ರಾಜ್​ಕುಮಾರ್ ಮೃತಪಟ್ಟ ಸುದ್ದಿಯನ್ನು ಗೌಪ್ಯವಾಗಿ ಇಟ್ಟಿದ್ದರೆ ಆಗುತ್ತಿರಲಿಲ್ಲ ಅನಾಹುತ; ನಡೆದಿದ್ದೇನು?

Rajkumar Death Anniversary: ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ರಾಜ್​ಕುಮಾರ್ ಶವ ಇದೆ ಎಂದರೆ ಆಸ್ಪತ್ರೆಯ ಗತಿ, ಅಲ್ಲಿರುವ ರೋಗಿಗಳ ಗತಿ ಏನಾಗಬೇಕು ಎನ್ನುವ ಚಿಂತೆ ಕುಟುಂಬದವರಿಗೆ ಕಾಡಿತು. ಹೀಗಾಗಿ, ಶವನ ಮನೆಗೆ ತೆಗೆದುಕೊಂಡು ಹೋಗಲಾಯಿತು. ಪೊಲೀಸರಿಗೆ ಸಾರಾ ಗೋವಿಂದು ಅವರು ಭದ್ರತೆ ನೀಡುವಂತೆ ಮನವಿ ಮಾಡಿಕೊಂಡರು.

ರಾಜ್​ಕುಮಾರ್ ಮೃತಪಟ್ಟ ಸುದ್ದಿಯನ್ನು ಗೌಪ್ಯವಾಗಿ ಇಟ್ಟಿದ್ದರೆ ಆಗುತ್ತಿರಲಿಲ್ಲ ಅನಾಹುತ; ನಡೆದಿದ್ದೇನು?
ರಾಜ್​ಕುಮಾರ್
Follow us
| Updated By: ರಾಜೇಶ್ ದುಗ್ಗುಮನೆ

Updated on:Apr 12, 2024 | 7:30 AM

ವರನಟ ಡಾ.ರಾಜ್​ಕುಮಾರ್ ಅವರು 2006ರ ಏಪ್ರಿಲ್ 12ರಂದು ಮೃತಪಟ್ಟರು. ಇಂದು ಅವರ ಪುಣ್ಯತಿಥಿ. ಈ ವೇಳೆ ಅಭಿಮಾನಿಗಳು ರಾಜ್​ಕುಮಾರ್ ಅವರನ್ನು ನೆನಪಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಅವರು ನಟಿಸಿದ ಸಿನಿಮಾಗಳು ಈಗಲೂ ಅನೇಕರ ಫೇವರಿಟ್ ಎನಿಸಿಕೊಂಡಿದೆ. ಕಂಠೀರವ ಸ್ಟುಡಿಯೋದಲ್ಲಿರುವ ರಾಜ್​ಕುಮಾರ್ ಸಮಾಧಿಗೆ ಕುಟುಂಬದವರು ಪೂಜೆ ಸಲ್ಲಿಕೆ ಮಾಡಲಿದ್ದಾರೆ. ರಾಜ್​ಕುಮಾರ್ ಮೃತಪಟ್ಟ ದಿನ ಬೆಂಗಳೂರಿನಲ್ಲಿ ಸಾಕಷ್ಟು ಅಹಿತಕರ ಘಟನೆಗಳು ನಡೆದವು. ಅಣ್ಣಾವ್ರು ಮೃತಪಟ್ಟ ವಿಚಾರವನ್ನು ಅನೇಕರಿಂದ ಅರಗಿಸಿಕೊಳ್ಳೋಕೆ ಸಾಧ್ಯವೇ ಆಗಿರಲಿಲ್ಲ. ಒಂದೊಮ್ಮೆ ರಾಜ್​ಕುಮಾರ್ (Rajkumar) ಮೃತಪಟ್ಟ ವಿಚಾರವನ್ನು ಗೌಪ್ಯವಾಗಿ ಇಟ್ಟಿದ್ದರೆ ಅಷ್ಟೆಲ್ಲ ಅಹಿತಕರ ಘಟನೆ ನಡೆಯುತ್ತಿರಲಿಲ್ಲ ಎನ್ನುವ ಅಭಿಪ್ರಾಯ ಅನೇಕರದ್ದು.

ಸಾರಾ ಗೋವಿಂದು ಅವರು ಈ ಬಗ್ಗೆ ಮಾತನಾಡಿದ್ದರು. ರಾಜ್​ಕುಮಾರ್ ಅವರು ಮೃತಪಟ್ಟ ವಿಚಾರ ಕುಟುಂಬದವರಿಗೆ ಶಾಕಿಂಗ್ ಎನಿಸಿತ್ತು. 2008ರ ಏಪ್ರಿಲ್ 12ರ ಮಧ್ಯಾಹ್ನ 2 ಗಂಟೆಗೆ ರಾಜ್​ಕುಮಾರ್ ನಿಧನ ವಾರ್ತೆ ಅವರಿಗೆ ತಿಳಿದಿತ್ತು. ಸ್ವತಃ ರಾಘವೇಂದ್ರ ರಾಜ್​ಕುಮಾರ್ ಅವರು ಸಾರಾ ಗೋವಿಂದು​ಗೆ ಮಾಹಿತಿ ನೀಡಿದ್ದರು. ಇದನ್ನು ಕೇಳಿ ಅವರಿಗೆ ಶಾಕ್ ಆಯಿತು. ಅವರು ನೇರವಾಗಿ ರಾಜ್​ಕುಮಾರ್ ಮನೆಗೆ ಹೋದರು.

ಇಂಗ್ಲಿಷ್ ಮಾಧ್ಯಮವೊಂದು ಡಾಕ್ಟರ್​ನ ಸಂದರ್ಶನ ಮಾಡಲು ಎಂಎಸ್​ ರಾಮಯ್ಯ ಆಸ್ಪತ್ರೆಗೆ ಬಂದಿತ್ತು. ಅದೇ ಸಮಯಕ್ಕೆ ರಾಜ್​ಕುಮಾರ್ ಅವರ ಡೆಡ್ ಬಾಡಿಯನ್ನು ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿದ್ದ ಮಾಧ್ಯಮದವರು ಕೇಳಿದರೂ ಕುಟುಂಬದವರು ಸುಳ್ಳು ಹೇಳಿದ್ದರು. ‘ರಾಜ್​ಕುಮಾರ್​ಗೆ ಅನಾರೋಗ್ಯ ಆಗಿದೆ. ಹೀಗಾಗಿ, ನಾವು ಆಸ್ಪತ್ರೆಗೆ ಕರೆತಂದಿದ್ದೇವೆ’ ಎಂದು ಮಾಹಿತಿ ನೀಡಿದ್ದರು. ಆದರೆ, ಆ ಮಾಧ್ಯಮದವರು ಬೇರೆ ಕಡೆಯಿಂದ ವಿಚಾರಿಸಿದಾಗ ರಾಜ್​ಕುಮಾರ್ ಮೃತಪಟ್ಟಿರೋ ವಿಚಾರ ತಿಳಿದಿತ್ತು. ಅವರು ನ್ಯೂಸ್​ನ ಬ್ರೇಕ್ ಮಾಡಿಯೇ ಬಿಟ್ಟರು. ಇದನ್ನು ಕೇಳಿ ಜನರು ರೊಚ್ಚಿಗೆದ್ದರು.

ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ರಾಜ್​ಕುಮಾರ್ ಶವ ಇದೆ ಎಂದರೆ ಆಸ್ಪತ್ರೆಯ ಗತಿ, ಅಲ್ಲಿರುವ ರೋಗಿಗಳ ಗತಿ ಏನಾಗಬೇಕು ಎನ್ನುವ ಚಿಂತೆ ಕುಟುಂಬದವರಿಗೆ ಕಾಡಿತು. ಹೀಗಾಗಿ, ಶವನ ಮನೆಗೆ ತೆಗೆದುಕೊಂಡು ಹೋಗಲಾಯಿತು. ಪೊಲೀಸರಿಗೆ ಸಾರಾ ಗೋವಿಂದು ಅವರು ಭದ್ರತೆ ನೀಡುವಂತೆ ಮನವಿ ಮಾಡಿಕೊಂಡರು. ಆದರೆ, ಪೊಲೀಸರು ಇದನ್ನು ಗಂಭೀರವಾಗಿ ಸ್ವೀಕರಿಸಿಯೇ ಇರಲಿಲ್ಲ.

ಕಣ್ಣನ್ನು ದಾನ ಮಾಡಿದ ಬಳಿಕ ರಾಜ್​ಕುಮಾರ್ ಬಾಡಿಯನ್ನು ಪ್ಯಾಲೇಸ್ ಗ್ರೌಂಡ್​ಗೆ ತೆಗೆದುಕೊಂಡು ಹೋಗಲಾಯಿತು. ಅಲ್ಲಿ ಜನವೋ ಜನ. ಇದ್ದಿದ್ದೇ ಕೆಲವೇ ಕೆಲವು ಪೊಲೀಸರು. ಮರಳಿ ಮನೆಗೆ ಹೋಗಬೇಕು ಎಂದು ನಿರ್ಧರಿಸಲಾಗಿತ್ತು. ಆದರೆ, ಆ್ಯಂಬುಲೆನ್ಸ್ ಅಡಿಯಲ್ಲಿ ಫ್ಯಾನ್ಸ್ ಮಲಗಿದ್ದರಿಂದ ವಾಹನ ತೆಗೆಯೋಕೆ ಸಾಧ್ಯವಾಗಿಲ್ಲ.

ಇದನ್ನೂ ಓದಿ: ಆಡಿ ಕ್ಯೂ 7 ಕಾರು ಖರೀದಿಸಿದ ಅಶ್ವಿನಿ ಪುನೀತ್​ರಾಜ್​ಕುಮಾರ್, ಬೆಲೆ ಎಷ್ಟು ಕೋಟಿ?

ರಾಜ್​ಕುಮಾರ್ ಮೃತಪಟ್ಟ ವಿಚಾರ ಕೇಳಿ ಫ್ಯಾನ್ಸ್ ರೊಚ್ಚಿಗೆದ್ದರು. ಅಭಿಮಾನಿಗಳು ಕಲ್ಲು ತೂರಾಟ ಮಾಡಿದರು. ರಾತ್ರಿ ವೇಳೆಗೆ ಎಲ್ಲವೂ ಕಂಟ್ರೋಲ್​ಗೆ ಸಿಕ್ಕಿತ್ತು. ಪೊಲೀಸ್ ಫೋರ್ಸ್ ಬಂದ ಬಳಿಕ ಎಲ್ಲವೂ ಶಾಂತವಾಯ್ತು. ನಂತರ ಕಂಠೀರವ ಕಂಠೀರವ ಸ್ಟೇಡಿಯಂನಲ್ಲಿ ರಾಜ್​ಕುಮಾರ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ರಾಜ್​ಕುಮಾರ್ ಶವವನ್ನು ಕಂಠೀರವ ಸ್ಟುಡಿಯೋಗೆ ತೆಗೆದುಕೊಂಡು ಹೋಗಬೇಕಿತ್ತು. ಆಗ ಸಾಕಷ್ಟು ಗಲಾಟೆ ನಡೆದಿತ್ತು. ಪೊಲೀಸ್ ಫೈರಿಂಗ್​ನಲ್ಲಿ ಎಂಟು ಜನರು ಮೃತಪಟ್ಟರು. ಬೇಸರದ ಸಂಗತಿ ಎಂದರೆ ಅಂತಿಮ ಸಂಸ್ಕಾರವನ್ನು ಸರಿಯಾಗಿ ಮಾಡಲು ಕುಟುಂಬದವರಿಗೆ ಆಗಿಲ್ಲ. ಕುಟುಂಬದವರು ಹಾಕಬೇಕಿದ್ದ ಮಣ್ಣನನ್ನು ಅಲ್ಲಿದ್ದ ಅಭಿಮಾನಿಗಳೇ ಹಾಕಿದ್ದರು. ಪುನೀತ್ ಹಾಗೂ ಶಿವರಾಜ್​ಕುಮಾರ್​ಗೆ ಅಂತಿಮ ಸಂಸ್ಕಾರ ನಡೆಯುವ ಜಾಗದ ಬಳಿಯೂ ಹೋಗೋಕೆ ಹರಸಾಹಸ ಪಡಬೇಕಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:09 am, Fri, 12 April 24