AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿವ್ಯಾ ಸುರೇಶ್​ ವಿಚಾರಕ್ಕೆ ಬಿಕ್ಕಿ ಬಿಕ್ಕಿ ಅತ್ತ ಚಕ್ರವರ್ತಿ ಚಂದ್ರಚೂಡ್​! ಇಡೀ ಮನೆಯೇ ಎಮೋಷನಲ್​

Bigg Boss Kannada: ಚಕ್ರವರ್ತಿ ಚಂದ್ರಚೂಡ್​ ಅವರು ಒಡೆದು ಆಳುವ ಬುದ್ಧಿಯವರು ಎಂದು ಎಲ್ಲರೂ ಬ್ರ್ಯಾಂಡ್​ ಮಾಡಿದ್ದರು. ಅಂಥ ಗಟ್ಟಿಮನುಷ್ಯ ಈಗ ಚಿಕ್ಕ ಮಕ್ಕಳಂತೆ ಕಣ್ಣೀರು ಹಾಕಿದ್ದಾರೆ.

ದಿವ್ಯಾ ಸುರೇಶ್​ ವಿಚಾರಕ್ಕೆ ಬಿಕ್ಕಿ ಬಿಕ್ಕಿ ಅತ್ತ ಚಕ್ರವರ್ತಿ ಚಂದ್ರಚೂಡ್​! ಇಡೀ ಮನೆಯೇ ಎಮೋಷನಲ್​
(ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಸುರೇಶ್​ - ಚಕ್ರವರ್ತಿ ಚಂದ್ರಚೂಡ್​)
ಮದನ್​ ಕುಮಾರ್​
|

Updated on: Apr 13, 2021 | 3:11 PM

Share

ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಸುರೇಶ್​ ಅವರು ತಮ್ಮದೇ ಆದ ರೀತಿಯಿಂದ ಗುರುತಿಸಿಕೊಂಡಿದ್ದಾರೆ. ಟಾಸ್ಕ್​ ವಿಚಾರದಲ್ಲಿ ಅವರು ತುಂಬ ಸ್ಟ್ರಾಂಗ್​ ಆಗಿ ಪೈಪೋಟಿ ನೀಡುತ್ತಾರೆ. ಮಂಜು ಜೊತೆಗಿನ ಸ್ನೇಹ-ಪ್ರೀತಿಯ ಕಾರಣದಿಂದ ಹೆಚ್ಚು ಹೈಲೈಟ್​ ಆಗುತ್ತಾರೆ. ಪ್ರಾಕ್ಟಿಕಲ್​ ಆಗಿ ಆಲೋಚನೆ ಮಾಡುವುದರಿಂದ ಅವರು ಕೆಲವೊಮ್ಮೆ ಎಲ್ಲರ ನಿಷ್ಠುರ ಕೂಡ ಕಟ್ಟಿಕೊಳ್ಳಬೇಕಾಗಿದೆ. ಇಂಥ ದಿವ್ಯಾ ಸುರೇಶ್​ ಅವರಿಂದಾಗಿ ಬಿಗ್​ ಬಾಸ್​ ಮನೆಯೊಳಗೆ ಪತ್ರಕರ್ತ, ಬರಹಗಾರ ಚಕ್ರವರ್ತಿ ಚಂದ್ರಚೂಡ್​ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ!

ವೈಲ್ಡ್​ ಕಾರ್ಡ್​ ಮೂಲಕ ದೊಡ್ಮನೆಗೆ ಕಾಲಿಟ್ಟವರು ಚಕ್ರವರ್ತಿ ಚಂದ್ರಚೂಡ್​. ಬಿಗ್​ ಬಾಸ್​ಗೆ ಬಂದ ಮೊದಲ ದಿನವೇ ಅವರನ್ನು ಕಂಡು ಬಹುತೇಕರು ಕಂಗಾಲಾಗಿದ್ದರು. ಮಾತಿನಲ್ಲಿ ಎಂಥವರನ್ನಾದರೂ ಸೋಲಿಸಬಲ್ಲ ಅವರ ಚಾಕಚಕ್ಯತೆಗೆ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದರು. ದೊಡ್ಮನೆಯಲ್ಲಿರುವ ಗುಂಪುಗಾರಿಕೆಯನ್ನು ಒಡೆದುಹಾಕಲು ಚಂದ್ರಚೂಡ್​ ಪ್ರಯುತ್ನಿಸಿದ್ದರು. ಹಾಗಾಗಿ ಅವರು ಒಡೆದು ಆಳುವ ಬುದ್ಧಿಯವರು ಎಂದು ಎಲ್ಲರೂ ಬ್ರ್ಯಾಂಡ್​ ಮಾಡಿದ್ದರು. ಅಂಥ ಗಟ್ಟಿಮನುಷ್ಯ ಈಗ ಚಿಕ್ಕ ಮಕ್ಕಳಂತೆ ಕಣ್ಣೀರು ಹಾಕಿದ್ದಾರೆ.

