AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿರಿಯ ಕಲಾವಿದರಿಗೆ ಅವಕಾಶ ನೀಡಿ ‘ಅತ್ಯುತ್ತಮ’ ಎನಿಸಿಕೊಂಡ ಕನ್ನಡ ಸಿನಿಮಾ ಈ ವಾರ ತೆರೆಗೆ

‘ಅತ್ಯುತ್ತಮ’ ಸಿನಿಮಾದಲ್ಲಿ ಶಿವಕುಮಾರ್​ ಜೇವರಗಿ ಜೊತೆ ಪದ್ಮವಾಸಂತಿ, ಎಂ.ಎಸ್​. ಉಮೇಶ್​, ಮೈಸೂರು ರಮಾನಂದ್​ ಸೇರಿದಂತೆ ಅನೇಕ ಹಿರಿಯ ಕಲಾವಿದರು ನಟಿಸಿದ್ದಾರೆ.

ಹಿರಿಯ ಕಲಾವಿದರಿಗೆ ಅವಕಾಶ ನೀಡಿ ‘ಅತ್ಯುತ್ತಮ’ ಎನಿಸಿಕೊಂಡ ಕನ್ನಡ ಸಿನಿಮಾ ಈ ವಾರ ತೆರೆಗೆ
‘ಅತ್ಯುತ್ತಮ’ ಸಿನಿಮಾ ತಂಡ
TV9 Web
| Edited By: |

Updated on: May 13, 2022 | 7:30 AM

Share

ಚಿತ್ರರಂಗದಲ್ಲಿ ಸಿನಿಮಾ ಚಟುವಟಿಕೆಗಳು ಗರಿಗೆದರಿವೆ. ಗಾಂಧಿನಗರ ಮತ್ತೆ ಹಳೇ ಚಾರ್ಮ್​ ಪಡೆದುಕೊಂಡಿದೆ. ಪ್ರತಿ ವಾರ ಹಲವು ಸಿನಿಮಾಗಳು (Kannada Cinema) ಬಿಡುಗಡೆ ಆಗುತ್ತಿವೆ. ಕೊವಿಡ್​ ಕಾರಣದಿಂದ ರಿಲೀಸ್​ ದಿನಾಂಕ ಮುಂದೂಡಿಕೊಂಡಿದ್ದ ಅನೇಕ ಚಿತ್ರಗಳು ಈಗ ಥಿಯೇಟರ್​ ಬಾಗಿಲಿಗೆ ಬರುತ್ತಿವೆ. ಈಗೇನೋ ಎಲ್ಲವೂ ಸರಿಯಾಗಿದೆ. ಆದರೆ ಕೊರೊನಾ ವೈರಸ್​ ಹಾವಳಿ ಜೋರಾದಾಗ ಕನ್ನಡ ಚಿತ್ರರಂಗದ (Kannada Film Industry) ಪರಿಸ್ಥಿತಿ ಹದಗೆಟ್ಟಿತ್ತು. ನಟನೆಯನ್ನೇ ನಂಬಿಕೊಂಡಿದ್ದ ಅನೇಕ ಹಿರಿಯ ಕಲಾವಿದರು ಸಮಸ್ಯೆಗೆ ಸಿಲುಕಿದ್ದರು. ನಂತರದ ದಿನಗಳಲ್ಲಿ ಅವರ ಆರ್ಥಿಕ ಪರಿಸ್ಥಿತಿ ಚೇತರಿಸಿಕೊಳ್ಳುವುದು ಕಷ್ಟವಾಗಿತ್ತು. ಹಿರಿಯ ನಟ-ನಟಿಯರಿಗೆ ಅವಕಾಶ ನೀಡಲು ಕೆಲವು ನಿರ್ಮಾಪಕ-ನಿರ್ದೇಶಕರು ಹಿಂದೇಟು ಹಾಕುತ್ತಾರೆ. ಆದರೆ ‘ಅತ್ಯುತ್ತಮ’ ಕನ್ನಡ ಸಿನಿಮಾದಲ್ಲಿ ಹಳೆಯ ಕಲಾವಿದರಿಗೆ ನಿರ್ದೇಶಕ ಕಮ್​ ನಾಯಕ ನಟ ಶಿವಕುಮಾರ್​ ಬಿ. ಜೇವರಗಿ ಅವಕಾಶ ನೀಡಿದ್ದಾರೆ. ಆ ಕಾರಣದಿಂದ ಇದು ನಿಜವಾಗಿಯೂ ‘ಅತ್ಯುತ್ತಮ’ ಸಿನಿಮಾ ಎಂದಿದ್ದಾರೆ ಹಿರಿಯ ಕಲಾವಿದರು. ಕನ್ನಡ ಚಿತ್ರರಂಗದಲ್ಲಿ ಹಲವು ದಶಕಗಳ ಅನುಭವ ಹೊಂದಿರುವ ಎಂ.ಎಸ್​. ಉಮೇಶ್​ (MS Umesh) ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮೈಸೂರು ರಮಾನಂದ್​ ಅವರು ಕೂಡ ಅಭಿನಯಿಸಿದ್ದಾರೆ. ಈ ಸಿನಿಮಾ ಇಂದು (ಮೇ 13) ಬಿಡುಗಡೆ ಆಗುತ್ತಿದೆ.

‘ಅತ್ಯುತ್ತಮ’ ಸಿನಿಮಾಗೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿರುವ ಶಿವಕುಮಾರ್​ ಬಿ. ಜೇವರಗಿ ಅವರು ಹೀರೋ ಆಗಿಯೂ ನಟಿಸಿದ್ದಾರೆ. ಅವರ ಜೊತೆ ಅನುಭವಿ ಕಲಾವಿದರಾದ ಪದ್ಮವಾಸಂತಿ, ಜೈ ಜಗದೀಶ್​, ಸುಚೇಂದ್ರ ಪ್ರಸಾದ್, ಗೀತಾ ಅಡಿಗ​ ಮುಂತಾದವರು ಕೂಡ ಬಣ್ಣ ಹಚ್ಚಿದ್ದಾರೆ. ಸಂಸಾರದ ಸಾಮರಸ್ಯದ ಬಗ್ಗೆ ಸಮಾಜಕ್ಕೊಂದು ಉತ್ತಮ ಸಂದೇಶ ನೀಡುವ ಆಶಯದಿಂದ ತಯಾರಾದ ‘ಅತ್ಯುತ್ತಮ’ ಚಿತ್ರಕ್ಕೆ ಸುನಿತಾ ಎಸ್​. ಜೇವರಗಿ ಬಂಡವಾಳ ಹೂಡಿದ್ದಾರೆ.

‘ನಮ್ಮ ನಮ್ಮ ಮನೆಗಳಲ್ಲಿ ನಡೆಯುವ ಜಗಳಗಳಿಂದಾಗಿ ಎಳೆ ಮನಸ್ಸುಗಳ ಮೇಲೆ ಕೆಟ್ಟ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕಾದ್ದು ನಮ್ಮ ಜಾಣತನ. ಅದನ್ನು ಸರಿಯಾಗಿ ಸಾಧಿಸಿದವವೇ ಅತ್ಯುತ್ತಮರು’ ಎಂಬ ಡೈಲಾಗ್​ ಟ್ರೇಲರ್​ನಲ್ಲಿ ಹೈಲೈಟ್​ ಆಗಿದೆ. ಅದೇ ಥೀಮ್​ನಲ್ಲಿ ಇಡೀ ಸಿನಿಮಾ ಮೂಡಿಬಂದಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಸಿನಿಮಾಗೆ ದಿನೇಶ್​ ಕುಮಾರ್​ ಸಂಗೀತ ನೀಡಿದ್ದಾರೆ. ರವಿ ಸಂಕಲನ, ಸಿ. ನಾರಾಯಣ್​ ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದಾರೆ.

ಇದನ್ನೂ ಓದಿ
Image
ರಿಲೀಸ್​ ದಿನಾಂಕ ಲಾಕ್​ ಮಾಡಿದ ‘ತ್ರಿವಿಕ್ರಮ’; ಜೂ.24ಕ್ಕೆ ಬರಲಿದೆ ವಿಕ್ರಮ್​ ರವಿಚಂದ್ರನ್​ ಸಿನಿಮಾ
Image
ಸೀರಿಯಲ್​, ಸಿನಿಮಾ ಬಳಿಕ ಶ್ರೀಮಹದೇವ್ ಇನ್ನೊಂದು ಪ್ರಯತ್ನ; ಹೊಸಬರ ಜತೆ ‘Saturday ನೈಟಲಿ’​ ಸಾಂಗ್​
Image
ಹಿಂದಿಯಲ್ಲಿ ‘777 ಚಾರ್ಲಿ’ ಚಿತ್ರಕ್ಕೆ ಸಿಕ್ತು ದೊಡ್ಡ ಬೆಂಬಲ; ರಕ್ಷಿತ್ ಫ್ಯಾನ್ಸ್​ಗೆ ಗುಡ್​ ನ್ಯೂಸ್
Image
Bairagee Song: ಹೊಸ ಅವತಾರದಲ್ಲಿ ಶಿವಣ್ಣ; ಅಭಿಮಾನಿಗಳ ಮನಗೆದ್ದ ಬೈರಾಗಿ ಚಿತ್ರದ ‘ನಕರನಖ’

ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಮೈಸೂರು ರಮಾನಂದ್​ ಮಾತನಾಡಿದರು. ‘ಹಳೇ ಬೇರು ಹೊಸ ಚಿಗುರು ಕೂಡಿರಲು ಮರ ಸೊಗಸು ಎನ್ನುವ ಮಾತಿನಂತೆ ನಮ್ಮಂಥ ಹಳೇ ಕಲಾವಿದರಿಗೆ ನಿರ್ದೇಶಕರು ಈ ಸಿನಿಮಾದಲ್ಲಿ ಅವಕಾಶ ನೀಡಿದ್ದಾರೆ. ಸೂಕ್ತವಾದ ಸಂಭಾವನೆ ನೀಡಿದ್ದಾರೆ. ಶೂಟಿಂಗ್​ ಸಮಯದಲ್ಲಿ ಎಲ್ಲ ಅನುಕೂಲವನ್ನೂ ಮಾಡಿಕೊಟ್ಟಿದ್ದರು. ಆ ವಿಚಾರದಲ್ಲಿ ಹೆಸರಿಗೆ ತಕ್ಕಂತೆಯೇ ಈ ಚಿತ್ರತಂಡ ಅತ್ಯುತ್ತಮ ಆಗಿದೆ. ಈ ಚಿತ್ರದಲ್ಲಿ ಸಾಮಾಜಿಕ ಕಳಕಳಿಯ ಸಂದೇಶ ಇದೆ’ ಎಂದರು ಮೈಸೂರು ರಮಾನಂದ್.

ಈ ಚಿತ್ರದಲ್ಲಿ ನಟಿಸಿದ್ದು ಪದ್ಮವಾಸಂತಿ ಅವರಿಗೆ ಖುಷಿ ನೀಡಿದೆ. ‘ನಾನು ಜೈಗದೀಶ್​ ಅವರ ಜೊತೆ ತೆರೆ ಹಂಚಿಕೊಂಡಿದ್ದೇನೆ. ಎಲ್ಲ ಹಳೇ ಕಲಾವಿದರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಹೆಚ್ಚು ಖುಷಿ ಆಯಿತು. ಕೊವಿಡ್​ ನಂತರ ಇಷ್ಟು ಜನ ಕಲಾವಿದರಿಗೆ ಕೆಲಸ ಕೊಟ್ಟಿದ್ದಕ್ಕೆ ನಿರ್ದೇಶಕ ಶಿವಕುಮಾರ್​ ಜೇವರಗಿ ಅವರಿಗೆ ಧನ್ಯವಾದಗಳು. ಕುಟುಂಬದ ಎಲ್ಲ ಸದಸ್ಯರಿಗೆ ಈ ಸಿನಿಮಾದಲ್ಲಿ ಒಳ್ಳೆಯ ಮೆಸೇಜ್​ ಇದೆ’ ಎಂದಿದ್ದಾರೆ ನಟಿ ಪದ್ಮವಾಸಂತಿ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್