AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mangli: ಕನ್ನಡಕ್ಕೆ ಬಂದ ಮಂಗ್ಲಿ! ‘ಕಣ್ಣೇ ಅದಿರಿಂದಿ..’ ಬಳಿಕ ‘ಕರಿಯಾ ಐ ಲವ್​ ಯೂ’ ಎಂದ ಸೆನ್ಸೇಷನಲ್​ ಸಿಂಗರ್​

Singer Mangli | Satyavathi: ತೆಲುಗಿನ ಖ್ಯಾತ ಗಾಯಕಿ ಮಂಗ್ಲಿ ಈಗ ಸ್ಯಾಂಡಲ್​ವುಡ್​ಗೆ ಕಾಲಿಟ್ಟಿದ್ದಾರೆ. ‘ಕಣ್ಣೇ ಅದಿರಿಂದಿ..’ ಸೂಪರ್​ ಹಿಟ್​ ಆದ ಬಳಿಕ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಬಂದಿದೆ.

Mangli: ಕನ್ನಡಕ್ಕೆ ಬಂದ ಮಂಗ್ಲಿ! ‘ಕಣ್ಣೇ ಅದಿರಿಂದಿ..’ ಬಳಿಕ ‘ಕರಿಯಾ ಐ ಲವ್​ ಯೂ’ ಎಂದ ಸೆನ್ಸೇಷನಲ್​ ಸಿಂಗರ್​
ಕರಿಯಾ ಐ ಲವ್​ ಯೂ ಚಿತ್ರತಂಡದ ಜೊತೆ ಗಾಯಕಿ ಮಂಗ್ಲಿ
ಮದನ್​ ಕುಮಾರ್​
| Updated By: Digi Tech Desk|

Updated on:Apr 05, 2021 | 11:25 AM

Share

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ನಟನೆಯ ರಾಬರ್ಟ್​ ಸಿನಿಮಾದ ತೆಲುಗು ಅವತರಣಿಕೆಯ ‘ಕಣ್ಣೇ ಅದಿರಿಂದಿ’ ಹಾಡು ಯಾವ ಮಟ್ಟಕ್ಕೆ ಜನಪ್ರಿಯ ಆಯಿತು ಎಂಬುದನ್ನು ಹೊಸದಾಗಿ ಹೇಳಬೇಕಾಗಿಲ್ಲ. ಆ ಗೀತೆ ಬಿಡುಗಡೆ ಆದ ಬಳಿಕ ಗಾಯಕಿ ಮಂಗ್ಲಿ ಅವರ ಖ್ಯಾತಿ ಕರ್ನಾಟಕದಲ್ಲಿ ಹೆಚ್ಚಾಯಿತು. ರಾಬರ್ಟ್​ ಸಿನಿಮಾದ ಪ್ರೀ ರಿಲೀಸ್​ ಇವೆಂಟ್​ನ ವೇದಿಕೆಯಲ್ಲಿ ಮಂಗ್ಲಿ ಹಾಡಿದ್ದು ಸಿಕ್ಕಾಪಟ್ಟೆ ವೈರಲ್​ ಆಯಿತು. ಅದರಿಂದಾಗಿ ಮಂಗ್ಲಿ ಅಭಿಮಾನಿಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆ ಆಯಿತು. ಹಾಗಾದರೆ ಅವರು ಕನ್ನಡದಲ್ಲಿ ಹಾಡುವುದು ಯಾವಾಗ ಎಂಬ ಪ್ರಶ್ನೆ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.