ಇತ್ತೀಚೆಗೆ ಬಿಗ್​ ಬಾಸ್​ನಲ್ಲಿ ‘ಒಲವಿನ ಉಡುಗೊರೆ ಕೊಡಲೇನು’ ಎಂಬ ಟಾಸ್ಕ್​ ನೀಡಲಾಗಿತ್ತು. ಬಿಗ್​ ಬಾಸ್​ನಲ್ಲಿ ತಮಗೆ ಇಷ್ಟವಾದ ಹುಡುಗಿಗೆ ಹುಡುಗರು ಬಲೂನ್​ ನೀಡಬೇಕಿತ್ತು. ಆದಕ್ಕೆ ಚಕ್ರವರ್ತಿ ಚಂದ್ರಚೂಡ್​ ಆಯ್ಕೆ ಮಾಡಿಕೊಂಡಿದ್ದು ದಿವ್ಯಾ ಸುರೇಶ್​ ಅವರನ್ನು. ‘ಮರಳಿನ ಮೇಲೆ ಬರೆದ ಹೆಸರು ಯಾವತ್ತೂ ಶಾಶ್ವತವಲ್ಲ. ಅದು ಅಳಿಸಿ ಹೋಗುತ್ತಲೇ ಇರುತ್ತದೆ. ಹಾಗೆಯೇ ಪ್ರೀತಿಯಲ್ಲಿ ಎಷ್ಟೇ ಬಾರಿ ಸೋತರೂ ಮತ್ತೆ ಮತ್ತೆ ಪ್ರೀತಿಸುವುದನ್ನು ನಾನು ಜೀವಂತವಾಗಿರವವರೆಗೆ ಬಿಡುವುದಿಲ್ಲ. ಯಾಕೆಂದರೆ ಪ್ರೀತಿ ನನ್ನ ಶಕ್ತಿ’ ಎಂದು ದಿವ್ಯಾ ಬಗ್ಗೆ ಚಂದ್ರಚೂಡ್​ ಮಾತು ಆರಂಭಿಸಿದರು.

‘ದಿವ್ಯಾ ಕೂಡ ನನ್ನ ಥರ ವೈಲ್ಡ್​. ಮೇಲ್ನೋಟಕ್ಕೆ ಮೈಲ್ಡ್​. ಆದರೆ ಮನಸ್ಸು ತುಂಬಾ ಚೈಲ್ಡ್​. ಮಗುವಿನ ಥರ ಹಠ ಮಾಡ್ತಾಳೆ. ಪ್ರೀತಿಸುವವರಿಗೆ ಈ ಲಕ್ಷಣ ಇರುತ್ತದೆ. ದಿವ್ಯಾ ಸುರೇಶ್​ನ ನೋಡಿದಾಗ ನನಗೆ ನನ್ನ ಮಗಳು ನೆನಪಾಗ್ತಾಳೆ. ಯಾಕೆಂದರೆ ನಾನು ಮತ್ತು ದಿವ್ಯಾ ಒಂದೇ ರೀತಿ ಸಾಗಿ ಬಂದಿದ್ದೇವೆ. ತಂದೆ-ತಾಯಿಯನ್ನು ದೂರ ಮಾಡಿಕೊಂಡಿದ್ವಿ. ನಾನು ಸಿಂಗಲ್​ ಪೇರೆಂಟ್​. ಅದರ ಕಷ್ಟ ನನಗೆ ಗೊತ್ತು. ನಾನು ಜೈಲಿಗೆ ಹೋದಾಗ ನನ್ನ ಮಗಳು ಬಂದು ನೋಡಿದ್ದಳು. ನನ್ನ ಮಗಳ ರೀತಿ ಇರುವ ದಿವ್ಯಾಗೆ ಈ ಬಲೂನ್​ ಕೊಡುತ್ತೇನೆ’ ಎಂದು ಚಂದ್ರಚೂಡ್​ ಸಿಕ್ಕಾಪಟ್ಟೆ ಅತ್ತುಬಿಟ್ಟರು.

ಚಂದ್ರವರ್ತಿ ಚಂದ್ರಚೂಡ್​ ನೀಡಿದ ಬಲೂನ್​ ಪಡೆದುಕೊಂಡು ದಿವ್ಯಾ ಸುರೇಶ್​ ಕೂಡ ಬಿಕ್ಕಿ ಬಿಕ್ಕಿ ಅತ್ತರು. ಬಹಳ ವರ್ಷಗಳಿಂದ ತಂದೆಯಿಂದ ದೂರವಾಗಿ ದಿವ್ಯಾ ವಾಸಿಸುತ್ತಿದ್ದಾರೆ. ಈ ಬಗ್ಗೆ ಬಿಗ್​ ಬಾಸ್​ ಮನೆಯಲ್ಲಿ ಅವರು ಕೆಲವು ಬಾರಿ ಹೇಳಿಕೊಂಡಿದ್ದರು. ಈಗ ಚಕ್ರವರ್ತಿ ಚಂದ್ರಚೂಡ್​ ಅವರಿಂದ ಮಗಳು ಎಂದು ಕರೆಸಿಕೊಂಡು ಅವರಿಗೆ ಆನಂದಬಾಷ್ಪಾ ಉಕ್ಕಿಬಂತು. ಅವರಿಗಿಂತಲೂ ಹೆಚ್ಚು ಅತ್ತಿದ್ದು ಚಂದ್ರಚೂಡ್​. ಈ ಸಂದರ್ಭಕ್ಕೆ ಸಾಕ್ಷಿಯಾದ ಬಿಗ್​ ಬಾಸ್​ ಮನೆಯ ಇತರೆ ಸದಸ್ಯರು ಕೂಡ ಸಿಕ್ಕಾಪಟ್ಟೆ ಎಮೋಷನಲ್​ ಆದರು.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ 7ನೇ ವಾರ ಬಿಗ್​ ಫೈಟ್​! ಘಟಾನುಘಟಿಗಳೆಲ್ಲ ನಾಮಿನೇಟ್​

ವೈಷ್ಣವಿಗೆ ತುರ್ತಾಗಿ ಗಂಡ ಬೇಕಂತೆ! ಬಿಗ್​ ಬಾಸ್​ ಮನೆಯಲ್ಲಿ ಸನ್ನಿಧಿಯ ಹೊಸ ಬೇಡಿಕೆ

Follow Us
ಕೊಪ್ಪಳ: ಯರೇ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ತೀವ್ರ
ಕೊಪ್ಪಳ: ಯರೇ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ತೀವ್ರ
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?