AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈದರಾಬಾದ್​ನಲ್ಲಿ ಮನೆ ಖರೀದಿಸಿದ ಕಿಚ್ಚ ಸುದೀಪ್​; ಇದರ ಬೆಲೆ ಎಷ್ಟು ಗೊತ್ತಾ?

ಸಾಕಷ್ಟು ಸಿನಿಮಾ ಹಾಗೂ ಜಾಹೀರಾತಿನ ಶೂಟಿಂಗ್​ಗೆ ಕಿಚ್ಚ ಹೈದರಾಬಾದ್​ಗೆ ತೆರಳುತ್ತಿರುತ್ತಾರೆ. ಈ ಕಾರಣಕ್ಕೆ ಅವರು ಹೈದರಾಬಾದ್​ನಲ್ಲಿ ಒಂದು ಮನೆ ಖರೀದಿಸೋ ನಿರ್ಧಾರಕ್ಕೆ ಬಂದಿದ್ದರು.

ಹೈದರಾಬಾದ್​ನಲ್ಲಿ ಮನೆ ಖರೀದಿಸಿದ ಕಿಚ್ಚ ಸುದೀಪ್​; ಇದರ ಬೆಲೆ ಎಷ್ಟು ಗೊತ್ತಾ?
ಅಭಿನಯ ಚಕ್ರವರ್ತಿ ಸುದೀಪ್
Skanda
| Edited By: |

Updated on: Dec 01, 2020 | 4:53 PM

Share

ನಟ ಕಿಚ್ಚ ಸುದೀಪ್​ ಇತ್ತೀಚೆಗಷ್ಟೇ ತೆಲುಗು ಬಿಗ್ ​ಬಾಸ್​​ನಲ್ಲಿ ಕಾಣಿಸಿಕೊಂಡಿದ್ದರು. ತೆಲುಗು ಬಿಗ್ ​ಬಾಸ್​ ವೇದಿಕೆ ಮೇಲೆ ಕನ್ನಡದ ‘ಫ್ಯಾಂಟಮ್’ ಚಿತ್ರದ ಬಗ್ಗೆ ಮಾತನಾಡಿದ್ದ ವಿಡಿಯೋ ಸಾಕಷ್ಟು ವೈರಲ್​ ಆಗಿತ್ತು. ಸುದೀಪ್ ಬಿಗ್​ ಬಾಸ್​ ಶೋನಲ್ಲಿ ಪಾಲ್ಗೊಳ್ಳಲು​ ಹೈದರಾಬಾದ್​ಗೆ ತೆರಳಿದ್ದರು ಎನ್ನುವ ವಿಚಾರದ ಬೆನ್ನಲ್ಳೇ ಮತ್ತೊಂದು ಸುದ್ದಿ ಹರಿದಾಡಿದೆ. ಅದೇನೆಂದರೆ ಹೈದರಾಬಾದ್​​ನಲ್ಲಿ ಕಿಚ್ಚ ಐಷಾರಾಮಿ ಮನೆ ಖರೀದಿ ಮಾಡಿದ್ದಾರಂತೆ.

ಕಿಚ್ಚ ಸುದೀಪ್​ ಟಾಲಿವುಡ್​ ಪಾಲಿಗೆ ಹೊಸಬರೇನಲ್ಲ. ರಾಜಮೌಳಿ ನಿರ್ದೇಶನದ ‘ಈಗ’ ಸಿನಿಮಾದಲ್ಲಿ ನಟಿಸಿ ತೆಲುಗಿ ಮಂದಿಗೆ ಪರಿಚಯಗೊಂಡಿದ್ದರು. ನಂತರ ಅವರು ಬಾಹುಬಲಿ-1 ಸಿನಿಮಾದಲ್ಲೂ ಬಣ್ಣ ಹಚ್ಚಿದ್ದರು. ಸುದೀಪ್​ ನಟನೆಯ ಪೈಲ್ವಾನ್ ಸಿನಿಮಾ ಕೂಡ ತೆಲುಗಿಗೆ ಡಬ್​ ಆಗಿ ತೆರೆಕಂಡಿದೆ. ಇನ್ನು ಸಾಕಷ್ಟು ಸಿನಿಮಾ ಹಾಗೂ ಜಾಹೀರಾತಿನ ಶೂಟಿಂಗ್​ಗೆ ಕಿಚ್ಚ ಹೈದರಾಬಾದ್​ಗೆ ತೆರಳುತ್ತಿರುತ್ತಾರೆ. ಈ ಕಾರಣಕ್ಕೆ ಅವರು ಹೈದರಾಬಾದ್​ನಲ್ಲಿ ಒಂದು ಮನೆ ಖರೀದಿಸುವ ನಿರ್ಧಾರಕ್ಕೆ ಬಂದಿದ್ದರು.

ಅಂತೆಯೇ, ಹೈದರಾಬಾದ್​ನ ಗಚಿಬೌಲಿ ಭಾಗದಲ್ಲಿ ಇತ್ತೀಚೆಗೆ ಸುದೀಪ್​ ಮನೆ ಖರೀದಿ ಮಾಡಿದ್ದಾರೆ. ಈ ಮನೆಯ ಬೆಲೆ ಬರೋಬ್ಬರಿ 5 ಕೋಟಿ ರೂಪಾಯಿ ಎನ್ನಲಾಗಿದೆ! ಈ ಮನೆ ತುಂಬಾನೇ ಐಷಾರಾಮಿ ಆಗಿದ್ದು, ಹೈದರಾಬಾದ್​ಗೆ ಶೂಟಿಂಗ್​ಗೆ ತೆರಳಿದಾಗ ಸುದೀಪ್​ ಇಲ್ಲಿಯೇ ವಾಸ ಮಾಡಲಿದ್ದಾರಂತೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ ಸುದೀಪ್​ ‘ಕೋಟಿಗೊಬ್ಬ 3’ ಹಾಗೂ ‘ಫ್ಯಾಂಟಮ್’ ಚಿತ್ರಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಇದರ ಜೊತೆಗೆ ಶೀಘ್ರದಲ್ಲೇ ಪ್ರಸಾರವಾಗಲಿರುವ ಕನ್ನಡದ ಬಿಗ್​ಬಾಸ್​ ನಿರ್ವಹಣೆಯ ಜವಾಬ್ದಾರಿ ಕೂಡ ಸುದೀಪ್​ ಅವರದ್ದೇ.

ಇದನ್ನೂ ಓದಿ: ದೀಪಾವಳಿಗೆ ಕಿಚ್ಚನ ಧಮಾಲ್​: ಹಬ್ಬದಂದು ‘ಪಟಾಕಿ ಪೋರಿ’ ಹಿಂದೆ ಬಿದ್ದ ಸುದೀಪ್​!

Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್