AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಾರಣಾಂತರಗಳಿಂದ ನಿಮ್ಮಿಷ್ಟದ ರಸದೌತಣ ಸ್ವಲ್ಪ ವಿಳಂಬವಾಗುತ್ತಿದೆ’; ಹೊಂಬಾಳೆ ಫಿಲ್ಮ್ಸ್ ಹೊಸ ಘೋಷಣೆ

‘ರಾಘವೇಂದ್ರ ಸ್ಟೋರ್ಸ್​’ ಸಿನಿಮಾ ಟೀಸರ್ ಮೂಲಕ ಸಾಕಷ್ಟು ಗಮನ ಸೆಳೆದಿದೆ. ಈ ಟೀಸರ್​ನಲ್ಲಿ ಹಾಸ್ಯದ ಹೊಳೆ ಹರಿದಿತ್ತು. ಇದೇ ಮೊದಲ ಬಾರಿಗೆ ಜಗ್ಗೇಶ್ ಹಾಗೂ ಸಂತೋಷ್ ಆನಂದ್​ರಾಮ್ ಒಂದಾಗಿದ್ದಾರೆ. ಈ ಕಾಂಬಿನೇಷನ್​ಮೇಲೆ ಸಾಕಷ್ಟು ನಿರೀಕ್ಷೆ ಇದೆ.

‘ಕಾರಣಾಂತರಗಳಿಂದ ನಿಮ್ಮಿಷ್ಟದ ರಸದೌತಣ ಸ್ವಲ್ಪ ವಿಳಂಬವಾಗುತ್ತಿದೆ’; ಹೊಂಬಾಳೆ ಫಿಲ್ಮ್ಸ್ ಹೊಸ ಘೋಷಣೆ
ವಿಜಯ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 18, 2022 | 8:48 PM

ವಿಜಯ್ ಕಿರಗಂದೂರು (Vijay Kirgandur) ಒಡೆತನದ ‘ಹೊಂಬಾಳೆ ಫಿಲ್ಮ್ಸ್​’ (Hombale Films) ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡುವ ಕೆಲಸಗಳಲ್ಲಿ ಬ್ಯುಸಿ ಇದೆ. ಕೇವಲ ದೊಡ್ಡ ಬಜೆಟ್ ಚಿತ್ರಗಳನ್ನು ಮಾತ್ರವಲ್ಲದೆ, ಚಿಕ್ಕ ಬಜೆಟ್ ಚಿತ್ರಗಳನ್ನು ಈ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ‘ಹೊಂಬಾಳೆ ಫಿಲ್ಮ್ಸ್​’ ಅಡಿ ಸಿದ್ಧಗೊಳ್ಳುತ್ತಿರುವ ಪ್ರತಿ ಚಿತ್ರಗಳು ಒಂದಷ್ಟು ಕುತೂಹಲ ಮೂಡಿಸಿವೆ. ಆ ಪೈಕಿ ‘ರಾಘವೇಂದ್ರ ಸ್ಟೋರ್ಸ್​’ ಸಿನಿಮಾ ಕೂಡ ಸಾಕಷ್ಟು ಗಮನ ಸೆಳೆದಿದೆ. ಜಗ್ಗೇಶ್ (Jaggesh) ನಟನೆಯ ಈ ಚಿತ್ರಕ್ಕೆ ಸಂತೋಷ್ ಆನಂದ್​ರಾಮ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ರಿಲೀಸ್ ದಿನಾಂಕ ವಿಳಂಬವಾಗುವ ಬಗ್ಗೆ ಚಿತ್ರತಂಡ ಘೋಷಣೆ ಮಾಡಿದೆ.

‘ರಾಘವೇಂದ್ರ ಸ್ಟೋರ್ಸ್​’ ಸಿನಿಮಾ ಟೀಸರ್ ಮೂಲಕ ಸಾಕಷ್ಟು ಗಮನ ಸೆಳೆದಿದೆ. ಈ ಟೀಸರ್​ನಲ್ಲಿ ಹಾಸ್ಯದ ಹೊಳೆ ಹರಿದಿತ್ತು. ಇದೇ ಮೊದಲ ಬಾರಿಗೆ ಜಗ್ಗೇಶ್ ಹಾಗೂ ಸಂತೋಷ್ ಆನಂದ್​ರಾಮ್ ಒಂದಾಗಿದ್ದಾರೆ. ಈ ಕಾಂಬಿನೇಷನ್​ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಆಗಸ್ಟ್ 5ರಂದು ರಿಲೀಸ್ ಆಗಬೇಕಿತ್ತು. ಆದರೆ, ಈಗ ಚಿತ್ರದ ರಿಲೀಸ್ ದಿನಾಂಕ ವಿಳಂಬ ಆಗಿದೆ.

ಇದನ್ನೂ ಓದಿ
Image
ರಸ್ತೆಯಲ್ಲಿ ನನ್ನ ತಂದೆ ಬೂಟ್​ನಲ್ಲಿ ಹೊಡೆಯುತ್ತಿದ್ದರು; ನೆನಪಿನ ಬುತ್ತಿ ತೆರೆದಿಟ್ಟ ಜಗ್ಗೇಶ್
Image
Darling Krishna Birthday: ಬರ್ತ್​ಡೇ ಪ್ರಯುಕ್ತ ಮಾಲ್ಡೀವ್ಸ್​ಗೆ ತೆರಳಿದ ಡಾರ್ಲಿಂಗ್​ ಕೃಷ್ಣ-ಮಿಲನಾ; ಇಲ್ಲಿವೆ ಕ್ಯೂಟ್​ ಜೋಡಿಯ ಫೋಟೋ
Image
‘777 ಚಾರ್ಲಿ’ ಎಷ್ಟು ಲಾಭ ಮಾಡಿದೆ? ಮಾಹಿತಿ ಹಂಚಿಕೊಂಡ ರಕ್ಷಿತ್ ಶೆಟ್ಟಿ
Image
ಆರೆಂಜ್ ಸ್ವಿಮ್​ಸೂಟ್​ನಲ್ಲಿ ಮಿಂಚಿದ ಅನುಷ್ಕಾ ಶರ್ಮಾ; ಇಲ್ಲಿವೆ ಫೋಟೋಗಳು

ಸಿನಿಮಾ ರಿಲೀಸ್ ದಿನಾಂಕ ಘೋಷಣೆ ಮಾಡುವ ಸಂದರ್ಭದಲ್ಲಿ ಹೊಂಬಾಳೆ ಫಿಲ್ಮ್ಸ್​ ಟ್ವೀಟ್ ಒಂದನ್ನು ಮಾಡಿತ್ತು. ‘ವರಮಹಾಲಕ್ಷ್ಮಿಗೆ ನವರಸಗಳ ರಸದೌತಣ ಸವಿಯಲು ಸಿದ್ಧರಾಗಿ, ಇದೇ ಆಗಸ್ಟ್ 05, 2022ರಿಂದ’ ಎಂದು ಬರೆಯಲಾಗಿತ್ತು. ಈಗ ಆ ಟ್ವೀಟ್​ಅನ್ನು ರೀಟ್ವೀಟ್ ಮಾಡಿರುವ ಹೊಂಬಾಳೆ ಫಿಲ್ಮ್ಸ್​‘ಕಾರಣಾಂತರಗಳಿಂದ ನಿಮ್ಮಿಷ್ಟದ ರಸದೌತಣ ಸ್ವಲ್ಪ ವಿಳಂಬವಾಗುತ್ತಿದೆ’ ಎಂದು ಬರೆದುಕೊಂಡಿದೆ.

ಜುಲೈ 28ರಂದು ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಇನ್ನು, ಆಗಸ್ಟ್ 13ರಂದು ‘ಗಾಳಿಪಟ 2’ ಸಿನಿಮಾ ಬಿಡುಗಡೆ ಆಗುತ್ತಿದೆ. ಇವೆರಡು ಡೇಟ್​ಗಳ ಮಧ್ಯೆ ‘ರಾಘವೇಂದ್ರ ಸ್ಟೋರ್ಸ್​’ ಸಿನಿಮಾ ರಿಲೀಸ್ ಆದರೆ ಥಿಯೇಟರ್ ಸಮಸ್ಯೆ ಆಗೋದು ಪಕ್ಕಾ. ಈ ಕಾರಣಕ್ಕೆ ಹೊಂಬಾಳೆ ಫಿಲ್ಮ್ಸ್​ ಸಿನಿಮಾ ರಿಲೀಸ್ ದಿನಾಂಕ ವಿಳಂಬವಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ರಸ್ತೆಯಲ್ಲಿ ನನ್ನ ತಂದೆ ಬೂಟ್​ನಲ್ಲಿ ಹೊಡೆಯುತ್ತಿದ್ದರು; ನೆನಪಿನ ಬುತ್ತಿ ತೆರೆದಿಟ್ಟ ಜಗ್ಗೇಶ್

ಜಗ್ಗೇಶ್ ಜತೆಗೆ ಶ್ವೇತಾ ಶ್ರೀವಾತ್ಸವ್, ರವಿಶಂಕರ್ ಗೌಡ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಂತೋಷ್ ಆನಂದ್​ರಾಮ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

