ಹೇಗೆ ಮಾತನಾಡಬೇಕು? ಅಣ್ಣಾವ್ರು ಹೇಳಿಕೊಟ್ಟ ಪಾಠ ನೆನಪಿಸಿಕೊಂಡ ನಟಿ ಅಂಬಿಕಾ
Dr Rarjkumar: ‘ಚಲಿಸುವ ಮೋಡಗಳು’, ‘ಎರಡು ನಕ್ಷತ್ರಗಳು’, ‘ಭಕ್ತ ಪ್ರಹಲ್ಲಾದ’, ‘ಅಪೂರ್ವ ಸಂಗಮ’ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟಿ ಅಂಬಿಕ. ಈಗಲೂ ಸಹ ಆಗೊಮ್ಮೆ ಈಗೊಮ್ಮೆ ಕನ್ನಡ ಸಿನಿಮಾಗಳಲ್ಲಿ ನಟಿಸುವುದುಂಟು. ಅಂಬಿಕ ಅವರು ಇತ್ತೀಚೆಗೆ ತಮಿಳು ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಕನ್ನಡದ ಮೇರು ನಟ ಡಾ ರಾಜ್ಕುಮಾರ್ ಅವರನ್ನು ಕೊಂಡಾಡಿದ್ದಾರೆ. ಅದರಲ್ಲೂ ವಿಶೇಷವಾಗಿ ರಾಜ್ಕುಮಾರ್ ಅವರಿಗೆ ಭಾಷೆಯ ಮೇಲೆ ಇದ್ದ ಪ್ರೀತಿ, ಕಾಳಜಿ ಮತ್ತು ಹಿಡಿತ ಎಂಥಹದ್ದು ಎಂದು ವಿವರಿಸಿದ್ದಾರೆ.

ಹಿರಿಯ ನಟಿ ಅಂಬಿಕಾ (Ambika) ಮೂಲತಃ ಕೇರಳದವರು ಆದರೆ ಕನ್ನಡದಲ್ಲಿ ಹಲವಾರು ನೆನಪುಳಿಯುವ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ವಿಶೇಷವಾಗಿ ಡಾ ರಾಜ್ಕುಮಾರ್ ಜೊತೆಗೆ ‘ಚಲಿಸುವ ಮೋಡಗಳು’, ‘ಎರಡು ನಕ್ಷತ್ರಗಳು’, ‘ಭಕ್ತ ಪ್ರಹಲ್ಲಾದ’, ‘ಅಪೂರ್ವ ಸಂಗಮ’ ಇನ್ನೂ ಕೆಲವು. ಅಂಬರೀಶ್, ವಿಷ್ಣುವರ್ಧನ್ ಜೊತೆಗೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಅಂಬಿಕ. ಈಗಲೂ ಸಹ ಆಗೊಮ್ಮೆ ಈಗೊಮ್ಮೆ ಕನ್ನಡ ಸಿನಿಮಾಗಳಲ್ಲಿ ನಟಿಸುವುದುಂಟು. ಅಂಬಿಕ ಅವರು ಇತ್ತೀಚೆಗೆ ತಮಿಳು ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಕನ್ನಡದ ಮೇರು ನಟ ಡಾ ರಾಜ್ಕುಮಾರ್ ಅವರನ್ನು ಕೊಂಡಾಡಿದ್ದಾರೆ. ಅದರಲ್ಲೂ ವಿಶೇಷವಾಗಿ ರಾಜ್ಕುಮಾರ್ ಅವರಿಗೆ ಭಾಷೆಯ ಮೇಲೆ ಇದ್ದ ಪ್ರೀತಿ, ಕಾಳಜಿ ಮತ್ತು ಹಿಡಿತ ಎಂಥಹದ್ದು ಎಂದು ವಿವರಿಸಿದ್ದಾರೆ.
‘ನಾನು ಆರಂಭದಲ್ಲಿ ತೆಲುಗು ಸಿನಿಮಾ ಮಾಡಿದಾಗ ನನಗೆ ಹಿಟ್ ಸಿಗಲಿಲ್ಲ. ಅದೇ ಸಮಯದಲ್ಲಿ ಕನ್ನಡದಲ್ಲಿ ನಟಿಸಿದ ಎರಡು ಸಿನಿಮಾಗಳು ಭಾರಿ ದೊಡ್ಡ ಹಿಟ್ ಆದವು. ರಾಜ್ಕುಮಾರ್ ಅವರ ಜೊತೆಗೆ ನಟಿಸಿದ ‘ಚಲಿಸುವ ಮೋಡಗಳು’ ಭಾರಿ ದೊಡ್ಡ ಹಿಟ್. ಅವರೊಟ್ಟಿಗೆ ನಟಿಸುತ್ತಾ ನಾನು ಕನ್ನಡ ಕಲಿತೆ. ನಾನು ಕನ್ನಡ ಕಲಿಯುವಲ್ಲಿ 80% ಸಹಾಯ ಮಾಡಿದ್ದು ಡಾ ರಾಜ್ಕುಮಾರ್ ಅವರೇ. ಅವರು ಸದಾ ಹೇಳುತ್ತಿದ್ದರು, ‘ಭಾಷೆಯನ್ನು ಯಾರು ಬೇಕಾದರೂ ಮಾತನಾಡಬಹುದು, ಆದರೆ ಆ ಭಾಷೆಯನ್ನು ಸುಂದರವಾಗಿ ಮಾತನಾಡುವುದು ಬಹಳ ಮುಖ್ಯ’ ಎಂದು ಅಣ್ಣಾವ್ರ ತಮಗೆ ಹೇಳಿದ್ದ ಮಾತುಗಳನ್ನು ಹೇಳಿದ್ದಾರೆ.
