AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೋಷಕ ಕಲಾವಿದರ ಸಂಘದ ವಿವಾದ; ಡಿಂಗ್ರಿ ನಾಗರಾಜ್​ ವಿರುದ್ಧ ಪದ್ಮಿನಿ ನಂದಾ ಸರಣಿ ಆರೋಪ

‘ನಮ್ಮ ಸಂಘದ ಚುನಾವಣೆ ನಡೆದು 1 ವರ್ಷದ ಮೇಲೆ 1 ತಿಂಗಳು ಆಗಿದೆ. ನಾನು ಗೆದ್ದ ಮೇಲೆ ಡಿಂಗ್ರಿ ನಾಗರಾಜ್​, ಆಡುಗೋಡಿ ಶ್ರೀನಿವಾಸ್​ ಹಾಗೂ ದಾವಣಗೆರೆ ಸುರೇಶ್​ ಅವರು ನನಗೆ ಲೆಕ್ಕಾಚಾರ ನೀಡಬೇಕಿತ್ತು. ಆದರೆ ಅವರು ಲೆಕ್ಕಾಚಾರ ಕೊಟ್ಟಿಲ್ಲ. ಲೆಕ್ಕಾಚಾರ ಕೇಳಿದ್ದಕ್ಕಾಗಿ ಅಂದಿನಿಂದ ಇಂದಿನ ತನಕ ನಮ್ಮ ಮೇಲೆ ಹಗೆ ಸಾಧಿಸಿದ್ದಾರೆ. ತೊಂದರೆ ಕೊಡುತ್ತಿದ್ದಾರೆ’ ಎಂದು ಪದ್ಮಿನಿ ನಂದಾ ಹೇಳಿದ್ದಾರೆ.

ಪೋಷಕ ಕಲಾವಿದರ ಸಂಘದ ವಿವಾದ; ಡಿಂಗ್ರಿ ನಾಗರಾಜ್​ ವಿರುದ್ಧ ಪದ್ಮಿನಿ ನಂದಾ ಸರಣಿ ಆರೋಪ
ಡಿಂಗ್ರಿ ನಾಗರಾಜ್​
ಮಾಲತೇಶ ಜಗ್ಗೀನ್
| Edited By: |

Updated on: Apr 08, 2024 | 10:51 PM

Share

ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ಸದಸ್ಯರ ಕಿತ್ತಾಟ ಬೀದಿಗೆ ಬಂದಿದೆ. ಈ ಕುರಿತಂತೆ ಸಂಘದ ಅಧ್ಯಕ್ಷೆ ಪದ್ಮಿನಿ ನಂದಾ (Padmini Nanda) ಅವರ ವಿರುದ್ಧ ಕೆಲವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಉಪ್ಪಾರಪೇಟೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಒಟ್ಟಾರೆ ಘಟನೆಯ ಬಗ್ಗೆ ಪದ್ಮಿನಿ ನಂದಾ ಅವರು ‘ಟಿವಿ9 ಕನ್ನಡ’ಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ನಟ ಡಿಂಗ್ರಿ ನಾಗರಾಜ್​ (Dingri Nagaraj) ವಿರುದ್ಧ ಅವರು ಸರಣಿ ಆರೋಪಗಳನ್ನು ಮಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

‘ಸಂಘದ ಚುನಾವಣೆ ನಡೆದು ಒಂದು ವರ್ಷದ ಮೇಲೆ ಒಂದು ತಿಂಗಳು ಆಗಿದೆ. ನಾನು ಗೆದ್ದ ಮೇಲೆ ಡಿಂಗ್ರಿ ನಾಗರಾಜ್​, ಆಡುಗೋಡಿ ಶ್ರೀನಿವಾಸ್​ ಹಾಗೂ ದಾವಣಗೆರೆ ಸುರೇಶ್​ ಅವರು ನನಗೆ ಲೆಕ್ಕಾಚಾರ ನೀಡಬೇಕಿತ್ತು. ಆದರೆ ಅವರು ಲೆಕ್ಕಾಚಾರ ಕೊಟ್ಟಿಲ್ಲ. ಲೆಕ್ಕಾಚಾರ ಕೇಳಿದ್ದಕ್ಕಾಗಿ ಅಂದಿನಿಂದ ಇಂದಿನ ತನಕ ನಮ್ಮ ಮೇಲೆ ಹಗೆ ಸಾಧಿಸಿದ್ದಾರೆ. ನಮಗೆ ಅಧಿಕಾರ ಮಾಡಲು ಬಿಡದೇ ತೊಂದರೆ ಕೊಡುತ್ತಿದ್ದಾರೆ’ ಎಂದು ಪದ್ಮಿನಿ ನಂದಾ ಹೇಳಿದ್ದಾರೆ.

‘ಉಮೇಶ್​ ಬಣಕಾರ್​ ಅವರು ನನಗೆ ಆಫೀಸ್​ಗೆ ಜಾಗ ನೀಡಿದ್ದರು. 8 ವರ್ಷಗಳಿಂದ ಉಚಿತವಾಗಿ ಕೊಟ್ಟಿದ್ದರು. ಖಾಲಿ ಮಾಡಬೇಕಾದ ಸಂದರ್ಭದಲ್ಲಿ ಕೆಲವರು ಸಾಮಾಗ್ರಿಗಳನ್ನು ಖಾಲಿ ಮಾಡಲು ಬಿಡಲಿಲ್ಲ. ಹೆಣ್ಣಿನ ಮುಂದೆ ಸೋತ ಕಾರಣಕ್ಕೆ ಡಿಂಗ್ರಿ ನಾಗರಾಜ್​ ಅವರು ಬ್ಯಾಂಕ್​ ಖಾತೆ ಹಸ್ತಾಂತರ ಮಾಡಿಲ್ಲ. ಕಲಾವಿದರಿಗೆ ಸಹಾಯ ಮಾಡಲು ಬಿಟ್ಟಿಲ್ಲ. ಮಾನಸಿಕವಾಗಿ ತುಂಬ ಹಿಂಸೆ ಕೊಡುತ್ತಿದ್ದಾರೆ. ನಮ್ಮ ಕುಟುಂಬದವರಿಗೆ ಬೈಯ್ಯುತ್ತಿದ್ದಾರೆ. ಆಫೀಸ್​ ಖಾಲಿ ಮಾಡಲು ಯಾವ ಪದಾಧಿಕಾರಿಗಳೂ ಬರಲಿಲ್ಲ’ ಎಂದಿದ್ದಾರೆ ಪದ್ಮಿನಿ ನಂದಾ.

ಇದನ್ನೂ ಓದಿ: ಬೀದಿಗೆ ಬಿತ್ತು ಪೋಷಕ ಕಲಾವಿದರ ಸಂಘದ ಗಲಾಟೆ; ನಟಿ ರಾಣಿ ಮಾಡಿದ ಆರೋಪಗಳು ಒಂದೆರಡಲ್ಲ

‘ಈಗ ಕಳೆದ 6 ತಿಂಗಳಿಂದ ಬಣಕಾರ್​ ಅವರು ಹೊಸ ಆಫೀಸ್​ ನೀಡಿದ್ದರು. ಅಲ್ಲಿ ನಾವು ಕಾರ್ಯ ಚಟುವಟಿಕೆ ಶುರು ಮಾಡಿದ್ದೆವು. ಬೈಲಾ ಪ್ರಕಾರ 3 ಮೀಟಿಂಗ್​ಗೆ ಬಾರದ ಪದಾಧಿಕಾರಿಗಳನ್ನು ತೆಗೆದುಹಾಕಿ, ಇನ್ನುಳಿದವರ ಜೊತೆ ಕೆಲಸ ಮಾಡಬೇಕು. ಇತ್ತೀಚೆಗೆ ನಾವು ವಿಶ್ವ ರಂಗಭೂಮಿ ದಿನ ಆಚರಣೆ ಮಾಡಿದೆವು. ಆ ಕಾರ್ಯಕ್ರಮಕ್ಕೆ ಗಣ್ಯರು ಆಗಮಿಸಿದ್ದರು. ಆ ಕಾರ್ಯಕ್ರಮ ಆದಾಗಿನಿಂದ ನವನೀತಾ ಹಾಗೂ ಇತರೆ ಪದಾಧಿಕಾರಿಗಳು ನನ್ನ ಮೇಲೆ ಕೇಸ್​ ಹಾಕಿದ್ದಾರೆ. ನಮ್ಮ ಕಚೇರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ’ ಎಂದು ಪದ್ಮಿನಿ ನಂದಾ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