ಮಂಗ್ಲಿ ಅವರನ್ನು ಕನ್ನಡಕ್ಕೆ ಕರೆತರುವ ಪ್ರಯತ್ನ ಈಗ ಯಶಸ್ವಿ ಆಗಿದೆ. ‘ಕರಿಯಾ ಐ ಲವ್​ ಯೂ’ ಎಂಬ ಸಿನಿಮಾದ ಒಂದು ಹಾಡಿಗೆ ಮಂಗ್ಲಿ ಧ್ವನಿ ನೀಡಿದ್ದಾರೆ. ‘ಬಿಟ್​ ಬಂದ್​ ಹಳ್ಳಿಯಿಂದ ಬಿಟ್ಯಾಕ್​ ಬಂದೆ..’ ಎನ್ನುವ ಗೀತೆ ಅವರ ಕಂಠದಲ್ಲಿ ಮೂಡಿಬಂದಿದೆ. ಕೆಲವೇ ದಿನಗಳ ಹಿಂದೆ ಈ ಹಾಡಿನ ರೆಕಾರ್ಡಿಂಗ್​ ನಡೆದಿದೆ. ಯಾವಾಗ ರಿಲೀಸ್​ ಆಗಲಿದೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಮೂಡಿದೆ.

ಲೆಜೆಂಡರಿ ಸಂಗೀತ ನಿರ್ದೇಶಕ ಹಂಸಲೇಖ ಅವರ ಶಿಷ್ಯ ಲೋಕೇಶ್​ ‘ಕರಿಯಾ ಐ ಲವ್​ ಯೂ’ ಸಿನಿಮಾಗೆ ಸಂಗೀತ ಸಂಯೋಜಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಹಗರಿ ಬೊಮ್ಮನಹಳ್ಳಿ ಮಂಜುನಾಥ್​ ಅವರು ಮಂಗ್ಲಿಯನ್ನು ಕನ್ನಡಕ್ಕೆ ಕರೆತಂದವರು. ಮಂಜುನಾಥ್​ ಅವರೇ ಈ ಸಿನಿಮಾದ ಹೀರೋ. ಈ ಚಿತ್ರಕ್ಕೆ ತಿಪ್ಪೇಶ್​ ನಿರ್ದೇಶನ ಮಾಡಿದ್ದಾರೆ.

ಮಂಗ್ಲಿ ಅವರದ್ದು ಕಂಚಿನ ಕಂಠ. ಜಾನಪದ ಗೀತೆಗಳನ್ನು ತಮ್ಮದೇ ಶೈಲಿಯಲ್ಲಿ ಹೇಳುವ ಮೂಲಕ ಅವರು ಗುರುತಿಸಿಕೊಂಡಿದ್ದಾರೆ. ಅಂತಹ ಹಾಡುಗಳಿಗೆ ಅವರ ಧ್ವನಿ ವಿಶೇಷವಾಗಿ ಹೊಂದಿಕೆ ಆಗುತ್ತದೆ. ಈಗ ಅವರು ಹಾಡಿರುವ ‘ಬಿಟ್​ ಬಂದ್​ ಹಳ್ಳಿಯಿಂದ ಬಿಟ್ಯಾಕ್​ ಬಂದೆ..’ ಯಾವ ರೀತಿ ಇರಬಹುದು ಎಂಬ ಕೌತುಕ ಮೂಡಿದೆ.

ಪರಭಾಷೆಯಿಂದ ಅನೇಕ ಗಾಯಕರು ಕನ್ನಡದಲ್ಲಿ ಯಶಸ್ವಿ ಆಗಿದ್ದಾರೆ. ಕನ್ನಡಿಗರ ಮನ ಗೆದ್ದಿದ್ದಾರೆ. ಶ್ರೇಯಾ ಘೋಷಾಲ್​, ಸೋನು ನಿಗಮ್​ ಮುಂತಾದ ಗಾಯಕರ ರೀತಿಯೇ ಮಂಗ್ಲಿ ಕೂಡ ಕನ್ನಡದಲ್ಲಿ ಮಿಂಚುತ್ತಾರಾ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ: ‘ರಾಬರ್ಟ್​’ ಗಾಯಕಿ ಮಂಗ್ಲಿ ಹಾಡಿಗೆ ಕುಣಿದು ಕುಪ್ಪಳಿಸಿದ ಸದ್ಗುರು! ‘ಕಣ್ಣೇ ಅದಿರಿಂದಿ’ ಬಳಿಕ ಮತ್ತೊಮ್ಮೆ ಮೋಡಿ

(Kanne Adirindi singer Mangli new Kannada song in Kariya I Love You movie)

Published On - 11:09 am, Mon, 5 April 21

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