AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯೋಗಿ ಕಿವಿಗೆ ಏಟು ಬಿದ್ದಾಗ ಪುನೀತ್​ ಏನು ಮಾಡಿದ್ರು? ‘ಹುಡುಗರು’ ಘಟನೆ ನೆನೆದ ರವಿ ವರ್ಮಾ

ಪುನೀತ್​ ರಾಜ್​ಕುಮಾರ್​ ನಟನೆಯ ‘ಹುಡುಗರು’ ಸಿನಿಮಾ 2011ರಲ್ಲಿ ರಿಲೀಸ್​ ಆಯ್ತು. ಆ ಚಿತ್ರದ ಶೂಟಿಂಗ್​ ವೇಳೆ ಕೆಲವು ಅಚ್ಚರಿಯ​ ಘಟನೆಗಳು ನಡೆದಿದ್ದವು.

ಯೋಗಿ ಕಿವಿಗೆ ಏಟು ಬಿದ್ದಾಗ ಪುನೀತ್​ ಏನು ಮಾಡಿದ್ರು? ‘ಹುಡುಗರು’ ಘಟನೆ ನೆನೆದ ರವಿ ವರ್ಮಾ
ಲೂಸ್​ ಮಾದ ಯೋಗಿ, ರವಿ ವರ್ಮಾ, ಪುನೀತ್​ ರಾಜ್​ಕುಮಾರ್​​
Follow us
TV9 Web
| Updated By: ಮದನ್​ ಕುಮಾರ್​

Updated on: Mar 10, 2022 | 9:40 AM

ಫೈಟಿಂಗ್​ ವಿಚಾರದಲ್ಲಿ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರಿಗೆ ಸರಿಸಾಟಿ ಆಗಬಲ್ಲ ಮತ್ತೋರ್ವ ನಟ ಇಲ್ಲ ಎನ್ನುತ್ತಾರೆ ಅಭಿಮಾನಿಗಳು. ಸಾಹಸ ನಿರ್ದೇಶಕರು ಕೂಡ ಈ ಮಾತನ್ನು ಒಪ್ಪಿಕೊಳ್ಳುತ್ತಾರೆ. ಪುನೀತ್​ ರಾಜ್​ಕುಮಾರ್​ ಜೊತೆ 13 ಸಿನಿಮಾಗಳಲ್ಲಿ ಫೈಟ್​ ಮಾಸ್ಟರ್​ ಆಗಿ ಕೆಲಸ ಮಾಡಿದ್ದಾರೆ ರವಿ ವರ್ಮಾ. ಮಾ.17ರಂದು ಬಿಡುಗಡೆ ಆಗುತ್ತಿರುವ ‘ಜೇಮ್ಸ್​’ ಚಿತ್ರಕ್ಕೂ ಅವರೇ ಸಾಹಸ ನಿರ್ದೇಶನ ಮಾಡಿದ್ದಾರೆ. ಪುನೀತ್​ ಜೊತೆಗಿನ ಹಲವು ವರ್ಷಗಳ ಒಡನಾಟವನ್ನು ರವಿ ವರ್ಮಾ (Fight Master Ravi Varma) ಅವರೀಗ ಮೆಲುಕು ಹಾಕಿದ್ದಾರೆ. ಟಿವಿ9 ಡಿಜಿಟಲ್​ ನಡೆಸಿದ ಸಂದರ್ಶನದಲ್ಲಿ ಅವರು ಹಲವು ಸಂಗತಿಗಳನ್ನು ನೆನಪು ಮಾಡಿಕೊಂಡಿದ್ದಾರೆ. ‘ಹುಡುಗರು’ (Hudugaru Movie) ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​ ಜೊತೆ ಲೂಸ್​ ಮಾದ ಯೋಗಿ, ಶ್ರೀನಗರ ಕಿಟ್ಟಿ ಮುಂತಾದವರು ನಟಿಸಿದ್ದರು. ಒಂದು ಆ್ಯಕ್ಷನ್​ ದೃಶ್ಯದಲ್ಲಿ ಯೋಗಿ ಕಿವಿಗೆ ಪೆಟ್ಟಾಗಿತ್ತು. ಆ ವೇಳೆ ಏನು ನಡೆಯಿತು ಎಂಬುದನ್ನು ರವಿ ವರ್ಮಾ ವಿವರಿಸಿದ್ದಾರೆ. ಸಹನಟರ ಬಗ್ಗೆ ಪುನೀತ್​ ತೋರುತ್ತಿದ್ದ ಕಾಳಜಿಗೆ ಆ ಘಟನೆ ಸೂಕ್ತ ಉದಾಹರಣೆ ಆಗಿದೆ. ‘ಅಣ್ಣಾವ್ರು ಬಂಗಾರದ ಮನುಷ್ಯ. ಅಪ್ಪು ಸರ್​ ಮುತ್ತಿನಂಥ ಮನುಷ್ಯ’ ಎಂದು ಅವರು ಬಣ್ಣಿಸಿದ್ದಾರೆ.

