AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊದಲ ದಿನ ‘ರಾಧೆ ಶ್ಯಾಮ್​’ ಕಲೆಕ್ಷನ್​ ಎಷ್ಟು? ನೆಗೆಟಿವ್​ ವಿಮರ್ಶೆ ಸಿಕ್ಕರೂ ಅಬ್ಬಬ್ಬಾ ಇಷ್ಟೊಂದು ಕಮಾಯಿ

Radhe Shyam 1st Day Collection: ಉತ್ತರ ಭಾರತದಲ್ಲೂ ಪ್ರಭಾಸ್ ಅವರಿಗೆ ಫ್ಯಾನ್ಸ್​ ಇದ್ದಾರೆ. ಹಾಗಾಗಿ ಹಿಂದಿಯಲ್ಲಿ ‘ರಾಧೆ ಶ್ಯಾಮ್​’ ಭರ್ಜರಿ ಕಲೆಕ್ಷನ್​ ಮಾಡಲಿದೆ ಅಂತ ಊಹಿಸಲಾಗಿತ್ತು. ಆದರೆ ಹಿಂದಿ ವರ್ಷನ್​ನಿಂದ ಮೊದಲ ದಿನ ಆಗಿರುವುದು 4.5 ಕೋಟಿ ರೂಪಾಯಿ ಮಾತ್ರ.

ಮೊದಲ ದಿನ ‘ರಾಧೆ ಶ್ಯಾಮ್​’ ಕಲೆಕ್ಷನ್​ ಎಷ್ಟು? ನೆಗೆಟಿವ್​ ವಿಮರ್ಶೆ ಸಿಕ್ಕರೂ ಅಬ್ಬಬ್ಬಾ ಇಷ್ಟೊಂದು ಕಮಾಯಿ
ರಾಧೆ ಶ್ಯಾಮ್
TV9 Web
| Edited By: |

Updated on: Mar 12, 2022 | 2:06 PM

Share

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದ್ದ ‘ರಾಧೆ ಶ್ಯಾಮ್​’ ಚಿತ್ರ (Radhe Shyam Movie) ಶುಕ್ರವಾರ (ಮಾ.11) ತೆರೆ ಕಂಡಿತು. ರಾಧಾಕೃಷ್ಣ ಕುಮಾರ್​ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಪ್ರಭಾಸ್​ ಮತ್ತು ಪೂಜಾ ಹೆಗ್ಡೆ ಜೋಡಿಯಾಗಿ ಅಭಿನಯಿಸಿದ್ದಾರೆ. ಹಲವು ಕಾರಣಗಳಿಂದಾಗಿ ಪ್ರಭಾಸ್ (Prabhas)​ ಅವರ ವೃತ್ತಿಜೀವನದಲ್ಲಿ ಈ ಸಿನಿಮಾ ಡಿಫರೆಂಟ್​ ಎನಿಸಿಕೊಂಡಿದೆ. ನೂರಾರೂ ಕೋಟಿ ರೂಪಾಯಿ ಬಂಡವಾಳ ಹಾಕಿ ‘ರಾಧೆ ಶ್ಯಾಮ್​’ ಸಿನಿಮಾ ನಿರ್ಮಾಣ ಮಾಡಲಾಗಿದೆ. ಹಾಗಾಗಿ ನಿರ್ಮಾಪಕರಿಗೆ ಈ ಚಿತ್ರದಿಂದ ಲಾಭವಾಗಲು ದೊಡ್ಡ ಮೊತ್ತದ ಆದಾಯ ಬರಬೇಕು. ಮೊದಲ ದಿನವೇ ‘ರಾಧೆ ಶ್ಯಾಮ್​’ ಚಿತ್ರಕ್ಕೆ ಭರ್ಜರಿ ಕಮಾಯಿ (Radhe Shyam Box Office Collection) ಆಗಿದೆ. ತೆಲುಗು ಪ್ರೇಕ್ಷಕರು ಪ್ರಭಾಸ್​ ಸಿನಿಮಾಗೆ ಮಸ್ತ್​ ಓಪನಿಂಗ್​ ನೀಡಿದ್ದಾರೆ. ಬಹುತೇಕ ಕಡೆಗಳಲ್ಲಿ ಈ ಚಿತ್ರ ಹೌಸ್​ಫುಲ್​ ಪ್ರದರ್ಶನ ಕಂಡಿದೆ. ಅದರ ಪರಿಣಾಮವಾಗಿ ಗಲ್ಲಾಪೆಟ್ಟಿಗೆಯಲ್ಲಿ ‘ರಾಧೆ ಶ್ಯಾಮ್​’ ಕಮಾಲ್​ ಮಾಡಿದೆ. ವಿದೇಶ ಗಳಿಕೆಯೂ ಸೇರಿ ಮೊದಲ ದಿನವೇ ಬರೋಬ್ಬರಿ 48 ಕೋಟಿ ರೂಪಾಯಿ ಗಳಿಸಿದೆ ಎಂದು ವರದಿ ಆಗಿದೆ. ಇದು ಪ್ರಭಾಸ್​ ಅಭಿಮಾನಿಗಳ ಸಂತಸಕ್ಕೆ ಕಾರಣ ಆಗಿದೆ.

