ಆಸ್ಕರ್​ ರೇಸ್​​​ನಲ್ಲಿ ಭಾರತವನ್ನು ಪ್ರತಿನಿಧಿಸಲಿದೆ ತಮಿಳಿನ ‘ಕೂಳಾಂಗಲ್’ ಸಿನಿಮಾ

TV9 Digital Desk

| Edited By: Rajesh Duggumane

Updated on:Oct 23, 2021 | 8:24 PM

ಈವರೆಗೂ ಭಾರತದ ಯಾವುದೇ ಸಿನಿಮಾ ಕೂಡ ಆಸ್ಕರ್​ ಪ್ರಶಸ್ತಿ ಗೆದ್ದಿಲ್ಲ. ಒಮ್ಮೆಯಾದರೂ ಭಾರತೀಯ ಚಿತ್ರಕ್ಕೆ ಈ ಪ್ರತಿಷ್ಠಿತ ಪ್ರಶಸ್ತಿ ಸಿಗಬೇಕು ಎಂಬುದು ಸಿನಿಪ್ರಿಯರ ಬಯಕೆ.

ಆಸ್ಕರ್​ ರೇಸ್​​​ನಲ್ಲಿ ಭಾರತವನ್ನು ಪ್ರತಿನಿಧಿಸಲಿದೆ ತಮಿಳಿನ ‘ಕೂಳಾಂಗಲ್’ ಸಿನಿಮಾ
ಕೂಜಂಗಲ್
Follow us

ಆಸ್ಕರ್ (ಅಕಾಡೆಮಿ ಅವಾರ್ಡ್ಸ್​)​ ಪ್ರಶಸ್ತಿ ಎಂದರೆ ಅದು ಪ್ರತಿಷ್ಠೆಯ ಪ್ರಶಸ್ತಿ. ಪ್ರಶಸ್ತಿಯನ್ನು ಪಡೆಯಬೇಕು ಎಂಬುದು ಎಲ್ಲರ ಕನಸು. ಆದರೆ ಆಸ್ಕರ್​ ಕಣದಲ್ಲಿ ಸ್ಪರ್ಧಿಸುವ ಅವಕಾಶ ಸಿಗುವುದು ಕೆಲವೇ ಕೆಲವು ಸಿನಿಮಾಗಳಿಗೆ ಮಾತ್ರ. ಮುಂಬರುವ 94ನೇ ಅಕಾಡೆಮಿ ಅವಾರ್ಡ್ಸ್​ ಸ್ಪರ್ಧೆಗಾಗಿ ಎಲ್ಲ ದೇಶಗಳಿಂದಲೂ ಸಿನಿಮಾಗಳನ್ನು ಕಳಿಸಲಾಗುತ್ತಿದೆ. ಭಾರತದಿಂದ ಕೂಡ ಒಂದು ಚಿತ್ರವನ್ನು ಆಯ್ಕೆ ಮಾಡಿ ಕಳಿಸಲಾಗಿದೆ. ತಮಿಳಿನ ‘ಕೂಳಾಂಗಲ್’ ಸಿನಿಮಾ ಭಾರತವನ್ನು ಪ್ರತಿನಿಧಿಸಲಿದೆ. 

94ನೇ ಅಕಾಡೆಮಿ ಅವಾರ್ಡ್ಸ್​ (ಆಸ್ಕರ್​) ಸ್ಪರ್ಧೆಯ ‘ಅತ್ಯುತ್ತಮ ಅಂತಾರಾಷ್ಟ್ರೀಯ ಫೀಚರ್​ ಫಿಲ್ಸ್​’ ಕೆಟಗರಿಯಲ್ಲಿ ಸ್ಪರ್ಧಿಸಲು ಭಾರತದಿಂದ ಒಂದು ಸಿನಿಮಾವನ್ನು ಆಯ್ಕೆ ಮಾಡಲಾಗಿದೆ. ಮಲಯಾಳಂನ ‘ನಾಯಟ್ಟು’, ವಿದ್ಯಾ ಬಾಲನ್​ ನಟನೆಯ ‘ಶೇರ್ನಿ’, ಯೋಗಿ ಬಾಬು ಅಭಿನಯದ ತಮಿಳಿನ ‘ಮಂಡೆಲಾ’ ‘ಕೂಜಂಗಲ್’, ವಿಕ್ಕಿ ಕೌಶಲ್​ ನಟನೆಯ ‘ಉದ್ಧಮ್​’, ಅಸ್ಸಾಮಿ ಭಾಷೆಯ ‘ಬ್ರಿಡ್ಜ್​’, ಗುಜರಾತಿಯ ‘ಚೆಲ್ಲೋ ಶೋ’ ಸೇರಿದಂತೆ ಒಟ್ಟು 14 ಸಿನಿಮಾಗಳು ರೇಸ್​ನಲ್ಲಿದ್ದವು.

ಜ್ಯೂರಿ ಸದಸ್ಯರ ತಂಡ ಕೊಲ್ಕತ್ತಾದಲ್ಲಿ ಈ 14 ಸಿನಿಮಾಗಳನ್ನು ವೀಕ್ಷಿಸಿದೆ. ಜ್ಯೂರಿ ತಂಡದ ಅಧ್ಯಕ್ಷರಾಗಿ ಖ್ಯಾತ ನಿರ್ದೇಶಕ ಶಾಜಿ ಎನ್​. ಕರಣ್​ ಕೆಲಸ ಮಾಡಿದ್ದಾರೆ. 15 ಸದಸ್ಯರು ಈ ತಂಡದಲ್ಲಿದ್ದರು. ಅಂತಿಮವಾಗಿ ಆಸ್ಕರ್​ ಕಣದಲ್ಲಿ ಸ್ಪರ್ಧಿಸುವ ಅವಕಾಶ ‘ಕೂಳಾಂಗಲ್’ ಚಿತ್ರಕ್ಕೆ ಸಿಕ್ಕಿದೆ.

ಈವರೆಗೂ ಭಾರತದ ಯಾವುದೇ ಸಿನಿಮಾ ಕೂಡ ಆಸ್ಕರ್​ ಪ್ರಶಸ್ತಿ ಗೆದ್ದಿಲ್ಲ. ಒಮ್ಮೆಯಾದರೂ ಭಾರತೀಯ ಚಿತ್ರಕ್ಕೆ ಈ ಪ್ರತಿಷ್ಠಿತ ಪ್ರಶಸ್ತಿ ಸಿಗಬೇಕು ಎಂಬುದು ಸಿನಿಪ್ರಿಯರ ಬಯಕೆ. ಈ ಬಾರಿಯಾದರೂ ಅದು ಈಡೇರಲಿ ಎಂದು ಎಲ್ಲರೂ ಹಂಬಲಿಸುತ್ತಿದ್ದಾರೆ. ಮುಂಬರುವ ಆಸ್ಕರ್​ ಸಮಾರಂಭವು 2022ರ ಮಾರ್ಚ್​​ ತಿಂಗಳಲ್ಲಿ ನಡೆಯಲಿದೆ.

ಇದನ್ನೂ ಓದಿ: ಆಸ್ಕರ್​ ಪ್ರಶಸ್ತಿ ರೇಸ್​ಗಾಗಿ ಭಾರತದ 14 ಚಿತ್ರಗಳ ಹಣಾಹಣಿ; ಯಾವ ಸಿನಿಮಾಗೆ ಸಿಗಲಿದೆ ಚಾನ್ಸ್​? ಮನೆಯಲ್ಲಿದ್ದ ಆಸ್ಕರ್​ ಟ್ರೋಫಿ ಕಳೆದುಹಾಕಿದ್ದ ಎ.ಆರ್​. ರೆಹಮಾನ್​; ಸಂಗೀತ ನಿರ್ದೇಶಕನ ಸಿನಿ ಪಯಣಕ್ಕೆ 29 ವರ್ಷ

 

ತಾಜಾ ಸುದ್ದಿ

Click on your DTH Provider to Add TV9 Kannada