ಹೀರೋ ಆಗುವುದಕ್ಕೂ ಮೊದಲು 30ಕ್ಕೂ ಹೆಚ್ಚು ಸಿನಿಮಾ ಮಾಡಿದ್ದ ಜಗ್ಗೇಶ್; ಬದುಕು ಬದಲಿಸಿತು ಆ ಚಿತ್ರ
ಕನ್ನಡ ಚಿತ್ರರಂಗದ ನವರಸ ನಾಯಕ ಜಗ್ಗೇಶ್ ಅವರು ಇಂದು ತಮ್ಮ 62ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹತ್ತು ವರ್ಷಗಳ ಕಠಿಣ ಪರಿಶ್ರಮದ ನಂತರ ಹೀರೋ ಆಗಿ ಮಿಂಚಿದ ಅವರು, 'ತರ್ಲೆ ನನ್ಮಗ' ಚಿತ್ರದ ಮೂಲಕ ಯಶಸ್ಸಿನ ಶಿಖರವನ್ನು ಏರಿದರು. ಅವರ ಸಿನಿಮಾ ಮತ್ತು ರಾಜಕೀಯ ಜೀವನದ ಏಳುಬೀಳುಗಳನ್ನು ಕಂಡರು.

ಕನ್ನಡದ ಹಿರಿಯ ನಟ, ನವರಸ ನಾಯಕ ಜಗ್ಗೇಶ್ (Jaggesh) ಅವರಿಗೆ ಇಂದು (ಮಾರ್ಚ್ 17) ಬರ್ತ್ಡೇ. ಅವರು 62ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿವೆ. ಜಗ್ಗೇಶ್ ಅವರು ಸಾಕಷ್ಟು ಏಳುಬೀಳುಗಳನ್ನು ಕಂಡು ಬಂದವರು. ಅವರು ಸಾಕಷ್ಟು ಶ್ರಮದಿಂದ ಇಲ್ಲಿಯವರೆಗೆ ಬಂದು ನಿಂತಿದ್ದಾರೆ. ಅವರಿಗೆ ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಯಶಸ್ಸು ಒಲಿದಿದೆ. ಅವರು ಹೀರೋ ಆಗಲು ಬರೋಬ್ಬರಿ 10 ವರ್ಷ ತೆಗೆದುಕೊಂಡಿದ್ದರು.
ಜಗ್ಗೇಶ್ ಅವರು ನಟಿಸಿದ ಮೊದಲ ಸಿನಿಮಾ ‘ಇಬ್ಬನಿ ಕರಗಿತು’. ಈ ಚಿತ್ರ 1982ರಲ್ಲಿ ರಿಲೀಸ್ ಆಯಿತು. ಆದರೆ, ಜಗ್ಗೇಶ್ ಅವರು ಹೀರೋ ಆಗಿ ಮಿಂಚಿದ ಮೊದಲ ಚಿತ್ರ ಎಂದರೆ ಉಪೇಂದ್ರ ನಿರ್ದೇಶನದ ‘ತರ್ಲೆ ನನ್ಮಗ’. ಈ ಚಿತ್ರ ಬಿಡುಗಡೆ ಕಂಡಿದ್ದು 1992ರಲ್ಲಿ. ಈ ಚಿತ್ರದಿಂದ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿತು. ನಂತರ ಸಾಲು ಸಾಲು ಆಫರ್ಗಳು ಅವರನ್ನು ಹುಡುಕಿ ಬಂದವು. ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದ ಜಗ್ಗೇಶ್ ಹೀರೋ ಆಗೋಕೆ ತೆಗೆದುಕೊಂಡಿದ್ದು ಬರೋಬ್ಬರಿ 10 ವರ್ಷ. 30ಕ್ಕೂ ಅಧಿಕ ಚಿತ್ರಗಳಲ್ಲಿ ಪೋಷಕ ಪಾತ್ರ, ವಿಲನ್ ಪಾತ್ರ ಮಾಡಿದ ನಂತರ ಅವರಿಗೆ ಹೀರೋ ಆಗುವ ಅವಕಾಶ ಸಿಕ್ಕಿತು ಅನ್ನೋದು ವಿಶೇಷ.
