AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಸದ ಚೀಲದಿಂದ ಮಾನ ಮುಚ್ಚಿಕೊಂಡ ನಟಿ; ಬಿಗ್​ ಬಾಸ್​ ಮನೆಯಲ್ಲಿ ಯಾಕಿಂಥ ಪರಿಸ್ಥಿತಿ?

ಬಿಗ್​ ಬಾಸ್​ ಓಟಿಟಿ ಕೇವಲ ಆರು ವಾರಗಳ ಕಾಲ ನಡೆಯಲಿದೆ. ಹಾಗಾಗಿ ಇಲ್ಲಿ ಸ್ಪರ್ಧಿಗಳಿಗೆ ಗುರುತಿಸಿಕೊಳ್ಳಲು ಹೆಚ್ಚು ಸಮಯಾವಕಾಶ ಇಲ್ಲ. ಇರುವ ಸಮಯದಲ್ಲೇ ಏನಾದರೂ ಮಾಡಿ ಎಲಿಮಿನೇಷನ್​ನಿಂದ ಸೇವ್​ ಆಗಬೇಕಿದೆ.

ಕಸದ ಚೀಲದಿಂದ ಮಾನ ಮುಚ್ಚಿಕೊಂಡ ನಟಿ; ಬಿಗ್​ ಬಾಸ್​ ಮನೆಯಲ್ಲಿ ಯಾಕಿಂಥ ಪರಿಸ್ಥಿತಿ?
ಕಸದ ಚೀಲದಿಂದ ಮಾನ ಮುಚ್ಚಿಕೊಂಡ ನಟಿ; ಬಿಗ್​ ಬಾಸ್​ ಮನೆಯಲ್ಲಿ ಯಾಕಿಂಥ ಪರಿಸ್ಥಿತಿ?
TV9 Web
| Edited By: |

Updated on:Aug 15, 2021 | 3:30 PM

Share

ಇಷ್ಟು ದಿನ ವೀಕ್ಷಕರು ನೋಡಿದ ಬಿಗ್​ ಬಾಸ್​ ಒಂದು ರೀತಿ ಇತ್ತು. ಆದರೆ ಈಗ ನೋಡುತ್ತಿರುವ ಬಿಗ್​ ಬಾಸ್​ ಬೇರೆ ರೀತಿ ಇದೆ. ಅಂದರೆ, ವೂಟ್​ನಲ್ಲಿ ಪ್ರಸಾರ ಆಗುತ್ತಿರುವ ‘ಬಿಗ್​ ಬಾಸ್​ ಓಟಿಟಿ’ (Bigg Boss OTT) ಕಾರ್ಯಕ್ರಮ ಸಿಕ್ಕಾಪಟ್ಟೆ ಭಿನ್ನವಾಗಿ ಮೂಡಿಬರುತ್ತಿದೆ. ಓಟಿಟಿ ಎಂದರೆ ಅಲ್ಲಿ ಸದ್ಯಕ್ಕೆ ಸೆನ್ಸಾರ್​ನ ಹಂಗಿಲ್ಲ. ಹಾಗಾಗಿ ಬಿಗ್​ ಬಾಸ್​ ಸ್ಪರ್ಧಿಗಳು ತಮ್ಮ ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಿದ್ದಾರೆ. ಹಿಂದೆಂದಿಗಿಂತಲೂ ಹೆಚ್ಚು ಹಾಟ್​ ಆಗಿ ಈ ಶೋ ಮೂಡಿಬರುತ್ತಿದೆ. ಅನೇಕ ವಿವಾದಾತ್ಮಕ ವ್ಯಕ್ತಿಗಳೇ ದೊಡ್ಮನೆಗೆ ಕಾಲಿಟ್ಟಿರುವುದರಿಂದ ಹಲವು ಟ್ವಿಸ್ಟ್​ಗಳು ಸಿಗುತ್ತಿವೆ. ಇತ್ತೀಚೆಗೆ ನಟಿ ಊರ್ಫಿ ಜಾವೇದ್​ (Urfi Javed) ತಮ್ಮ ವಿಚಿತ್ರ ಕಾಸ್ಟ್ಯೂಮ್​ ಮೂಲಕ ಗಮನ ಸೆಳೆದರು.

ತಮ್ಮ ಬಟ್ಟೆಗಳನ್ನು ನಾವೇ ಡಿಸೈನ್​ ಮಾಡಿಕೊಳ್ಳುವ ಮೂಲಕ ಊರ್ಫಿ ಜಾವೇದ್​ ಅವರು ಫೇಮಸ್​ ಆಗಿದ್ದರು. ಬಿಗ್​ ಬಾಸ್​ ಮನೆಯ ಒಳಗೂ ಅವರು ಅದನ್ನು ಮುಂದುವರಿಸಿದ್ದಾರೆ. ಆದರೆ ದೊಡ್ಮನೆಯೊಳಗೆ ತಮ್ಮ ಇಷ್ಟದ ಪ್ರಕಾರ ಕಾಸ್ಟ್ಯೂಮ್​ ಡಿಸೈನ್​ ಮಾಡಿಕೊಳ್ಳಲು ಅವರಿಗೆ ಎಲ್ಲ ಪರಿಕರಗಳು ಸಿಕ್ಕಿಲ್ಲ. ಹಾಗಾಗಿ ಇರುವ ಕೆಲವು ವಸ್ತುಗಳನ್ನೇ ಬಳಸಿಕೊಂಡು ಅವರು ತಮ್ಮ ಕ್ರಿಯೇಟಿವಿಟಿ ತೋರಿಸುತ್ತಿದ್ದಾರೆ. ಅಚ್ಚರಿ ಎಂದರೆ ಅವರು ಕಸದ ಚೀಲವನ್ನು ಬಳಸಿಕೊಂಡು ತಮ್ಮ ಹೊಸ ಕಾಸ್ಟ್ಯೂಮ್ ವಿನ್ಯಾಸ ಮಾಡಿದ್ದಾರೆ.

ಕಸವನ್ನು ಹಾಕಲು ಕಪ್ಪು ಬಣ್ಣ ಪ್ಲಾಸಿಕ್​ ಕವರ್​ ಬಳಸಲಾಗುತ್ತದೆ. ಅದನ್ನೇ ಇಟ್ಟುಕೊಂಡು ಹೊಸ ಬಗೆಯಲ್ಲಿ ಊರ್ಫಿ ಜಾವೇದ್​ ಅವರು ಕಾಸ್ಟ್ಯೂಮ್​ ವಿನ್ಯಾಸ ಮಾಡಿದ್ದೂ ಅಲ್ಲದೆ, ಅದನ್ನು ಧರಿಸಿಕೊಂಡು ವಿಂಚಿದ್ದಾರೆ. ಆ ಬಟ್ಟೆ ತುಂಬ ಗ್ಲಾಮರಸ್​ ಆಗಿಯೂ ಕಾಣಿಸಿತು ಎಂಬುದು ವಿಶೇಷ. ಊರ್ಫಿಯ ಪ್ರತಿಭೆ ಕಂಡು ಇನ್ನುಳಿದ ಸದಸ್ಯರೆಲ್ಲ ಮೆಚ್ಚುಗೆ ಸೂಚಿಸಿದ್ದಾರೆ. ಬಿಗ್​ ಬಾಸ್​ಗೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಊರ್ಫಿ ಇಷ್ಟೆಲ್ಲ ಕ್ರಿಯೇಟಿವಿಟಿ ತೋರಿಸುತ್ತಿದ್ದಾರೆ. ಮುಂದೆ ಅವರು ಏನೆಲ್ಲ ಮಾಡಬಹುದು ಎಂಬ ಕೌತುಕ ಮೂಡಿದೆ.

View this post on Instagram

A post shared by Voot (@voot)

ಬಿಗ್​ ಬಾಸ್​ ಓಟಿಟಿ ಕೇವಲ ಆರು ವಾರಗಳ ಕಾಲ ನಡೆಯಲಿದೆ. ಹಾಗಾಗಿ ಇಲ್ಲಿ ಸ್ಪರ್ಧಿಗಳಿಗೆ ಗುರುತಿಸಿಕೊಳ್ಳಲು ಹೆಚ್ಚು ಸಮಯಾವಕಾಶ ಇಲ್ಲ. ಇರುವ ಸಮಯದಲ್ಲೇ ಏನಾದರೂ ಮಾಡಿ ಎಲಿಮಿನೇಷನ್​ನಿಂದ ಸೇವ್​ ಆಗಬೇಕಿದೆ. ಇತ್ತೀಚೆಗೆ ಗಾಯಕಿ ನೇಹಾ ಭಾಸಿನ್​ ಅವರು ನಟಿ ರಿಧಿಮಾ ಪಂಡಿತ್​ ತುಟಿಗೆ ಮುತ್ತಿಟ್ಟು ಹೈಪ್ ಸೃಷ್ಟಿಸಿದ್ದರು. ಈಗ ಕಸದ ಬ್ಯಾಗ್​ನಿಂದ ಊರ್ಫಿ ಜಾವೇದ್​ ಕಾಸ್ಟ್ಯೂಮ್​ ಮಾಡಿ ಹಾಕಿಕೊಂಡಿರುವುದು ಚರ್ಚೆ ಆಗುತ್ತಿದೆ.

ಇದನ್ನೂ ಓದಿ:

‘ಒಮ್ಮೆ ಅವನು ನನ್ನ ಜತೆ ಲಿಮಿಟ್​ ಕ್ರಾಸ್​ ಮಾಡಿದ್ದ’; ರಹಸ್ಯ ತೆರೆದಿಟ್ಟ ರಾಜ್​ ಕುಂದ್ರಾ ನಾದಿನಿ ಶಮಿತಾ ಶೆಟ್ಟಿ

ನೈತಿಕತೆ ಬಿಟ್ಟು ಮಹಿಳಾ ಸ್ಪರ್ಧಿಗೆ ಲಿಪ್​ ಕಿಸ್​ ಮಾಡಿದ ಗಾಯಕಿ; ಎತ್ತ ಸಾಗುತ್ತಿದೆ ಬಿಗ್​ ಬಾಸ್​?

Published On - 3:29 pm, Sun, 15 August 21

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