‘ಸರಿಗಮಪ’ ಫಿನಾಲೆಯಲ್ಲಿ ಹೇಗಿತ್ತು ಬಾಳು ಬೆಳಗುಂದಿ ಪರ್ಫಾರ್ಮೆನ್ಸ್?
‘ಸರಿಗಮಪ’ ಫಿನಾಲೆಯಲ್ಲಿ ಹೇಗಿತ್ತು ಬಾಳು ಬೆಳಗುಂದಿ ಪರ್ಫಾರ್ಮೆನ್ಸ್?
ಕಾಲ್ತುಳಿತ ಸಂಭವಿಸಿದಾಗ ಬಚಾವಾಗೋದು ಹೇಗೆ, ಏನು ಮಾಡಬೇಕು? ಇಲ್ಲಿದೆ ಟಿಪ್ಸ್
ಕಾಲ್ತುಳಿತ ಸಂಭವಿಸಿದಾಗ ಬಚಾವಾಗೋದು ಹೇಗೆ, ಏನು ಮಾಡಬೇಕು? ಇಲ್ಲಿದೆ ಟಿಪ್ಸ್
ಪ್ರಿಯಕರನೊಂದಿಗೆ ಬದುಕಿಕೋ ಎಂದು ಪತ್ನಿಯನ್ನು ಕಳಿಸಿದ್ದ ಪತಿ
ಪ್ರಿಯಕರನೊಂದಿಗೆ ಬದುಕಿಕೋ ಎಂದು ಪತ್ನಿಯನ್ನು ಕಳಿಸಿದ್ದ ಪತಿ
ಅಪಘಾತದ ನಂತರ ರಸ್ತೆಬದಿ ಹೋಟೆಲ್​​ಗೆ ನುಗ್ಗಿದ ಒಂದು ಟಿಪ್ಪರ್
ಅಪಘಾತದ ನಂತರ ರಸ್ತೆಬದಿ ಹೋಟೆಲ್​​ಗೆ ನುಗ್ಗಿದ ಒಂದು ಟಿಪ್ಪರ್
Daily Devotional: ಕಷ್ಟಕಾಲದಲ್ಲಿ ಮಾಡಿದ ಸಹಾಯದ ಮಹತ್ವ ತಿಳಿಯಿರಿ
Daily Devotional: ಕಷ್ಟಕಾಲದಲ್ಲಿ ಮಾಡಿದ ಸಹಾಯದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ವಾಹನ ಖರೀದಿಸುವ ಯೋಗವಿದೆ
Daily Horoscope: ಈ ರಾಶಿಯವರಿಗೆ ವಾಹನ ಖರೀದಿಸುವ ಯೋಗವಿದೆ
ಗಂಗಾ ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿ ಅದೃಷ್ಟವಶಾತ್ ಪಾರಾದ ವಿಡಿಯೋ ನೋಡಿ
ಗಂಗಾ ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿ ಅದೃಷ್ಟವಶಾತ್ ಪಾರಾದ ವಿಡಿಯೋ ನೋಡಿ
ಒಂದೇ ದಿನ ಪ್ರೇಮಿ ಮತ್ತು ವಿಲನ್ ಆದ ಶ್ರೀನಗರ ಕಿಟ್ಟಿ; ಹೇಗಿದೆ ರೆಸ್ಪಾನ್ಸ್?
ಒಂದೇ ದಿನ ಪ್ರೇಮಿ ಮತ್ತು ವಿಲನ್ ಆದ ಶ್ರೀನಗರ ಕಿಟ್ಟಿ; ಹೇಗಿದೆ ರೆಸ್ಪಾನ್ಸ್?
ಹೊಂಡದಲ್ಲಿ ಬಿದ್ದ ತನ್ನನ್ನು ರಕ್ಷಿಸಿದವರಿಗೆ ಥ್ಯಾಂಕ್ಸ್ ಹೇಳಿದ ಆನೆ ಮರಿ
ಹೊಂಡದಲ್ಲಿ ಬಿದ್ದ ತನ್ನನ್ನು ರಕ್ಷಿಸಿದವರಿಗೆ ಥ್ಯಾಂಕ್ಸ್ ಹೇಳಿದ ಆನೆ ಮರಿ
ಪೊಲೀಸರನ್ನು ಎಡೆಬಿಡದೆ ದುಡಿಸಿಕೊಳ್ಳುವುದು ಅಪರಾಧಿಕ ಮನೋಭಾವ: ಶಾಸಕ
ಪೊಲೀಸರನ್ನು ಎಡೆಬಿಡದೆ ದುಡಿಸಿಕೊಳ್ಳುವುದು ಅಪರಾಧಿಕ ಮನೋಭಾವ: ಶಾಸಕ