AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಕೇಶ್​ ಅಡಿಗ ಜತೆ ಇರೋದೇ ಸ್ಫೂರ್ತಿ ಗೌಡಗೆ ಮುಳುವಾಯ್ತಾ? ನಟಿಗೆ ಕಾಡುತ್ತಿದೆ ಭಯ

ರಾಕೇಶ್​ ಜತೆ ಸ್ಫೂರ್ತಿ ಕ್ಲೋಸ್ ಆಗಿರುತ್ತಾರೆ. ಈಗ ಈ ವಿಚಾರದಲ್ಲಿ ಸ್ಫೂರ್ತಿಗೆ ಒಂದು ಅನುಮಾನ ಕಾಡೋಕೆ ಶುರುವಾಗಿದೆ.

ರಾಕೇಶ್​ ಅಡಿಗ ಜತೆ ಇರೋದೇ ಸ್ಫೂರ್ತಿ ಗೌಡಗೆ ಮುಳುವಾಯ್ತಾ? ನಟಿಗೆ ಕಾಡುತ್ತಿದೆ ಭಯ
ರಾಕೇಶ್​-ಸ್ಫೂರ್ತಿ
TV9 Web
| Edited By: |

Updated on: Aug 15, 2022 | 8:04 PM

Share

ರಾಕೇಶ್ ಅಡಿಗ (Rakesh Adiga) ಹಾಗೂ ಸ್ಫೂರ್ತಿ ಗೌಡ ನಡುವೆ ಏನೋ ಇದೆ ಎಂಬ ವಿಚಾರ ಚರ್ಚೆ ಆಗುತ್ತಿದೆ. ನೋಡುವವರ ಕಣ್ಣಿನಲ್ಲಿ ಇದು ನಾನಾ ರೀತಿಯ ಬಣ್ಣ ಪಡೆದುಕೊಳ್ಳುತ್ತಿದೆ. ಇಬ್ಬರೂ ಗುಡ್ ಫ್ರೆಂಡ್ಸ್​ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ, ಇದನ್ನು ಮನೆಯಲ್ಲಿ ಇರುವ ಮಂದಿ ಬೇರೆಯದೇ ರೀತಿಯಲ್ಲಿ ಕನೆಕ್ಟ್ ಮಾಡುತ್ತಿದ್ದಾರೆ. ಈ ವಿಚಾರದ ಬಗ್ಗೆ ಸ್ಫೂರ್ತಿ ಗೌಡಗೆ (Spoorthi Gowda) ಭಯ ಶುರುವಾಗಿದೆ. ಈ ಕಾರಣಕ್ಕೆ ಅವರು ರಾಕೇಶ್ ಅವರಿಂದ ದೂರ ಉಳಿಯಲು ಪ್ಲ್ಯಾನ್ ಮಾಡುತ್ತಿದ್ದಾರೆ.

ರಾಕೇಶ್ ಹಾಗೂ ಸ್ಫೂರ್ತಿ ಗೌಡ ಮನೆಯಲ್ಲಿ ಕ್ಲೋಸ್ ಆಗಿದ್ದಾರೆ. ಈ ಬಗ್ಗೆ ಅನೇಕರು ಕಣ್ಣಿಟ್ಟಿದ್ದಾರೆ. ಸೋನು ಗೌಡ ಅವರಿಗೂ ರಾಕೇಶ್​ ಮೇಲೆ ಆಕರ್ಷಣೆ ಇದೆ. ಸೋನು ಗೌಡ ಅವರಿಗೆ ಉರಿಸಬೇಕು ಎಂಬ ಕಾರಣಕ್ಕೂ ರಾಕೇಶ್​ ಜತೆ ಸ್ಫೂರ್ತಿ ಕ್ಲೋಸ್ ಆಗಿರುತ್ತಾರೆ. ಈಗ ಈ ವಿಚಾರದಲ್ಲಿ ಸ್ಫೂರ್ತಿಗೆ ಒಂದು ಅನುಮಾನ ಕಾಡೋಕೆ ಶುರುವಾಗಿದೆ. ರಾಕೇಶ್​ಗೆ ಕ್ಲೋಸ್ ಆಗುತ್ತಿರುವ ವಿಚಾರ ಅವರಿಗೆ ಮುಳುವಾಗುವ ಸೂಚನೆ ಸಿಕ್ಕಿದೆ.

ವಾರಾಂತ್ಯದಲ್ಲಿ ಸುದೀಪ್ ಜತೆ ಮಾತನಾಡುವಾಗ ಜಯಶ್ರೀ ಅವರು ಈ ಬಗ್ಗೆ ಮಾತನಾಡಿದ್ದರು. ‘ಸ್ಫೂರ್ತಿ ಸದಾ ರಾಕೇಶ್​ ಜತೆ ಇರುತ್ತಾರೆ’ ಎಂದು ಆರೋಪಿಸಿದ್ದರು. ಈ ವಿಚಾರದಲ್ಲಿ ಸ್ಫೂರ್ತಿಗೆ ಬೇಸರ ಆಗಿದೆ. ಈ ಕಾರಣಕ್ಕೆ ರಾತ್ರಿ ವೇಳೆ ಈ ವಿಚಾರದ ಬಗ್ಗೆ ಅವರು ಚರ್ಚೆ ಮಾಡಿದ್ದಾರೆ. ‘ನೀವು ಯಾಕೆ ಆ ರೀತಿ ಹೇಳಿದಿರಿ’ ಎಂದು ಜಯಶ್ರೀಗೆ ಪ್ರಶ್ನೆ ಮಾಡಿದರು ಸ್ಫೂರ್ತಿ. ಇದಕ್ಕೆ ಉತ್ತರಿಸಿದ ಜಯಶ್ರೀ, ‘ನನಗೆ ಏನು ಅನಿಸಿತೋ ಅದನ್ನು ಹೇಳಿದ್ದೀನಿ’ ಎಂದರು. ಇದರಿಂದ ಸ್ಫೂರ್ತಿಗೆ ತಮ್ಮ ತಪ್ಪು ಅರಿವಾಗಿದೆ.

ಇದನ್ನೂ ಓದಿ: ‘ಮಿಸ್ಟೇಕ್ ಮಾಡ್ಕೋಬೇಡ’: ‘ಬಿಗ್ ಬಾಸ್​’ ಮನೆಯಲ್ಲಿ ಜೋರಾಯ್ತು ರಾಕೇಶ್​-ಸ್ಫೂರ್ತಿ ಕುರಿತ ಗುಸುಗುಸು

ಈ ಘಟನೆ ನಡೆದ ಮರುದಿನವೇ ಸ್ಫೂರ್ತಿ ಬದಲಾಗಿದ್ದಾರೆ. ‘ರಾಕೇಶ್​ಗೆ ಅಣ್ಣ ಎಂದು ಕರೆಯುತ್ತೇನೆ’ ಎಂಬುದಾಗಿ ಘೋಷಿಸಿದರು. ಈ ವಿಚಾರ ಕೇಳಿ ರೂಪೇಶ್ ಅವರು ಅಚ್ಚರಿ ಹೊರಹಾಕಿದರು. ‘ನಿಮ್ಮಿಬ್ಬರ ಜೋಡಿ ಚೆನ್ನಾಗಿ ಹೊಂದುತ್ತದೆ’ ಎಂದು ಘೋಷಿಸಿದರು.

ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