ಅಪ್ಪು ಅಭಿಮಾನಿಗಳು ಕೂಡ ಪುನೀತ್ ಕಾರ್ಯಗಳನ್ನು ಆದರ್ಶವಾಗಿ ಸ್ವೀಕರಿಸಿದ್ದು, ಬಹಳಷ್ಟು ಕಾರ್ಯಗಳನ್ನು ಮಾಡುತ್ತಿದ್ದಾರೆ. ಅಲ್ಲದೇ ಅಭಿಮಾನಿಗಳು ದೇಶದುದ್ದಕ್ಕೂ ತಾವು ಹೋಗುತ್ತಿರುವ ಸ್ಥಳಗಳಿಗೆ ಪುನೀತ್ ಭಾವಚಿತ್ರಗಳನ್ನು ಕರೆದೊಯ್ದು ಗೌರವ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ ಅಭಿಮಾನಿಯೋರ್ವರು ಪುನೀತ್ ಭಾವಚಿತ್ರವನ್ನು ಹೊತ್ತು ಶಬರಿಮಲೆ ಬೆಟ್ಟವನ್ನೇರಿ, ಅಯ್ಯಪ್ಪನ ದರ್ಶನ ಮಾಡಿದ್ದಾರೆ. ಅವರು ದೇವಾಲಯದ ಮೆಟ್ಟಿಲುಗಳನ್ನು ಹತ್ತುತ್ತಿರುವ ದೃಶ್ಯಗಳು ಸದ್ಯ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಅಭಿಮಾನಿಯ ಪ್ರೀತಿ ನೋಡುಗರ ಕಣ್ಣುಗಳನ್ನು ತೇವಗೊಳಿಸಿವೆ.
ಅಭಿಮಾನಿ ಅಪ್ಪು ಚಿತ್ರ ಹಿಡಿದು ದೇಗುಲ ಹತ್ತುತ್ತಿರುವ ವಿಡಿಯೋ ಇಲ್ಲಿದೆ:
ಅಭಿಮಾನಿಗಳ ನಿಷ್ಕಲ್ಮಶ ಪ್ರೀತಿ, ಪುನೀತ್ರ ಆದರ್ಶ ಜೀವನವನ್ನು ರೂಡಿಸಿಕೊಂಡಿರುವುದು ರಾಜ್ಯದ ಹಲವು ಜನರ ಬೆಳಕನ್ನು ಬೆಳಗಿಸಿದೆ. ಹೌದು, ಪುನೀತ್ ಪ್ರೇರಣೆಯಿಂದ ರಾಜ್ಯದೆಲ್ಲೆಡೆ ಅಭಿಮಾನಿಗಳು ನೇತ್ರದಾನಕ್ಕೆ, ದೇಹದಾನಕ್ಕೆ ನೋಂದಣಿ ಮಾಡಿಸುತ್ತಿದ್ದಾರೆ. ಈಗಾಗಲೇ 73ಕ್ಕೂ ಹೆಚ್ಚು ಜನ ನೇತ್ರದಾನ ಮಾಡಿ, ಹಲವರ ಬದುಕಿಗೆ ಬೆಳಕಾಗಿದ್ದಾರೆ ಎಂದು ಇತ್ತೀಚೆಗೆ ವರದಿಗಳು ಹೇಳಿದ್ದವು. ಅಲ್ಲದೇ ಸುಮಾರು 6,000 ಕ್ಕೂ ಅಧಿಕ ಜನರು ನೋಂದಣಿ ಮಾಡಿಸಿದ್ದಾರೆ. ಇವುಗಳಲ್ಲದೇ ಇನ್ನೂ ಹಲವಾರು ಸಮಾಜಮುಖಿ ಕಾರ್ಯಗಳ ಮುಖಾಂತರ ಅಭಿಮಾನಿಗಳು ಅಪ್ಪುವನ್ನು ಜೀವಂತವಾಗಿರಿಸುತ್ತಿದ್ದಾರೆ.
ಇದನ್ನೂ ಓದಿ:
ಮಾಜಿ ಪತಿ ಬರ್ತ್ಡೇ ಕಾರಣಕ್ಕೆ ಟೀಕೆ ಎದುರಿಸಿ, ಮರುದಿನವೇ ನಾಯಿ ಜನ್ಮದಿನ ಆಚರಿಸಿದ ಸಮಂತಾ
ಪುನೀತ್ ಕನಸು ನನಸು ಮಾಡಲು ಮುಂದಾದ ಅಶ್ವಿನಿ; ಮಹತ್ವದ ಘೋಷಣೆ ಮಾಡಿದ ಅಪ್ಪು ಪತ್ನಿ