AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಏನೋ ಆಗಿದೆ ಆಯಮ್ಮನಿಗೆ, ಪಿಕ್​ನಿಕ್​ಗೆ ಬಂದಂಗೆ ಕಾಣ್ತಿದೆ’; ಶುಭಾ-ನಿಧಿ ಗೆಳೆತನದಲ್ಲಿ ಬಿರುಕು​

ಶುಭಾ ಪೂಂಜಾ ಹಾಗೂ ನಿಧಿ ಸುಬ್ಬಯ್ಯ ಬಿಗ್​ ಬಾಸ್​ ಮನೆಯಲ್ಲಿ ತುಂಬಾನೇ ಕ್ಲೋಸ್​ ಆಗಿದ್ದರು. ಆದರೆ, ಅವರ ಫ್ರೆಂಡ್​ಶಿಪ್​ನಲ್ಲಿ ಈಗ ಬಿರುಕು ಮೂಡಿದೆ.

‘ಏನೋ ಆಗಿದೆ ಆಯಮ್ಮನಿಗೆ, ಪಿಕ್​ನಿಕ್​ಗೆ ಬಂದಂಗೆ ಕಾಣ್ತಿದೆ’; ಶುಭಾ-ನಿಧಿ ಗೆಳೆತನದಲ್ಲಿ ಬಿರುಕು​
ಶುಭಾ ಪೂಂಜಾ - ನಿಧಿ ಸುಬ್ಬಯ್ಯ
ರಾಜೇಶ್ ದುಗ್ಗುಮನೆ
| Edited By: |

Updated on: Jul 03, 2021 | 7:25 AM

Share

ಬಿಗ್​ ಬಾಸ್​ ಮನೆಯ ಮೊದಲ ಇನ್ನಿಂಗ್ಸ್​ನಲ್ಲಿ ನಿಧಿ ಸುಬ್ಬಯ್ಯ ಹಾಗೂ ಶುಭಾ ಪೂಂಜಾ ಇಬ್ಬರೂ ಕ್ಲೋಸ್​ ಫ್ರೆಂಡ್ಸ್​ ಆಗಿದ್ದರು. ಆದರೆ, ಎರಡನೇ ಇನ್ನಿಂಗ್ಸ್​ನಲ್ಲಿಇಬ್ಬರ ಗೆಳೆತನ ಮೊದಲಿನಂತೆ ಇಲ್ಲ. ಆರಂಭದಲ್ಲಿ ಸಣ್ಣಸಣ್ಣ ವಿಚಾರಕ್ಕೂ ಕಿತ್ತಾಡಿಕೊಳ್ಳುತ್ತಿದ್ದ ಇಬ್ಬರೂ ಈಗ ಓಪನ್​ ಆಗಿ ಎಲ್ಲರೂ ರೀತಿ ಕಿತ್ತಾಡಿಕೊಳ್ಳುತ್ತಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಜುಲೈ 2ರ ಸಂಚಿಕೆಯಲ್ಲಿ ಸ್ಪರ್ಧಿಗಳಿಗೆ ಟಾಸ್ಕ್​ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​ ಅನುಸಾರ ಮನೆಯಲ್ಲಿ ಇಟ್ಟ ಬೋರ್ಡ್​ ಮೇಲೆ ಪೇಂಟ್​ ಮಾಡಬೇಕಿತ್ತು. ಟಾಸ್ಕ್​ ನಡೆಯುವ ವೇಳೆ ಬಂದ ಶುಭಾ, ಕೊಂಕು ನುಡಿದರು. ಇದರಿಂದ ನಿಧಿಗೆ ಇರಿಟೇಷನ್​ ಆಗಿದೆ.

