AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದೇವರು ಒಳ್ಳೆಯವರನ್ನು ಕೈ ಬಿಡಲ್ಲ’: ದರ್ಶನ್​ ಬಗ್ಗೆ ಮಾತನಾಡಿದ ಹಿರಿಯ ನಟಿ ಮಾಲಾಶ್ರೀ

ದಿನದಿಂದ ದಿನಕ್ಕೆ ದರ್ಶನ್​ಗೆ ಸಂಕಷ್ಟ ಹೆಚ್ಚಾಗುತ್ತಿದೆ. ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಪಡೆದು ಕಾನೂನು ಉಲ್ಲಂಘನೆ ಮಾಡಿದ ಅವರಿಗೆ ಈಗ ಬಳ್ಳಾರಿ ಜೈಲೇ ಗತಿ ಆಗಿದೆ. ಚಿತ್ರರಂಗದಲ್ಲಿ ಅನೇಕರ ಜೊತೆಗೆ ದರ್ಶನ್​ ಆಪ್ತ ಒಡನಾಟ ಇಟ್ಟುಕೊಂಡಿದ್ದಾರೆ. ಅಂಥವರಲ್ಲಿ ಹಿರಿಯ ನಟಿ ಮಾಲಾಶ್ರೀ ಕೂಡ ಒಬ್ಬರು. ದರ್ಶನ್​ ಅವರ ಈಗಿನ ಪರಿಸ್ಥಿತಿ ಬಗ್ಗೆ ಮಾಲಾಶ್ರೀ ಮಾತಾಡಿದ್ದಾರೆ.

‘ದೇವರು ಒಳ್ಳೆಯವರನ್ನು ಕೈ ಬಿಡಲ್ಲ’: ದರ್ಶನ್​ ಬಗ್ಗೆ ಮಾತನಾಡಿದ ಹಿರಿಯ ನಟಿ ಮಾಲಾಶ್ರೀ
ಮಾಲಾಶ್ರೀ, ದರ್ಶನ್​
ಮದನ್​ ಕುಮಾರ್​
|

Updated on: Aug 30, 2024 | 4:45 PM

Share

ದರ್ಶನ್​ ನಟನೆಯ ‘ಕಾಟೇರ’ ಸಿನಿಮಾ ಮೂಲಕ ಮಾಲಾಶ್ರೀ ಪುತ್ರಿ ಆರಾಧನಾ ಅವರು ಚಿತ್ರರಂಗಕ್ಕೆ ಪ್ರವೇಶ ಪಡೆದರು. ಅಂಥ ಅವಕಾಶ ಸಿಕ್ಕಿದ್ದಕ್ಕೆ ಮಾಲಾಶ್ರೀ ಅವರು ಚಿರಋಣಿ ಆಗಿದ್ದಾರೆ. ಈ ಬಗ್ಗೆ ಮಾಲಾಶ್ರೀ ಅವರು ಮಾತನಾಡಿದ್ದಾರೆ. ‘ನನ್ನ ಮಗಳಿಗೆ ಕಾಟೇರ ಸಿನಿಮಾದಲ್ಲಿ ಅವಕಾಶ ನೀಡಿದ್ದಕ್ಕೆ ಥ್ಯಾಂಕ್ಸ್​ ಎಂದಿದ್ದೆ. ಅದಕ್ಕೆ ಪ್ರತಿಕ್ರಿಯಿಸಿದ್ದ ದರ್ಶನ್​ ಅವರು, ನಿಮ್ಮ ಮಗಳ ಜೊತೆ ನಟಿಸೋದು ನನ್ನ ಅದೃಷ್ಟ ಅಂತ ದೊಡ್ಡ ಮಾತು ಹೇಳಿದ್ದರು. ಅಂಥ ದೊಡ್ಡ ಮನುಷ್ಯ ಅವರು’ ಎಂದಿದ್ದಾರೆ ಮಾಲಾಶ್ರೀ.

‘ನನಗೆ ಗೊತ್ತಿರುವ ಹಾಗೆ ದರ್ಶನ್​ ಅವರದ್ದು ಒಳ್ಳೆಯ ವ್ಯಕ್ತಿತ್ವ. ಅವರೊಬ್ಬ ಜೆಂಟಲ್​ಮ್ಯಾನ್​. ನನ್ನ ಜೊತೆ, ನನ್ನ ಮಗಳ ಜೊತೆ ಇರುವಾಗ ತುಂಬ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಅವರ ಗೌರವ, ಆತಿಥ್ಯ ಎಲ್ಲವೂ ಚೆನ್ನಾಗಿತ್ತು’ ಎಂದು ಮಾಲಾಶ್ರೀ ಹೇಳಿದ್ದಾರೆ. ದರ್ಶನ್​ ಬೇಗ ಜೈಲಿನಿಂದ ಹೊರಬರುತ್ತಾರಾ ಎಂದು ಹೇಳಿದ್ದಕ್ಕೆ, ‘ನಾನು ಕಾನೂನು ಮತ್ತು ದೇವರ ಮೇಲೆ ನಂಬಿಕೆ ಇಟ್ಟುಕೊಂಡಿದ್ದೇನೆ. ದೇವರು ಒಳ್ಳೆಯವರನ್ನು, ಒಳ್ಳೆಯದನ್ನು ಕೈ ಬಿಡಲ್ಲ’ ಎಂದು ಮಾಲಾಶ್ರೀ ಭರವಸೆ ವ್ಯಕ್ತಪಡಿಸಿದ್ದಾರೆ.

‘ದರ್ಶನ್​ ದುಡುಕಿನಿಂದ ಈ ಪ್ರಕರಣ ಆಯ್ತಾ ಎಂಬುದಕ್ಕೆ ನನ್ನ ಬಳಿ ಉತ್ತರ ಇಲ್ಲ. ನನಗೆ ಗೊತ್ತಿರುವ ದರ್ಶನ್​ ಅವರ ಸ್ವಭಾವವೇ ಬೇರೆ. ಅಭಿಮಾನಿಗಳು ದರ್ಶನ್​ ಮೇಲೆ ಎಷ್ಟು ಪ್ರೀತಿ ಇಟ್ಟುಕೊಂಡಿದ್ದಾರೋ ನಾನು ಮತ್ತು ಆರಾಧನಾ ಕೂಡ ಅಷ್ಟೇ ಪ್ರೀತಿ-ಅಭಿಮಾನ ಇಟ್ಟುಕೊಂಡಿದ್ದೇವೆ. ಅದರಲ್ಲಿ ಅನುಮಾನವೇ ಇಲ್ಲ’ ಎಂದು ಮಾಲಾಶ್ರೀ ಅವರು ಹೇಳಿದ್ದಾರೆ. ಪುತ್ರಿ ಆರಾಧನಾ ನಟಿಸುವ ಎರಡನೇ ಸಿನಿಮಾ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡುವುದಾಗಿ ಮಾಲಾಶ್ರೀ ತಿಳಿಸಿದ್ದಾರೆ.

ಇದನ್ನೂ ಓದಿ: ಖ್ಯಾತ ಫೊಟೊಗ್ರಾಫರ್ ಡಬು ರತ್ನಾನಿ ಕ್ಯಾಮೆರಾದಲ್ಲಿ ಸೆರೆಯಾದ ಮಾಲಾಶ್ರೀ ಪುತ್ರಿ ಆರಾಧನಾ

‘ರಾಮು ನಿರ್ಮಾಣ ಮಾಡಿದ್ದ ‘ಕಲಾಸಿಪಾಳ್ಯ’ ಸಿನಿಮಾದಿಂದ ನನಗೆ ದರ್ಶನ್​ ಪರಿಚಯ. ಅವರು ತುಂಬ ವಿನಯವಂತ ವ್ಯಕ್ತಿ. ‘ಕಾಟೇರ’ ಸಮಯದಲ್ಲೂ ಹಾಗೆಯೇ ಇದ್ದರು. ಯಾವುದೇ ಬದಲಾವಣೆ ಇರಲಿಲ್ಲ. ಕಾಟೇರ ಸಿನಿಮಾದಲ್ಲಿ ಆರಾಧನಾಗೆ ಅವರು ಸಾಕಷ್ಟು ಹೇಳಿಕೊಟ್ಟಿದ್ದಾರೆ. ಸೆಟ್​ಗೆ ಹೋದಾಗ ನನ್ನನ್ನೂ ಅಮ್ಮ ಅಂತ ಮಾತನಾಡಿಸಿದರು’ ಎಂದು ಶೂಟಿಂಗ್​ ದಿನಗಳನ್ನು ಮಾಲಾಶ್ರೀ ನೆನಪು ಮಾಡಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More