AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾ ನಿನ್ನ ಬಿಡಲಾರೆ’: ದುರ್ಗಾಗೆ ಗೊತ್ತಾಯ್ತು ಅಂಬಿಕಾ ತನ್ನ ಅಕ್ಕ ಅನ್ನೋ ಸತ್ಯ

‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಮಹತ್ವದ ತಿರುವು ಎದುರಾಗಿದೆ. ದುರ್ಗಾ ಹಾಗೂ ಅಂಬಿಕಾ ಅಕ್ಕ-ತಂಗಿಯರೆಂಬ ಸತ್ಯ ಬಹಿರಂಗವಾಗಿದೆ. ಮಾಳವಿಕಾಳ ಮಾಟಕ್ಕೆ ಬಲಿಯಾಗಿದ್ದ ಅಂಬಿಕಾ ಆತ್ಮಕ್ಕೆ ಶ್ರಾದ್ಧ ಮಾಡಿಸಿದ್ದು ದುರ್ಗಾ. ಗೆಜ್ಜೆಯ ಮೂಲಕ ಸೋದರಿ ಸಂಬಂಧ ಅರಿತು ದುರ್ಗಾ ಶಾಕ್‌ಗೆ ಒಳಗಾಗಿದ್ದಾಳೆ .

‘ನಾ ನಿನ್ನ ಬಿಡಲಾರೆ’: ದುರ್ಗಾಗೆ ಗೊತ್ತಾಯ್ತು ಅಂಬಿಕಾ ತನ್ನ ಅಕ್ಕ ಅನ್ನೋ ಸತ್ಯ
ನಾ ನಿನ್ನ ಬಿಡಲಾರೆ
 ಶ್ರೀಲಕ್ಷ್ಮೀ ಎಚ್
| Edited By: |

Updated on: Apr 16, 2026 | 10:06 AM

Share

‘ನಾ ನಿನ್ನ ಬಿಡಲಾರೆ’ ಧಾರಾವಾಹಿ (Na Ninna Bidalre) ಪ್ರಮುಖ ಟ್ವಿಸ್ಟ್​​ಗಳನ್ನು ಪಡೆದು ಸಾಗುತ್ತಿದೆ. ದುರ್ಗಾ ಹಾಗೂ ಅಂಬಿಕಾ ಮಧ್ಯೆ ಸಾಕಷ್ಟು ಬಾಂಧವ್ಯ ಬೆಳೆದಿತ್ತು. ಅಂಬಿಕಾ ಆತ್ಮವಾದರೂ ಅದು ಕಾಣಿಸುತ್ತಾ ಇದ್ದಿದ್ದು ದುರ್ಗಾಗೆ ಮಾತ್ರ ಆಗಿತ್ತು. ಹೀಗೇಕೆ ಎಂಬ ಪ್ರಶ್ನೆ ದುರ್ಗಾಗೆ ಅನೇಕ ಬಾರಿ ಕಾಡಿದ್ದೂ ಇದೆ ಎಂದರೂ ತಪ್ಪಾಗಲಾರದು. ಈಗ ಈ ಪ್ರಶ್ನೆಗೆ ಉತ್ತರ ಏನೋ ಸಿಕ್ಕಿದೆ. ಆದರೆ, ಅದು ತುಂಬಾ ತಡವಾಯಿತೇ ಎಂಬ ಪ್ರಶ್ನೆ ಮೂಡಿದೆ.

ಮಾಳವಿಕಾ ಮಾಡುತ್ತಿದ್ದ ಮಾಟದ ತಂತ್ರಕ್ಕೆ ಅಂಬಿಕಾ ಬಲಿಪಶುವಾಗಿದ್ದು ಗೊತ್ತೇ ಇದೆ. ಅಂಬಿಕಾಗೆ ತನ್ನ ಮನಸ್ಸು ಹಿಡಿತಕ್ಕೆ ಸಿಗದೆ ಕೆಟ್ಟದನ್ನು ಮಾಡುತ್ತಿದ್ದಳು. ಇದರಿಂದ ದುರ್ಗಾ ತುಂಬಾನೇ ಭಯಗೊಂಡಳು. ಆ ಬಳಿಕ ದುರ್ಗಾ ಒಂದು ಗಟ್ಟಿ ನಿರ್ಧಾರ ತೆಗೆದುಕೊಂಡಳು. ಹೇಗಾದರೂ ಮಾಡಿ ಅಂಬಿಕಾ ಆತ್ಮಕ್ಕೆ ಶಾಂತಿಕೊಡಬೇಕು ಎಂದು ಮನೆಯವರು ನಿರ್ಧರಿಸಿದಾಗ ಇದಕ್ಕೆ ಒಪ್ಪಿಗೆ ಕೊಟ್ಟಳು.

