AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jerax Review: ಜನರನ್ನೇ ಜೆರಾಕ್ಸ್ ಮಾಡುವ ಯಂತ್ರದೊಳಗೆ ಇದೆ ಸಖತ್ ಸಸ್ಪೆನ್ಸ್

Jerax Web Series: ಡಾಲಿ ಧನಂಜಯ ನಿರ್ಮಾಣದ ‘ಜೆರಾಕ್ಸ್’ ವೆಬ್ ಸರಣಿ ‘ಜೀ5’ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಶ್ರೀನಿಧಿ ಬೆಂಗಳೂರು ಅವರು ನಿರ್ದೇಶನ ಮಾಡಿದ್ದಾರೆ. ನಾಗಭೂಷಣ, ಪಾಯಲ್ ಚಂಗಪ್ಪ, ತುಕಾಲಿ ಸಂತೋಷ್, ಮಂಜು ಪಾವಗಡ ಮುಂತಾದವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ‘ಜೆರಾಕ್ಸ್’ ವೆಬ್ ಸಿರೀಸ್ ವಿಮರ್ಶೆ ಇಲ್ಲಿದೆ.

Jerax Review: ಜನರನ್ನೇ ಜೆರಾಕ್ಸ್ ಮಾಡುವ ಯಂತ್ರದೊಳಗೆ ಇದೆ ಸಖತ್ ಸಸ್ಪೆನ್ಸ್
Nagabhushana, Om Praksah Rao
ಮದನ್​ ಕುಮಾರ್​
|

Updated on: Apr 24, 2026 | 9:46 PM

Share

ನಟ ನಾಗಭೂಷಣ (Nagabhushana) ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಸಿನಿಮಾ ಮತ್ತು ವೆಬ್ ಸಿರೀಸ್​ ಮೂಲಕ ಅವರು ಜನರನ್ನು ರಂಜಿಸಿದ್ದಾರೆ. ಹೆಚ್ಚಾಗಿ ಅವರು ಸಾಮಾನ್ಯ ಹುಡುಗನ ಪಾತ್ರವನ್ನೇ ಮಾಡುತ್ತಾರೆ. ನಮ್ಮ-ನಿಮ್ಮ ನಡುವೆ ಇರುವ ಸಾಮಾನ್ಯ ವ್ಯಕ್ತಿಯಾಗಿ ಕಾಣಿಸಿಕೊಂಡು ಮನರಂಜನೆ ನೀಡುತ್ತಾರೆ. ಆದರೆ ‘ಜೆರಾಕ್ಸ್’ (Jerax Web Series) ವೆಬ್ ಸರಣಿಯಲ್ಲಿ ಒಂದು ಟ್ವಿಸ್ಟ್ ಇದೆ. ಈ ವೆಬ್ ಸಿರೀಸ್​ನಲ್ಲಿ ಕೂಡ ಅವರು ಸಾಮಾನ್ಯ ವ್ಯಕ್ತಿಯ ಪಾತ್ರ ಮಾಡಿದ್ದರೂ ಸಹ, ಆ ಪಾತ್ರಕ್ಕೆ ಅಸಮಾನ್ಯ ಶಕ್ತಿ ಇರುತ್ತದೆ! ‘ಜೀ5’ (Zee5) ಒಟಿಟಿ ಮೂಲಕ ಈ ವೆಬ್ ಸಿರೀಸ್ ಬಿಡುಗಡೆ ಆಗಿದೆ.

‘ಜೆರಾಕ್ಸ್’ ವೆಬ್ ಸರಣಿಯಲ್ಲಿ ಒಂದು ವಿಶೇಷವಾದ ಕಥೆ ಇದೆ. ರಾಜಕೀಯ, ಪ್ರೀತಿ-ಪ್ರೇಮ, ಕಾಮಿಡಿ ಜೊತೆಗೆ ಒಂದು ಫ್ಯಾಂಟಸಿ ಕಹಾನಿಯನ್ನು ತೋರಿಸಲಾಗಿದೆ. ‘ಬ್ಲಿಂಕ್’ ಖ್ಯಾತಿಯ ನಿರ್ದೇಶಕ ಶ್ರೀನಿಧಿ ಬೆಂಗಳೂರು ಅವರು ಈ ವೆಬ್ ಸರಣಿಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಬಹಳ ಥ್ರಿಲ್ಲಿಂಗ್ ಆಗಿ ‘ಜೆರಾಕ್ಸ್’ ವೆಬ್ ಸಿರೀಸ್ ಮೂಡಿಬಂದಿದೆ. ಪಟಪಟನೆ ಸಾಗುವ 6 ಎಪಿಸೋಡ್​ಗಳು ಈ ಸೀರಿಸ್​​ನಲ್ಲಿವೆ.

ನಾಗಭೂಷಣ ಮಾತ್ರವಲ್ಲದೇ ‘ಜೆರಾಕ್ಸ್​’ ವೆಬ್ ಸರಣಿಯಲ್ಲಿ ಹಲವು ಕಲಾವಿದರು ನಟಿಸಿದ್ದಾರೆ. ಪಾಯಲ್ ಚಂಗಪ್ಪ, ಮಂಜು ಪಾವಗಡ, ತುಕಾಲಿ ಸಂತೋಷ್, ಓಂ ಪ್ರಕಾಶ್ ರಾವ್, ವಿಜಯ್ ಪ್ರಸಾದ್, ಉಷಾ ಭಂಡಾರಿ, ಯಶ್ವಂತ್ ಶೆಟ್ಟಿ, ಸುಧಾಕರ್ ಗೌಡ, ಜಗಪ್ಪ, ರಿಚರ್ಡ್ ಲೂಯಿಸ್ ಸೇರಿದಂತೆ ಹಲವರು ನಟಿಸಿದ್ದಾರೆ. ಎಲ್ಲ ಪಾತ್ರಕ್ಕೂ ಅದರದ್ದೇ ಆದ ತೂಕ ಇದೆ. ಮೊದಲ ಸಂಚಿಕೆಯಿಂದ ಕೊನೆ ಸಂಚಿಕೆ ತನಕ ಸಸ್ಪೆನ್ಸ್ ತುಂಬಿದೆ.

ಇದರ ಶೀರ್ಷಿಕೆಯೇ ಸೂಚಿಸುವಂತೆ ಜೀವಂತ ಮನುಷ್ಯರನ್ನು ನಕಲು ಮಾಡುವ ಕಥೆ ಇದರಲ್ಲಿದೆ. ಇದರ ಕಥಾನಾಯಕ ಪ್ರಕಾಶ. ಆತನ (ನಾಗಭೂಷಣ) ಬದುಕಿನಲ್ಲಿ ಒಂದು ಪವಾಡ ನಡೆಯುತ್ತದೆ. ಅವನ ಅಂಗಡಿಯಲ್ಲಿ ಇರುವ ಜೆರಾಕ್ಸ್ ಯಂತ್ರದ ಮೂಲಕ ಮನುಷ್ಯರನ್ನೇ ನಕಲು ಮಾಡುವ ಶಕ್ತಿ ಅವನಿಗೆ ಸಿದ್ಧಿಸುತ್ತದೆ. ಆ ಶಕ್ತಿಯನ್ನು ಬಳಸಿಕೊಂಡು ಶ್ರೀಮಂತನಾಗಬೇಕು ಎಂಬುದು ಅವನ ಆಸೆ. ಆದರೆ ನಂತರ ಆಗುವುದೇ ಬೇರೆ.

