ಸುದೀಪ್​ ಎದುರೇ ಒಡೆದು ಹೋಯ್ತು ಸ್ನೇಹಿತ್ ಹೃದಯ; ಕಿಚ್ಚ​ ಈ ರೀತಿ ಮಾಡಬಾರದಿತ್ತು..

ಸ್ನೇಹಿತ್ ಬಿಗ್ ಬಾಸ್​ ಮನೆ ಒಳಗೆ ಬಂದಾಗ ಸಂಗೀತಾ ಜೊತೆ ಕ್ಲೋಸ್ ಆಗೋಕೆ ನೋಡಿದ್ದರು. ಆದರೆ ಈ ವೇಳೆ ಕಾರ್ತಿಕ್ ಎಂಟ್ರಿ ಆಯಿತು. ಆ ಬಳಿಕ ಈಶಾನಿ ಜೊತೆ ಫ್ರೆಂಡ್​ಶಿಪ್ ಬೆಳೆಸಿಕೊಳ್ಳಲು ಹೋದರು. ಆಗ ಮೈಕೆಲ್ ಅವರು ಬಂದರು. ಈಗ ನಮ್ರತಾ ಗೌಡ ಜೊತೆ ಕ್ಲೋಸ್ ಆಗಲು ಪ್ರಯತ್ನಿಸುತ್ತಿದ್ದಾರೆ.

ಸುದೀಪ್​ ಎದುರೇ ಒಡೆದು ಹೋಯ್ತು ಸ್ನೇಹಿತ್ ಹೃದಯ; ಕಿಚ್ಚ​ ಈ ರೀತಿ ಮಾಡಬಾರದಿತ್ತು..
ಸ್ನೇಹಿತ್-ಸುದೀಪ್
Follow us
|

Updated on: Nov 19, 2023 | 12:03 PM

ಬಿಗ್ ಬಾಸ್​ನಲ್ಲಿ ನಮ್ರತಾ ಗೌಡ (Namrata Gowda) ಜೊತೆ ಸ್ನೇಹಿತ್​ ಸದಾ ಫ್ಲರ್ಟ್ ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಇದು ಇಡೀ ಮನೆಗೆ ಗೊತ್ತಿದೆ. ‘ನನಗೆ ಈ ಬಗ್ಗೆ ಆಸಕ್ತಿ ಇಲ್ಲ’ ಎಂದು ನಮ್ರತಾ ಎಷ್ಟೋ ಬಾರಿ ಹೇಳಿಕೊಂಡಿದ್ದಿದೆ. ಆದರೆ, ಸ್ನೇಹಿತ್ ಮಾತ್ರ ಪ್ರಯತ್ನ ನಿಲ್ಲಿಸಲೇ ಇಲ್ಲ. ಈಗ ಸುದೀಪ್ ಆಡಿದ ಒಂದು ಮಾತಿನಿಂದ ಸ್ನೇಹಿತ್ ಹೃದಯವೇ ಒಡೆದು ಹೋಗಿದೆ. ಈ ಮಾತಿನಿಂದ ಮನೆ ಮಂದಿ ಸಖತ್ ನಕ್ಕಿದ್ದಾರೆ.

ಸ್ನೇಹಿತ್ ಗೌಡ ಅವರು ನಮ್ರತಾ ಜೊತೆ ಸಾಕಷ್ಟು ಫ್ಲರ್ಟ್ ಮಾಡಿದ್ದಾರೆ. ‘ನನ್ನ ಜಾಗದಲ್ಲಿ ಬೇರೆ ಹುಡುಗಿ ಇದ್ದಿದ್ದರೆ ಬಹುಶಃ ನಿಮ್ಮ ಮಾತಿಗೆ ಒಲಿಯುತ್ತಿದ್ದರೇನೋ’ ಎಂದು ನಮ್ರತಾ ಈ ಮೊದಲು ಹೇಳಿದ್ದರು. ಇದಕ್ಕೆ ಉತ್ತರಿಸಿದ್ದ ಸ್ನೇಹಿತ್, ‘ನಮ್ಮ ಪ್ರಯತ್ನ ನಾವು ಮಾಡುತ್ತಾ ಇರಬೇಕು. ಎಲ್ಲಾ ದೇವರ ಇಚ್ಛೆ ಅಂತೆ ಆಗುತ್ತದೆ’ ಎಂದು ಹೇಳಿದ್ದರು. ಈಗ ನಮ್ರತಾ ಹಾಗೂ ಸ್ನೇಹಿತ್ ಮಧ್ಯೆ ಅಣ್ಣ ತಂಗಿ ಸಂಬಂಧ ಕಲ್ಪಿಸಿದ್ದಾರೆ ಸುದೀಪ್.