2011ರಲ್ಲಿ ‘ಹುಡುಗರು’ ಸಿನಿಮಾ ರಿಲೀಸ್​ ಆಯ್ತು. ಆ ಚಿತ್ರದ ಶೂಟಿಂಗ್​ ವೇಳೆ ಕೆಲವು ಅಚ್ಚರಿಯ​ ಘಟನೆಗಳು ನಡೆದಿದ್ದವು. ಚಿತ್ರದಲ್ಲಿ ಲೂಸ್​ ಮಾದ ಯೋಗಿ ಅವರ ಕಿವಿಗೆ ಏಟು ಬೀಳುವ ಒಂದು ದೃಶ್ಯ ಇದೆ. ಅದು ಆ ಸಿನಿಮಾದಲ್ಲಿನ ಪ್ರಮುಖ ದೃಶ್ಯಗಳಲ್ಲೊಂದು. ಆ ಬಗ್ಗೆ ರವಿ ವರ್ಮಾ ಮಾತನಾಡಿದ್ದಾರೆ. ‘ಲೂಸ್​ ಮಾದ ಅವರ ಕಿವಿಗೆ ಹೊಡೆಯುವ ದೃಶ್ಯಕ್ಕೆ ಅಂದಾಜು 10 ಬಂಬು ಒಡೆದಿದ್ದೇವೆ. ಅದು ಒಂದು ಎಮೋಷನಲ್​ ಸೀನ್​ ಆದ ಕಾರಣ ನೈಜವಾಗಿ ಮೂಡಿಬರಬೇಕು ಅಂತ ರಾಘಣ್ಣ ಹೇಳಿದ್ದರು. ಇಡೀ ಟೀಂ ಕಷ್ಟಪಟ್ಟು ಮಾಡಿದ ಸಿನಿಮಾ ಅದು. ಯೋಗಿ ಕಿವಿಗೆ ಏಟು ಬಿದ್ದಾಗ ಅಪ್ಪು ಅವರೇ ಬಂದು ಟಿಂಚರ್​ ಹಚ್ಚಿದ್ದರು. ಫೈಟ್​ ಮಾಸ್ಟರ್​ಗೆ ಇಂಥ ಹೀರೋ ಸಿಗಬೇಕು ಎಂಬ ಆಸೆ ಇರುತ್ತದೆ’ ಎಂದಿದ್ದಾರೆ ರವಿ ವರ್ಮಾ.

ರವಿ ವರ್ಮಾ ಸಾಹಸ ನಿರ್ದೇಶನ ಮಾಡಿದ್ದ ‘ಮಾಸ್ತಿ ಗುಡಿ’ ಸಿನಿಮಾದ ಶೂಟಿಂಗ್​ ವೇಳೆ ಅನಿಲ್​ ಮತ್ತು ಉದಯ್​ ದುರಾದೃಷ್ಟವಶಾತ್​ ನಿಧನರಾದರು. ಆ ಬಳಿಕ ಕನ್ನಡ ಚಿತ್ರರಂಗದಲ್ಲಿ ರವಿ ವರ್ಮಾ ಅವರಿಗೆ ಯಾರೂ ಕೆಲಸ ಕೊಡುತ್ತಿರಲಿಲ್ಲ. ಹಾಗಾಗಿ ಅವರು ತೆಲುಗು ಚಿತ್ರಗಳನ್ನು ಮಾಡುತ್ತಿದ್ದರು. ಆಗ ರವಿ ವರ್ಮಾ ಅವರನ್ನು ಮತ್ತೆ ಕರೆದು ಕೆಲಸ ಕೊಟ್ಟಿದ್ದೇ ಪುನೀತ್​ ರಾಜ್​ಕುಮಾರ್​. ಆ ಘಟನೆಯನ್ನು ಈಗಲೂ ನೆನಪಿಸಿಕೊಂಡು ಕೃತಜ್ಞತೆ ಸಲ್ಲಿಸುತ್ತಾರೆ ರವಿ ವರ್ಮಾ. ‘ಮಾಸ್ತಿ ಗುಡಿ ದುರಂತದ ಬಳಿಕ ನನ್ನ ಬಗ್ಗೆ ಜನರು ಏನೇನೋ ಮಾತನಾಡಿದರು. ಆ ಬಗ್ಗೆ ಮತ್ತೆ ಮಾತಾಡಲು ನಾನು ಇಷ್ಟಪಡಲ್ಲ. ಆ ಸಂದರ್ಭದಲ್ಲಿ ನಾನು ಮತ್ತೆ ಆ್ಯಕ್ಷನ್​ ಶುರು ಮಾಡಿದ್ದೇ ಅಪ್ಪು ಅವರ ‘ಅಂಜನಿ ಪುತ್ರ’ ಸಿನಿಮಾದಿಂದ. ಬನ್ನಿ ಮಾಸ್ಟರ್​ ಏನೂ ತಲೆ ಕೆಡಿಸಿಕೊಳ್ಳಬೇಡಿ ಅಂತ ಅವರು ನನಗೆ ಸಪೋರ್ಟ್​ ಮಾಡಿದ್ರು’ ಎಂದಿದ್ದಾರೆ ರವಿ ವರ್ಮಾ.