ತೆಲುಗಿನಲ್ಲಿ ಸಿದ್ಧವಾದ ‘ರಾಧೆ ಶ್ಯಾಮ್​’ ಸಿನಿಮಾ ಇನ್ನಿತರ ಭಾಷೆಗಳಿಗೂ ಡಬ್​ ಆಗಿದೆ. ಕನ್ನಡ, ಹಿಂದಿ, ಮಲಯಾಳಂ ಹಾಗೂ ತೆಲುಗಿನಲ್ಲೂ ಈ ಚಿತ್ರ ತೆರೆಕಂಡಿದೆ. ಗಳಿಕೆ ಆಗಿರುವ 48 ಕೋಟಿ ರೂಪಾಯಿಗಳಲ್ಲಿ ಅತಿ ಹೆಚ್ಚು ಆದಾಯ ಹರಿದು ಬಂದಿರುವುದು ತೆಲುಗು ವರ್ಷನ್​ನಿಂದಲೇ. ಪ್ರಭಾಸ್​ ಅವರಿಗೆ ಪ್ಯಾನ್​ ಇಂಡಿಯಾ ಸ್ಟಾರ್​ ಎಂಬ ಇಮೇಜ್​ ಇದೆ. ಆ ಕಾರಣದಿಂದ ಉತ್ತರ ಭಾರತದಲ್ಲಿ ಅವರ ಸಿನಿಮಾಗೆ ಡಿಮ್ಯಾಂಡ್​ ಇದೆ. ‘ಬಾಹುಬಲಿ’ ರೀತಿ ‘ರಾಧೆ ಶ್ಯಾಮ್​’ ಕೂಡ ಭರ್ಜರಿ ಕಲೆಕ್ಷನ್​ ಮಾಡಲಿದೆ ಅಂತ ಊಹಿಸಲಾಗಿತ್ತು. ಆದರೆ ಹಿಂದಿ ಪ್ರೇಕ್ಷಕರು ಮೊದಲ ದಿನ ಈ ಸಿನಿಮಾ ಬಗ್ಗೆ ಹೆಚ್ಚು ಆಸಕ್ತಿ ತೋರಿಸಿಲ್ಲ. ಹಿಂದಿ ವರ್ಷನ್​ನಿಂದ ಕೇವಲ ನಾಲ್ಕೂವರೆ ಕೋಟಿ ರೂ. ಮಾತ್ರ ಗಳಿಸಿದೆ.

ಮುಂದಿನ ದಿನಗಳಲ್ಲಿ ‘ರಾಧೆ ಶ್ಯಾಮ್​’ ಸಿನಿಮಾ ಯಾವ ರೀತಿ ಕಲೆಕ್ಷನ್​ ಮಾಡಲಿದೆ ಎಂಬ ಕೌತುಕ ನಿರ್ಮಾಣ ಆಗಿದೆ. ಆದರೆ ನಿರೀಕ್ಷಿತ ರೀತಿಯಲ್ಲಿ ಈ ಸಿನಿಮಾ ಮೂಡಿಬಂದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಬಹುತೇಕ ಜನರು ನೆಗೆಟಿವ್​ ವಿಮರ್ಶೆ ಪ್ರಕಟಿಸಿದ್ದಾರೆ. ಇದು ಸಿನಿಮಾದ ಕಲೆಕ್ಷನ್​ಗೆ ಹೊಡೆತ ಕೊಡಬಹುದು. ಮೊದಲ ದಿನ 48 ಕೋಟಿ ರೂಪಾಯಿ ಗಳಿಸಿದ್ದರೂ ಕೂಡ ಮುಂದಿನ ದಿನಗಳಲ್ಲಿ ಇಳಿಮುಖ ಆಗಬಹುದು. ಭಾನುವಾರ (ಮಾ.12) ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಬಹುದು. ಆದರೆ ಸೋಮವಾರ ಈ ಸಿನಿಮಾದ ಅಸಲಿ ಭವಿಷ್ಯ ನಿರ್ಧಾರ ಆಗಲಿದೆ.