ಹೀರೋ ಆಗಿ ಒಪ್ಪಿದ್ದ ಮೊದಲ ಚಿತ್ರ ಎಂದರೆ ‘ಭಂಡ ನನ್ ಗಂಡ’. ಆದರೆ, ಮೊದಲು ರಿಲೀಸ್ ಆಗಿದ್ದು ‘ತರ್ಲೆ ನನ್ಮಗ’. ‘ಭಂಡ ನನ್ ಗಂಡ’ ಚಿತ್ರಕ್ಕೆ ಜಗ್ಗೇಶ್ ಅವರ ಭಾವ ಬಂಡವಾಳ ಹೂಡಿದ್ದರು. ಈ ಚಿತ್ರದಲ್ಲಿ ಅಂಬರೀಷ್ ಅವರು ಅತಿಥಿ ಪಾತ್ರ ಮಾಡಿದ್ದರು. ಜಗ್ಗೇಶ್ಗೆ ಅವರು ಬೆಂಬಲವಾಗಿ ನಿಂತಿದ್ದರು ಅನ್ನೋದು ವಿಶೇಷ.
ಜಗ್ಗೇಶ್ ಅವರು ಹಲವು ದಶಕಗಳಿಂದ ಚಿತ್ರರಂಗದ ಸೇವೆ ಮಾಡುತ್ತಾ ಬರುತ್ತಿದ್ದಾರೆ. ಅವರು ಪರಭಾಷೆಗಳಿಂದ ಬಂದ ಆಫರ್ಗಳನ್ನು ಕೈಬಿಟ್ಟು ಕನ್ನಡದ ಸೇವೆ ಮಾಡಿಕೊಂಡಿದ್ದಾರೆ. ಜಗ್ಗೇಶ್ ಅವರು ನಿರ್ದೇಶನವನ್ನೂ ಮಾಡಿದ್ದು. ‘ಗುರು’ ಹಾಗೂ ‘ಮೇಲುಕೋಟೆ ಮಂಜ’ ಹೆಸರಿನ ಸಿನಿಮಾಗಳನ್ನು ಅವರು ನಿರ್ದೇಶನ ಮಾಡಿದ್ದರು. ‘ಮೇಕಪ್’ ಹೆಸರಿನ ಚಿತ್ರವನ್ನು ಜಗ್ಗೇಶ್ ನಿರ್ಮಾಣ ಮಾಡಿದ್ದರು.
ಅಣ್ಣಾವ್ರ ಕುಟುಂಬದ ಜೊತೆ ಜಗ್ಗೇಶ್ ಒಳ್ಳೆಯ ಒಡನಾಟ ಇತ್ತು. ರಾಜ್ಕುಮಾರ್ ಬಗ್ಗೆ ಜಗ್ಗೇಶ್ಗೆ ತುಂಬಾನೇ ಪ್ರೀತಿ ಹಾಗೂ ವಿಶೇಷ ಗೌರವ ಇದೆ. ಪುನೀತ್ ಅವರನ್ನು ಕಂಡರೂ ಅಷ್ಟೇ. ಇಬ್ಬರೂ ಹುಟ್ಟಿದ ದಿನಾಂಕ ಒಂದೇ ಅನ್ನೋದು ವಿಶೇಷ.
ಇದನ್ನೂ ಓದಿ: ಜಗ್ಗೇಶ್ ಜನ್ಮದಿನಕ್ಕೆ ಪ್ರಧಾನಿ ಮೋದಿಯಿಂದ ಹಾರೈಕೆ ಪತ್ರ; ಹಿರಿಹಿರಿ ಹಿಗ್ಗಿದ ನವರಸ ನಾಯಕ
ಜಗ್ಗೇಶ್ ಅವರಿಗೆ ರಾಯರ ಮೇಲೆ ಅಪಾರ ಭಕ್ತಿ. ಈ ಹಂತಕ್ಕೆ ಬೆಳೆಯಲು ರಾಘವೇಂದ್ರ ಸ್ವಾಮಿ ಆಶೀರ್ವಾದ ಕಾರಣ ಎಂದು ಅವರು ನಂಬುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







