AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೋಷಕ ಕಲಾವಿದರ ಸಂಘದ ವಿವಾದ; ಡಿಂಗ್ರಿ ನಾಗರಾಜ್​ ವಿರುದ್ಧ ಪದ್ಮಿನಿ ನಂದಾ ಸರಣಿ ಆರೋಪ

‘ನಮ್ಮ ಸಂಘದ ಚುನಾವಣೆ ನಡೆದು 1 ವರ್ಷದ ಮೇಲೆ 1 ತಿಂಗಳು ಆಗಿದೆ. ನಾನು ಗೆದ್ದ ಮೇಲೆ ಡಿಂಗ್ರಿ ನಾಗರಾಜ್​, ಆಡುಗೋಡಿ ಶ್ರೀನಿವಾಸ್​ ಹಾಗೂ ದಾವಣಗೆರೆ ಸುರೇಶ್​ ಅವರು ನನಗೆ ಲೆಕ್ಕಾಚಾರ ನೀಡಬೇಕಿತ್ತು. ಆದರೆ ಅವರು ಲೆಕ್ಕಾಚಾರ ಕೊಟ್ಟಿಲ್ಲ. ಲೆಕ್ಕಾಚಾರ ಕೇಳಿದ್ದಕ್ಕಾಗಿ ಅಂದಿನಿಂದ ಇಂದಿನ ತನಕ ನಮ್ಮ ಮೇಲೆ ಹಗೆ ಸಾಧಿಸಿದ್ದಾರೆ. ತೊಂದರೆ ಕೊಡುತ್ತಿದ್ದಾರೆ’ ಎಂದು ಪದ್ಮಿನಿ ನಂದಾ ಹೇಳಿದ್ದಾರೆ.

ಪೋಷಕ ಕಲಾವಿದರ ಸಂಘದ ವಿವಾದ; ಡಿಂಗ್ರಿ ನಾಗರಾಜ್​ ವಿರುದ್ಧ ಪದ್ಮಿನಿ ನಂದಾ ಸರಣಿ ಆರೋಪ
ಡಿಂಗ್ರಿ ನಾಗರಾಜ್​
Malatesh Jaggin
| Updated By: ಮದನ್​ ಕುಮಾರ್​|

Updated on: Apr 08, 2024 | 10:51 PM

Share

ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ಸದಸ್ಯರ ಕಿತ್ತಾಟ ಬೀದಿಗೆ ಬಂದಿದೆ. ಈ ಕುರಿತಂತೆ ಸಂಘದ ಅಧ್ಯಕ್ಷೆ ಪದ್ಮಿನಿ ನಂದಾ (Padmini Nanda) ಅವರ ವಿರುದ್ಧ ಕೆಲವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಉಪ್ಪಾರಪೇಟೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಒಟ್ಟಾರೆ ಘಟನೆಯ ಬಗ್ಗೆ ಪದ್ಮಿನಿ ನಂದಾ ಅವರು ‘ಟಿವಿ9 ಕನ್ನಡ’ಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ನಟ ಡಿಂಗ್ರಿ ನಾಗರಾಜ್​ (Dingri Nagaraj) ವಿರುದ್ಧ ಅವರು ಸರಣಿ ಆರೋಪಗಳನ್ನು ಮಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

‘ಸಂಘದ ಚುನಾವಣೆ ನಡೆದು ಒಂದು ವರ್ಷದ ಮೇಲೆ ಒಂದು ತಿಂಗಳು ಆಗಿದೆ. ನಾನು ಗೆದ್ದ ಮೇಲೆ ಡಿಂಗ್ರಿ ನಾಗರಾಜ್​, ಆಡುಗೋಡಿ ಶ್ರೀನಿವಾಸ್​ ಹಾಗೂ ದಾವಣಗೆರೆ ಸುರೇಶ್​ ಅವರು ನನಗೆ ಲೆಕ್ಕಾಚಾರ ನೀಡಬೇಕಿತ್ತು. ಆದರೆ ಅವರು ಲೆಕ್ಕಾಚಾರ ಕೊಟ್ಟಿಲ್ಲ. ಲೆಕ್ಕಾಚಾರ ಕೇಳಿದ್ದಕ್ಕಾಗಿ ಅಂದಿನಿಂದ ಇಂದಿನ ತನಕ ನಮ್ಮ ಮೇಲೆ ಹಗೆ ಸಾಧಿಸಿದ್ದಾರೆ. ನಮಗೆ ಅಧಿಕಾರ ಮಾಡಲು ಬಿಡದೇ ತೊಂದರೆ ಕೊಡುತ್ತಿದ್ದಾರೆ’ ಎಂದು ಪದ್ಮಿನಿ ನಂದಾ ಹೇಳಿದ್ದಾರೆ.

‘ಉಮೇಶ್​ ಬಣಕಾರ್​ ಅವರು ನನಗೆ ಆಫೀಸ್​ಗೆ ಜಾಗ ನೀಡಿದ್ದರು. 8 ವರ್ಷಗಳಿಂದ ಉಚಿತವಾಗಿ ಕೊಟ್ಟಿದ್ದರು. ಖಾಲಿ ಮಾಡಬೇಕಾದ ಸಂದರ್ಭದಲ್ಲಿ ಕೆಲವರು ಸಾಮಾಗ್ರಿಗಳನ್ನು ಖಾಲಿ ಮಾಡಲು ಬಿಡಲಿಲ್ಲ. ಹೆಣ್ಣಿನ ಮುಂದೆ ಸೋತ ಕಾರಣಕ್ಕೆ ಡಿಂಗ್ರಿ ನಾಗರಾಜ್​ ಅವರು ಬ್ಯಾಂಕ್​ ಖಾತೆ ಹಸ್ತಾಂತರ ಮಾಡಿಲ್ಲ. ಕಲಾವಿದರಿಗೆ ಸಹಾಯ ಮಾಡಲು ಬಿಟ್ಟಿಲ್ಲ. ಮಾನಸಿಕವಾಗಿ ತುಂಬ ಹಿಂಸೆ ಕೊಡುತ್ತಿದ್ದಾರೆ. ನಮ್ಮ ಕುಟುಂಬದವರಿಗೆ ಬೈಯ್ಯುತ್ತಿದ್ದಾರೆ. ಆಫೀಸ್​ ಖಾಲಿ ಮಾಡಲು ಯಾವ ಪದಾಧಿಕಾರಿಗಳೂ ಬರಲಿಲ್ಲ’ ಎಂದಿದ್ದಾರೆ ಪದ್ಮಿನಿ ನಂದಾ.

ಇದನ್ನೂ ಓದಿ: ಬೀದಿಗೆ ಬಿತ್ತು ಪೋಷಕ ಕಲಾವಿದರ ಸಂಘದ ಗಲಾಟೆ; ನಟಿ ರಾಣಿ ಮಾಡಿದ ಆರೋಪಗಳು ಒಂದೆರಡಲ್ಲ

‘ಈಗ ಕಳೆದ 6 ತಿಂಗಳಿಂದ ಬಣಕಾರ್​ ಅವರು ಹೊಸ ಆಫೀಸ್​ ನೀಡಿದ್ದರು. ಅಲ್ಲಿ ನಾವು ಕಾರ್ಯ ಚಟುವಟಿಕೆ ಶುರು ಮಾಡಿದ್ದೆವು. ಬೈಲಾ ಪ್ರಕಾರ 3 ಮೀಟಿಂಗ್​ಗೆ ಬಾರದ ಪದಾಧಿಕಾರಿಗಳನ್ನು ತೆಗೆದುಹಾಕಿ, ಇನ್ನುಳಿದವರ ಜೊತೆ ಕೆಲಸ ಮಾಡಬೇಕು. ಇತ್ತೀಚೆಗೆ ನಾವು ವಿಶ್ವ ರಂಗಭೂಮಿ ದಿನ ಆಚರಣೆ ಮಾಡಿದೆವು. ಆ ಕಾರ್ಯಕ್ರಮಕ್ಕೆ ಗಣ್ಯರು ಆಗಮಿಸಿದ್ದರು. ಆ ಕಾರ್ಯಕ್ರಮ ಆದಾಗಿನಿಂದ ನವನೀತಾ ಹಾಗೂ ಇತರೆ ಪದಾಧಿಕಾರಿಗಳು ನನ್ನ ಮೇಲೆ ಕೇಸ್​ ಹಾಕಿದ್ದಾರೆ. ನಮ್ಮ ಕಚೇರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ’ ಎಂದು ಪದ್ಮಿನಿ ನಂದಾ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