಂಡಿಯಾ ಆಟಗಾರರು
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜಗಳ ನೆನಪಿಸಿಕೊಂಡ ಗೆಳತಿ ಸಂಜನಾ ಗಲ್ರಾನಿ
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜಗಳ ನೆನಪಿಸಿಕೊಂಡ ಗೆಳತಿ ಸಂಜನಾ ಗಲ್ರಾನಿ
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜೋಕ್ ನೆನಪಿಸಿಕೊಂಡ ಯೋಗರಾಜ್ ಭಟ್
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜೋಕ್ ನೆನಪಿಸಿಕೊಂಡ ಯೋಗರಾಜ್ ಭಟ್
ನಿಮ್ಹಾನ್ಸ್ ಆಸ್ಪತ್ರೆಯ​​ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮಗು ಬಲಿ ಆರೋಪ
ನಿಮ್ಹಾನ್ಸ್ ಆಸ್ಪತ್ರೆಯ​​ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮಗು ಬಲಿ ಆರೋಪ
ತೆಲಂಗಾಣದಲ್ಲಿ ಕೆಸಿಅರ್ ನನ್ನ ಡೋಂಗಿ ಅಂತ  ಹೇಳುತ್ತಿದ್ದಾರೆ: ಸಿದ್ದರಾಮಯ್ಯ
ತೆಲಂಗಾಣದಲ್ಲಿ ಕೆಸಿಅರ್ ನನ್ನ ಡೋಂಗಿ ಅಂತ  ಹೇಳುತ್ತಿದ್ದಾರೆ: ಸಿದ್ದರಾಮಯ್ಯ
ಡಿಎ ಪ್ರಕರಣ; ನ್ಯಾಯಾಲಯದಲ್ಲಿ ಶಿವಕುಮಾರ್​ಗೆ ಜಯ ಸಿಗಲ್ಲ: ಬಿವೈ ವಿಜಯೇಂದ್ರ
ಡಿಎ ಪ್ರಕರಣ; ನ್ಯಾಯಾಲಯದಲ್ಲಿ ಶಿವಕುಮಾರ್​ಗೆ ಜಯ ಸಿಗಲ್ಲ: ಬಿವೈ ವಿಜಯೇಂದ್ರ
ಸಿಎಂಗೆ ಪ್ರಶ್ನೆ ಕೇಳುವ ಮುನ್ನ ಅಶೋಕ ಹೋಮ್​ವರ್ಕ್ ಮಾಡಿರಬೇಕು: ಲಕ್ಷ್ಮಣ್
ಸಿಎಂಗೆ ಪ್ರಶ್ನೆ ಕೇಳುವ ಮುನ್ನ ಅಶೋಕ ಹೋಮ್​ವರ್ಕ್ ಮಾಡಿರಬೇಕು: ಲಕ್ಷ್ಮಣ್
ಕೇಂದ್ರ ಸರ್ಕಾರದಿಂದ ಬರ ಪರಿಹಾರ ನಿಧಿ ಬಿಡುಗಡೆ ಆಗಿಲ್ಲ: ಸಿದ್ದರಾಮಯ್ಯ
ಕೇಂದ್ರ ಸರ್ಕಾರದಿಂದ ಬರ ಪರಿಹಾರ ನಿಧಿ ಬಿಡುಗಡೆ ಆಗಿಲ್ಲ: ಸಿದ್ದರಾಮಯ್ಯ