‘ನಾನು ತಾಳ್ಮೆ ಕಳೆದುಕೊಂಡಾಗಲೆಲ್ಲ, ತುಂಬಾ ಜನ ತಲೆ ಕಳೆದುಕೊಂಡಿದ್ದಾರೆ’; ಮತ್ತೆ ಲಾಂಗ್ ಹಿಡಿದ ಶಿವರಾಜ್​ಕುಮಾರ್

ನಿರ್ದೇಶಕ ನರ್ತನ್, ನಟರಾದ ಶಿವರಾಜ್ಕುಮಾರ್, ಶ್ರೀಮುರಳಿ ಕಾಂಬಿನೇಷನ್ನಲ್ಲಿ ಬಂದ ‘ಮಫ್ತಿ’ ಸಿನಿಮಾ ಜನರ ಮೆಚ್ಚುಗೆ ಗಳಿಸಿತ್ತು. ಆ ಚಿತ್ರದಲ್ಲಿ ಶಿವಣ್ಣ ಮಾಡಿದ ಭೈರತಿ ರಣಗಲ್ ಎಂಬ ಪಾತ್ರ ಸಖತ್ ಹೈಲೈಟ್ ಆಗಿತ್ತು. ಈಗ ಅದೇ ಶೀರ್ಷಿಕೆಯಲ್ಲಿ ಸಿನಿಮಾ ಮೂಡಿಬರುತ್ತಿದೆ. ಅದರ ಟೀಸರ್ ಇಲ್ಲಿದೆ.

‘ನಾನು ತಾಳ್ಮೆ ಕಳೆದುಕೊಂಡಾಗಲೆಲ್ಲ, ತುಂಬಾ ಜನ ತಲೆ ಕಳೆದುಕೊಂಡಿದ್ದಾರೆ’; ಮತ್ತೆ ಲಾಂಗ್ ಹಿಡಿದ ಶಿವರಾಜ್​ಕುಮಾರ್
ಶಿವಣ್ಣ
Follow us
|

Updated on: Jul 12, 2024 | 10:36 AM

‘ಭೈರತಿ ರಣಗಲ್’ ಸಿನಿಮಾ ಬಗ್ಗೆ ಭರ್ಜರಿ ನಿರೀಕ್ಷೆ ಇದೆ. ಇಷ್ಟು ದಿನ ಸಿನಿಮಾದ ಪೋಸ್ಟರ್​ಗಳು ಗಮನ ಸೆಳೆದಿದ್ದವು. ಈಗ ಇದೇ ಮೊದಲ ಬಾರಿಗೆ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಶಿವರಾಜ್​ಕುಮಾರ್ ಅವರಿಗೆ ಇಂದು (ಜುಲೈ 12) ಜನ್ಮದಿನ. ಇದರ ಅಂಗವಾಗಿ ಟೀಸರ್ ಬಿಡುಗಡೆ ಆಗಿದೆ. ಈ ಟೀಸರ್ ನೋಡಿ ಫ್ಯಾನ್ಸ್ ಸಖತ್ ಥ್ರಿಲ್ ಆಗಿದೆ. ಶಿವಣ್ಣ ಅವರು ಹೇಳುವ ಒಂದೇ ಒಂದು ಡೈಲಾಗ್​ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಶಿವಣ್ಣ ಅವರ ಬರ್ತ್​ಡೇ ಕ್ರೇಜ್​ನ ಈ ಟೀಸರ್ ಹೆಚ್ಚಿಸಿದೆ.

ನರ್ತನ್ ಹಾಗೂ ಶಿವರಾಜ್​ಕುಮಾರ್ ಅವರು ‘ಮಫ್ತಿ’ ಸಿನಿಮಾದಲ್ಲಿ ಮೊದಲ ಬಾರಿಗೆ ಒಟ್ಟಾಗಿ ಕೆಲಸ ಮಾಡಿದರು. ಈಗ ಇವರು ಮತ್ತೆ ಒಂದಾಗಿರೋದು ಈ ಚಿತ್ರದ ಪ್ರೀಕ್ವೆಲ್​ಗಾಗಿ. ‘ಮಫ್ತಿ’ ಸಿನಿಮಾದಲ್ಲಿ ಶಿವಣ್ಣ ಅವರು ಭೈರತಿ ರಣಗಲ್ ಹೆಸರಿನ ಪಾತ್ರ ಮಾಡಿದ್ದರು. ಇದೇ ಪಾತ್ರವನ್ನು ಸಿನಿಮಾ ರೂಪದಲ್ಲಿ ತರಲಾಗುತ್ತಿದೆ. ಈಗ ರಿಲೀಸ್ ಆಗಿರೋ ಟೀಸರ್ ಭರ್ಜರಿ ಗಮನ ಸೆಳೆದಿದೆ.

ಭೈರತಿ ರಣಗಲ್ ಊರು ಹೇಗಿದೆ ಎನ್ನುವುದನ್ನು ತೋರಿಸುವ ಪ್ರಯತ್ನ ಟೀಸರ್​ನಲ್ಲಿ ಆಗಿದೆ. ಈ ಚಿತ್ರದಲ್ಲಿ ರೌಡಿಸಂ ಕಥೆ ಇರಲಿದೆ. ಈ ಟೀಸರ್​ನಲ್ಲಿ ಶಿವರಾಜ್​ಕುಮಾರ್ ಹೇಳುವ, ‘ನಾನು ತಾಳ್ಮೆ ಕಳೆದುಕೊಂಡಾಗೆಲ್ಲ ತುಂಬಾ ಜನ ತಲೆ ಕಳೆದುಕೊಂಡಿದ್ದಾರೆ’ ಎಂಬ ಡೈಲಾಗ್ ಹೈಲೈಟ್ ಆಗಿದೆ.

ಈ ಮೊದಲು ‘ಭೈರತಿ ರಣಗಲ್’ ಸಿನಿಮಾ ಆಗಸ್ಟ್ 15ರಂದು ರಿಲೀಸ್ ಆಗಲಿದೆ ಎನ್ನುವ ಮಾಹಿತಿ ನೀಡಲಾಗಿತ್ತು. ಆದರೆ, ಈಗ ಸಿನಿಮಾ ರಿಲೀಸ್ ದಿನಾಂಕವನ್ನು ಮುಂದೂಡಲಾಗಿದೆ. ಸೆಪ್ಟೆಂಬರ್​ನಲ್ಲಿ ಚಿತ್ರ ತೆರೆಗೆ ಬರಲಿದೆ ಎನ್ನುವ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: ಮಫ್ತಿಗಿಂತಲೂ ಭೈರತಿ ರಣಗಲ್ ಹೇಗೆ ಭಿನ್ನ? ಶಿವಣ್ಣನ ಲುಕ್ ಹೇಗಿರುತ್ತೆ? ನಿರ್ದೇಶಕ ನರ್ತನ್ ಉತ್ತರ

ಗೀತಾ ಪಿಕ್ಚರ್ಸ್ ಮೂಲಕ ಗೀತಾ ಶಿವರಾಜ್​ಕುಮಾರ್ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ನರ್ತನ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ರಿಲೀಸ್​ಗೆ ಫ್ಯಾನ್ಸ್ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.