AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಕಾಲದಲ್ಲಿ ಹೀರೋಯಿನ್​ಗಳು ವರ್ಜಿನ್​ ಆಗಿರಬೇಕಿತ್ತು; ಮಗಳ ಪರ್ಸನಲ್​ ಲೈಫ್​ ಕೆದಕಿದವರಿಗೆ ನಟಿಯ ಉತ್ತರ

ಬಾಲಾಸಾಹೇಬ್​ ಠಾಕ್ರೆ ಮೊಮ್ಮೊಗ ಐಶ್ವರಿ ಹಾಗೂ ಅಲಾಯಾ ರಿಲೇಶನ್​ನಲ್ಲಿದ್ದಾರೆ ಎನ್ನಲಾಗಿದೆ. ಆದರೆ, ನಮ್ಮಿಬ್ಬರ ನಡುವೆ ಇರೋದು ಕೇವಲ ಫ್ರೆಂಡ್​ಶಿಪ್​ ಎಂದು ಅಲಾಯ ಹೇಳಿಕೊಂಡಿದ್ದರು.

ನಮ್ಮ ಕಾಲದಲ್ಲಿ ಹೀರೋಯಿನ್​ಗಳು ವರ್ಜಿನ್​ ಆಗಿರಬೇಕಿತ್ತು; ಮಗಳ ಪರ್ಸನಲ್​ ಲೈಫ್​ ಕೆದಕಿದವರಿಗೆ ನಟಿಯ ಉತ್ತರ
ಪೂಜಾ ಹಾಗೂ ಆಲಯ
ರಾಜೇಶ್ ದುಗ್ಗುಮನೆ
|

Updated on: May 09, 2021 | 4:26 PM

Share

ಚಿತ್ರರಂಗಕ್ಕೆ ಕಾಲಿಟ್ಟ ನಂತರದಲ್ಲಿ ನಟ-ನಟಿಯರ ಬಗ್ಗೆ ಸಾಕಷ್ಟು ವದಂತಿಗಳು ಹುಟ್ಟಿಕೊಳ್ಳುತ್ತವೆ. ಯಾವುದಾದರೂ ಹೋಟೆಲ್​ನಲ್ಲಿ ಒಟ್ಟಾಗಿ ಡಿನ್ನರ್​ ಮಾಡಿದರೆ, ಶೂಟಿಂಗ್​ನಲ್ಲಿ ನಗುತ್ತಾ ಮಾತನಾಡಿದರೆ, ನಟನ ಪೋಸ್ಟ್​ಗೆ ನಟಿ ಕಮೆಂಟ್​ ಮಾಡಿದರೆ ಹೀಗೆ ವದಂತಿಗಳು ಹೇಗೆ ಹುಟ್ಟಿಕೊಳ್ಳುತ್ತವೆ ಎಂಬುದನ್ನು ಊಹಿಸುವುದು ಕಷ್ಟ. ಈಗ ನಟಿ ಪೂಜಾ ಬೇಡಿ ಮಗಳು ಅಲಾಯಾ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅಷ್ಟೇ ಅಲ್ಲ, ಅವರ ಬಗ್ಗೆ ಸಾಕಷ್ಟು ವದಂತಿಗಳು ಹುಟ್ಟಿಕೊಂಡಿವೆ. ಇದಕ್ಕೆ ಪೂಜಾ ಬೇಡಿ ಖಡಕ್​ ಉತ್ತರ ನೀಡಿದ್ದಾರೆ.

ರಾಜಕೀಯ ಹಿನ್ನೆಲೆ ಹೊಂದಿರುವ ಠಾಕ್ರೆ ಕುಟುಂಬದ ಕುಡಿ ಐಶ್ವರಿ ಠಾಕ್ರೆ ಮತ್ತು ಅಲಾಯಾ ಡೇಟಿಂಗ್​ ನಡೆಸುತ್ತಿದ್ದಾರೆ ಎನ್ನುವ ವದಂತಿ ಜೋರಾಗಿದೆ. ಆದರೆ, ಇದನ್ನು ಈ ವರೆಗೆ ಯಾರೊಬ್ಬರೂ ಅಧಿಕೃತಗೊಳಿಸಿಲ್ಲ. ಇತ್ತೀಚೆಗೆ ಪೂಜಾ ಬೇಡಿ ಮಾಧ್ಯಮವನ್ನು ಎದುರುಗೊಂಡರು. ಈ ವೇಳೆ ಅವರು ಮಗಳನ್ನು ವಹಿಸಿಕೊಂಡು ಮಾತನಾಡಿದ್ದಾರೆ.

ನಮ್ಮ ಕಾಲದಲ್ಲಿ ಪರಿಸ್ಥಿತಿಗಳು ಬೇರೆ ಇದ್ದವು. ನಟಿಗೆ ಬಾಯ್​ಫ್ರೆಂಡ್ ಇರಬಾರದಿತ್ತು. ಅವಳು ವರ್ಜಿನ್​ ಆಗಿರಬೇಕಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ನಟಿಯರಿಗೆ ಮದುವೆ ಆಗಿರಬಾರದಿತ್ತು. ಆದರೆ, ಈಗ ಕಾಲ ಬದಲಾಗಿದೆ. ಪ್ರತಿಯೊಬ್ಬ ಜೀವಿಗೂ ಖಾಸಗಿ ಜೀವನ ತನ್ನಿಷ್ಟದಂತೆ ಬದುಕುವ ಹಕ್ಕಿದೆ ಎಂದು ಹೇಳುವ ಮೂಲಕ ಮಗಳು ಮಾಡುತ್ತಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂಬುದನ್ನು ಪೂಜಾ ಬೇಡಿ ಪರೋಕ್ಷವಾಗಿ ಹೇಳಿದರು.

ಕರೀನಾ ಕಪೂರ್​ಗೆ ಮದುವೆ ಆಗಿದೆ. ಆದಾಗ್ಯೂ ಅವರು ಬೇಡಿಕೆ ಕಳೆದಕೊಂಡಿಲ್ಲ. ಪ್ರೇಕ್ಷಕರ ಮಸ್ಥಿತಿಯಲ್ಲಿ ಬದಲಾವಣೆ ಆಗಿರುವುದರಿಂದ ಇಂಡಸ್ಟ್ರಿಯಲ್ಲಿ ಒಂದು ಬದಲಾವಣೆ ಬಂದಿದೆ. ಸೋಶಿಯಲ್​ ಮೀಡಿಯಾಗೆ ಒಂದು ಥ್ಯಾಂಕ್ಸ್​ ಹೇಳಲೇಬೇಕು ಎಂದಿದ್ದಾರೆ ಪೂಜಾ.

ಬಾಲಾಸಾಹೇಬ್​ ಠಾಕ್ರೆ ಮೊಮ್ಮೊಗ ಐಶ್ವರಿ ಹಾಗೂ ಅಲಾಯಾ ರಿಲೇಶನ್​ನಲ್ಲಿದ್ದಾರೆ ಎನ್ನಲಾಗಿದೆ. ಆದರೆ, ನಮ್ಮಿಬ್ಬರ ನಡುವೆ ಇರೋದು ಕೇವಲ ಫ್ರೆಂಡ್​ಶಿಪ್​ ಎಂದು ಅಲಾಯ ಹೇಳಿಕೊಂಡಿದ್ದರು. ನಮ್ಮಿಬ್ಬರಿಗೆ ಮೊದಲಿನಿಂದಲೂ ಪರಿಯಚ ಇದೆ. ಐಶ್ವರಿ ನನಗೆ ಉತ್ತಮ ಗೆಳೆಯ. ನಾವಿಬ್ಬರೂ ಒಟ್ಟಿಗೇ ನಟನಾ ತರಬೇತಿ ಪಡೆದುಕೊಳ್ಳುತ್ತಿದ್ದೇವೆ ಎಂದು ಅಲಾಯ ಹೇಳಿಕೊಂಡಿದ್ದರು.

ಕೊರೊನಾ ವೈರಸ್ ಎರಡನೇ ಅಲೆ ಹಬ್ಬುತ್ತಿದೆ. ಈ ಸಂದರ್ಭದಲ್ಲಿ ಮನೆಯಲ್ಲೇ ಇರುವಂತೆ ಹಾಗೂ ಸಾರ್ವಜನಿಕವಾಗಿ ಓಡಾಡುವಾಗ ಮಾಸ್ಕ್​​ ಧರಿಸುವಂತೆ ಸರ್ಕಾರ ಕೇಳಿಕೊಳ್ಳುತ್ತಿವೆ. ಆದರೆ, ಅಲಾಯ ಗೋವಾಗೆ ತೆರಳಿ ಫೋಟೋ ಒಂದನ್ನು ಹಾಕಿದ್ದರು. ಇದರಲ್ಲಿ ಅವರು ಮಾಸ್ಕ್​ ಧರಿಸಿರಲಿಲ್ಲ. ಮಾಸ್ಕ್​ ಹಾಕಲೇ ಬೇಕು ಎಂದೇನಿಲ್ಲ ಎನ್ನುವ ಅರ್ಥದಲ್ಲಿ ಪೋಸ್ಟ್ ಹಾಕಿದ್ದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: ಹಾಟ್​ ಡ್ಯಾನ್ಸ್​ ಮೂಲಕ ಪಡ್ಡೆಗಳ ನಿದ್ದೆ ಕೆಡಿಸಿದ ಬಿಗ್​ ಬಾಸ್​ ಸ್ಪರ್ಧಿ ರಶ್ಮಿ

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