AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಚೆನ್ನಾಗಿದ್ದವರನ್ನೆಲ್ಲ ಅಳಿಸಿಬಿಟ್ರಲ್ಲ’: ಬಿಗ್ ಬಾಸ್ ಸರ್​​ಪ್ರೈಸ್​ಗೆ ಕಣ್ಣೀರಿಟ್ಟ ಮನೆಮಂದಿ

‘ಬಿಗ್ ಬಾಸ್’ ಮನೆಗೆ ಎಂಟ್ರಿ ಕೊಟ್ಟ ನಂತರ ಹೊರಗಿನ ಪ್ರಪಂಚದ ಜತೆ ಸಂಪೂರ್ಣ ಕನೆಕ್ಷನ್ ತಪ್ಪಿ ಹೋಗುತ್ತದೆ. ಹೊರಗಿನವರ ಜತೆ ಸಂಪರ್ಕದಲ್ಲಿ ಇರಲು ಆಗುವುದಿಲ್ಲ. ಆದರೆ, ಗಣೇಶ ಚತುರ್ಥಿ ಪ್ರಯುಕ್ತ ಬಿಗ್ ಬಾಸ್ ಒಂದು ಅವಕಾಶ ನೀಡಿದ್ದರು.

‘ಚೆನ್ನಾಗಿದ್ದವರನ್ನೆಲ್ಲ ಅಳಿಸಿಬಿಟ್ರಲ್ಲ’: ಬಿಗ್ ಬಾಸ್ ಸರ್​​ಪ್ರೈಸ್​ಗೆ ಕಣ್ಣೀರಿಟ್ಟ ಮನೆಮಂದಿ
ಬಿಗ್ ಬಾಸ್ ಸ್ಪರ್ಧಿಗಳು
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 01, 2022 | 9:01 PM

‘ಬಿಗ್ ಬಾಸ್ ಒಟಿಟಿ’ಯಲ್ಲಿ (Bigg Boss OTT Kannada) ನಾಲ್ಕನೇವಾರ ಪೂರ್ಣಗೊಳ್ಳುತ್ತಿದೆ. ಮನೆಯಲ್ಲಿ ಕಾಂಪಿಟೇಷನ್ ಹೆಚ್ಚುತ್ತಿದೆ. ಎಲ್ಲಾ ಸ್ಪರ್ಧಿಗಳ ಮಧ್ಯೆ ಬಾಂಡಿಂಗ್ ಕೂಡ ಉತ್ತಮವಾಗಿ ಬೆಳೆದಿದೆ. ಆರಂಭದಲ್ಲಿ ಸಣ್ಣಸಣ್ಣ ವಿಚಾರಕ್ಕೆ ಕಿತ್ತಾಡಿಕೊಳ್ಳುತ್ತಿದ್ದ ಸ್ಪರ್ಧಿಗಳು ಈಗ ಗೆಳೆಯರಾಗಿದ್ದಾರೆ. ಗಣೇಶ ಚತುರ್ಥಿ (Ganesh Chaturthi) ಸಂದರ್ಭದಲ್ಲಿ ಬಿಗ್ ಬಾಸ್ ಕಡೆಯಿಂದ ಸ್ಪರ್ಧಿಗಳಿಗೆ ಸರ್​ಪ್ರೈಸ್​ ಸಿಕ್ಕಿದೆ. ಸರ್​ಪ್ರೈಸ್ ನೋಡಿ ಮನೆ ಮಂದಿ ಕಣ್ಣೀರು ಹಾಕಿದ್ದಾರೆ. ‘ಚೆನ್ನಾಗಿದ್ದವರನ್ನೆಲ್ಲ ಅಳಿಸಿಬಿಟ್ರಲ್ಲ’ ಎಂದಿದ್ದಾರೆ ಸೋನು ಶ್ರೀನಿವಾಸ್ ಗೌಡ.

‘ಬಿಗ್ ಬಾಸ್’ ಮನೆಗೆ ಎಂಟ್ರಿ ಕೊಟ್ಟ ನಂತರ ಹೊರಗಿನ ಪ್ರಪಂಚದ ಜತೆ ಸಂಪೂರ್ಣ ಕನೆಕ್ಷನ್ ತಪ್ಪಿ ಹೋಗುತ್ತದೆ. ಮನೆಯಲ್ಲಿರುವ ಸ್ಪರ್ಧಿಗಳ ಮಧ್ಯವಷ್ಟೇ ಫ್ರೆಂಡ್​​ಶಿಪ್ ಬೆಳೆಸಬೇಕು. ಹೊರಗಿನವರ ಜತೆ ಸಂಪರ್ಕದಲ್ಲಿ ಇರಲು ಆಗುವುದಿಲ್ಲ. ಆದರೆ, ಗಣೇಶ ಚತುರ್ಥಿ ಪ್ರಯುಕ್ತ ಬಿಗ್ ಬಾಸ್ ಒಂದು ಅವಕಾಶ ನೀಡಿದ್ದರು.