View this post on Instagram

A post shared by Zee Kannada (@zeekannada)

ಅಂಬಿಕಾ ಸತ್ತ ದಿನದಿಂದಲೂ ಆಕೆಗೆ ಶ್ರಾದ್ಧ ಆಗಿರಲಿಲ್ಲ. ಹೀಗಾಗಿ, ಅವಳ ಆತ್ಮ ಎಲ್ಲ ಕಡೆಗಳಲ್ಲಿ ಸುತ್ತಾಡುತ್ತಾ ಇತ್ತು. ಕೊನೆಗೂ ಅವಳ ಶ್ರಾದ್ಧ ಮಾಡಲಾಗಿದೆ. ಈ ಮೂಲಕ ಅಂಬಿಕಾ ಆತ್ಮವನ್ನು ಮಾಳವಿಕಾ ಬಂಧಿಸಿಟ್ಟುಕೊಂಡಿದ್ದಾಳೆ. ಈ ವಿಷಯ ಮಾಳವಿಕಾಗೆ ಮಾತ್ರ ಗೊತ್ತು. ಈ ಮಧ್ಯೆ ಅಂಬಿಕಾ ಶ್ರಾದ್ಧ ಮುಗಿದ ಬಳಿಕ ದುರ್ಗಾಗೆ ನಿಜ ವಿಷಯ ಗೊತ್ತಾಗಿದೆ.

ಇದನ್ನೂ ಓದಿ: ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಕೊನೆ ಆಗುತ್ತಿದೆ ಮಾಯಾ ಪಾತ್ರ?

