AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೀ5 ಕಡೆಯಿಂದ ಗುಡ್ ನ್ಯೂಸ್; ಕನ್ನಡ ಸೇರಿ 7 ಭಾಷೆಯಲ್ಲಿ ವೆಬ್ ಸಿರೀಸ್, ಸಿನಿಮಾ ಘೋಷಣೆ

ಜೀ5 ಓಟಿಟಿ ವೇದಿಕೆಯು ಕನ್ನಡ ಸೇರಿದಂತೆ 7 ಭಾಷೆಗಳ ಸಿನಿಮಾಗಳು ಹಾಗೂ ವೆಬ್ ಸರಣಿಗಳನ್ನು ಘೋಷಿಸಿದೆ. ರಾಜ್ ಬಿ. ಶೆಟ್ಟಿ ನಟನೆಯ ಕರಾವಳಿ ಸಿನಿಮಾ ಸೇರಿದಂತೆ ಹಲವು ಹೊಸ ಸಿನಿಮಾ, ಸರಣಿಗಳು ಜೀ5ನಲ್ಲಿ ಬಿಡುಗಡೆಯಾಗಲಿವೆ. ಈ ವರ್ಷ ಜೀ5 ಒಟಿಟಿ ಧಮಾಕ ಎಬ್ಬಿಸಲು ರೆಡಿ ಆಗಿದೆ.

ಜೀ5 ಕಡೆಯಿಂದ ಗುಡ್ ನ್ಯೂಸ್; ಕನ್ನಡ ಸೇರಿ 7 ಭಾಷೆಯಲ್ಲಿ ವೆಬ್ ಸಿರೀಸ್, ಸಿನಿಮಾ ಘೋಷಣೆ
Zee 5
ರಾಜೇಶ್ ದುಗ್ಗುಮನೆ
|

Updated on: Jul 20, 2026 | 12:15 PM

Share

ಮುಖ್ಯಾಂಶಗಳು

  • ಕನ್ನಡದ ಒಟಿಟಿ ವೀಕ್ಷಕರಿಗೆ ಜೀ5 ಬಂಪರ್ ಗಿಫ್ಟ್
  • ಏಳು ಭಾಷೆಗಳಲ್ಲಿ ಜೀ5 ಹೊಸ ಸ್ಲೇಟ್ ಅನಾವರಣ
  • ಪ್ರಾದೇಶಿಕ ಕಥೆಗಳಿಗೆ ಜೀ5 ಮೊದಲ ಆದ್ಯತೆ

ಭಾರತದ ಪ್ರಮುಖ ಒಟಿಟಿ ಸಂಸ್ಥೆಯಾದ ಜೀ5 ಸಿನಿಪ್ರೇಮಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಪ್ರಾದೇಶಿಕ ಕಥೆಗಳಿಗೆ ಮೊದಲ ಆದ್ಯತೆ ನೀಡಿರುವ ಜೀ5 (Zee5), ಏಳು ಭಾಷೆಗಳಲ್ಲಿ ತನ್ನ ಹೊಸ ಸಿನಿಮಾಗಳು ಹಾಗೂ ವೆಬ್ ಸರಣಿಗಳ ಹೆಸರನ್ನು ಅನಾವರಣಗೊಳಿಸಿದೆ. ಒಂದೇ ವೇದಿಕೆಯಡಿಯಲ್ಲಿ ಸಿನಿಮಾ, ವೆಬ್ ಸರಣಿ, ಲೈವ್ ಸ್ಪೋರ್ಟ್ಸ್, ಆನಿಮೇಷನ್ ಹಾಗೂ ಎಐ ತಂತ್ರಜ್ಞಾನ ಆಧಾರಿತ ಕಥೆಗಳನ್ನು ಪರಿಚಯಿಸಲು ಈ ಒಟಿಟಿ ಮುಂದಾಗಿದೆ.

ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು, ಮಲಯಾಳಂ, ಮರಾಠಿ ಮತ್ತು ಬಂಗಾಳಿ ಭಾಷೆಗಳ ಪ್ರಮುಖ ನಿರ್ಮಾಣ ಸಂಸ್ಥೆಗಳೊಂದಿಗೆ ಜೀ5 ಕೈಜೋಡಿಸಿದೆ. ಈ ಬಗ್ಗೆ ಜೀ5 ಮುಖ್ಯ ಕಂಟೆಂಟ್ ಅಧಿಕಾರಿ ರಾಘವೇಂದ್ರ ಹುಣ್ಸೂರ್ ಮಾತನಾಡಿ, ‘ವೀಕ್ಷಕರ ಬದಲಾಗುತ್ತಿರುವ ಅಗತ್ಯಗಳಿಗೆ ತಕ್ಕಂತೆ ಅರ್ಥಪೂರ್ಣ ಹಾಗೂ ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದಿದ್ದಾರೆ.

ಕನ್ನಡದಲ್ಲಿ ಬಿಡುಗಡೆಯಾಗಲಿರುವ ಪ್ರಮುಖ ಚಿತ್ರ, ಸರಣಿಗಳು:

ಕನ್ನಡ ವೀಕ್ಷಕರಿಗೆ ಜೀ5 ಈ ಬಾರಿ ವಿಶೇಷ ಉಡುಗೊರೆ ನೀಡಿದೆ. ಸ್ಯಾಂಡಲ್‌ವುಡ್‌ನ ಪ್ರಸಿದ್ಧ ನಿರ್ಮಾಣ ಸಂಸ್ಥೆಗಳಾದ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಬಹಾವಾ ಎಂಟರ್ಟೈನ್ಮೆಂಟ್ ಜೊತೆ ಜೀ5 ಒಪ್ಪಂದ ಮಾಡಿಕೊಂಡಿದೆ. ರಾಜ್ ಬಿ. ಶೆಟ್ಟಿ ಹಾಗೂ ಪ್ರಜ್ವಲ್ ದೇವರಾಜ್ ನಟನೆಯ ಬಹುನಿರೀಕ್ಷಿತ ‘ಕರಾವಳಿ’ ಸಿನಿಮಾ ಥಿಯೇಟರ್​ನಲ್ಲಿ ಪ್ರದರ್ಶನ ಕಂಡ ಬಳಿಕ ಜೀ5 ವೇದಿಕೆಗೆ ಬರಲಿದೆ. ಜನಪ್ರಿಯ ಸರಣಿ ‘ಅಯ್ಯನ ಮನೆ’ ಹೊಸ ಸೀಸನ್ ಮೂಲಕ ವೀಕ್ಷಕರನ್ನು ರಂಜಿಸಲಿದೆ.

ಹಿಂದಿ ಸಿನಿಮಾ, ಸರಣಿ ವಿವರ

ಹಿಂದಿಯಲ್ಲಿ ಜಿಯೋ ಸ್ಟುಡಿಯೋಸ್, ಮ್ಯಾಡಾಕ್ ಫಿಲ್ಮ್ಸ್ ಸೇರಿದಂತೆ ದೊಡ್ಡ ಬ್ಯಾನರ್‌ಗಳ ಜೊತೆ ಜೀ5 ಒಪ್ಪಂದ ಮಾಡಿಕೊಂಡಿದೆ. ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಜೀವನ ಆಧಾರಿತ ‘ಕಾಂಬ್ಳಿ’ ಸರಣಿ, ದಿ ಸ್ಕ್ಯಾಮ್: ಲೀಕ್ಡ್, ಕಾಫಿ ಕಿಂಗ್, ಜೀನಾ ಇಸಿ ಕಾ ನಾಮ್ ಹೈ 2.0 (ಆರ್. ಮಾಧವನ್ ನಟನೆ) ಹಾಗೂ ಮೋಹಿತ್ ರೈನಾ ನಟನೆಯ ರಂಗಬಾಜ್ ಸೀಸನ್ 4 ಬಿಡುಗಡೆಯಾಗಲಿವೆ.

ಸಿನಿಮಾಗಳು: ವರುಣ್ ಧವನ್ ಮತ್ತು ಪೂಜಾ ಹೆಗ್ಡೆ ನಟನೆಯ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’, ಬಾಬಿ ಡಿಯೋಲ್ ನಟನೆಯ ‘ಬಂದರ್’ ಹಾಗೂ ಕಂಗನಾ ರಣಾವತ್ ಚಿತ್ರಗಳು ಜೀ5ನಲ್ಲಿ ರಿಲೀಸ್ ಆಗಲಿವೆ. ಇನ್ನು ವಾಣಿ ಕಪೂರ್, ಅರ್ಷದ್ ವಾರ್ಸಿ ನಟನೆಯ ‘ಘಮಸಾನ್’ ಮತ್ತು ಜಿತೇಂದ್ರ ಕುಮಾರ್ ನಟನೆಯ ‘ಡಾಲಿಂಬ್’ ಚಿತ್ರಗಳು ಪ್ರಮುಖ ಆಕರ್ಷಣೆಯಾಗಿವೆ.

ದಕ್ಷಿಣ ಭಾರತದ ಇತರ ಭಾಷೆಗಳ ಧಮಾಕಾ:

ತೆಲುಗು: ನಿವೇತಾ ಥಾಮಸ್ ಅವರ ‘ಶ್ರೀಮತಿ’, ಶ್ರೀಕಾಂತ್ ನಟನೆಯ ‘ಆಬ್ಜೆಕ್ಷನ್ ಮೈಲಾರ್ಡ್’, ವೆಂಕಿ ಅನಿಲ್ 5, NBK111 ಮತ್ತು ವೃಷಕರ್ಮ ಚಿತ್ರಗಳು ಜೀ 5 ಮೂಲಕ ಪ್ರಸಾರ ಕಾಣಲಿವೆ.

ತಮಿಳು: ನಯನತಾರಾ ಮತ್ತು ಕವಿನ್ ನಟನೆಯ ‘ಹಾಯ್!’, ಬಹುನಿರೀಕ್ಷಿತ ‘ಡಿಮೋಂಟೆ ಕಾಲೋನಿ 3’ ಮತ್ತು ‘ರಾವಡಿ’ ಚಿತ್ರಗಳು ಬರಲಿವೆ. ಸರಣಿಗಳಲ್ಲಿ ‘ಕೂಸ್ ಮುನಿಸಾಮಿ ವೀರಪ್ಪನ್’ ಹೊಸ ಸೀಸನ್ ಹಾಗೂ ‘ಥೀ ಕುರಲ್’ ಹೆಸರಿನ ರಾಪ್ ಬ್ಯಾಟಲ್ ಶೋ ಗಮನ ಸೆಳೆಯಲಿವೆ.

ಇದನ್ನೂ ಓದಿ: ಜೀ5ನಲ್ಲಿ ಪ್ರಸಾರ ಕಾಣಲಿದೆ ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾ; ಇಲ್ಲಿದೆ ಮಾಹಿತಿ

ಮಲಯಾಳಂ: ಈ ವರ್ಷದ ಸೂಪರ್ ಹಿಟ್ ಚಿತ್ರ ‘ಬಾಲನ್ ದಿ ಬಾಯ್’, ‘ಎ ಕ್ವೀನ್’, ‘ಮಲಬಾರ್ ಕಪ್’ ಮತ್ತು ಮಲಯಾಳಂನ ಮೊದಲ ಸ್ವತಂತ್ರ ರಾಪ್ ಬ್ಯಾಟಲ್ ಶೋ ‘ಕೇರಳ ಅಂಡರ್‌ಗ್ರೌಂಡ್’ ಜೀ5ನಲ್ಲಿ ಪ್ರಸಾರವಾಗಲಿವೆ.

ಇವುಗಳ ಜೊತೆಗೆ ಮರಾಠಿಯ ಸೂಪರ್ ಹಿಟ್ ‘ತುಂಬಾಡ್ಚಿ ಮಂಜುಳಾ’ (ಸು ಫ್ರಮ್ ಸೋ ರಿಮೇಕ್) ಮತ್ತು ಬಂಗಾಳಿ ಭಾಷೆಯ ಜನಪ್ರಿಯ ಸರಣಿ ‘ಲಾಲ್‌ಬಜಾರ್’ ಹೊಸ ಸೀಸನ್‌ಗಳು ಕೂಡ ಜೀ5ನಲ್ಲಿ ಅಬ್ಬರಿಸಲು ಸಜ್ಜಾಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