‘ನಾವು ಬಳಸುವ ಪದಗಳಲ್ಲಿ ಮರ್ಯಾದೆ, ಗೌರವದ ಜೊತೆಗೆ ಸುಂದರತೆಯೂ ಇರಬೇಕು ಹಾಗಿದ್ದಲ್ಲಿ ಮಾತ್ರವೇ ನಾವು ಭಾಷೆಗೆ ಗೌರವ ಕೊಟ್ಟಂತಾಗುತ್ತದೆ, ನಾವು ಸಂಭಾಷಿಸುತ್ತಿರುವ ವ್ಯಕ್ತಿಗೆ ಗೌರವ ನೀಡದಂತೆ ಆಗುತ್ತದೆ. ನಾವು ಆಡುವ ಭಾಷೆ ಸುಂದರವಾಗುತ್ತದೆ’ ಎಂದು ರಾಜ್ಕುಮಾರ್ ತಮಗೆ ಹೇಳಿದ್ದಾಗಿ ಅಂಬಿಕ ಅವರು ಹೇಳಿದ್ದಾರೆ. ಇದನ್ನು ಉದಾಹರಣೆ ಸಹಿತ ವಿವರಿಸಿರುವ ಹಿರಿಯ ನಟಿ, ‘ಏನು?’ ಎಂದು ಕೇಳುವುದರ ಬದಲು ‘ಹೇಗಿದ್ದೀರಿ’ ಎಂದು ಕೇಳುವುದಕ್ಕೂ ಎಷ್ಟು ವ್ಯತ್ಯಾಸ ಇದೆ ಅಲ್ಲವೆ. ಅದನ್ನೇ ರಾಜ್ಕುಮಾರ್ ಅವರು ನನಗೆ ಹೇಳಿಕೊಟ್ಟಿದ್ದು’ ಎಂದು ಖುಷಿಯಿಂದ ಮಾತನಾಡಿದ್ದಾರೆ ಅಂಬಿಕ.
ಇದನ್ನೂ ಓದಿ:‘ನಾ ನಿನ್ನ ಬಿಡಲಾರೆ’: ದುರ್ಗಾಗೆ ಗೊತ್ತಾಯ್ತು ಅಂಬಿಕಾ ತನ್ನ ಅಕ್ಕ ಅನ್ನೋ ಸತ್ಯ
‘ಆಡುವ ಮಾತುಗಳಲ್ಲಿ ಮರ್ಯಾದೆ ಇರಬೇಕು’ ಎಂದು ಅಂದು ಅಣ್ಣಾವ್ರು ನನಗೆ ಹೇಳಿದ್ದರು. ಅದನ್ನೇ ಈಗಲೂ ನಾನು ಪಾಲಿಸಿಕೊಂಡು ಬಂದಿದ್ದೀನಿ. ‘ಕೆಟ್ಟದಾಗಿ ಮಾತನಾಡುವುದು, ಏಕವಚನದಲ್ಲಿ ಮಾತನಾಡುವುದು, ಕೆಟ್ಟ ಪದಗಳನ್ನು ಮಾತಿನ ನಡುವೆ ಬಳಸುವುದು ಇದ್ಯಾವುದನ್ನೂ ನಾನು ಮಾಡುವುದಿಲ್ಲ. ಅದಕ್ಕೆ ರಾಜ್ಕುಮಾರ್ ಅವರು ಹೇಳಿದ ಮಾತು ಕಾರಣ’ ಎಂದು ಅಂಬಿಕಾ ಅವರು ಹೇಳಿದ್ದಾರೆ.
ಡಾ ರಾಜ್ಕುಮಾರ್ ಅವರಷ್ಟು ಅದ್ಭುತವಾಗಿ ಕನ್ನಡ ಮಾತನಾಡಿದ ಮತ್ತೊಬ್ಬ ನಟ ಕನ್ನಡ ಚಿತ್ರರಂಗದಲ್ಲಿ ಇಲ್ಲವೆಂದೇ ಹೇಳಬೇಕು. ಪದಗಳ ನಡುವಿನ ಏರಿಳಿತ, ಹೃಸ್ವಸ್ವರ, ದೀರ್ಘಸ್ವರಗ, ಅಲ್ಪ ಪ್ರಾಣ, ಮಹಾ ಪ್ರಾಣಗಳನ್ನು ಸಹ ರಾಜ್ಕುಮಾರ್ ಅವರು ತಪ್ಪಿಸುತ್ತಿರಲಿಲ್ಲ. ಇದೆಲ್ಲದರ ಜೊತೆಗೆ ಅದ್ಭುತವಾದ ಸ್ವರದೊಂದಿಗೆ, ಏರಿಳಿತದೊಂದಿಗೆ ಅವರು ಮಾತನಾಡುತ್ತಿದ್ದರು, ಸಂಭಾಷಣೆ ಹೇಳುತ್ತಿದ್ದರು. ಇದುವೇ ಅವರನ್ನು ಕನ್ನಡದ ಕುಲಕಂಠೀರವನನ್ನಾಗಿ ಮಾಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:40 pm, Thu, 14 May 26