ಬೇರೆ ವ್ಯಕ್ತಿಗಳನ್ನು ನಕಲು ಮಾಡಿ, ಅವರ ದೇಹದ ಒಳಗೆ ತಾನೇ ಸೇರಿಸಿಕೊಂಡು ತನ್ನ ಎಲ್ಲ ಆಸೆಯನ್ನು ಈಡೇರಿಸಿಕೊಳ್ಳಲು ಪ್ರಕಾಶ ಮುಂದಾಗುತ್ತಾನೆ. ಆದರೆ ಅವನ ಈ ಕೆಲಸದಲ್ಲಿ ಹತ್ತು ಹಲವು ವಿಘ್ನಗಳು ಎದುರಾಗುತ್ತವೆ. ಅದರಿಂದ ಅವನ ಜೀವನವೇ ಬದಲಾಗುತ್ತದೆ. ಅವನು ಜೆರಾಕ್ಸ್ ಯಂತ್ರದ ನಕಲು ಮಾಡಿದ ವ್ಯಕ್ತಿಗಳಿಂದ ಅವನಿಗೇ ತೊಂದರೆ ಶುರುವಾಗುತ್ತದೆ. ಪ್ರೀತಿಸಿದ ಹುಡುಗಿಯೂ ಕೈತಪ್ಪಿ ಹೋಗಬಹುದಾದ ಸಂದರ್ಭ ಬರುತ್ತದೆ.

ಇದನ್ನೂ ಓದಿ: ‘ಅಣ್ಣ ಫ್ರಮ್ ಮೆಕ್ಸಿಕೋ’ ಸಿನಿಮಾ ಟೀಸರ್ ನೋಡಿ ಮೆಚ್ಚಿಕೊಂಡ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಮನುಷ್ಯರನ್ನೇ ನಕಲು ಮಾಡುವ ಜೆರಾಕ್ಸ್ ಯಂತ್ರದ ಹಾವಳಿ ಇಡೀ ಊರಿನಲ್ಲಿ ಅವಾಂತರ ಸೃಷ್ಟಿಸುತ್ತದೆ. ಎಲ್ಲರ ಬದುಕು ಉಲ್ಟಾ ಪಲ್ಟಾ ಆಗುತ್ತದೆ. ಅಂತಿಮವಾಗಿ ಅದನ್ನೆಲ್ಲ ಪ್ರಕಾಶ ಹೇಗೆ ಸರಿ ಮಾಡುತ್ತಾನೆ ಎಂಬುದೇ ಇಂಟರೆಸ್ಟಿಂಗ್ ಕಹಾನಿ. ಈ ರೀತಿಯ ಒಂದು ಡಿಫರೆಂಟ್ ಕಥೆಯನ್ನು ಇಟ್ಟುಕೊಂಡು ನಿರ್ದೇಶಕ ಶ್ರೀನಿಧಿ ಬೆಂಗಳೂರು ಅವರು ವೆಬ್ ಸಿರೀಸ್ ಮಾಡಿದ್ದಾರೆ.

ಸೂಪರ್ ಹೀರೋ ರೀತಿಯ ಕಥೆಗಳೇ ಅಪರೂಪ ಆಗಿರುವ ಕನ್ನಡದ ಮಟ್ಟಿಗೆ ಇದು ಒಂದು ಡಿಫರೆಂಟ್ ಪ್ರಯತ್ನವಾಗಿದೆ. ಚಿಕ್ಕದಾದ ಚೊಕ್ಕದಾದ ಒಂದು ಫ್ಯಾಂಟಸಿ ವೆಬ್ ಸಿರೀಸ್ ನೋಡಬೇಕು ಎಂದು ಬಯಸುವ ಪ್ರೇಕ್ಷಕರಿಗೆ ‘ಜೆರಾಕ್ಸ್’ ಉತ್ತಮ ಆಯ್ಕೆ ಆಗಿದೆ. ಇದರಲ್ಲಿ ಯಾವುದೇ ಅನಗತ್ಯ ಅಂಶಗಳನ್ನು ತುರುಕಿಲ್ಲ. ಕಥೆಗೆ ಎಷ್ಟು ಬೇಕೋ ಅಷ್ಟನ್ನು ಅಚ್ಚುಕಟ್ಟಾಗಿ ತೋರಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!