AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಶುಭಾ ಲೆಕ್ಕಕ್ಕಿಲ್ಲ, ಸುಮ್ಮನೆ ಕೌಂಟ್​ಗೆ ಇಟ್ಟಿದ್ದಾರೆ’; ಈ ಬಿಗ್​ ಬಾಸ್​ ಸ್ಪರ್ಧಿಯ ಮಾತನ್ನು ನೀವು ಒಪ್ತೀರಾ?

ಶುಭಾ ಪೂಂಜಾ ಬಂದ ದಿನದಿಂದಲೂ ತಮ್ಮದೇ ಸ್ಟೈಲ್​ನಲ್ಲಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಕೆಲವೊಮ್ಮೆ ಅವರು ಮಕ್ಕಳಂತೆ ವರ್ತಿಸಿದ್ದೂ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ದೊಡ್ಮನೆಯಲ್ಲಿ ಅವರಿಗೆ ವೈರಿಗಳಿಲ್ಲ.

‘ಶುಭಾ ಲೆಕ್ಕಕ್ಕಿಲ್ಲ, ಸುಮ್ಮನೆ ಕೌಂಟ್​ಗೆ ಇಟ್ಟಿದ್ದಾರೆ’; ಈ ಬಿಗ್​ ಬಾಸ್​ ಸ್ಪರ್ಧಿಯ ಮಾತನ್ನು ನೀವು ಒಪ್ತೀರಾ?
ನಟಿ ಶುಭಾ ಪೂಂಜಾ
TV9 Web
| Updated By: ಮದನ್​ ಕುಮಾರ್​|

Updated on: Jul 02, 2021 | 4:52 PM

Share

‘ಕನ್ನಡ ಬಿಗ್​ ಬಾಸ್​ ಸೀಸನ್ 8’ರ ಎರಡನೇ ಇನ್ನಿಂಗ್ಸ್​ ದಿನ ಕಳೆದಂತೆ ಕುತೂಹಲ ಹೆಚ್ಚಿಸಿಕೊಳ್ಳುತ್ತಿದೆ. ಸ್ಪರ್ಧಿಗಳ ನಡುವೆ ಟಫ್​ ಫೈಟ್​ ಏರ್ಪಡುತ್ತಿದ್ದು, ಎಲ್ಲರೂ ಗೆಲ್ಲಲೇ ಬೇಕು ಎನ್ನುವ ಛಲಕ್ಕೆ ಬಿದ್ದಿದ್ದಾರೆ. ಆದರೆ, ಬಿಗ್​ ಬಾಸ್​ ಮನೆಯಲ್ಲಿ ಶುಭಾ ಪೂಂಜಾ ಮಾತ್ರ ಏನನ್ನೂ ಮಾಡುತ್ತಿಲ್ಲವಂತೆ. ಅವರನ್ನು ಕೇವಲ ಕೌಂಟ್​ಗೆ ಇಡಲಾಗಿದೆ ಎನ್ನುವ ಮಾತು ಬಿಗ್​ ಬಾಸ್​ ಸ್ಪರ್ಧಿಯಿಂದಲೇ ಬಂದಿದೆ.

ಶುಭಾ ಪೂಂಜಾ ಬಂದ ದಿನದಿಂದಲೂ ತಮ್ಮದೇ ಸ್ಟೈಲ್​ನಲ್ಲಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಕೆಲವೊಮ್ಮೆ ಅವರು ಮಕ್ಕಳಂತೆ ವರ್ತಿಸಿದ್ದೂ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ದೊಡ್ಮನೆಯಲ್ಲಿ ಅವರಿಗೆ ವೈರಿಗಳಿಲ್ಲ. ಎಲ್ಲರ ಜತೆಯೂ ಅವರು ಹೊಂದಿಕೊಂಡು ಹೋಗುತ್ತಿದ್ದಾರೆ. ಇದು ಕೆಲವರ ಕಣ್ಣು ಕುಕ್ಕಿದೆ.

