ರಾಕೇಶ್​ ಅಡಿಗ ಜತೆ ಇರೋದೇ ಸ್ಫೂರ್ತಿ ಗೌಡಗೆ ಮುಳುವಾಯ್ತಾ? ನಟಿಗೆ ಕಾಡುತ್ತಿದೆ ಭಯ

ರಾಕೇಶ್​ ಜತೆ ಸ್ಫೂರ್ತಿ ಕ್ಲೋಸ್ ಆಗಿರುತ್ತಾರೆ. ಈಗ ಈ ವಿಚಾರದಲ್ಲಿ ಸ್ಫೂರ್ತಿಗೆ ಒಂದು ಅನುಮಾನ ಕಾಡೋಕೆ ಶುರುವಾಗಿದೆ.

ರಾಕೇಶ್​ ಅಡಿಗ ಜತೆ ಇರೋದೇ ಸ್ಫೂರ್ತಿ ಗೌಡಗೆ ಮುಳುವಾಯ್ತಾ? ನಟಿಗೆ ಕಾಡುತ್ತಿದೆ ಭಯ
ರಾಕೇಶ್​-ಸ್ಫೂರ್ತಿ
Follow us
| Updated By: ರಾಜೇಶ್ ದುಗ್ಗುಮನೆ

Updated on: Aug 15, 2022 | 8:04 PM

ರಾಕೇಶ್ ಅಡಿಗ (Rakesh Adiga) ಹಾಗೂ ಸ್ಫೂರ್ತಿ ಗೌಡ ನಡುವೆ ಏನೋ ಇದೆ ಎಂಬ ವಿಚಾರ ಚರ್ಚೆ ಆಗುತ್ತಿದೆ. ನೋಡುವವರ ಕಣ್ಣಿನಲ್ಲಿ ಇದು ನಾನಾ ರೀತಿಯ ಬಣ್ಣ ಪಡೆದುಕೊಳ್ಳುತ್ತಿದೆ. ಇಬ್ಬರೂ ಗುಡ್ ಫ್ರೆಂಡ್ಸ್​ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ, ಇದನ್ನು ಮನೆಯಲ್ಲಿ ಇರುವ ಮಂದಿ ಬೇರೆಯದೇ ರೀತಿಯಲ್ಲಿ ಕನೆಕ್ಟ್ ಮಾಡುತ್ತಿದ್ದಾರೆ. ಈ ವಿಚಾರದ ಬಗ್ಗೆ ಸ್ಫೂರ್ತಿ ಗೌಡಗೆ (Spoorthi Gowda) ಭಯ ಶುರುವಾಗಿದೆ. ಈ ಕಾರಣಕ್ಕೆ ಅವರು ರಾಕೇಶ್ ಅವರಿಂದ ದೂರ ಉಳಿಯಲು ಪ್ಲ್ಯಾನ್ ಮಾಡುತ್ತಿದ್ದಾರೆ.

ರಾಕೇಶ್ ಹಾಗೂ ಸ್ಫೂರ್ತಿ ಗೌಡ ಮನೆಯಲ್ಲಿ ಕ್ಲೋಸ್ ಆಗಿದ್ದಾರೆ. ಈ ಬಗ್ಗೆ ಅನೇಕರು ಕಣ್ಣಿಟ್ಟಿದ್ದಾರೆ. ಸೋನು ಗೌಡ ಅವರಿಗೂ ರಾಕೇಶ್​ ಮೇಲೆ ಆಕರ್ಷಣೆ ಇದೆ. ಸೋನು ಗೌಡ ಅವರಿಗೆ ಉರಿಸಬೇಕು ಎಂಬ ಕಾರಣಕ್ಕೂ ರಾಕೇಶ್​ ಜತೆ ಸ್ಫೂರ್ತಿ ಕ್ಲೋಸ್ ಆಗಿರುತ್ತಾರೆ. ಈಗ ಈ ವಿಚಾರದಲ್ಲಿ ಸ್ಫೂರ್ತಿಗೆ ಒಂದು ಅನುಮಾನ ಕಾಡೋಕೆ ಶುರುವಾಗಿದೆ. ರಾಕೇಶ್​ಗೆ ಕ್ಲೋಸ್ ಆಗುತ್ತಿರುವ ವಿಚಾರ ಅವರಿಗೆ ಮುಳುವಾಗುವ ಸೂಚನೆ ಸಿಕ್ಕಿದೆ.

ವಾರಾಂತ್ಯದಲ್ಲಿ ಸುದೀಪ್ ಜತೆ ಮಾತನಾಡುವಾಗ ಜಯಶ್ರೀ ಅವರು ಈ ಬಗ್ಗೆ ಮಾತನಾಡಿದ್ದರು. ‘ಸ್ಫೂರ್ತಿ ಸದಾ ರಾಕೇಶ್​ ಜತೆ ಇರುತ್ತಾರೆ’ ಎಂದು ಆರೋಪಿಸಿದ್ದರು. ಈ ವಿಚಾರದಲ್ಲಿ ಸ್ಫೂರ್ತಿಗೆ ಬೇಸರ ಆಗಿದೆ. ಈ ಕಾರಣಕ್ಕೆ ರಾತ್ರಿ ವೇಳೆ ಈ ವಿಚಾರದ ಬಗ್ಗೆ ಅವರು ಚರ್ಚೆ ಮಾಡಿದ್ದಾರೆ. ‘ನೀವು ಯಾಕೆ ಆ ರೀತಿ ಹೇಳಿದಿರಿ’ ಎಂದು ಜಯಶ್ರೀಗೆ ಪ್ರಶ್ನೆ ಮಾಡಿದರು ಸ್ಫೂರ್ತಿ. ಇದಕ್ಕೆ ಉತ್ತರಿಸಿದ ಜಯಶ್ರೀ, ‘ನನಗೆ ಏನು ಅನಿಸಿತೋ ಅದನ್ನು ಹೇಳಿದ್ದೀನಿ’ ಎಂದರು. ಇದರಿಂದ ಸ್ಫೂರ್ತಿಗೆ ತಮ್ಮ ತಪ್ಪು ಅರಿವಾಗಿದೆ.

ಇದನ್ನೂ ಓದಿ: ‘ಮಿಸ್ಟೇಕ್ ಮಾಡ್ಕೋಬೇಡ’: ‘ಬಿಗ್ ಬಾಸ್​’ ಮನೆಯಲ್ಲಿ ಜೋರಾಯ್ತು ರಾಕೇಶ್​-ಸ್ಫೂರ್ತಿ ಕುರಿತ ಗುಸುಗುಸು

ಈ ಘಟನೆ ನಡೆದ ಮರುದಿನವೇ ಸ್ಫೂರ್ತಿ ಬದಲಾಗಿದ್ದಾರೆ. ‘ರಾಕೇಶ್​ಗೆ ಅಣ್ಣ ಎಂದು ಕರೆಯುತ್ತೇನೆ’ ಎಂಬುದಾಗಿ ಘೋಷಿಸಿದರು. ಈ ವಿಚಾರ ಕೇಳಿ ರೂಪೇಶ್ ಅವರು ಅಚ್ಚರಿ ಹೊರಹಾಕಿದರು. ‘ನಿಮ್ಮಿಬ್ಬರ ಜೋಡಿ ಚೆನ್ನಾಗಿ ಹೊಂದುತ್ತದೆ’ ಎಂದು ಘೋಷಿಸಿದರು.

ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್