AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Samantha: ಪ್ರತಿದಿನವೂ ಭಯದಲ್ಲಿಯೇ ಬದುಕುತ್ತಿದ್ದೇನೆ, ಆದರೆ…: ನಟಿ ಸಮಂತಾ

ನಟಿ ಸಮಂತಾ ಕಳೆದ ಮೂರು ವರ್ಷಗಳಲ್ಲಿ ಬಹಳ ಏರಿಳಿತಗಳನ್ನು ಕಂಡಿದ್ದಾರೆ. ವಿಚ್ಛೇದನ, ನಿಂದನೆ, ಅಪಮಾನ, ಸುಳ್ಳು ಆರೋಪಗಳನ್ನು ಎದುರಿಸಿದ್ದಾರೆ. ತೀವ್ರ ಅನಾರೋಗ್ಯದಿಂದಲೂ ಬಳಲಿ ಮತ್ತೆ ಪುಟಿದೆದ್ದು ಬಂದಿದ್ದಾರೆ. ಆದರೆ ಈಗಲೂ ತಾವು ಪ್ರತಿದಿನವೂ ಭಯದಲ್ಲಿಯೇ ಬದುಕುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

Samantha: ಪ್ರತಿದಿನವೂ ಭಯದಲ್ಲಿಯೇ ಬದುಕುತ್ತಿದ್ದೇನೆ, ಆದರೆ...: ನಟಿ ಸಮಂತಾ
ಸಮಂತಾ
Follow us
ಮಂಜುನಾಥ ಸಿ.
|

Updated on: Mar 29, 2023 | 4:27 PM

ನಟಿ ಸಮಂತಾ (Samantha) ಈಗ ಬಬ್ಲಿ ಗರ್ಲ್ ಅಲ್ಲ, ಗಟ್ಟಿಗಿತ್ತಿ. ಕಳೆದ ಕೆಲ ವರ್ಷಗಳಲ್ಲಿ ಸಾಕಷ್ಟು ಏರಿಳಿತಗಳನ್ನು ಜೀವನದಲ್ಲಿ ಕಂಡಿರುವ ಸಮಂತಾ ತಮ್ಮನ್ನು ತಾವು ಎಲ್ಲ ಪರಿಸ್ಥಿತಿಗಳಿಗೂ ಸಿದ್ಧಗೊಳಿಸಿಕೊಂಡಿದ್ದಾರೆ. ವಿಚ್ಛೇದನ ಅನಾರೋಗ್ಯ, ಮೋಸ, ನಿಂದನೆ, ಅಪಮಾನ ಎಲ್ಲವನ್ನು ಕಳೆದ ಮೂರು ವರ್ಷಗಳಲ್ಲಿ ಕಂಡ ಸಮಂತಾ ಎಲ್ಲವನ್ನೂ ದಿಟ್ಟವಾಗಿ ಎದುರಿಸಿ ನಿಂತಿದ್ದಾರೆ. ಹಲವಾರು ಹೆಣ್ಣುಮಕ್ಕಳಿಗೆ ಸ್ಪೂರ್ತಿಯಾಗಿದ್ದಾರೆ. ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಮಾತನಾಡಿರುವ ನಟಿ ಸಮಂತಾ, ತಾವು ಪ್ರತಿದಿನವೂ ಭಯದಲ್ಲಿಯೇ ಬದುಕುತ್ತಿರುವುದಾಗಿ ಹೇಳಿದ್ದಾರೆ.

ಸಮಂತಾ ನಟನೆಯ ಶಾಕುಂತಲಂ (Shakunthalam) ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ಸಮಂತಾ ತೊಡಗಿಕೊಂಡಿದ್ದು, ಪ್ರಮೋಷನಲ್ ಇವೆಂಟ್​ಗಳನ್ನು, ಸರಣಿ ಸಂದರ್ಶನಗಳನ್ನು ನೀಡುತ್ತಿದ್ದಾರೆ ಸಮಂತಾ. ಇಂಥಹುದೇ ಒಂದು ಸಂದರ್ಶನದಲ್ಲಿ ಭಾಗಿಯಾಗಿದ್ದ ಸಮಂತಾ, ತಮ್ಮ ಮಾನಸಿಕ ಸ್ಥಿತಿಯ ಬಗ್ಗೆ ತಮ್ಮ ಪ್ರತಿದಿನದ ಜೀವನದ ಬಗ್ಗೆ ಮಾತನಾಡಿದ್ದು, ಪ್ರತಿದಿನವೂ ತಾವು ಭಯದಲ್ಲಿಯೇ ಬದುಕುತ್ತಿರುವುದಾಗಿ ಹೇಳಿದ್ದಾರೆ.

ಶಕುಂತಲಂ ಸಿನಿಮಾದ ಆಫರ್ ಬಂದಾಗ ಮೊದಲು ನಾನು ಒಪ್ಪಿಕೊಳ್ಳಲಿಲ್ಲ. ನಟಿಸುವುದಿಲ್ಲ ಎಂದು ಹೇಳಿಬಿಟ್ಟೆ. ನನಗೆ ಬಹಳ ಭಯವಾಗಿತ್ತು, ನಾನು ಶಕುಂತಲಾ ರೀತಿಯಲ್ಲಿಲ್ಲ. ಆಕೆಯ ವೈಭವ, ಸೂಕ್ಷ್ಮತೆ, ವೈಯ್ಯಾರ ಇದ್ಯಾವುದೂ ನನಗೆ ಇಲ್ಲ ಎನಿಸಿತು. ಅಲ್ಲದೆ ಆಗ ತಾನೆ ನಾನು ದಿ ಫ್ಯಾಮಿಲಿ ಮ್ಯಾನ್ ವೆಬ್ ಸರಣಿಯಲ್ಲಿ ರಾಜಿ ಪಾತ್ರದಲ್ಲಿ ನಟಿಸಿದ್ದೆ. ಅದಕ್ಕಾಗಿ ದೇಹವನ್ನು ಸಾಕಷ್ಟು ಬದಲಾಯಿಸಿಕೊಂಡಿದ್ದೆ. ಶಕುಂತಲಾ ಪಾತ್ರಕ್ಕೆ ಬೇಕಾದ ಆಂಗಿಕ ಹಾಗೂ ವ್ಯಕ್ತಿತ್ವ ಎರಡೂ ನನಗೆ ಇರಲಿಲ್ಲ ಹಾಗಾಗಿ ನಾನು ಬೇಡ ಎಂದುಬಿಟ್ಟಿದ್ದೆ ಎಂದಿದ್ದಾರೆ ಸಮಂತಾ.

ಇದನ್ನೂ ಓದಿ: ‘ಐಟಂ ಸಾಂಗ್ ಮಾಡಬೇಡ, ಮನೆಯಲ್ಲೇ ಇರು ಎಂದಿದ್ರು‘; ವಿಚ್ಛೇದನದ ದಿನಗಳನ್ನು ನೆನಪಿಸಿಕೊಂಡ ಸಮಂತಾ

ಆದರೆ ಕಳೆದ ಮೂರು ವರ್ಷಗಳಲ್ಲಿ ನಾನು ಒಂದು ಕಲಿತಿದ್ದೇನೆ. ನನಗೆ ಯಾವ ವಿಷಯದ ಬಹಳ ಭಯವಾಗುತ್ತದೆಯೋ ಆ ಅದನ್ನು ಮಾಡಲೇ ಬೇಕು ಎಂಬುದನ್ನು ನಾನು ಕಲಿತಿದ್ದೇನೆ. ನನಗೆ ಭಯ ಆಗುವುದಿಲ್ಲ ಎಂದಲ್ಲ. ಬಹಳ ಭಯವಾಗುತ್ತದೆ ಆದರೆ ಅದನ್ನು ಎದುರಿಸುತ್ತೇನೆ, ಎದುರಿಸುವುದನ್ನು ಕಲಿತಿದ್ದೇನೆ. ಪ್ರತಿದಿನವೂ ನನಗೆ ಭಯವಾಗುತ್ತದೆ ಆದರೆ ಅದನ್ನು ಎದುರಿಸುತ್ತಲೇ ಬದುಕುತ್ತಿದ್ದೇನೆ. ಅದೇ ಕಾರಣಕ್ಕೆ ನಾನು ಕಳೆದ ಮೂರು ವರ್ಷಗಳಲ್ಲಿ ಸಾಕಷ್ಟು ಬದಲಾಗಿದ್ದೇನೆ. ವ್ಯಕ್ತಿಯಾಗಿ ನಟಿಯಾಗಿ ಬದಲಾವಣೆ ಕಾಣುತ್ತಿದ್ದೇನೆ ಎಂದಿದ್ದಾರೆ ಸಮಂತಾ.

ಶಾಕುಂತಲಂ ಸಿನಿಮಾದ ಲುಕ್ ಟೆಸ್ಟ್ ಮಾಡಿಸಿದಾಗ ಸಮಂತಾಗೆ ಇದು ಆಗುವ ಕೆಲಸ ಅಲ್ಲ ಎನಿಸಿತಂತೆ. ಏಕೆಂದರೆ ಜಿಮ್​ನಲ್ಲಿ ಅತಿಯಾಗಿ ವರ್ಕೌಟ್ ಮಾಡಿ ಕೈ, ಹೊಟ್ಟೆ ಭಾಗವೆಲ್ಲ ಬಹಳ ಬದಲಾಗಿಬಿಟ್ಟಿದ್ದವಂತೆ. ಶಾಕುಂತಲಾ ರೀತಿಯ ರಾಣಿಯ ಪಾತ್ರಕ್ಕೆ ಬೇಕಾದ ದೇಹ ಅವರದ್ದಾಗಿರಲಿಲ್ಲವಂತೆ. ಆದರೆ ನಿರ್ದೇಶಕ ಗುಣಶೇಖರ್ ಸಮಯ ನೀಡಿ ದೇಹವನ್ನು ಪಾತ್ರಕ್ಕೆ ಹೊಂದುವ ರೀತಿಯಲ್ಲಿ ಬದಲಾಯಿಸಿಕೊಳ್ಳಲು ಸೂಚಿಸಿದ್ದಾರೆ. ಬಳಿಕ ಜಿಮ್​ನಲ್ಲಿ ವೇಟ್​ಲಿಫ್ಟಿಂಗ್ ಇನ್ನಿತರೆಗಳನ್ನು ತಗ್ಗಿಸಿ ಪಾತ್ರಕ್ಕೆ ಹೊಂದುವಂತೆ ತಮ್ಮನ್ನು ಬದಲಾಯಿಸಿಕೊಂಡಿದ್ದಾರೆ ಸಮಂತಾ.

ಶಾಕುಂತಲಾ ಪಾತ್ರದ ಜೊತೆಗೆ ತಮ್ಮನ್ನು ಕನೆಕ್ಟ್ ಮಾಡಿಕೊಳ್ಳುವ ಸಮಂತಾ, ಆಕೆ ಜೀವನದಲ್ಲಿ ಅದೆಷ್ಟು ಕಷ್ಟಗಳನ್ನು ಅನುಭವಿಸಿದ್ದಾಳೆ. ಆದರೆ ಎಲ್ಲವನ್ನೂ ಬಹಳ ತಾಳ್ಮೆಯಿಂದ, ಗೌರವಯುತವಾಗಿ ಒಪ್ಪಿಕೊಂಡು ಅವನ್ನು ಎದುರಿಸಿದ್ದಾರೆ. ಅದೆಷ್ಟು ಸಾವಿರ ವರ್ಷಗಳ ಹಿಂದಿನ ಕತೆಯಾದರೂ ಆ ಕತೆ ಶಾಕುಂತಲಾ ಪಾತ್ರ ಇಂದಿಗೂ ಸಲ್ಲುತ್ತದೆ ಎಂದಿದ್ದಾರೆ ಸಮಂತಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಾಹ್ಯಾಕಾಶ ನಿಲ್ದಾಣದೊಳಗೆ ಶುಭಾಂಶು ಶುಕ್ಲಾಗೆ ಅಪ್ಪುಗೆಯ ಸ್ವಾಗತ
ಬಾಹ್ಯಾಕಾಶ ನಿಲ್ದಾಣದೊಳಗೆ ಶುಭಾಂಶು ಶುಕ್ಲಾಗೆ ಅಪ್ಪುಗೆಯ ಸ್ವಾಗತ
ಐಎಸ್​ಎಸ್ ತಲುಪಿದ ಮೊದಲ ಭಾರತೀಯನ ಹಿರಿಮಗೆ ಪಾತ್ರನಾದ ಶುಭಾಂಶು ಶುಕ್ಲಾ
ಐಎಸ್​ಎಸ್ ತಲುಪಿದ ಮೊದಲ ಭಾರತೀಯನ ಹಿರಿಮಗೆ ಪಾತ್ರನಾದ ಶುಭಾಂಶು ಶುಕ್ಲಾ
ನಿನ್ನೆ ಬಹಳ ಹೊತ್ತು ನಿದ್ರೆ ಮಾಡಿದೆ ಅಂತ ಜೊತೆಗಾರರು ಹೇಳುತ್ತಾರೆ: ಶುಕ್ಲಾ
ನಿನ್ನೆ ಬಹಳ ಹೊತ್ತು ನಿದ್ರೆ ಮಾಡಿದೆ ಅಂತ ಜೊತೆಗಾರರು ಹೇಳುತ್ತಾರೆ: ಶುಕ್ಲಾ
ಬಿಆರ್ ಪಾಟೀಲ್ ಸಮಾಜವಾದಿ ಹಿನ್ನೆಲೆಯವರು, ಸಿಎಂ ಜೊತೆ ಸಲುಗೆಯಿದೆ: ರಾಜಣ್ಣ
ಬಿಆರ್ ಪಾಟೀಲ್ ಸಮಾಜವಾದಿ ಹಿನ್ನೆಲೆಯವರು, ಸಿಎಂ ಜೊತೆ ಸಲುಗೆಯಿದೆ: ರಾಜಣ್ಣ
ಸ್ಥಳೀಯ ಪೋಲೀಸರ ಬಗ್ಗೆ ಕಳ್ಳರಿಗೆ ಕಿಂಚಿತ್ತೂ ಭಯವಿದ್ದಂತಿಲ್ಲ!
ಸ್ಥಳೀಯ ಪೋಲೀಸರ ಬಗ್ಗೆ ಕಳ್ಳರಿಗೆ ಕಿಂಚಿತ್ತೂ ಭಯವಿದ್ದಂತಿಲ್ಲ!
ತೆಲಂಗಾಣ: ರೈಲ್ವೆ ಹಳಿ ಮೇಲೆ ಕಾರು ಚಲಾಯಿಸಿದ ಯುವತಿ
ತೆಲಂಗಾಣ: ರೈಲ್ವೆ ಹಳಿ ಮೇಲೆ ಕಾರು ಚಲಾಯಿಸಿದ ಯುವತಿ
ಬಿಜೆಪಿ ಪ್ರಚಾರಕ್ಕಾಗಿ ಎಮರ್ಜೆನ್ಸಿ ವಿಚಾರ ಬಳಸಿಕೊಳ್ಳುತ್ತಿದೆ: ಶಿವಕುಮಾರ್
ಬಿಜೆಪಿ ಪ್ರಚಾರಕ್ಕಾಗಿ ಎಮರ್ಜೆನ್ಸಿ ವಿಚಾರ ಬಳಸಿಕೊಳ್ಳುತ್ತಿದೆ: ಶಿವಕುಮಾರ್
ಕೇವಲ ಬೆಳಗಾವಿ ಮತ್ತು ಖಾನಾಪುರ ತಾಲೂಕುಗಳಲ್ಲಿ ಮಳೆಯಾಗುತ್ತಿದೆ: ಜಾರಕಿಹೊಳಿ
ಕೇವಲ ಬೆಳಗಾವಿ ಮತ್ತು ಖಾನಾಪುರ ತಾಲೂಕುಗಳಲ್ಲಿ ಮಳೆಯಾಗುತ್ತಿದೆ: ಜಾರಕಿಹೊಳಿ
ದೈವ ನುಡಿದಂತೆ ಮನೆಗೆ ಬಂದ ಅಣ್ಣ: ತಮ್ಮ ಹೇಳಿದ್ದಿಷ್ಟು
ದೈವ ನುಡಿದಂತೆ ಮನೆಗೆ ಬಂದ ಅಣ್ಣ: ತಮ್ಮ ಹೇಳಿದ್ದಿಷ್ಟು
ಚಿಕ್ಕಮಗಳೂರು: ಹಾಲಿನ ಟ್ಯಾಂಕರ್ ಪಲ್ಟಿ, ಹರಿಯಿತು ಹಾಲಿನ ಹೊಳೆ
ಚಿಕ್ಕಮಗಳೂರು: ಹಾಲಿನ ಟ್ಯಾಂಕರ್ ಪಲ್ಟಿ, ಹರಿಯಿತು ಹಾಲಿನ ಹೊಳೆ