Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಚ್ಚು ಜಾಹೀರಾತು ತೋರಿಸಿದ್ದಕ್ಕೆ ದಂಡ ಕಟ್ಟಿದ ಪಿವಿಆರ್

PVR-Inox Multiplex: ಪಿವಿಆರ್-ಐನಾಕ್ಸ್ ಇನ್ನಿತರೆ ಮಲ್ಟಿಪ್ಲೆಕ್ಸ್​ಗಳಲ್ಲಿ ಸಿನಿಮಾ ನೋಡಲು ಹೋದ ಪ್ರೇಕ್ಷಕರಿಗೆ ಅನಗತ್ಯವಾಗಿ ಜಾಹೀರಾತುಗಳನ್ನು ತೋರಿಸಲಾಗುತ್ತದೆ. ಕೆಲವೊಮ್ಮೆಯಂತೂ ಉದ್ದೇಶಪೂರ್ವಕವಾಗಿ 20-30 ನಿಮಿಷಗಳ ಕಾಲ ಜಾಹೀರಾತು ತೋರಿಸಲಾಗುತ್ತದೆ. ಇದೀಗ ಬೆಂಗಳೂರಿನ ವ್ಯಕ್ತಿಯೊಬ್ಬರು ಇದೇ ಕಾರಣಕ್ಕೆ ಪಿವಿಆರ್-ಐನಾಕ್ಸ್ ಮೇಲೆ ಕೇಸು ದಾಖಲಿಸಿ, ದಂಡ ಕಟ್ಟುವಂತೆ ಮಾಡಿದ್ದಾರೆ.

ಹೆಚ್ಚು ಜಾಹೀರಾತು ತೋರಿಸಿದ್ದಕ್ಕೆ ದಂಡ ಕಟ್ಟಿದ ಪಿವಿಆರ್
Pvr Inox
Follow us
ಮಂಜುನಾಥ ಸಿ.
|

Updated on: Feb 19, 2025 | 10:34 AM

ಪಿವಿಆರ್, ಐನಾಕ್ಸ್ ಇನ್ನಿತರೆ ಮಲ್ಟಿಪ್ಲೆಕ್ಸ್​ಗಳು ಸಿನಿಮಾಗಳ ಜೊತೆಗೆ ಭರಪೂರವಾಗಿ ಜಾಹೀರಾತುಗಳನ್ನು ಪ್ರೇಕ್ಷಕರಿಗೆ ತೋರಿಸುತ್ತವೆ. ಸಿನಿಮಾಗಳಿಂದ ಮಾತ್ರವಲ್ಲದೆ ಜಾಹೀರಾತು ಪ್ರದರ್ಶನದಿಂದ ಅಷ್ಟೆ ಮೊತ್ತದ ಲಾಭವನ್ನು ಈ ಮಲ್ಟಿಪ್ಲೆಕ್ಸ್​ಗಳು ಪಡೆಯುತ್ತವೆ. ಮಲ್ಟಿಪ್ಲೆಕ್ಸ್​ಗಳಲ್ಲಿ ಅಗತ್ಯಕ್ಕಿಂತಲೂ ಹೆಚ್ಚಿನ ಜಾಹೀರಾತು ಪ್ರದರ್ಶಿಸುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ ಆದರೆ ಈ ಕಿರಿಕಿರಿಯಂತೂ ನಿಂತಿಲ್ಲ. ಇದೀಗ ಬೆಂಗಳೂರಿನ ವ್ಯಕ್ತಿಯೊಬ್ಬ ಪಿವಿಆರ್​ನ ವಿರುದ್ಧ ದಾವೆ ಹೂಡಿ ದಂಡ ಕಟ್ಟುವಂತೆ ಮಾಡಿದ್ದಾರೆ.

2024 ರಲ್ಲಿ ಬಿಡುಗಡೆ ಆದ ‘ಸ್ಯಾಮ್ ಬಹದ್ಧೂರ್’ ಸಿನಿಮಾ ನೋಡಲು ಬೆಂಗಳೂರಿನ ಅಭಿಷೇಕ್ ಎಂಆರ್ ಎಂಬುವರು ಬುಕ್​ಮೈ ಶೋನಲ್ಲಿ ಟಿಕೆಟ್ ಬುಕ್ ಮಾಡಿಕೊಂಡು ಪಿವಿಆರ್-ಐನಾಕ್ಸ್​​ (ಈಗ ಎರಡು ಒಂದೇ) ಮಲ್ಟಿಪ್ಲೆಕ್ಸ್​ಗೆ ಹೋಗಿದ್ದರು. ಆದರೆ ಮಲ್ಟಿಪ್ಲೆಕ್ಸ್​ನವರು ಸತತವಾಗಿ ಜಾಹೀರಾತುಗಳನ್ನು ಹಾಕಿ ಬರೋಬ್ಬರಿ 25 ನಿಮಿಷ ತಡವಾಗಿ ಸಿನಿಮಾ ಪ್ರಾರಂಭ ಮಾಡಿದ್ದಾರೆ. ಇದರಿಂದ, ಅಭಿಷೇಕ್​ಗೆ ನಿಗದಿತ ಸಮಯಕ್ಕೆ ಕಚೇರಿಗೆ ವಾಪಸ್ ತೆರಳಲು ಸಾಧ್ಯವಾಗಿಲ್ಲ.

ಟಿಕೆಟ್ ಮೇಲೆ ನಮೂದಾಗಿದ್ದ ಸಿನಿಮಾದ ಶೋ ಸಮಯಕ್ಕೂ ನಿಜವಾಗಿ ಸಿನಿಮಾ ಅನ್ನು ಪ್ರಾರಂಭ ಮಾಡಿದ ಸಮಯಕ್ಕೂ ಭಾರಿ ಅಂತರ ಇದ್ದ ಕಾರಣ ಹಾಗೂ ಅನವಶ್ಯಕವಾಗಿ ಅತಿಯಾಗಿ ಜಾಹೀರಾತು ತೋರಿ ತನ್ನ ಸಮಯ ವ್ಯರ್ಥ ಮಾಡಿದ್ದಕ್ಕಾಗಿ ಅಭಿಷೇಕ್ ಅವರು ಗ್ರಾಹಕರ ವೇದಿಕೆಯಲ್ಲಿ ಕೇಸು ದಾಖಲಿಸಿದ್ದರು, ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕರ ವೇದಿಕೆ ಇದೀಗ ಪಿವಿಆರ್-ಐನಾಕ್ಸ್, ದೂರುದಾರ ಅಭಿಷೇಕ್​ಗೆ 28 ಸಾವಿರ ರೂಪಾಯಿ ದಂಡ ಪಾವತಿಸುವಂತೆ ಆದೇಶಿಸಿದೆ. ಅಲ್ಲದೆ, ಇನ್ನು ಮುಂದೆ ನಿಖರವಾಗಿ ಸಿನಿಮಾ ಶೋ ಪ್ರಾರಂಭ ಆಗುವ ಸಮಯವನ್ನೇ ಟಿಕೆಟ್​ನಲ್ಲಿ ನಮೂದಿಸಬೇಕು, ಜಾಹೀರಾತು ಪ್ರದರ್ಶಿಸುವ ಸಮಯವನ್ನು ನಮೂದಿಸುವಂತೆ ಇಲ್ಲ ಎಂದು ಗ್ರಾಹಕರ ವೇದಿಕೆ ಪಿವಿಆರ್​-ಐನಾಕ್ಸ್​ಗೆ ಸೂಚಿಸಿದೆ.

ಇದನ್ನೂ ಓದಿ:ಸಿನಿಮಾ ಜಾಹೀರಾತು ಕ್ಷೇತ್ರದಲ್ಲಿ ಧೂಳೆಬ್ಬಿಸಲು ಖುಷಿ ಜೊತೆ ಪಿವಿಆರ್-ಐನಾಕ್ಸ್ ಡೀಲ್

ಈ ಹಿಂದೆ ಸಹ ಪಿವಿಆರ್​ ಮೇಲೆ ಇಂಥಹಾ ಪ್ರಕರಣಗಳನ್ನು ದಾಖಲಿಸಲಾಗಿದೆ. ಹೊರಗಡೆಯಿಂದ ತೆಗೆದುಕೊಂಡು ಹೋಗುವ ಆಹಾರ ಮತ್ತು ನೀರಿಗೆ ನಿರ್ಬಂಧ ಹೇರಿರುವ ಬಗ್ಗೆ, ಅತಿಯಾಗಿ ಜಾಹೀರಾತು ಪ್ರದರ್ಶನ ಮಾಡುವ ಬಗ್ಗೆ ಹೀಗೆ ಇನ್ನೂ ಕೆಲವು ಸಾರ್ವಜನಿಕ ಹಿತಾಸಕ್ತಿ ಪ್ರಕರಣಗಳನ್ನು ಪಿವಿಆರ್​ ಮೇಲೆ ಹೂಡಲಾಗಿದೆ. ಆದರೆ ಯಾವುದೂ ಸಹ ಫಲಪ್ರದವಾಗಿಲ್ಲ. ಈಗಲೂ ಸಹ ಬೆಂಗಳೂರು ಸೇರಿದಂತೆ ಕೆಲವು ಮಹಾನಗರಗಳ ಮಲ್ಟಿಪ್ಲೆಕ್ಸ್​ಗಳಲ್ಲಿ ಹೊರಗಿನಿಂದ ತೆಗೆದುಕೊಂಡು ಹೋಗುವ ಆಹಾರ ಮತ್ತು ನೀರು ನಿರ್ಬಂಧಿಸಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು