AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್​ಅಪ್ ಶೋ ಗೆದ್ದ ಮುನಾವರ್ ಫರೂಖಿ; ವಿನ್ನರ್​ಗೆ ಸಿಕ್ಕ ಹಣ ಎಷ್ಟು, ಸವಲತ್ತುಗಳೇನು?

‘ಲಾಕಪ್​’ ರಿಯಾಲಿಟಿ ಶೋನಲ್ಲಿ ಕಂಗನಾ ನಿರೂಪಣೆಗೂ ಮೆಚ್ಚುಗೆ ವ್ಯಕ್ತವಾದವು. ದಿನ ಕಳೆದಂತೆ ಶೋ ಜನಪ್ರಿಯತೆ ಹೆಚ್ಚಿತು. 70ಕ್ಕೂ ಹೆಚ್ಚು ದಿನ ಪ್ರಸಾರ ಕಂಡ ಈ ಶೋ ಈಗ ಪೂರ್ಣಗೊಂಡಿದೆ.

ಲಾಕ್​ಅಪ್ ಶೋ ಗೆದ್ದ ಮುನಾವರ್ ಫರೂಖಿ; ವಿನ್ನರ್​ಗೆ ಸಿಕ್ಕ ಹಣ ಎಷ್ಟು, ಸವಲತ್ತುಗಳೇನು?
ಲಾಕ್​ಅಪ್ ಶೋ ಗೆದ್ದ ಮುನಾವರ್
TV9 Web
| Edited By: |

Updated on: May 08, 2022 | 6:21 PM

Share

ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ನಿರೂಪಣೆಯಲ್ಲಿ ಮೂಡಿ ಬಂದ ‘ಲಾಕಪ್​’ ರಿಯಾಲಿಟಿ ಶೋ (Lock Upp Reality Show) ನೇರವಾಗಿ ಒಟಿಟಿಯಲ್ಲಿ ಪ್ರಸಾರವಾಗಿತ್ತು. ಈ ಶೋಗೆ ದೊಡ್ಡ ಅಭಿಮಾನಿಗಳು ಹುಟ್ಟಿಕೊಂಡಿದ್ದರು. ಈಗ ಈ ಶೋ ಫಿನಾಲೆ ಪೂರ್ಣಗೊಂಡಿದೆ. ಶನಿವಾರ (ಮೇ 7) ರಾತ್ರಿ ನಡೆದ ಅದ್ದೂರಿ ಫಿನಾಲೆಯಲ್ಲಿ ಮುನಾವರ್ ಫರೂಖಿ ಅವರು (Munawar Faruqui) ‘ಲಾಕಪ್​’ ಶೋನ ಕಪ್ ಎತ್ತಿದ್ದಾರೆ. ಫ್ಯಾನ್ಸ್ ಕಡೆಯಿಂದ ಮುನಾವರ್​ಗೆ ಬರೋಬ್ಬರಿ 18 ಲಕ್ಷ ವೋಟ್​ ಸಿಕ್ಕಿತ್ತು. ಇದಲ್ಲದೆ, ಕಂಗನಾ ಕೂಡ ಅವರಿಗೆ ವೋಟ್ ಮಾಡಿದರು. ಇದರಿಂದ ಮುನಾವರ್ ಗೆದ್ದು ಬೀಗಿದರು.

‘ಲಾಕಪ್​’ ರಿಯಾಲಿಟಿ ಶೋ ಆರಂಭದಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ಈ ಶೋ ‘ಬಿಗ್​ ಬಾಸ್’ ರೀತಿಯಲ್ಲೇ ಇದೆ ಎನ್ನುವ ಆರೋಪಗಳು ಕೇಳಿ ಬಂದವು. ಹಲವು ವಿವಾದಾತ್ಮಕ ಸ್ಪರ್ಧಿಗಳು ಶೋನಲ್ಲಿ ಇದ್ದಿದ್ದರಿಂದ ಈ ಶೋ ನಿಧಾನವಾಗಿ ಜನಪ್ರಿಯತೆ ಪಡೆದುಕೊಂಡಿತು. ಅಷ್ಟೇ ಅಲ್ಲ, ಕಂಗನಾ ನಿರೂಪಣೆಗೂ ಮೆಚ್ಚುಗೆ ವ್ಯಕ್ತವಾದವು. ದಿನ ಕಳೆದಂತೆ ಶೋ ಜನಪ್ರಿಯತೆ ಹೆಚ್ಚಿತು. 70ಕ್ಕೂ ಹೆಚ್ಚು ದಿನ ಪ್ರಸಾರ ಕಂಡ ಈ ಶೋ ಈಗ ಪೂರ್ಣಗೊಂಡಿದೆ.

‘ಲಾಕಪ್​’ ರಿಯಾಲಿಟಿ ಶೋಅನ್ನು ಏಕ್ತಾ ಕಪೂರ್​ ನಿರ್ಮಾಣ ಮಾಡಿದ್ದರು. ಅವರು ಸೋಶಿಯಲ್ ಮೀಡಿಯಾದಲ್ಲಿ ಮುನಾವರ್ ವಿನ್ ಆದ ಬಗ್ಗೆ ಅವರು ಘೋಷಣೆ ಮಾಡಿದ್ದಾರೆ. ಇನ್ನು, ಪಾಯಲ್ ರೋಹಟ್ಗಿ ಅವರು ಮೊದಲ ರನ್ನರ್​ಅಪ್​ ಆಗಿ ಹೊರ ಹೊಮ್ಮಿದ್ದಾರೆ. ಅಂಜಲಿ ಅರೋರಾ ಎರಡನೇ ರನ್ನರ್​ಅಪ್ ಆಗಿದ್ದಾರೆ.

ಮುನಾವರ್ ಅವರು 20 ಲಕ್ಷ ರೂಪಾಯಿ ಹಣ ಗೆದ್ದಿದ್ದಾರೆ. ಜತೆಗೆ ಅವರಿಗೆ ಕಾರು, ಸುಂದರ ಟ್ರೋಫಿ ಸಿಕ್ಕಿದೆ. ಅವರ ಇಟಲಿ ಟ್ರಿಪ್​ನ ಸಂಪೂರ್ಣ ಖರ್ಚನ್ನು ನಿರ್ಮಾಣ ಸಂಸ್ಥೆ ನೋಡಿಕೊಳ್ಳಲಿದೆ. ಈ ಬಗ್ಗೆ ಫಿನಾಲೆಯಲ್ಲಿ ಘೋಷಣೆ ಮಾಡಲಾಗಿದೆ. ಮುನಾವರ್ ಕಪ್​ ಗೆದ್ದಿದ್ದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.

ಫಿನಾಲೆ ವೇಳೆ ಅಚ್ಚರಿಯ ಘೋಷಣೆ ಮಾಡಲಾಯಿತು. ಪ್ರಿನ್ಸ್​ ನರುಲಾ ಅವರು ಸ್ಪರ್ಧಿ ಆಗಿರಲಿಲ್ಲ. ಸಮಸ್ಯೆಗಳನ್ನು ಸೃಷ್ಟಿ ಮಾಡುವ ಉದ್ದೇಶದಿಂದ ಅವರನ್ನು ಈ ಶೋಗೆ ಕಳುಹಿಸಲಾಯಿತು ಎಂದು ಕಂಗನಾ ಹೇಳಿದ್ದಾರೆ. ಅವರು ಕಪ್​ ಗೆಲ್ಲದಿದ್ದರೂ ಆಲ್ಟ್​ ಬಾಲಜಿ ಅವರ ಲಾಕಪ್​ ಕಡೆಯಿಂದ ಅವರಿಗೆ ಪ್ರಾಜೆಕ್ಟ್​ ಒಂದನ್ನು ಆಫರ್ ಮಾಡಲಾಗಿದೆ.

View this post on Instagram

A post shared by Erk❤️rek (@ektarkapoor)

ಮುನಾವರ್ ಅವರು ಈ ಶೋ ಮುಗಿದ ಬೆನ್ನಲ್ಲೇ ಮತ್ತೊಂದು ಶೋಗೆ ರೆಡಿ ಆಗುತ್ತಿದ್ದಾರೆ ಎನ್ನಲಾಗಿದೆ. ‘ಖತ್ರೋಂ ಕೆ ಖಿಲಾಡಿ 12’ ಶೋನಲ್ಲಿ ಅವರು ಸ್ಪರ್ಧಿ ಆಗಲಿದ್ದಾರೆ ಎಂದು ವರದಿ ಆಗಿದೆ.  ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರ ಬರಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