ಇದನ್ನೂ ಓದಿ:

ಪುನೀತ್​ ಫ್ಯಾನ್ಸ್​ ಕುತ್ತಿಗೆ ಮೇಲೆ ‘ಜೇಮ್ಸ್​’ ಟ್ಯಾಟೂ; ವೈರಲ್​ ಆಗ್ತಿದೆ ಅಭಿಮಾನದ ಫೋಟೋ

‘ಫ್ಯಾನ್ಸ್​ಗೆ ಸೆಲ್ಫಿ ಕೊಡಲು ಕಾರು ತಿರುಗಿಸಿಕೊಂಡು ವಾಪಸ್​ ಬಂದಿದ್ದರು ಪುನೀತ್​’: ಆ ಘಟನೆ ನೆನೆದ ಹರ್ಷ

RCB ವಿಜಯ ಸಂಭ್ರಮಾಚರಣೆ ವೇಳೆ ಕಾಲ್ತುಳಿತ, ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು
RCB ವಿಜಯ ಸಂಭ್ರಮಾಚರಣೆ ವೇಳೆ ಕಾಲ್ತುಳಿತ, ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು
ಮಗಳು ಕಾಲ್ತುಳಿತಕ್ಕೊಳಗಾಗಿ ಸತ್ತಿದ್ದು ಒಬ್ಬ ಮಹಿಳೆಗೆ ಗೊತ್ತೇ ಇರಲಿಲ್ಲವಂತೆ
ಮಗಳು ಕಾಲ್ತುಳಿತಕ್ಕೊಳಗಾಗಿ ಸತ್ತಿದ್ದು ಒಬ್ಬ ಮಹಿಳೆಗೆ ಗೊತ್ತೇ ಇರಲಿಲ್ಲವಂತೆ
ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಚಪ್ಪಲಿಗಳ ರಾಶಿ
ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಚಪ್ಪಲಿಗಳ ರಾಶಿ
ಪೊಲೀಸರನ್ನು ದೂರುವುದು ಬೇಡ, ಅವರಿಂದ ಉತ್ತಮ ಕೆಲಸವಾಗಿದೆ: ಶಿವಕುಮಾರ್
ಪೊಲೀಸರನ್ನು ದೂರುವುದು ಬೇಡ, ಅವರಿಂದ ಉತ್ತಮ ಕೆಲಸವಾಗಿದೆ: ಶಿವಕುಮಾರ್
ನೀವೇ ನಮ್ಮ ಜೀವ ಸ್ವರ; ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ಆರ್​ಸಿಬಿ
ನೀವೇ ನಮ್ಮ ಜೀವ ಸ್ವರ; ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ಆರ್​ಸಿಬಿ
ಬಸ್ ಹಿಂದಕ್ಕೆ ಚಲಿಸುತ್ತಿದ್ದಾಗ ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
ಬಸ್ ಹಿಂದಕ್ಕೆ ಚಲಿಸುತ್ತಿದ್ದಾಗ ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
Stampede: ಕಾಲ್ತುಳಿತದಲ್ಲಿ 10 ಸಾವು, ಆಸ್ಪತ್ರೆ ಎದುರು ಸಂಬಂಧಿಕರ ಆಕ್ರಂದನ
Stampede: ಕಾಲ್ತುಳಿತದಲ್ಲಿ 10 ಸಾವು, ಆಸ್ಪತ್ರೆ ಎದುರು ಸಂಬಂಧಿಕರ ಆಕ್ರಂದನ
ಸಿದ್ದರಾಮಯ್ಯ ಜೊತೆ ಮೊಮ್ಮಗನನ್ನು ಕಂಡು ಶಿವಕುಮಾರ್​ಗೆ ಕುತೂಹಲ
ಸಿದ್ದರಾಮಯ್ಯ ಜೊತೆ ಮೊಮ್ಮಗನನ್ನು ಕಂಡು ಶಿವಕುಮಾರ್​ಗೆ ಕುತೂಹಲ
ಆರ್​ಸಿಬಿ ತಂಡವನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು; ಜಾತ್ರೆಯಂತಾದ ಮೆಟ್ರೋ
ಆರ್​ಸಿಬಿ ತಂಡವನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು; ಜಾತ್ರೆಯಂತಾದ ಮೆಟ್ರೋ
ಕಮಲ್ ಹಾಸನ್ ವಿಚಾರ: ಕಾನೂನು ಕೈಗೆ ತೆಗೆದುಕೊಳ್ಳದಂತೆ ಡಿಕೆಶಿ ಮನವಿ
ಕಮಲ್ ಹಾಸನ್ ವಿಚಾರ: ಕಾನೂನು ಕೈಗೆ ತೆಗೆದುಕೊಳ್ಳದಂತೆ ಡಿಕೆಶಿ ಮನವಿ