ಅಂಬಿಕಾ ಹಾಗೂ ದುರ್ಗ ಅಕ್ಕ ತಂಗಿ. ಈ ವಿಷಯ ತಡವಾಗಿ ಅವಳಿಗೆ ಗೊತ್ತಾಗಿದೆ. ಇದನ್ನು ಕೇಳಿ ದುರ್ಗಾ ಶಾಕ್​​ಗೆ ಒಳಗಾಗಿದ್ದಾಳೆ. ಇದಕ್ಕೂ ಕಾರಣ ಇದೆ. ಅಕ್ಕನ ಹುಡುಕಬೇಕು ಎಂಬ ಏಕೈಕ ಕಾರಣಕ್ಕೆ ದುರ್ಗಾ ಬೆಂಗಳೂರಿಗೆ ಬಂದಿದ್ದಳು. ಬೆಂಗಳೂರಿಗೆ ಬಂದರೂ ಅಕ್ಕ ಸಿಗಲಿಲ್ಲ. ಇದಕ್ಕೆ ಆಕೆ ದೇವರಿಗೆ ಶಾಪ ಹಾಕುತ್ತಿದ್ದಳು. ಈಗ ನೋಡಿದರೆ ಎಲ್ಲವೂ ಬದಲಾಗಿದೆ. ಗೆಜ್ಜೆ ಮೂಲಕ ಈ ವಿಷಯ ಗೊತ್ತಾಗಿದೆ.ಅಂಬಿಕಾ ಅನ್ನೋದು ಪ್ರಮುಖ ಪಾತ್ರ. ಆ ಪಾತ್ರವೇ ಯಾವ ಕಾರಣಕ್ಕೂ ಕೊನೆಯಾಗಲ್ಲ ಎಂಬುದು ಅನೇಕರ ನಂಬಿಕೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದು ಮನೆಗೆ ಬೆಂಕಿ ಹಚ್ಚಿದ ಕಳ್ಳರು!
ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದು ಮನೆಗೆ ಬೆಂಕಿ ಹಚ್ಚಿದ ಕಳ್ಳರು!
ಬಿಎಸ್​ವೈ ಅಭಿಮಾನೋತ್ಸವಕ್ಕೆ ಸಜ್ಜಾದ ಚಿತ್ರದುರ್ಗ: ಕೇಸರಿಮಯವಾದ ನಗರ
ಬಿಎಸ್​ವೈ ಅಭಿಮಾನೋತ್ಸವಕ್ಕೆ ಸಜ್ಜಾದ ಚಿತ್ರದುರ್ಗ: ಕೇಸರಿಮಯವಾದ ನಗರ
ಸರ್ಕಾರ ರಚನೆಗೆ ವಿಜಯ್​ ಕಸರತ್ತು: ತಮಿಳುನಾಡಿನಲ್ಲಿ ಏನೇನಾಗ್ತಿದೆ ನೋಡಿ!
ಸರ್ಕಾರ ರಚನೆಗೆ ವಿಜಯ್​ ಕಸರತ್ತು: ತಮಿಳುನಾಡಿನಲ್ಲಿ ಏನೇನಾಗ್ತಿದೆ ನೋಡಿ!
ಕೊಬ್ಬರಿ ಎಣ್ಣೆ ದೀಪ ಹಚ್ಚುವುದರಿಂದ ತುಂಬಾ ಒಳ್ಳೇದು! ಯಾಕೆ ಗೊತ್ತಾ?
ಕೊಬ್ಬರಿ ಎಣ್ಣೆ ದೀಪ ಹಚ್ಚುವುದರಿಂದ ತುಂಬಾ ಒಳ್ಳೇದು! ಯಾಕೆ ಗೊತ್ತಾ?
ಇಂದು ಈ ರಾಶಿಯವರು ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಾಗಿ ಭಾಗಿಯಾಗಬೇಕು
ಇಂದು ಈ ರಾಶಿಯವರು ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಾಗಿ ಭಾಗಿಯಾಗಬೇಕು
ವೇಗದ ಶತಕ ಬಾರಿಸಿದ ಮಿಚೆಲ್ ಮಾರ್ಷ್
ವೇಗದ ಶತಕ ಬಾರಿಸಿದ ಮಿಚೆಲ್ ಮಾರ್ಷ್
ಕಲಬುರಗಿ: 1.44 ಕೋಟಿ ರೂ ಮೌಲ್ಯದ ಫೋನ್‌ ಪತ್ತೆ ಮಾಡಿದ್ಹೇಗೆ ಗೊತ್ತಾ?
ಕಲಬುರಗಿ: 1.44 ಕೋಟಿ ರೂ ಮೌಲ್ಯದ ಫೋನ್‌ ಪತ್ತೆ ಮಾಡಿದ್ಹೇಗೆ ಗೊತ್ತಾ?
ಫೋನ್‌ ಕಳೆದುಕೊಂಡು ವ್ಯಕ್ತಿ ಮಾಡಿದ್ದೇನು? ಅನುಭವದ ಮಾತು ಕೇಳಿ
ಫೋನ್‌ ಕಳೆದುಕೊಂಡು ವ್ಯಕ್ತಿ ಮಾಡಿದ್ದೇನು? ಅನುಭವದ ಮಾತು ಕೇಳಿ
ಮೇ 10ರವರೆಗೆ ಚೆನ್ನೈನಲ್ಲೇ ಇರಿ; ಡಿಎಂಕೆ ಶಾಸಕರಿಗೆ ಸ್ಟಾಲಿನ್ ಆದೇಶ
ಮೇ 10ರವರೆಗೆ ಚೆನ್ನೈನಲ್ಲೇ ಇರಿ; ಡಿಎಂಕೆ ಶಾಸಕರಿಗೆ ಸ್ಟಾಲಿನ್ ಆದೇಶ
ಡಾಲಿ ಧನಂಜಯ್ ಪುತ್ರನಿಗಾಗಿ ಕಲಘಟಗಿ ತೊಟ್ಟಿಲು: ವಿಶೇಷತೆ ತಿಳಿಸಿದ ಸಾಹುಕಾರ್
ಡಾಲಿ ಧನಂಜಯ್ ಪುತ್ರನಿಗಾಗಿ ಕಲಘಟಗಿ ತೊಟ್ಟಿಲು: ವಿಶೇಷತೆ ತಿಳಿಸಿದ ಸಾಹುಕಾರ್