ಜೀ5ನಲ್ಲಿ ‘ದಿ ಕಾಶ್ಮೀರ್​ ಫೈಲ್ಸ್​’ ಜತೆ ಪ್ರಸಾರಕ್ಕೆ ಸಜ್ಜಾದ ಕನ್ನಡದ ‘ತಲೆದಂಡ’, ‘ಮುಗಿಲ್​ ಪೇಟೆ’ ಸಿನಿಮಾಗಳು

Zee5: ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ ಕನ್ನಡ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿದೆ. ‘ದಿ ಕಾಶ್ಮೀರ್​ ಫೈಲ್ಸ್​’ ಕನ್ನಡ ಡಬ್ಬಿಂಗ್​ ವರ್ಷನ್ ಜತೆ ‘ತಲೆದಂಡ’, ‘ಮುಗಿಲ್​ ಪೇಟೆ’ ಚಿತ್ರಗಳು ಮೇ 13ರಿಂದ ವೀಕ್ಷಣೆಗೆ ಲಭ್ಯವಾಗುತ್ತಿವೆ.

ಜೀ5ನಲ್ಲಿ ‘ದಿ ಕಾಶ್ಮೀರ್​ ಫೈಲ್ಸ್​’ ಜತೆ ಪ್ರಸಾರಕ್ಕೆ ಸಜ್ಜಾದ ಕನ್ನಡದ ‘ತಲೆದಂಡ’, ‘ಮುಗಿಲ್​ ಪೇಟೆ’ ಸಿನಿಮಾಗಳು
ಮುಗಿಲ್​ ಪೇಟೆ, ದಿ ಕಾಶ್ಮೀರ್​ ಫೈಲ್ಸ್​, ತಲೆದಂಡ
Follow us
| Updated By: ಮದನ್​ ಕುಮಾರ್​

Updated on:May 12, 2022 | 10:14 AM

ಪ್ರತಿ ವೀಕೆಂಡ್​ನಲ್ಲಿ ಸಿನಿಮಾ ವೀಕ್ಷಿಸಿದರೆ ಮಸ್ತ್​ ಮನರಂಜನೆ ಸಿಗುತ್ತದೆ. ಹಾಗಂತ ಎಲ್ಲಾ ವಾರಾಂತ್ಯದಲ್ಲೂ ಚಿತ್ರಮಂದಿರಕ್ಕೆ ಹೋಗೋದು ಕಷ್ಟ ಆಗಬಹುದು. ಅಂಥವರಿಗೆ ಬೆಸ್ಟ್​ ಆಯ್ಕೆ ಎಂದರೆ ಒಟಿಟಿ ಪ್ಲಾಟ್​ಫಾರ್ಮ್ (OTT Platform) ​. ಹೌದು, ಈಗ ಒಟಿಟಿಯಲ್ಲಿ ಹತ್ತು ಹಲವು ಹೊಸ ಹೊಸ ಚಿತ್ರಗಳು ಲಭ್ಯವಾಗುತ್ತಿವೆ. ಕನ್ನಡದ ಸಿನಿಮಾಗಳು ಕೂಡ ಈ ಪ್ಲಾಟ್​​ಫಾರ್ಮ್​ನಲ್ಲಿ ಹೆಚ್ಚುತ್ತಿವೆ. ಜೀ5 ಒಟಿಟಿ ಮೂಲಕ ಈಗಾಗಲೇ ಅನೇಕ ಸಿನಿಮಾಗಳು ವೀಕ್ಷಣೆ ಲಭ್ಯವಾಗಿವೆ. ಈಗ ಇನ್ನೂ ಒಂದಷ್ಟು ಹೊಸ ಚಿತ್ರಗಳು ಸೇರ್ಪಡೆ ಆಗುತ್ತವೆ. ಅದರ ಜೊತೆಗೆ ಕನ್ನಡಕ್ಕೆ ಡಬ್​ ಆದ ಪರಭಾಷೆ ಸಿನಿಮಾಗಳು ಕೂಡ ಮನರಂಜನೆ ನೀಡುತ್ತಿವೆ. ಈ ವರ್ಷ ಅತಿ ಹೆಚ್ಚು ಸದ್ದು ಮಾಡಿದ ಸಿನಿಮಾಗಳಲ್ಲಿ ‘ದಿ ಕಾಶ್ಮೀರ್​ ಫೈಲ್ಸ್​’ (The Kashmir Files) ಕೂಡ ಪ್ರಮುಖವಾದದ್ದು. ಈಗ ಈ ಚಿತ್ರ ಕನ್ನಡಕ್ಕೆ ಡಬ್​ ಆಗಿದ್ದು ಜೀ5 (Zee5) ಮೂಲಕ ಪ್ರಸಾರ ಆಗಲಿದೆ. ಅದರ ಜೊತೆಗೆ ಮನುರಂಜನ್​ ರವಿಚಂದ್ರನ್​ ನಟನೆಯ ‘ಮುಗಿಲು ಪೇಟೆ’ ಹಾಗೂ ಸಂಚಾರಿ ವಿಜಯ್​ ಅಭಿನಯದ ‘ತಲೆದಂಡ’ ಚಿತ್ರ ಕೂಡ ಬಿತ್ತರ ಆಗಲಿದೆ. ಮೇ 13ರಿಂದ ಈ ಮೂರು ಸಿನಿಮಾಗಳು ವೀಕ್ಷಣೆಗೆ ಲಭ್ಯವಾಗಲಿವೆ.

‘ದಿ ಕಾಶ್ಮೀರ್​ ಫೈಲ್ಸ್​’: ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆಯನ್ನು ಆಧರಿಸಿ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ಮೂಡಿಬಂದಿದೆ. ವಿವೇಕ್​ ಅಗ್ನಿಹೋತ್ರಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ದರ್ಶನ್​ ಕುಮಾರ್​, ಪಲ್ಲವಿ ಜೋಶಿ, ವಿಥುನ್​ ಚಕ್ರವರ್ತಿ, ಪ್ರಕಾಶ್​ ಬೆಳವಾಡಿ, ಅನುಪಮ್​ ಖೇರ್​ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರಮಂದಿರದಲ್ಲಿ ರಿಲೀಸ್​ ಆಗಿ ಭರ್ಜರಿ ಯಶಸ್ಸು ಕಂಡಿರುವ ಈ ಸಿನಿಮಾ ಈಗ ಒಟಿಟಿಗೆ ಲಗ್ಗೆ ಇಡುತ್ತಿದೆ. ಥಿಯೇಟರ್​ನಲ್ಲಿ ಬಿಡುಗಡೆ ಆದಾಗ ಇದು ಹಿಂದಿಯಲ್ಲಿ ಮಾತ್ರ ಲಭ್ಯವಾಗಿತ್ತು. ಈಗ ಕನ್ನಡ ಸೇರಿ ಬೇರೆ ಬೇರೆ ಭಾಷೆಗಳಿಗೆ ಡಬ್​ ಆಗಿದೆ. ಜೀ5ನಲ್ಲಿ ಮೇ 13ರಿಂದ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾದ ಕನ್ನಡ ವರ್ಷನ್​ ಪ್ರಸಾರ ಆಗಲಿದೆ. ಈ ಚಿತ್ರವನ್ನು ಕನ್ನಡದಲ್ಲಿ ನೋಡಿ ಅರ್ಥ ಮಾಡಿಕೊಳ್ಳಬೇಕು ಎಂದುಕೊಂಡಿದ್ದ ಪ್ರೇಕ್ಷಕರಿಗೆ ಜೀ5 ಮೂಲಕ ಈ ಅವಕಾಶ ಸಿಗುತ್ತಿದೆ.

ಸಂಚಾರಿ ವಿಜಯ್ ನಟನೆಯ ‘ತಲೆದಂಡ’:

ಇದನ್ನೂ ಓದಿ
Image
RRR OTT Release: ‘ಆರ್​ಆರ್​ಆರ್​’ ಚಿತ್ರ ಒಟಿಟಿಯಲ್ಲಿ ಪ್ರಸಾರ ಆಗೋದು ಯಾವಾಗ? ಆ ದಿನಾಂಕಕ್ಕಾಗಿ ಕಾದಿರುವ ಫ್ಯಾನ್ಸ್​
Image
ಮತ್ತೆ ಹಳೇ ಚಾರ್ಮ್​ ಪಡೆದ ಶಾರುಖ್​ ಖಾನ್​; ‘ಪಠಾಣ್​’ ಚಿತ್ರದ ಒಟಿಟಿ ಪ್ರಸಾರ ಹಕ್ಕು 200 ಕೋಟಿ ರೂ.ಗೆ ಸೇಲ್​?
Image
ಕನ್ನಡದ ‘ಟಾಕೀಸ್​’ ಲಾಂಚ್​ ಮಾಡಿದ ಶಿವಣ್ಣ; ಇದರಲ್ಲಿ ಇದ್ದಾರೆ ಸಾವಿರಕ್ಕೂ ಹೆಚ್ಚು ಕಲಾವಿದರು
Image
ತಮಿಳಿಗೆ ಕಾಲಿಟ್ಟ ‘ಆಹಾ’ ಒಟಿಟಿ; ವಿಶ್ ಮಾಡಿದ ನಟ ಅಲ್ಲು ಅರ್ಜುನ್, ಸಿಎಂ ಸ್ಟಾಲಿನ್

ಸಂಚಾರಿ ವಿಜಯ್​ ಅವರನ್ನು ಕಳೆದುಕೊಂಡಿದ್ದು ಕನ್ನಡ ಚಿತ್ರರಂಗದ ಪಾಲಿಗೆ ದೊಡ್ಡ ನಷ್ಟ. ಅವರು ನಿಧನರಾದ ಬಳಿಕ ‘ತಲೆದಂಡ’ ಚಿತ್ರ ರಿಲೀಸ್​ ಆಯಿತು. ವಿಭಿನ್ನವಾದ ಪಾತ್ರದಲ್ಲಿ ವಿಜಯ್​ ನಟನೆ ಕಂಡು ಅಭಿಮಾನಿಗಳು ಮೆಚ್ಚುಗೆ ಸೂಚಿಸಿದರು. ಆ ಸಿನಿಮಾ ಕೂಡ ಮೇ 13ರಿಂದ ಜೀ5ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಆ ಸಿನಿಮಾ ವೀಕ್ಷಿಸುವ ಮೂಲಕ ಸಂಚಾರಿ ವಿಜಯ್​ ಅವರಿಗೆ ಪ್ರೇಕ್ಷಕರು ನಮನ ಸಲ್ಲಿಸಲಿದ್ದಾರೆ.

ರವಿಚಂದ್ರನ್​ ಪುತ್ರನ ‘ಮುಗಿಲ್​ ಪೇಟೆ’

ಭರತ್​ ಎಸ್​. ನಾವುಂದ ನಿರ್ದೇಶನ ಮಾಡಿದ ‘ಮುಗಿಲ್​ ಪೇಟೆ’ ಚಿತ್ರಕ್ಕೆ ರವಿಚಂದ್ರನ್​ ಪುತ್ರ ಮನುರಂಜನ್​ ರವಿಚಂದ್ರನ್​ ಹೀರೋ. ಅವರಿಗೆ ಜೋಡಿಯಾಗಿ ಕಯಾದು ಲೋಹರ್​ ನಟಿಸಿದ್ದಾರೆ. ಹಾಡುಗಳ ಮೂಲಕ ಗಮನ ಸೆಳೆದ ‘ಮುಗಿಲ್​ ಪೇಟೆ’ ಚಿತ್ರದಲ್ಲಿ ಅನೇಕ ಕಲಾವಿದರು ಅಭಿನಯಿಸಿದ್ದಾರೆ. ಸಾಧು ಕೋಕಿಲ, ರಂಗಾಯಣ ರಘು, ತಾರಾ ಮುಂತಾದವರ ನಟನೆಯಿಂದ ಚಿತ್ರದ ಮೆರುಗು ಹೆಚ್ಚಿದೆ. 2021ರ ನವೆಂಬರ್​ 19ರಂದು ರಿಲೀಸ್​ ಆಗಿದ್ದ ಈ ಸಿನಿಮಾ ಈಗ ಜೀ5 ಮೂಲಕ ಅಭಿಮಾನಿಗಳನ್ನು ರಂಜಿಸಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:14 am, Thu, 12 May 22

ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು