AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pradeep Raj Death: ಕೊರೊನಾ ಸೋಂಕಿನಿಂದ ‘ಕಿರಾತಕ’ ಚಿತ್ರದ​ ನಿರ್ದೇಶಕ ಪ್ರದೀಪ್​ ರಾಜ್​ ನಿಧನ

Pradeep Raj: ಯಶ್​ ಅಭಿನಯದ ‘ಕಿರಾತಕ’ ಚಿತ್ರವನ್ನು ನಿರ್ದೇಶನ ಮಾಡಿದ್ದ ಪ್ರದೀಪ್​ ರಾಜ್​ ಕೊರೊನಾದಿಂದ ನಿಧನರಾಗಿದ್ದಾರೆ. ಅವರ ಅಗಲಿಕೆಗೆ ಕನ್ನಡ ಚಿತ್ರರಂಗ ಕಂಬನಿ ಮಿಡಿಯುತ್ತಿದೆ.

Pradeep Raj Death: ಕೊರೊನಾ ಸೋಂಕಿನಿಂದ ‘ಕಿರಾತಕ’ ಚಿತ್ರದ​ ನಿರ್ದೇಶಕ ಪ್ರದೀಪ್​ ರಾಜ್​ ನಿಧನ
ಯಶ್​, ಪ್ರದೀಪ್​ ರಾಜ್​, ಓವಿಯಾ
TV9 Web
| Updated By: ಮದನ್​ ಕುಮಾರ್​|

Updated on:Jan 20, 2022 | 8:42 AM

Share

ಕನ್ನಡದ ಚಿತ್ರರಂಗಕ್ಕೆ 2022ರ ಶುರುವಿನಲ್ಲೇ ಕಹಿ ಸುದ್ದಿ ಕೇಳಿಬಂದಿದೆ. ಸ್ಯಾಂಡಲ್​ವುಡ್​ನಲ್ಲಿ ಹಲವು ಸಿನಿಮಾಗಳಿಗೆ ನಿರ್ದೇಶನ ಮಾಡಿ ಫೇಮಸ್​ ಆಗಿದ್ದ ನಿರ್ದೇಶಕ ಪ್ರದೀಪ್​ ರಾಜ್​ (Pradeep Raj) ನಿಧನರಾಗಿದ್ದಾರೆ. ಈ ಸುದ್ದಿಯನ್ನು ಅವರ ಕುಟುಂಬದ ಸದಸ್ಯರು ಖಚಿತಪಡಿಸಿದ್ದಾರೆ. ಪ್ರದೀಪ್​ ರಾಜ್​ ಅವರಿಗೆ 46 ವರ್ಷ ವಯಸ್ಸಾಗಿತ್ತು. ಹಲವು ವರ್ಷಗಳಿಂದ ಅವರು ಡಯಾಬಿಟಿಸ್​ನಿಂದ ಬಳಲುತ್ತಿದ್ದರು. ಇತ್ತೀಚೆಗೆ ಅವರಿಗೆ ಕೊರೊನಾ (Coronavirus) ಸೋಂಕು ತಗುಲಿತ್ತು. ಅದರಿಂದ ಅವರು ಇಂದು (ಜ.20) ಮೃತಪಟ್ಟರು ಎಂದು ಸಹೋದರ ಪ್ರಶಾಂತ್​ ರಾಜ್ ಅವರು ಟಿವಿ9ಗೆ ಮಾಹಿತಿ ನೀಡಿದ್ದಾರೆ. ಯಶ್​ ಅಭಿನಯದ ‘ಕಿರಾತಕ’ (Kirataka Kannada Movie) ಚಿತ್ರಕ್ಕೆ ಪ್ರದೀಪ್​ ರಾಜ್​ ನಿರ್ದೇಶನ ಮಾಡಿದ್ದರು. ಆ ಚಿತ್ರದಿಂದ ಅವರ ಖ್ಯಾತಿ ಹೆಚ್ಚಿತ್ತು. ಅವರ ನಿಧನಕ್ಕೆ ಅನೇಕರು ಕಂಬನಿ ಮಿಡಿಯುತ್ತಿದ್ದಾರೆ. ಕನ್ನಡದಲ್ಲಿ ಹಲವು ಸಿನಿಮಾಗಳನ್ನು ಪ್ರದೀಪ್​ ರಾಜ್​ ನಿರ್ದೇಶಿಸಿದ್ದರು. ಸತೀಶ್​ ನೀನಾಸಂ ನಟನೆಯ ‘ಅಂಜದ ಗಂಡು’, ಕಾರ್ತಿಕ್​ ಜಯರಾಮ್​, ಚಿಕ್ಕಣ್ಣ ಮುಂತಾದವರು ಅಭಿನಯಿಸಿದ್ದ ‘ಬೆಂಗಳೂರು 560023’, ದುನಿಯಾ ವಿಜಯ್​ ನಟನೆಯ ‘ರಜನಿ ಕಾಂತ’ ಇತ್ಯಾದಿ ಸಿನಿಮಾಗಳಿಗೆ ಅವರ ನಿರ್ದೇಶನವಿತ್ತು.

ಕಳೆದ 6 ತಿಂಗಳಿನಿಂದ ಪ್ರದೀಪ್​ ರಾಜ್​ ಅವರಿಗೆ ಆರೋಗ್ಯ ಕೈಕೊಟ್ಟಿತ್ತು. ಆ ಬಗ್ಗೆ ಅವರ ಸಹೋದರ ಪ್ರಶಾಂತ್​ ರಾಜ್​ ಮಾಹಿತಿ ನೀಡಿದ್ದಾರೆ. ‘ಕೊರೊನಾ ಸೋಂಕು ತಗುಲಿತ್ತು. 6 ತಿಂಗಳಿಂದ ಲಿವರ್​ ಸಮಸ್ಯೆ ಆಗಿತ್ತು. ಅನೇಕ ಆಸ್ಪತ್ರೆಗಳಿಗೆ ತೋರಿಸಿದ್ದೆವು. ಕಳೆದ 15 ವರ್ಷದಿಂದಲೂ ಅವರಿಗೆ ಡಯಾಬಿಟಿಸ್​ ಇತ್ತು. ಕೊರೊನಾ ಲಾಕ್​ಡೌನ್​ ಸಮಯದಲ್ಲಿ ಅವರು ಕಾಳಜಿ ವಹಿಸಲಿಲ್ಲ. ಅದರಿಂದ ಒಳಗಡೆ ಇನ್​ಫೆಕ್ಷನ್​ ಆಯಿತು’ ಎಂದು ಪ್ರಶಾಂತ್​ ರಾಜ್ ಮಾಹಿತಿ ನೀಡಿದ್ದಾರೆ.​

‘ನಮ್ಮ ಸ್ವಂತ ಊರು ಪಾಂಡಿಚೆರಿ. ಹಾಗಾಗಿ ಕಳೆದ ಆಗಸ್ಟ್​ನಿಂದ ಇಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೆವು. ಮಧ್ಯರಾತ್ರಿ 3 ಗಂಟೆಗೆ ಕೊನೆಯುಸಿರೆಳೆದರು. ತಮಗೆ ಇನ್ನೂ ಚಿಕ್ಕ ವಯಸ್ಸು, ಮಾತ್ರೆ ತಗೊಂಡ್ರೆ ಸರಿಯಾಗತ್ತೆ ಅಂತ ಅವರು ನಿರ್ಲಕ್ಷ್ಯ ಮಾಡಿದ್ರು’ ಎಂದು ಪ್ರಶಾಂತ್​ ರಾಜ್​ ಮಾಹಿತಿ ತಿಳಿಸಿದ್ದಾರೆ.

ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಪ್ರದೀಪ್​ ರಾಜ್​ ಅಗಲಿದ್ದಾರೆ. ಗುರುವಾರ (ಜ.20) ಮಧ್ಯಾಹ್ನ 3 ಗಂಟೆ ಸುಮಾರಿಗೆ ಪಾಂಡಿಚರಿಯಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ. ನಿಧನದ ಸುದ್ದಿ ತಿಳಿದು ಕನ್ನಡ ಚಿತ್ರರಂಗದ ಅನೇಕರು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ:

Covid-19: ಕೊವಿಡ್​ನಿಂದ ಮೃತಪಟ್ಟವರ ದೇಹದಲ್ಲೂ 9 ದಿನ ಕೊರೊನಾವೈರಸ್ ಜೀವಂತವಾಗಿರುತ್ತದೆ!

ಕೊರೊನಾ 3ನೇ ಅಲೆ ಉತ್ತುಂಗದಲ್ಲಿ ಪ್ರತಿದಿನದ ಸೋಂಕು ಪ್ರಕರಣಗಳು 1 ಲಕ್ಷ ದಾಟಬಹುದು: ಆರೋಗ್ಯ ಸಚಿವ ಸುಧಾಕರ

Published On - 8:15 am, Thu, 20 January 22

ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?