ಬಿಗ್​ ಬಾಸ್​ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್ ಹಾಗೂ ಪ್ರಶಾಂತ್​ ಸಂಬರಗಿ ಕುಳಿತು ಮಾತನಾಡುತ್ತಿದ್ದರು. ಸದ್ಯ, ಮನೆಯ ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಅವರು ಚರ್ಚೆ ಮಾಡುತ್ತಿದ್ದರು. ಮನೆಯಲ್ಲಿ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಮಧ್ಯೆಯೂ ಶಮಂತ್​ ಬ್ರೋ ಗೌಡ, ರಘು ಗೌಡ ಹಾಗೂ ಶುಭಾ ಎಲ್ಲರ ಜತೆಗೂ ಬೆರೆಯುತ್ತಿದ್ದಾರೆ. ಆದರೆ, ಇಲ್ಲಿ ಶುಭಾ ಲೆಕ್ಕಕ್ಕೇ ಇಲ್ಲ!

‘ಮನೆಯಲ್ಲಿ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗಲ್ಲ. ರಘು, ಶಮಂತ್​ ಮಾತ್ರ ಎಲ್ಲರ ಜತೆಗೂ ಚೆನ್ನಾಗಿದ್ದಾರೆ’ ಎಂದರು ಚಕ್ರವರ್ತಿ. ‘ಶುಭಾ ಕೂಡ ಎಲ್ಲರ ಜತೆಗೆ ಬರೆಯುತ್ತಿದ್ದಾರೆ’ ಎಂದರು ಪ್ರಶಾಂತ್​. ‘ಬಿಗ್​ ಬಾಸ್​ನಲ್ಲಿ ಶುಭಾ ಲೆಕ್ಕಕ್ಕಿಲ್ಲ, ಸುಮ್ಮನೆ ಕೌಂಟ್​ಗೆ ಇಟ್ಟಿದ್ದಾರೆ’ ಎಂದು ಚಕ್ರವರ್ತಿ ತಮ್ಮ ಅಭಿಪ್ರಾಯ ತಿಳಿಸಿದರು. ‘ಹಾಗನ್ನಬೇಡ’ ಎಂದು ಹೇಳುವ ಮೂಲಕ ಶುಭಾ ಕೂಡ ಪ್ರಬಲ ಕ್ಯಾಂಡಿಡೇಟ್​ ಎಂಬುದನ್ನು ಪ್ರಶಾಂತ್​ ಹೇಳೋಕೆ ಹೋದರು. ಆದರೆ, ಇದನ್ನು ಚಕ್ರವರ್ತಿ ಒಪ್ಪಲೇ ಇಲ್ಲ. ‘ನೀನೇ ಹೇಳು ಅವಳು (ಶುಭಾ) ಯಾವುದಕ್ಕೆ ಲೆಕ್ಕಕ್ಕೆ ಇದ್ದಾಳೆ? ಆಟಕ್ಕೂ ಇಲ್ಲ, ತರ್ಕಕ್ಕೂ ಇಲ್ಲ’ ಎಂದು ಚಕ್ರವರ್ತಿ ತಮ್ಮ ವಾದ ಮಂಡಿಸಿದರು.

ಇದನ್ನೂ ಓದಿ:

ಹೆಗಲಮೇಲೆ ಕೈ ಹಾಕಲು ಬಂದ ಪ್ರಶಾಂತ್​ರನ್ನು ಸಿಟ್ಟಿನಿಂದ ತಳ್ಳಿದ ಚಕ್ರವರ್ತಿ; ಇಬ್ಬರ ನಡುವೆ ಮೂಡಿತು ವೈಮನಸ್ಸು

ಜೀವನದಲ್ಲಿ ಶುಭಾ ಪೂಂಜಾ ಕಳೆದುಕೊಂಡಿದ್ದ ಅಮೂಲ್ಯ ವ್ಯಕ್ತಿಗಳನ್ನು ಮರಳಿ ಕೊಡಿಸಿದ ಬಿಗ್​ ಬಾಸ್​; ಯಾರವರು?

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!