‘ಬಿಗ್ ಬಾಸ್ ಕನ್ನಡ ಒಟಿಟಿ’ ಸ್ಪರ್ಧಿಗಳು ದೊಡ್ಮನೆಗೆ ಬಂದು ಒಂದು ತಿಂಗಳು ಕಳೆದಿದ್ದಾರೆ. ಹೊರಗಿನ ಜಗತ್ತಿನ ಸಂಪರ್ಕ ಇಲ್ಲದೆ ಇರೋದು ನಿಜಕ್ಕೂ ಸವಾಲಿನ ವಿಚಾರ. ಇದೇ ವಿಚಾರಕ್ಕೆ ಮನೆ ಮಂದಿ ಕಣ್ಣೀರು ಹಾಕಿದ ಉದಾಹರಣೆಯೂ ಇದೆ. ಹೀಗಾಗಿ, ‘ಬಿಗ್ ಬಾಸ್​’ ಮನೆಯಲ್ಲಿ ಇರುವ ಸ್ಪರ್ಧಿಗಳಿಗೆ ವಿಶೇಷ ವಿಡಿಯೋ ಕ್ಲಿಪ್ ಪ್ಲೇ ಮಾಡಲಾಯಿತು.

ಎಲ್ಲಾ ಸ್ಪರ್ಧಿಗಳ ಕುಟುಂಬ ಹಾಗೂ ಆಪ್ತರು 30 ಸೆಕೆಂಡ್​ನ ವಿಡಿಯೋ ಮಾಡಿದ್ದರು. ಇದನ್ನು ಬಿಗ್ ಬಾಸ್ ಟಿವಿಯಲ್ಲಿ ಪ್ರಸಾರ ಮಾಡಲಾಯಿತು. ಕುಟುಂಬದವರನ್ನು ನೋಡಿ, ಅವರ ಹಿತನುಡಿ ಕೇಳಿ, ಅವರು ನೆನಪಿಸಿದ ಹಳೆಯ ಘಟನೆಯನ್ನು ನೆನೆದು ಸ್ಪರ್ಧಿಗಳು ಕಣ್ಣೀರು ಹಾಕಿದ್ದಾರೆ. ‘ಎಲ್ಲರೂ ಚೆನ್ನಾಗಿದ್ವಿ. ಯಾಕೆ ಕಣ್ಣೀರು ಹಾಕಿಸಿದ್ರಿ ಬಿಗ್ ಬಾಸ್​’ ಎಂದು ಸೋನು ಗೌಡ ಕೇಳಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್​​ನಲ್ಲಿ ಐದನೇ ವಿಕೆಟ್ ಪತನ; ಉದಯ್​ ಹೊರಹೋಗಲು ಕಾರಣವಾದ ವಿಚಾರಗಳೇನು?

ಹಬ್ಬ ಆದ್ದರಿಂದ ‘ಬಿಗ್ ಬಾಸ್​’ ಸ್ಪರ್ಧಿಗಳಿಗೆ ಹಬ್ಬದ ಊಟ ನೀಡಲಾಯಿತು. ಎಲ್ಲರೂ ಹಬ್ಬದ ಊಟ ಸವಿದು ಖುಷಿಪಟ್ಟಿದ್ದಾರೆ. ಹೋಳಿಗೆ ಊಟವನ್ನು ಸವಿದು ಖುಷಿಪಟ್ಟಿದ್ದಾರೆ. ಒಟ್ಟಿನಲ್ಲಿ ಹಬ್ಬದ ಸಂದರ್ಭದಲ್ಲಿ ಸರ್​ಪ್ರೈಸ್​ ಮೇಲೆ ಸರ್​ಪ್ರೈಸ್ ನೋಡಿ ಸ್ಪರ್ಧಿಗಳು ಖುಷಿಯಾಗಿದ್ದಾರೆ. ಸದ್ಯ 11 ಸ್ಪರ್ಧಿಗಳು ಇದ್ದಾರೆ. ಆ ಪೈಕಿ ಕೆಲವರು ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಒಬ್ಬರು ಎಲಿಮಿನೇಟ್ ಆಗುತ್ತಿದ್ದಾರೆ. ರೂಪೇಶ್ ಅವರು ಮನೆಯ ಕ್ಯಾಪ್ಟನ್ ಆಗಿದ್ದಾರೆ.

ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ
ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ
ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಮಾತ್ರ ಸಿನಿಮಾ ಬಿಡುಗಡೆ: ಸಾ.ರಾ. ಗೋವಿಂದು
ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಮಾತ್ರ ಸಿನಿಮಾ ಬಿಡುಗಡೆ: ಸಾ.ರಾ. ಗೋವಿಂದು