ನಮ್ರತಾ ಅವರನ್ನು ಮಾತನಾಡಿಸುತ್ತಾ, ‘ನಿಮ್ಮ ಅಣ್ಣ ಹೇಗಿದ್ದಾರೆ, ಅವರನ್ನು ಇನ್ನಮುಂದೆ ನೀವು ಅಣ್ಣ ಎಂದೇ ಕರೆಯಬೇಕು’ ಎಂದರು ಸುದೀಪ್. ಇದಕ್ಕೆ ಉತ್ತರಿಸಿದ ನಮ್ರತಾ, ‘ಅವರಿಗೆ ಹಾಗೆ ಕರೆಯೋದು ಇಷ್ಟವಿಲ್ಲವಂತೆ’ ಎಂದರು. ‘ಇರಲಿಬಿಡಿ, ಇನ್ಮುಂದೆ ಹಾಗೆಯೇ ಕರೆಯಿರಿ. ಅಣ್ಣ, ಸ್ನೇಹಿತ್ ಅಣ್ಣ ಎಂದು ಜೋರಾಗಿ ಕರೆದರೆ ಸಾಕು ಅವರು ಪ್ರತ್ಯಕ್ಷರಾಗಿಬಿಡುತ್ತಾರೆ’ ಎಂದರು ಸುದೀಪ್. ಈ ವೇಳೆ ಕೆಲವರು, ‘ಬಹುಶಃ ಸ್ನೇಹಿತ್ ಹೃದಯ ಒಡೆದು ಹೋಯಿತು’ ಎಂದು ಮಾತನಾಡಿಕೊಂಡಿದ್ದಾರೆ.

ಇದನ್ನೂ ಓದಿ: ಸುದೀಪ್ ಬುದ್ಧಿವಾದಕ್ಕೂ ಇಲ್ಲ ಬೆಲೆ; ನಳಿಕೆ ತೆಗೆದ ಬಳಿಕ ಮೊದಲಿನಂತೇ ಆದ ನಮ್ರತಾ ಗೌಡ

ಸ್ನೇಹಿತ್ ಬಿಗ್ ಬಾಸ್​ ಮನೆ ಒಳಗೆ ಬಂದಾಗ ಸಂಗೀತಾ ಜೊತೆ ಕ್ಲೋಸ್ ಆಗೋಕೆ ನೋಡಿದ್ದರು. ಆದರೆ ಈ ವೇಳೆ ಕಾರ್ತಿಕ್ ಎಂಟ್ರಿ ಆಯಿತು. ಆ ಬಳಿಕ ಈಶಾನಿ ಜೊತೆ ಫ್ರೆಂಡ್​ಶಿಪ್ ಬೆಳೆಸಿಕೊಳ್ಳಲು ಹೋದರು. ಆಗ ಮೈಕೆಲ್ ಅವರು ಬಂದರು. ಈಗ ನಮ್ರತಾ ಗೌಡ ಜೊತೆ ಕ್ಲೋಸ್ ಆಗಲು ಪ್ರಯತ್ನಿಸುತ್ತಿದ್ದಾರೆ. ಸದಾ ಅವರ ಜೊತೆಯೇ ಸುತ್ತಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಬುಂಡೆಸ್ಲಿಗಾ 7ನೇ ದಿನದ ಪಂದ್ಯ; ಟಾಪ್ 5 ಗೋಲ್​ಗಳನ್ನು ಮಿಸ್ ಮಾಡಬೇಡಿ
ಬುಂಡೆಸ್ಲಿಗಾ 7ನೇ ದಿನದ ಪಂದ್ಯ; ಟಾಪ್ 5 ಗೋಲ್​ಗಳನ್ನು ಮಿಸ್ ಮಾಡಬೇಡಿ
ವಿರೋಧಪಕ್ಷಗಳ ನಾಯಕರಿಗೆ ನನ್ನನ್ನು ಕಂಡು ಹೊಟ್ಟೆಯುರಿ: ಸಿದ್ದರಾಮಯ್ಯ
ವಿರೋಧಪಕ್ಷಗಳ ನಾಯಕರಿಗೆ ನನ್ನನ್ನು ಕಂಡು ಹೊಟ್ಟೆಯುರಿ: ಸಿದ್ದರಾಮಯ್ಯ
ಪ್ರಧಾನಿ ಮೋದಿಯವರಿಗೋಸ್ಕರ ಎಲ್ಲವನ್ನು ಸಹಿಸಿಕೊಂಡಿದ್ದೇವೆ: ಕುಮಾರಸ್ವಾಮಿ
ಪ್ರಧಾನಿ ಮೋದಿಯವರಿಗೋಸ್ಕರ ಎಲ್ಲವನ್ನು ಸಹಿಸಿಕೊಂಡಿದ್ದೇವೆ: ಕುಮಾರಸ್ವಾಮಿ
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು