AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಒಡ್ರೋ.. ಒಡ್ರೋ’ ಹಾಡು ಹೇಳಿದ್ದ ಅಭಿಮಾನಿ ಬಳಿ ‘ಬಿಟ್ಬಿಡು ಸಾಕು’ ಎಂದು ಮನವಿ ಮಾಡಿದ್ದ ಧ್ರುವ ಸರ್ಜಾ

ಧ್ರುವ ಸರ್ಜಾ ಅವರು ಪ್ರತಿ ಭಾನುವಾರ ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ. ಈ ವೇಳೆ ಫ್ಯಾನ್ಸ್ ಡೈಲಾಗ್ ಹೇಳುತ್ತಾರೆ. ಇದನ್ನು ನೋಡಿದ ಅನೇಕರು ಧ್ರುವ ಸರ್ಜಾ ಅವರಿಗೆ ಸಾಕಷ್ಟು ತಾಳ್ಮೆ ಇದೆ ಎಂದೆಲ್ಲ ಕಮೆಂಟ್ ಮಾಡಿದ್ದೂ ಇದೆ. ಈಗ ಧ್ರುವ ಸರ್ಜಾ ಅವರು ಆ ವಿಶೇಷ ಅಭಿಮಾನಿ ಬಗ್ಗೆ ಹಾಗೂ ಅವರ ಬಳಿಕ ಮಾಡಿಕೊಂಡಿದ್ದ ಮನವಿ ಬಗ್ಗೆ ಮಾತನಾಡಿದ್ದಾರೆ

‘ಒಡ್ರೋ.. ಒಡ್ರೋ’ ಹಾಡು ಹೇಳಿದ್ದ ಅಭಿಮಾನಿ ಬಳಿ ‘ಬಿಟ್ಬಿಡು ಸಾಕು’ ಎಂದು ಮನವಿ ಮಾಡಿದ್ದ ಧ್ರುವ ಸರ್ಜಾ
ಧ್ರುವ ಸರ್ಜಾ
ರಾಜೇಶ್ ದುಗ್ಗುಮನೆ
|

Updated on: Aug 14, 2024 | 11:40 AM

Share

ಧ್ರುವ ಸರ್ಜಾ ಅವರ ಅಭಿಮಾನಿ ಹೇಳಿದ್ದ ‘ಒಡ್ರೋ ಒಡ್ರೋ..’ ಸಾಂಗ್ ಸಖತ್ ಟ್ರೆಂಡ್ ಸೃಷ್ಟಿ ಮಾಡಿದೆ. ಈ ಹಾಡನ್ನು ಟ್ರೋಲ್ ಪೇಜ್​ಗಳು ಬಳಕೆ ಮಾಡಿಕೊಳ್ಳುತ್ತಿವೆ. ಕೆಲವರು ಧ್ರುವ ಸರ್ಜಾ ಅವರಿಗೆ ಸಾಕಷ್ಟು ತಾಳ್ಮೆ ಇದೆ ಎಂದೆಲ್ಲ ಕಮೆಂಟ್ ಮಾಡಿದ್ದೂ ಇದೆ. ಈಗ ಧ್ರುವ ಸರ್ಜಾ ಅವರು ಆ ವಿಶೇಷ ಅಭಿಮಾನಿ ಬಗ್ಗೆ ಹಾಗೂ ಅವರ ಬಳಿಕ ಮಾಡಿಕೊಂಡಿದ್ದ ಮನವಿ ಬಗ್ಗೆ ಮಾತನಾಡಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ. ಟ್ರೋಲ್​ ಪೇಜ್​ಗಳಲ್ಲಿ ಧ್ರುವ ಸರ್ಜಾ ಹೇಳಿಕೆಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಧ್ರುವ ಸರ್ಜಾ ಅವರು ಪ್ರತಿ ಭಾನುವಾರ ಮನೆ ಸಮೀಪ ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ. ಅನೇಕರು ಬಂದು ಸೆಲ್ಫಿ ತೆಗೆಸಿಕೊಂಡು ಹೋಗುತ್ತಾರೆ. ಇನ್ನೂ ಕೆಲವರು ಹಾಡು ಹೇಳುತ್ತಾರೆ, ಡೈಲಾಗ್ ಹೊಡೆಯುತ್ತಾರೆ. ಅದೇ ರೀತಿ ಅಭಿಮಾನಿಯೋರ್ವ ಬಂದು ಸಖತ್ ಆಗಿ ಹಾಡು ಹೇಳಿದ್ದ. ಇದಕ್ಕೆ ಕೆಲವರು ರಿಮಿಕ್ಸ್ ಕೂಡ ಮಾಡಿದ್ದರು. ಅವರ ಬಳಿ ಧ್ರುವ ಸರ್ಜಾ ಅವರು ‘ಈ ಬಾರಿ ಬಿಟ್ಬಿಡು’ ಎಂಬ ಕೋರಿಕೆ ಇಟ್ಟಿದ್ದರು.

‘ಒಡ್ರೋ ಒಡ್ರೋ ಇದು ಸರ್ಜಾ ಅಡ್ಡ.. ಸರ್ಜಾ ಬಂದ್ರು ಸರ್ಜಾ ಆ್ಯಕ್ಷನ್ ಪ್ರಿನ್ಸ್ ಸರ್ಜಾ. ಹೊಡಿರಿ ನಗಾರಿ, ಊದಿರಿ ತುತ್ತೂರಿ.. ಎರಡೇ ಎರಡು ಸ್ಟೆಪ್ ಹಾಕಿ ಬಿಡೋಣ. ಜೈ ಜೈ ಶ್ರೀರಾಮ್.. ಶ್ರೀರಾಮ ಧೂತ ಹನುಮಾನ’ ಎಂಬ ಸಾಲುಗಳನ್ನು ಈ ಹಾಡು ಒಳಗೊಂಡಿತ್ತು.

ಇದನ್ನೂ ಓದಿ: ಮಾರ್ಟಿನ್ ಟ್ರೇಲರ್​ ಬಿಡುಗಡೆ: ಮುಂಬೈನಲ್ಲಿ ಧ್ರುವ ಸರ್ಜಾ ಅಬ್ಬರ; ಹೆಚ್ಚಾಯಿತು ಸಿನಿಮಾ ಹೈಪ್​ ಈ ವ್ಯಕ್ತಿ ಬಗ್ಗೆ ಧ್ರುವ ಮಾತನಾಡಿದ್ದಾರೆ. ‘ಆತ ಬಂದು ಒಂದು ಹಾಡು ಹೇಳ್ತೀನಿ ಎಂದು ಹೇಳಿದ. ಹಾಡು ಹೇಳಬೇಡ, ಸಾಕಷ್ಟು ಜನರಿದ್ದಾರೆ, ಸಮಯ ಬೇಕಾಗುತ್ತದೆ ಎಂದು ಹೇಳಿದೆ. ಆದಾಗ್ಯೂ ಹಾಡು ಹೇಳಲೇ ಬೇಕು ಎಂದ. 2-3 ನಿಮಿಷ ಹಾಡು ಹೇಳಿದ. ನಾನು ನಿಲ್ಲಿಸು ಎಂದಿಲ್ಲ. ನಂತರ ಹೋದವನು 3-4 ಗಂಟೆ ಬಿಟ್ಟು ಮತ್ತೆ ಬಂದ. ಇನ್ನೊಂದು ಹಾಡು ಹೇಳಲಾ ಎಂದು ಕೇಳಿದ. ಈ ಭಾನುವಾರ ಸಾಕು ಬಿಟ್ಬಿಡು ಎಂದೆ’ ಎಂಬುದು ಧ್ರುವ ಸರ್ಜಾ ಮಾತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು