ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ಬಗ್ಗೆ ಪವನ್ ಕಲ್ಯಾಣ್ ಮಾತು

Pawan Kalyan: ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ಬಗ್ಗೆ ನಟ, ರಾಜಕಾರಣಿ ಪವನ್ ಕಲ್ಯಾಣ್ ಮಾತನಾಡಿದ್ದಾರೆ. ಆರ್ಯನ್ ಖಾನ್ ಬಂಧನವಾದಾಗ, ಆರ್ಯನ್​ಗೆ ಪವನ್ ಕಲ್ಯಾಣ್ ಬೆಂಬಲ ವ್ಯಕ್ತಪಡಿಸಿದ್ದರು.

ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ಬಗ್ಗೆ ಪವನ್ ಕಲ್ಯಾಣ್ ಮಾತು
ಆರ್ಯನ್ ಖಾನ್-ಶಾರುಖ್ ಖಾನ್
Follow us
|

Updated on: Sep 12, 2023 | 3:15 PM

ಶಾರುಖ್ ಖಾನ್ (Shah Rukh Khan) ‘ಜವಾನ್’ ಸಿನಿಮಾ ಗೆಲುವಿನ ಖುಷಿಯಲ್ಲಿದ್ದಾರೆ. ಆದರೆ ಇದೇ ಸಿನಿಮಾದ ಚಿತ್ರೀಕರಣದ ಸಮಯದಲ್ಲಿದ್ದಾಗ ಆದ ಘಟನೆ ಅವರಿಗೆ ಅತ್ಯಂತ ನೋವು, ಬೇಸರ, ಹತಾಶೆ ತಂದಿತ್ತು. ಅದುವೆ ಅವರ ಪುತ್ರ ಆರ್ಯನ್ ಖಾನ್ (Aryan Khan) ಬಂಧನ. ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಅನ್ನು ಎನ್​ಸಿಬಿ ಬಂಧಿಸಿತ್ತು, ಬರೋಬ್ಬರಿ ಒಂದು ತಿಂಗಳು ಜೈಲಿನಲ್ಲಿ ಕಾಲ ಕಳೆದ ಆರ್ಯನ್ ಆ ನಂತರ ಜಾಮೀನಿನ ಮೇಲೆ ಹೊರಬಂದರು. ಬಳಿಕ ಆತ ನಿರಪರಾಧಿಯೆಂದು ನ್ಯಾಯಾಲಯ ತೀರ್ಪು ನೀಡಿತು. ತನಿಖೆ ಮಾಡಿದ ಸಂಸ್ಥೆಯೂ ಸಹ ಚಾರ್ಜ್​ಶೀಟ್​ನಿಂದ ಆರ್ಯನ್ ಹೆಸರು ಕೈಬಿಟ್ಟಿತು.

ಇದೀಗ ತೆಲುಗಿನ ಜನಪ್ರಿಯ ನಟ, ರಾಜಕಾರಣಿ ಪವನ್ ಕಲ್ಯಾಣ್, ಆರ್ಯನ್ ಖಾನ್ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ”ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದಾಗ ನಾನು ಖಂಡಿಸಿದ್ದೆ. ಅದು ಹೇಗೆ ನೀವು ಡ್ರಗ್ಸ್ ಪ್ರಕರಣದ ಆರೋಪಿಯ ಬೆಂಬಲ ಮಾಡುತ್ತೀರಿ ಎಂದು ನನ್ನನ್ನು ಕೇಳಿದರು. ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ನೀವು ಹೀಗೆ ಮಾತನಾಡಿದರೆ ಬಿಜೆಪಿಯವರಿಗೆ ಇಷ್ಟವಾಗಲ್ಲ ಎಂದರು ಆದರೆ ನಾನು ಸತ್ಯ ಹೇಳಿದೆ. ಸತ್ಯವನ್ನಷ್ಟೆ ಹೇಳಿದ್ದೆ” ಎಂದಿದ್ದಾರೆ ಪವನ್ ಕಲ್ಯಾಣ್.

”ಶಾರುಖ್ ಖಾನ್ ಮಗ ಒಂದು ಕಡೆ ಇದ್ದರೆ, ಅವನಿಂದ ಸ್ವಲ್ಪ ದೂರದಲ್ಲಿ ಇರುವ ಇನ್ನೊಬ್ಬ ವ್ಯಕ್ತಿಯ ಬಳಿಕ 3-4 ಗ್ರಾಂ ಡ್ರಗ್ಸ್ ಇದೆ ಎಂದು ಆರೋಪ ಮಾಡಿ ಆರ್ಯನ್ ಅನ್ನು ಬಂಧಿಸಿದರು. ಕೊನೆಗೆ ಏನು ಮಾಡಿದರು, ಆರ್ಯನ್ ಖಾನ್ ನಿರ್ದೋಷಿ ಎಂದು ಹೊರಗೆ ಕಳಿಸಿದರು. ಆದರೆ ನೊಂದಿದ್ದು ಯಾರು, ಪಾಪ ಆ ಹುಡುಗ ಒಂದು ತಿಂಗಳು ಜೈಲಿನಲ್ಲಿ ಇದ್ದನಲ್ಲ” ಎಂದು ಸಿಂಪತಿ ವ್ಯಕ್ತಪಡಿಸಿದರು ಪವನ್ ಕಲ್ಯಾಣ್.

ಇದನ್ನೂ ಓದಿ:ಪವನ್ ಕಲ್ಯಾಣ್ ಹೈಡ್ರಾಮಾ, ಅರ್ಧರಾತ್ರಿಯಲ್ಲಿ ರಸ್ತೆ ಮೇಲೆ ಮಲಗಿದ ಪವನ್ ಅನ್ನು ಹೊತ್ತೊಯ್ದ ಪೊಲೀಸರು

”ಅದೇ ಸಮಯದಲ್ಲಿ ಭಾರತದ ಒಂದು ದೊಡ್ಡ ಬಂದರಿನಲ್ಲಿ ಭಾರತದಲ್ಲಿ ಹಿಂದೆಂದೂ ಸಿಗದಷ್ಟು ದೊಡ್ಡ ಪ್ರಮಾಣದಲ್ಲಿ ಮಾದಕ ವಸ್ತು ಕೊಕೇನ್ ಸಿಕ್ಕಿತ್ತು. ಆ ಬಗ್ಗೆ ಯಾರಾದರೂ ಮಾತನಾಡಿದರಾ? ಮಾಧ್ಯಮಗಳಲ್ಲಿ ವರದಿಯಾಯ್ತಾ? ನಮ್ಮ ಆಂಧ್ರ ಪ್ರದೇಶ ಗಾಂಜಾಕ್ಕೆ ರಹದಾರಿ ಆಗಿಬಿಟ್ಟಿದೆ ಆದರೆ ಈ ಬಗ್ಗೆ ಯಾರೂ ಸಹ ಮಾತನಾಡುವುದಿಲ್ಲ. ಆದರೆ ಶಾರುಖ್ ಖಾನ್ ಮಗನನ್ನು ಇಟ್ಟುಕೊಂಡು ಎಲ್ಲರೂ ಮಾತನಾಡಿದರು, ಟೀಕೆಗಳನ್ನು ಮಾಡಿದರು. ಆದರೆ ಕೊನೆಗೆ ಆತ ನಿರಪರಾಧಿ ಎಂದಾಯ್ತು” ಎಂದಿದ್ದಾರೆ ಪವನ್ ಕಲ್ಯಾಣ್.

ಎರಡು ದಿನದ ಹಿಂದಷ್ಟೆ ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಭ್ರಷ್ಟಾಚಾರ ಆರೋಪದಲ್ಲಿ ಸಿಐಡಿ ಬಂಧಿಸಿದೆ. ಬಂಧನವನ್ನು ತೀವ್ರವಾಗಿ ಖಂಡಿಸಿರುವ ಪವನ್ ಕಲ್ಯಾಣ್, ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾಗಲು ಮೊನ್ನೆ ಯತ್ನಿಸಿದ್ದರು. ಆದರೆ ಪೊಲೀಸರು ಪವನ್ ಅವರನ್ನು ಅಡ್ಡಗಟ್ಟಿದರು. ಆಗ ಪವನ್, ಹೈವೇ ಮೇಲೆಯೇ ಮಲಗಿ ಪ್ರತಿಭಟನೆ ನಡೆಸಿದ್ದರು. ಅಂತಿಮವಾಗಿ ಪವನ್ ಅವರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದ್ದರು. ಚಂದ್ರಬಾಬು ನಾಯ್ಡು ಬಂಧನದ ಕುರಿತಾಗಿ ಮಾತನಾಡಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಗ್ಗೆ ಪವನ್ ಕಲ್ಯಾಣ್ ಮೇಲಿನಂತೆ ಮಾತನಾಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