AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೀಲ್ಸ್ ಚೆಲುವೆಗೆ ಖುಲಾಯಿಸಿದ ಅದೃಷ್ಟ: ವಿಡಿಯೋ ನೋಡಿ ಹೀರೋಯಿನ್ ಮಾಡಿದ ಆರ್​ಜಿವಿ

Sreelakshmi Satheesh: ಮಲಯಾಳಂ ಯುವತಿಯೊಬ್ಬರ ರೀಲ್ಸ್ ನೋಡಿ ಇಂಪ್ರೆಸ್ ಆಗಿರುವ ಜನಪ್ರಿಯ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಆಕೆಯೊಟ್ಟಿಗೆ ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ. ಯಾರು ಆ ಚೆಲುವೆ?

ರೀಲ್ಸ್ ಚೆಲುವೆಗೆ ಖುಲಾಯಿಸಿದ ಅದೃಷ್ಟ: ವಿಡಿಯೋ ನೋಡಿ ಹೀರೋಯಿನ್ ಮಾಡಿದ ಆರ್​ಜಿವಿ
ಶ್ರೀಲಕ್ಷ್ಮಿ ಸತೀಶ್
ಮಂಜುನಾಥ ಸಿ.
|

Updated on: Sep 30, 2023 | 7:37 PM

Share

ಸಾಮಾಜಿಕ ಜಾಲತಾಣದಲ್ಲಿ (Social Media) ಹಲವರು ಹಲವು ಬಗೆಯ ಕಂಟೆಂಟ್​ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಸ್ಯ, ಅಡುಗೆ, ಮೇಕಪ್, ಮಾಹಿತಿ, ಶಿಕ್ಷಣ ಹೀಗೆ ಹಲವು ಬಗೆಯ ವಿಡಿಯೋಗಳು ಈಗ ಫೇಸ್​ ಬುಕ್, ಯೂಟ್ಯೂಬ್, ಇನ್​ಸ್ಟಾಗ್ರಾಂನಲ್ಲಿ ತುಂಬಿವೆ. ಇತ್ತೀಚೆಗೆ ರೀಲ್ಸ್​ಗಳು (Reels) ಬಹಳ ಜನಪ್ರಿಯವಾಗಿದ್ದು, ರೀಲ್ಸ್ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಇದೇ ಉದ್ಯೋಗವೂ ಆಗಿದೆ ಕೆಲವರಿಗೆ. ರೀಲ್ಸ್​ಗಳಿಂದಲೇ ಜನಪ್ರಿಯತೆ ಗಳಿಸಿರುವ ಹಲವರಿದ್ದಾರೆ. ರೀಲ್ಸ್​ ವಿಡಿಯೋದಿಂದಾಗಿಯೇ ಯುವತಿಯೊಬ್ಬರಿಗೆ ಸಿನಿಮಾ ನಟಿಯಾಗುವ ಅವಕಾಶ ಒದಗಿ ಬಂದಿದೆ.

ಹೌದು, ಹಲವು ಯುವತಿಯರು ತಮ್ಮ ಅಂದ ಪ್ರದರ್ಶಿಸುವ ರೀಲ್ಸ್​ಗಳನ್ನು ಇನ್​ಸ್ಟಾಗ್ರಾಂ ಇನ್ನಿತರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಅಂತೆಯೇ ಕೇರಳದ ಯುವತಿಯೊಬ್ಬಾಕೆ ಸೀರೆಯುಟ್ಟುಕೊಂರು ಬೇರೆಬೇರೆ ರೀತಿಯ ರೀಲ್ಸ್​ ಗಳನ್ನು ಮಾಡಿ ಹಂಚಿಕೊಳ್ಳುತ್ತಿದ್ದರು. ಯುವತಿಯ ಸೀರೆ ವಿಡಿಯೋ ನೋಡಿದ ಜನಪ್ರಿಯ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇಂಪ್ರೆಸ್ ಆಗಿದ್ದು, ಆ ಯುವತಿಗೆ ತಮ್ಮ ಸಿನಿಮಾದಲ್ಲಿ ನಾಯಕಿಯಾಗಿ ಅವಕಾಶ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸೀರೆಯುಟ್ಟುಕೊಂಡ ಯುವತಿಯ ರೀಲ್ಸ್ ನೋಡಿದ್ದ ನಿರ್ದೇಶಕ ಸೀರೆ ಸುಂದರವಾಗಿರುತ್ತದೆ ಎಂದು ಎಲ್ಲರೂ ಹೇಳುತ್ತಿದ್ದರು ಆದರೆ ನಾನು ನಂಬಿರಲಿಲ್ಲ, ಆದರೆ ಈ ವಿಡಿಯೋ ನೋಡಿದ ಮೇಲೆ ನನ್ನ ಅಭಿಪ್ರಾಯ ಬದಲಾಗಿದೆ. ಈ ಚೆಲುವೆ ಯಾರು? ಯಾರಾದರೂ ಹುಡುಕಿ ಕೊಡಿ, ನಾನು ಈಕೆಯೊಟ್ಟಿಗೆ ‘ಸೀರೆ’ ಹೆಸರಿನ ಸಿನಿಮಾ ಮಾಡಲು ನಿರ್ಧರಿಸಿದ್ದೇನೆ ಎಂದು ರಾಮ್ ಗೋಪಾಲ್ ವರ್ಮಾ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದರು.

ಇದನ್ನೂ ಓದಿ:RGV: ‘ಗರುಡ ಗಮನ ವೃಷಭ ವಾಹನ’ ನೋಡಿ ಫಿದಾ ಆದ ರಾಮ್ ಗೋಪಾಲ್ ವರ್ಮಾ; ನಿರ್ದೇಶಕ ರಾಜ್ ಬಿ ಶೆಟ್ಟಿಗೆ ಹೇಳಿದ್ದೇನು?

ಅದಾದ ಬಳಿಕ ರಾಮ್ ಗೋಪಾಲ್ ವರ್ಮಾ ಮತ್ತೆ ಆ ಯುವತಿಯ ರೀಲ್ಸ್ ಒಂದನ್ನು ಹಂಚಿಕೊಂಡು ಅವರ ಇನ್​ಸ್ಟಾಗ್ರಾಂ ಖಾತೆಯನ್ನು ಮೆನ್ಷನ್ ಮಾಡಿ ನಾನು ಈಕೆಯೊಟ್ಟಿಗೆ ಸಿನಿಮಾ ಮಾಡಲಿದ್ದೇನೆ ಎಂದಿದ್ದರು. ಅಂದಹಾಗೆ ಆ ಸೀರೆ ಚೆಲುವೆ ಹೆಸರು ಶ್ರೀಲಕ್ಷ್ಮಿ ಸತೀಶನ್. ಕೇರಳದ ಈ ಚೆಲುವೆ ಮಾಡೆಲ್ ಆಗಿದ್ದು, ಸೀರೆಯುಟ್ಟುಕೊಂಡು ಹಲವು ಸುಂದರವಾದ ವಿಡಿಯೋಗಳನ್ನು ಮಾಡಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಸೀರೆಯಲ್ಲಿ ಮುದ್ದಾಗಿ ಕಾಣುವ ಜೊತೆಗೆ ಮಾದಕವಾಗಿಯೂ ಶ್ರೀಲಕ್ಷ್ಮಿ ಸತೀಶನ್ ಕಾಣುತ್ತಾರೆ. ರಾಮ್ ಗೋಪಾಲ್ ವರ್ಮಾ ಹೊಗಳಿದ ಬಳಿಕ ಶ್ರೀಲಕ್ಷ್ಮಿಗೆ ಅಚಾನಕ್ಕಾಗಿ ಭಾರಿ ಜನಪ್ರಿಯತೆ ಧಕ್ಕಿದೆ. ರಾಮ್ ಗೋಪಾಲ್ ವರ್ಮಾ ಪೋಸ್ಟ್ ಹಾಕುವ ಮುನ್ನ ಶ್ರೀಲಕ್ಷ್ಮಿಯ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹೆಚ್ಚು ಫಾಲೋವರ್​ಗಳು ಇರಲಿಲ್ಲ, ವರ್ಮಾ ಪೋಸ್ಟ್​ನ ಬಳಿಕ ಒಮ್ಮೆಲೆ ಸುಮಾರು 70 ಸಾವಿರ ಮಂದಿ ಶ್ರೀಲಕ್ಷ್ಮಿಯನ್ನು ಫಾಲೋ ಮಾಡುತ್ತಿದ್ದಾರೆ.

ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಶ್ರೀಲಕ್ಷ್ಮಿ ವರ್ಮಾ ಜೊತೆ ಮಾತನಾಡಿದ್ದೇನೆ, ಸಿನಿಮಾ ಮಾಡುವುದಾಗಿ ಹೇಳಿದ್ದಾರೆ ಎಂದು ಸಹ ಹೇಳಿದ್ದಾರೆ. ಆದರೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲವಂತೆ. ಅಂದಹಾಗೆ ರಾಮ್ ಗೋಪಾಲ್ ವರ್ಮಾಗೆ ಇವೆಲ್ಲ ಹೊಸದೇನಲ್ಲ. ಈ ಹಿಂದೆ ಅಪ್ಸರಾ ರಾಣಿ ಹೆಸರಿನ ಚೆಲುವೆಯನ್ನು ಜನಪ್ರಿಯಗೊಳಿಸಿದ್ದರು. ಆಕೆ ಈಗ ತೆಲುಗಿನ ಜನಪ್ರಿಯ ಐಟಂ ಸಾಂಗ್ ನಟಿಯಾಗಿದ್ದಾರೆ. ಇದೇ ರೀತಿ ನಿರೂಪಕಿ ಒಬ್ಬರನ್ನು ಫೇಮಸ್ ಮಾಡಿದ್ದರು ವರ್ಮಾ. ಆ ನಿರೂಪಕಿ ಆ ಬಳಿಕ ಬಿಗ್​ಬಾಸ್​ಗೆ ಹೋಗಿ ಬಂದರು. ನಟಿಯೂ ಆಗಿಬಿಟ್ಟರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್