‘ನಿಜವಾಗಲೂ ನನಗೆ ನೆತ್ತಿಗೇರಿದೆ. ಎಲ್ಲಾನೂ ಕಾಂಪಿಟೇಷನ್​ ಆಗಿ ತಗೋಬೇಡಿ ಎಂದು ಶುಭಾ ಹೇಳ್ತಾಳೆ. ಪೇಂಟ್​ ಮಾಡುವ ಏಕಾಗ್ರತೆ ಬೇಕು. ಆದರೆ, ಅವಳು ಎಲ್ಲರನ್ನೂ ಎಳೆದಾಡುಕೊಂಡಿದ್ದಾಳೆ. ಆ ಯಮ್ಮನಿಗೆ ಏನೋ ಆಗಿಬಿಟ್ಟಿದೆ. ನಾವೆಲ್ಲ ಆಡೋಕೆ ಬಂದಿದ್ದು. ಅವಳು ಪಿಕ್​ನಿಕ್​ಗೆ ಬಂದಿದ್ದಾಳೆ ಎನಿಸುತ್ತದೆ’ ಎಂದರು ನಿಧಿ. ದಿವ್ಯಾ ಸುರೇಶ್​ ಕೂಡ ಇದೇ ಅನುಭವ ಹಂಚಿಕೊಂಡರು.

‘ಪ್ರತಿ ಬಾರಿ ಉರಿಸಬಾರದು. ಇದು ಫನ್​ ಟಾಸ್ಕ್​. ಜೋಕ್​ ಮಾಡಿಕೊಂಡು ಆಡಿ. ಗಂಭೀರ ಟಾಸ್ಕ್​ನಲ್ಲಿ ಗಂಭೀರವಾಗಿರಬೇಕು. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ನಾನು ಟಾಸ್ಕ್​ನ ನಿಜವಾಗಿಯೂ ಗಂಭೀರವಾಗಿ ಆಡುತ್ತೇನೆ. ಬಿಗ್​ ಬಾಸ್​ ಟಾಸ್ಕ್ ಕೊಡೋದು ಎಲ್ಲರೂ ಆಡಲಿ ಎಂದು. ಒಬ್ಬರೇ ಟಾಸ್ಕ್​ನಲ್ಲಿ ಪಾಲ್ಗೊಳ್ಳಲಿ ಎಂದರ್ಥವಲ್ಲ. ನನ್ನ ಹಿಂದೆ ಆಕೆ ಮಾತನಾಡುತ್ತಿದ್ದಾಳೆ. ಇದು ಹೊಸದಲ್ಲ ಅವಳಿಗೆ. ಧೈರ್ಯ ಇದ್ದರೆ ಮುಂದೆ ಬಂದು ಮಾತನಾಡಲಿ’ ಎಂದು ನಿಧಿಗೆ ಶುಭಾ ಛಾಟಿ ಬೀಸಿದರು.

ಇನ್ನು, ಕಳಪೆ ವಿಚಾರ ಬಂದಾಗ ಬಹುತೇಕರು ಶುಭಾ ಅವರ ಹೆಸರನ್ನು ಪಡೆದುಕೊಂಡರು. ಹೀಗಾಗಿ, ಶುಭಾ ಜೈಲು ಸೇರಿದರು.

ಇದನ್ನೂ ಓದಿ:

‘ಶುಭಾ ಲೆಕ್ಕಕ್ಕಿಲ್ಲ, ಸುಮ್ಮನೆ ಕೌಂಟ್​ಗೆ ಇಟ್ಟಿದ್ದಾರೆ’; ಈ ಬಿಗ್​ ಬಾಸ್​ ಸ್ಪರ್ಧಿಯ ಮಾತನ್ನು ನೀವು ಒಪ್ತೀರಾ?

Divya Uruduga: ಕನ್ನಡ ಬಿಗ್​ ಬಾಸ್​ ಸೀಸನ್​ 8ರಲ್ಲಿ ಹೊಸ ದಾಖಲೆ ಬರೆದ ದಿವ್ಯಾ ಉರುಡುಗ

Follow Us
ಅಶ್ಲೀಲ ಕಮೆಂಟ್ ಮಾಡಿದವರಿಗೆ 7 ವರ್ಷ ಜೈಲು ಶಿಕ್ಷೆ ಸಾಧ್ಯತೆ: ಶಾಕಿಂಗ್ ವಿಷಯ
ಅಶ್ಲೀಲ ಕಮೆಂಟ್ ಮಾಡಿದವರಿಗೆ 7 ವರ್ಷ ಜೈಲು ಶಿಕ್ಷೆ ಸಾಧ್ಯತೆ: ಶಾಕಿಂಗ್ ವಿಷಯ
ಇದೆಂಥಾ ಪ್ರಶ್ನೆ? ಪತ್ರಕರ್ತರ ಪ್ರಶ್ನೆಗೆ ಕೆರಳಿದ ಇಶಾನ್ ಕಿಶನ್
ಇದೆಂಥಾ ಪ್ರಶ್ನೆ? ಪತ್ರಕರ್ತರ ಪ್ರಶ್ನೆಗೆ ಕೆರಳಿದ ಇಶಾನ್ ಕಿಶನ್
ಒಳಮೀಸಲಾತಿ ಜಟಾಪಟಿ: ಸಭೆಯಲ್ಲಿ ಮಹತ್ವದ ತೀರ್ಮಾನ
ಒಳಮೀಸಲಾತಿ ಜಟಾಪಟಿ: ಸಭೆಯಲ್ಲಿ ಮಹತ್ವದ ತೀರ್ಮಾನ
ಆರ್​ ಅಶೋಕ್‌ ಹೇಳಿದ ಮನಕಲಕುವ ಸತ್ಯ ಘಟನೆಗೆ ಸದನವೇ ನಿಶ್ಯಬ್ದ
ಆರ್​ ಅಶೋಕ್‌ ಹೇಳಿದ ಮನಕಲಕುವ ಸತ್ಯ ಘಟನೆಗೆ ಸದನವೇ ನಿಶ್ಯಬ್ದ
ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ಆರ್ಥಿಕ ಪ್ರಗತಿ ಮತ್ತು ಆಕಸ್ಮಿಕ ಧನಯೋಗ
ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ಆರ್ಥಿಕ ಪ್ರಗತಿ ಮತ್ತು ಆಕಸ್ಮಿಕ ಧನಯೋಗ
ಅಶ್ಲೀಲ ಕಮೆಂಟ್ ಕೇಸು, ನ್ಯಾಯಾಲಯಕ್ಕೆ ಬಂದ ನಟಿ ರಮ್ಯಾ: ವಿಡಿಯೋ
ಅಶ್ಲೀಲ ಕಮೆಂಟ್ ಕೇಸು, ನ್ಯಾಯಾಲಯಕ್ಕೆ ಬಂದ ನಟಿ ರಮ್ಯಾ: ವಿಡಿಯೋ
ಯುಗಾದಿ ವರ್ಷ ಭವಿಷ್ಯ; ವೃಶ್ಚಿಕ ರಾಶಿಗೆ ಈ ವರ್ಷ ಹೇಗಿರಲಿದೆ?
ಯುಗಾದಿ ವರ್ಷ ಭವಿಷ್ಯ; ವೃಶ್ಚಿಕ ರಾಶಿಗೆ ಈ ವರ್ಷ ಹೇಗಿರಲಿದೆ?
ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಅಂತಾರಾಷ್ಟ್ರೀಯ ಮಟ್ಟದ ಬಸ್​ ನಿಲ್ದಾಣ
ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಅಂತಾರಾಷ್ಟ್ರೀಯ ಮಟ್ಟದ ಬಸ್​ ನಿಲ್ದಾಣ
ಶಾರ್ಟ್​ ಸರ್ಕೂಟ್​ನಿಂದ ಹೊತ್ತಿ ಉರಿದ ಕೊಳ್ಳೇಗಾಲ ಸಿಪಿಐ ಕಚೇರಿ!
ಶಾರ್ಟ್​ ಸರ್ಕೂಟ್​ನಿಂದ ಹೊತ್ತಿ ಉರಿದ ಕೊಳ್ಳೇಗಾಲ ಸಿಪಿಐ ಕಚೇರಿ!
ಚಿನ್ನದ ಸರ ಕಸಿದು ಪರಾರಿಯಾಗಲು ಯತ್ನಿಸಿದ ಕಳ್ಳ; ಮುಂದೇನಾಯಿತು ನೋಡಿ
ಚಿನ್ನದ ಸರ ಕಸಿದು ಪರಾರಿಯಾಗಲು ಯತ್ನಿಸಿದ ಕಳ್ಳ; ಮುಂದೇನಾಯಿತು ನೋಡಿ