ಈ ಸಿನಿಮಾಗೆ ನೆಗೆಟಿವ್​ ವಿಮರ್ಶೆ ಬರಲು ಅನೇಕ ಕಾರಣಗಳಿವೆ. ಸಾಮಾನ್ಯವಾಗಿ ಪ್ರಭಾಸ್​ ಸಿನಿಮಾದಲ್ಲಿ ಅಭಿಮಾನಿಗಳು ಫೈಟಿಂಗ್​ ದೃಶ್ಯಗಳನ್ನು ಬಯಸುತ್ತಾರೆ. ‘ರಾಧೆ ಶ್ಯಾಮ್​’ ಸಿನಿಮಾದಲ್ಲಿ ಅದಕ್ಕೆ ಅವಕಾಶ ಇಲ್ಲ. ಆ್ಯಕ್ಷನ್​ ಅವತಾರವನ್ನು ಬದಿಗಿಟ್ಟು, ಪ್ರಭಾಸ್​ ಅವರು ಸಂಪೂರ್ಣ ಲವರ್​ ಬಾಯ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು, ಈ ಸಿನಿಮಾದ ನಿರೂಪಣೆ ನಿಧಾನಗತಿಯಲ್ಲಿ ಇದೆ. ಹಾಗಾಗಿ ಪ್ರೇಕ್ಷಕರಿಗೆ ಬೋರು ಹೊಡೆಸುತ್ತಿದೆ. ಕಥೆಯಲ್ಲಿ ಲಾಜಿಕ್​ ಮಿಸ್​ ಆಗಿದೆ ಎಂಬಿತ್ಯಾದಿ ನೆಗೆಟಿವ್​ ಕಮೆಂಟ್​ಗಳು ಬಂದಿವೆ.

ಪ್ರಭಾಸ್​ ಅವರಿಗೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸಖತ್​ ಡಿಮ್ಯಾಂಡ್​ ಇದೆ. ‘ಬಾಹುಬಲಿ’ ಸಿನಿಮಾ ಗೆದ್ದ ಬಳಿಕ ಅವರ ಚಾರ್ಮ್​ ಹೆಚ್ಚಿತು. ಆದರೆ ನಂತರ ಬಿಡುಗಡೆಯಾದ ‘ಸಾಹೋ’ ಸಿನಿಮಾ ಹೇಳಿಕೊಳ್ಳುವಷ್ಟು ಯಶಸ್ಸು ಕಾಣಲಿಲ್ಲ. ಈಗ ‘ರಾಧೆ ಶ್ಯಾಮ್​’ ಕೂಡ ಅದೇ ಹಾದಿ ಹಿಡಿದರೆ ಪ್ರಭಾಸ್​ಗೆ ತುಸು ಕಷ್ಟ ಆಗಲಿದೆ.

ಇದನ್ನೂ ಓದಿ:

‘ರಾಧೆ ಶ್ಯಾಮ್’ ವಿಮರ್ಶೆ​: ಭವಿಷ್ಯ ಹೇಳುವ ವ್ಯಕ್ತಿಯ ಕೈಯಲ್ಲಿ ಇಲ್ಲ ಮನರಂಜನೆಯ ರೇಖೆ

ಸೂಪರ್ ಹಿಟ್ ಚಿತ್ರದ ಕಥೆ ಕದ್ದರಾ ‘ರಾಧೆ ಶ್ಯಾಮ್’ ಸಿನಿಮಾ ನಿರ್ದೇಶಕರು? ಶುರುವಾಯ್ತು ಚರ್ಚೆ

Follow Us
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!