AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುನೀತ್ ಕಪ್ಪಿದ್ದಾರೆ ಎಂದಾಗ ರಾಜ್​ಕುಮಾರ್ ಪ್ರತಿಕ್ರಿಯೆ ಹೇಗಿತ್ತು? ನಿಜಕ್ಕೂ ಇವರು ಅನೇಕರಿಗೆ ಮಾದರಿ

ರಾಜ್​ಕುಮಾರ್​ಗೆ ಮೂವರು ಗಂಡುಮಕ್ಕಳು. ಪುನೀತ್ ಅವರು ನಮ್ಮೊಂದಿಗೆ ಇಲ್ಲ. ಇದು ಅನೇಕರಿಗೆ ಬೇಸರ ಮೂಡಿಸಿದೆ. ರಾಜ್​ಕುಮಾರ್ ಅವರು ಪುನೀತ್ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು. ಪುನೀತ್ ಅವರು ಕಪ್ಪು ಎಂದು ಕೆಲವರು ಟೀಕಿಸಿದಾಗ ರಾಜ್​ಕುಮಾರ್ ಖಡಕ್ ಆಗಿ ಉತ್ತರ ಕೊಟ್ಟಿದ್ದರು.

ಪುನೀತ್ ಕಪ್ಪಿದ್ದಾರೆ ಎಂದಾಗ ರಾಜ್​ಕುಮಾರ್ ಪ್ರತಿಕ್ರಿಯೆ ಹೇಗಿತ್ತು? ನಿಜಕ್ಕೂ ಇವರು ಅನೇಕರಿಗೆ ಮಾದರಿ
ರಾಜ್​ಕುಮಾರ್-ಪುನೀತ್
 ಶ್ರೀಲಕ್ಷ್ಮೀ ಎಚ್
| Edited By: |

Updated on:Dec 09, 2024 | 8:11 AM

Share

ರಾಜ್​ಕುಮಾರ್ ಅವರು ಸಿನಿಮಾಗಳ ಮೂಲಕ ಅನೇಕ ಆದರ್ಶಗಳನ್ನು ನೀಡಿದ್ದಾರೆ. ಅದೇ ರೀತಿ ಅವರು ನಿಜ ಜೀವನದಲ್ಲೂ ಇದ್ದರು. ಅವರಿಗೆ ಯಾರದ್ದಾದರೂ ಕೆಟ್ಟದು ಬಯಸಿದರೆ ಅವರು ಒಳಿತನ್ನೇ ಬಯಸುತ್ತಿದ್ದರು. ಈ ಕಾರಣಕ್ಕೆ ರಾಜ್​ಕುಮಾರ್ ಅನೇಕರಿಗೆ ಇಷ್ಟ ಆಗುತ್ತಾರೆ. ರಾಜ್​ಕುಮಾರ್ ಅವರು ಪುನೀತ್ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು. ಪುನೀತ್ ಕಪ್ಪಗಿದ್ದಾರೆ ಎಂದು ಹೇಳಿದಾಗ ಅವರು ಕೊಟ್ಟ ಉತ್ತರ ಅನೇಕರಿಗೆ ಮಾದರಿ ಆಗಿತ್ತು.

ರಾಜ್​ಕುಮಾರ್​ಗೆ ಮೂವರು ಗಂಡುಮಕ್ಕಳು. ಶಿವರಾಜ್​ಕುಮಾರ್ ಹಾಗೂ ರಾಘವೇಂದ್ರ ರಾಜ್​ಕುಮಾರ್ ಈಗಲೂ ನಮ್ಮ ಜೊತೆ ಇದ್ದಾರೆ. ಆದರೆ, ಪುನೀತ್ ಅವರು ನಮ್ಮೊಂದಿಗೆ ಇಲ್ಲ. ಇದು ಅನೇಕರಿಗೆ ಬೇಸರ ಮೂಡಿಸಿದೆ. ರಾಜ್​ಕುಮಾರ್ ಅವರು ಪುನೀತ್ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು. ಪುನೀತ್ ಅವರು ಕಪ್ಪು ಎಂದು ಕೆಲವರು ಟೀಕಿಸಿದಾಗ ರಾಜ್​ಕುಮಾರ್ ಖಡಕ್ ಆಗಿ ಉತ್ತರ ಕೊಟ್ಟಿದ್ದರು.

ಪುನೀತ್ ತಾಯಿ ಪಾರ್ವತಮ್ಮ ಅವರು ಈ ಬಗ್ಗೆ ಮಾತನಾಡಿದ್ದರು. ‘ರಾಮ ಕೃಷ್ಣ ಎಲ್ಲ ಕಪ್ಪು. ಅದಕ್ಕೆ ಅವನು ಕಪ್ಪಗೆ ಹುಟ್ಟಿದ್ದಾನೆ. ಅವನು ದೇವರು. ಏನು ಅಂದುಕೋಬೇಡ ಎಂದು ರಾಜ್​ಕುಮಾರ್ ಸಮಾಧಾನ ಮಾಡಿದ್ದರು’ ಎಂಬುದಾಗಿ ಪಾರ್ವತಮ್ಮ ಹೇಳಿದ್ದರು. ‘ಕಪ್ಪು ಕಸ್ತೂರಿ, ಕೆಂಪು ಕಿಸ್ಬಾಯಿ. ನನಗೇನೋ ಮಗನ ಬಣ್ಣ ಸಾಕಷ್ಟು ಇಷ್ಟ ಆಯ್ತು’ ಎಂಬುದು ರಾಜ್​ಕುಮಾರ್ ಮಾತಾಗಿತ್ತು.

ಪುನೀತ್ ರಾಜ್​ಕುಮಾರ್ ಓರ್ವ ಅದ್ಭುತ ನಟ. ಫ್ಯಾಮಿಲಿ ಎಂಟರ್​ಟೇನ್​ಮೆಂಟ್ ಸಿನಿಮಾಗಳನ್ನು ಅವರು ಕೊಡುತ್ತಿದ್ದರು. ಅಷ್ಟೇ ಅಲ್ಲ, ಡ್ಯಾನ್ಸ್​ನಲ್ಲಿ ಅವರು ಎತ್ತಿದ ಕೈ. ಚಿಕ್ಕ ವಯಸ್ಸಿನಲ್ಲೇ ಪುನೀತ್ ನಟನೆಗೆ ಕಾಲಿಟ್ಟರು. ಇದಕ್ಕೆ ಕಾರಣ ಆಗಿದ್ದು ರಾಜ್​ಕುಮಾರ್ ಅವರು. ಪುನೀತ್ ಅವರನ್ನು ಸೆಟ್​ಗೆಲ್ಲ ಕರೆದುಕೊಂಡು ಹೋಗುತ್ತಿದ್ದುದು ಇದೇ ರಾಜ್​ಕುಮಾರ್.

ಇದನ್ನೂ ಓದಿ: ‘ಶಾಖಾಹಾರಿ’ ನಿರ್ದೇಶನಕ ಚಿತ್ರಕ್ಕೆ ಗೀತಾ ಶಿವರಾಜ್​ಕುಮಾರ್ ಬಂಡವಾಳ; ಹೀರೋ ಯಾರು?

ರಾಜ್​ಕುಮಾರ್ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಅನೇಕರಿಗೆ ಮಾದರಿ. ಅವರು ಚಿತ್ರರಂಗದಲ್ಲಿ ಯಾವಾಗಲೂ ಮಿಂಚಿದವರು. ಅವರಿಂದ ಕನ್ನಡ ಚಿತ್ರರಂಗ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಈಗಲೂ ಅವರನ್ನು ನೆನಪಿಸಿಕೊಳ್ಳುವ ಕೆಲಸ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:03 am, Mon, 9 December 24

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್