Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುದೀಪ್​ ಎದುರೇ ಒಡೆದು ಹೋಯ್ತು ಸ್ನೇಹಿತ್ ಹೃದಯ; ಕಿಚ್ಚ​ ಈ ರೀತಿ ಮಾಡಬಾರದಿತ್ತು..

ಸ್ನೇಹಿತ್ ಬಿಗ್ ಬಾಸ್​ ಮನೆ ಒಳಗೆ ಬಂದಾಗ ಸಂಗೀತಾ ಜೊತೆ ಕ್ಲೋಸ್ ಆಗೋಕೆ ನೋಡಿದ್ದರು. ಆದರೆ ಈ ವೇಳೆ ಕಾರ್ತಿಕ್ ಎಂಟ್ರಿ ಆಯಿತು. ಆ ಬಳಿಕ ಈಶಾನಿ ಜೊತೆ ಫ್ರೆಂಡ್​ಶಿಪ್ ಬೆಳೆಸಿಕೊಳ್ಳಲು ಹೋದರು. ಆಗ ಮೈಕೆಲ್ ಅವರು ಬಂದರು. ಈಗ ನಮ್ರತಾ ಗೌಡ ಜೊತೆ ಕ್ಲೋಸ್ ಆಗಲು ಪ್ರಯತ್ನಿಸುತ್ತಿದ್ದಾರೆ.

ಸುದೀಪ್​ ಎದುರೇ ಒಡೆದು ಹೋಯ್ತು ಸ್ನೇಹಿತ್ ಹೃದಯ; ಕಿಚ್ಚ​ ಈ ರೀತಿ ಮಾಡಬಾರದಿತ್ತು..
ಸ್ನೇಹಿತ್-ಸುದೀಪ್
Follow us
ರಾಜೇಶ್ ದುಗ್ಗುಮನೆ
|

Updated on: Nov 19, 2023 | 12:03 PM

ಬಿಗ್ ಬಾಸ್​ನಲ್ಲಿ ನಮ್ರತಾ ಗೌಡ (Namrata Gowda) ಜೊತೆ ಸ್ನೇಹಿತ್​ ಸದಾ ಫ್ಲರ್ಟ್ ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಇದು ಇಡೀ ಮನೆಗೆ ಗೊತ್ತಿದೆ. ‘ನನಗೆ ಈ ಬಗ್ಗೆ ಆಸಕ್ತಿ ಇಲ್ಲ’ ಎಂದು ನಮ್ರತಾ ಎಷ್ಟೋ ಬಾರಿ ಹೇಳಿಕೊಂಡಿದ್ದಿದೆ. ಆದರೆ, ಸ್ನೇಹಿತ್ ಮಾತ್ರ ಪ್ರಯತ್ನ ನಿಲ್ಲಿಸಲೇ ಇಲ್ಲ. ಈಗ ಸುದೀಪ್ ಆಡಿದ ಒಂದು ಮಾತಿನಿಂದ ಸ್ನೇಹಿತ್ ಹೃದಯವೇ ಒಡೆದು ಹೋಗಿದೆ. ಈ ಮಾತಿನಿಂದ ಮನೆ ಮಂದಿ ಸಖತ್ ನಕ್ಕಿದ್ದಾರೆ.

ಸ್ನೇಹಿತ್ ಗೌಡ ಅವರು ನಮ್ರತಾ ಜೊತೆ ಸಾಕಷ್ಟು ಫ್ಲರ್ಟ್ ಮಾಡಿದ್ದಾರೆ. ‘ನನ್ನ ಜಾಗದಲ್ಲಿ ಬೇರೆ ಹುಡುಗಿ ಇದ್ದಿದ್ದರೆ ಬಹುಶಃ ನಿಮ್ಮ ಮಾತಿಗೆ ಒಲಿಯುತ್ತಿದ್ದರೇನೋ’ ಎಂದು ನಮ್ರತಾ ಈ ಮೊದಲು ಹೇಳಿದ್ದರು. ಇದಕ್ಕೆ ಉತ್ತರಿಸಿದ್ದ ಸ್ನೇಹಿತ್, ‘ನಮ್ಮ ಪ್ರಯತ್ನ ನಾವು ಮಾಡುತ್ತಾ ಇರಬೇಕು. ಎಲ್ಲಾ ದೇವರ ಇಚ್ಛೆ ಅಂತೆ ಆಗುತ್ತದೆ’ ಎಂದು ಹೇಳಿದ್ದರು. ಈಗ ನಮ್ರತಾ ಹಾಗೂ ಸ್ನೇಹಿತ್ ಮಧ್ಯೆ ಅಣ್ಣ ತಂಗಿ ಸಂಬಂಧ ಕಲ್ಪಿಸಿದ್ದಾರೆ ಸುದೀಪ್.

ನಮ್ರತಾ ಅವರನ್ನು ಮಾತನಾಡಿಸುತ್ತಾ, ‘ನಿಮ್ಮ ಅಣ್ಣ ಹೇಗಿದ್ದಾರೆ, ಅವರನ್ನು ಇನ್ನಮುಂದೆ ನೀವು ಅಣ್ಣ ಎಂದೇ ಕರೆಯಬೇಕು’ ಎಂದರು ಸುದೀಪ್. ಇದಕ್ಕೆ ಉತ್ತರಿಸಿದ ನಮ್ರತಾ, ‘ಅವರಿಗೆ ಹಾಗೆ ಕರೆಯೋದು ಇಷ್ಟವಿಲ್ಲವಂತೆ’ ಎಂದರು. ‘ಇರಲಿಬಿಡಿ, ಇನ್ಮುಂದೆ ಹಾಗೆಯೇ ಕರೆಯಿರಿ. ಅಣ್ಣ, ಸ್ನೇಹಿತ್ ಅಣ್ಣ ಎಂದು ಜೋರಾಗಿ ಕರೆದರೆ ಸಾಕು ಅವರು ಪ್ರತ್ಯಕ್ಷರಾಗಿಬಿಡುತ್ತಾರೆ’ ಎಂದರು ಸುದೀಪ್. ಈ ವೇಳೆ ಕೆಲವರು, ‘ಬಹುಶಃ ಸ್ನೇಹಿತ್ ಹೃದಯ ಒಡೆದು ಹೋಯಿತು’ ಎಂದು ಮಾತನಾಡಿಕೊಂಡಿದ್ದಾರೆ.

ಇದನ್ನೂ ಓದಿ: ಸುದೀಪ್ ಬುದ್ಧಿವಾದಕ್ಕೂ ಇಲ್ಲ ಬೆಲೆ; ನಳಿಕೆ ತೆಗೆದ ಬಳಿಕ ಮೊದಲಿನಂತೇ ಆದ ನಮ್ರತಾ ಗೌಡ

ಸ್ನೇಹಿತ್ ಬಿಗ್ ಬಾಸ್​ ಮನೆ ಒಳಗೆ ಬಂದಾಗ ಸಂಗೀತಾ ಜೊತೆ ಕ್ಲೋಸ್ ಆಗೋಕೆ ನೋಡಿದ್ದರು. ಆದರೆ ಈ ವೇಳೆ ಕಾರ್ತಿಕ್ ಎಂಟ್ರಿ ಆಯಿತು. ಆ ಬಳಿಕ ಈಶಾನಿ ಜೊತೆ ಫ್ರೆಂಡ್​ಶಿಪ್ ಬೆಳೆಸಿಕೊಳ್ಳಲು ಹೋದರು. ಆಗ ಮೈಕೆಲ್ ಅವರು ಬಂದರು. ಈಗ ನಮ್ರತಾ ಗೌಡ ಜೊತೆ ಕ್ಲೋಸ್ ಆಗಲು ಪ್ರಯತ್ನಿಸುತ್ತಿದ್ದಾರೆ. ಸದಾ ಅವರ ಜೊತೆಯೇ ಸುತ್ತಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು