ಜ.19ಕ್ಕೆ ಬಿಡುಗಡೆ ಆಗಲಿದೆ ‘ಕಡಲ್​’ ಸಿನಿಮಾ; ಇದು ರವಿ ಬಸ್ರೂರು ನಿರ್ದೇಶನದ ಚಿತ್ರ

‘ಕಡಲ್​ ಚಿತ್ರದ ಖಾಸಗಿ ಪ್ರದರ್ಶನ ಯಶಸ್ವಿ ಆದ ಬಳಿಕ ಇದನ್ನು ಬಿಡುಗಡೆ ಮಾಡಿ ಎಲ್ಲರಿಗೂ ತೋರಿಸಿ ಎಂಬ ಬೇಡಿಕೆ ಬಂತು. ಹಾಗಾಗಿ ಇದೇ 19ರಿಂದ ನಮ್ಮ ಕಡಲ್​ ಸಿನಿಮಾ ರಾಜ್ಯಾದ್ಯಂತ ರಿಲೀಸ್​ ಆಗಲಿದೆ. ನಮ್ಮ ಈ ಹಿಂದಿನ ಸಿನಿಮಾಗಳಿಗೆ ಬೆಂಬಲ ನೀಡಿದ ರೀತಿಯೇ ಈ ಸಿನಿಮಾಗೂ ನಿಮ್ಮ ಶುಭ ಹಾರೈಕೆ ಇರಲಿ’ ಎಂದು ರವಿ ಬಸ್ರೂರು ಹೇಳಿದ್ದಾರೆ.

ಜ.19ಕ್ಕೆ ಬಿಡುಗಡೆ ಆಗಲಿದೆ ‘ಕಡಲ್​’ ಸಿನಿಮಾ; ಇದು ರವಿ ಬಸ್ರೂರು ನಿರ್ದೇಶನದ ಚಿತ್ರ
ಕಡಲ್​ ಸಿನಿಮಾ ಪೋಸ್ಟರ್​
Follow us
|

Updated on: Jan 16, 2024 | 7:11 PM

ರವಿ ಬಸ್ರೂರು (Ravi Basrur) ಅವರು ಕೇವಲ ಸಂಗೀತ ನಿರ್ದೇಶಕ ಮಾತ್ರವಲ್ಲ, ಸಿನಿಮಾ ನಿರ್ದೇಶಕನಾಗಿಯೂ ಅವರು ಸಕ್ರಿಯರಾಗಿದ್ದಾರೆ. ಈಗಾಗಲೇ ಒಂದಷ್ಟು ಸಿನಿಮಾಗಳಿಗೆ ಆ್ಯಕ್ಷನ್​-ಕಟ್​ ಹೇಳಿರುವ ಅವರು ಈಗ ಹೊಸ ಸಿನಿಮಾದೊಂದಿಗೆ ಜನರ ಎದುರು ಬರುತ್ತಿದ್ದಾರೆ. ‘ಗರ್ ಗರ್ ಮಂಡ್ಲ’, ‘ಕಟಕ’, ‘ಬಿಲಿಂಡರ್’, ‘ಗಿರ್ಮಿಟ್’ ಸಿನಿಮಾಗಳನ್ನು ನಿರ್ದೇಶಿಸಿ ಗಮನ ಸೆಳೆದಿದ್ದ ರವಿ ಬಸ್ರೂರು ಅವರು ಈಗ ‘ಕಡಲ್​’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಬಿಡುಗಡೆ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಜನವರಿ 19ರಂದು ‘ಕಡಲ್​’ ಚಿತ್ರ (Kadal Movie) ತೆರೆಕಾಣಲಿದೆ.

ಹೆಸರೇ ಸೂಚಿಸುವಂತೆ ‘ಕಡಲ್​’ ಸಿನಿಮಾದಲ್ಲಿ ಕರಾವಳಿಯ ಮೀನುಗಾರರ ಜೀವನದ ಕಹಾನಿ ಇದೆ. ಸಮುದ್ರ ಜೊತೆ ಹೊಂದಿಕೊಂಡಿರುವ ಜನರ ಬದುಕಿನ ಕಥೆ ಇದರಲ್ಲಿ ಇದೆ. ಈ ಚಿತ್ರದ ಟ್ರೇಲರ್ ಗಮನ ಸೆಳೆದಿದೆ. ಸಂಕ್ರಾಂತಿ ಸಂದರ್ಭದಲ್ಲಿ ರವಿ ಬಸ್ರೂರು ಮ್ಯೂಸಿಕ್ ಚಾನಲ್​ನಲ್ಲಿ ‘ಕಡಲ್​’ ಟ್ರೇಲರ್​ ಬಿಡುಗಡೆಯಾಗಿದೆ. ಈಗಾಗಲೇ ಒಂದಷ್ಟು ಬಾರಿ ಈ ಸಿನಿಮಾದ ಪ್ರೈವೇಟ್​ ಸ್ಕ್ರೀನಿಂಗ್​ ನಡೆದಿದೆ. ಪ್ರತಿ ಬಾರಿ ಪ್ರದರ್ಶನ ಆದಾಗಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಇದನ್ನೂ ಓದಿ: ತನ್ನ ಹೆಸರು ಕೈಬಿಟ್ಟು ಮರುಜೀವ ಕೊಟ್ಟ ಪುಣ್ಯಾತ್ಮನ ಹೆಸರು ಇಟ್ಟುಕೊಂಡ ರವಿ ಬಸ್ರೂರು: ಯಾರು ಆ ರವಿ? ಎಲ್ಲಿದ್ದಾರೆ?

‘ಕಡಲ್​’ ಸಿನಿಮಾದಲ್ಲಿ ಸೌರಭ ಭಂಡಾರಿ, ಸೂಚನ್ ಶೆಟ್ಟಿ, ಚಿರಶ್ರೀ ಅಂಚನ್ ಅವರು ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ನಾಗೇಂದ್ರ ಕೋಟೆ, ಭಾಸ್ಕರ್ ಬಸ್ರೂರು, ವಿಜಯ್ ಬಸ್ರೂರು, ಸುಜಾತಾ ಅಂದ್ರದೆ ಸೇರಿದಂತೆ ಅನೇಕರು ನಟಿಸಿದ್ದಾರೆ. ಮೀನುಗಾರರ ಕಥೆಯ ಜೊತೆ ಪ್ರೀತಿ, ಪ್ರೇಮ ದ್ವೇಷದ ಕಹಾನಿಯೂ ಈ ಸಿನಿಮಾದಲ್ಲಿದೆ.

ಕಡಲ್​ ಸಿನಿಮಾದಲ್ಲಿ ಸೂಚನ್​ ಶೆಟ್ಟಿ

‘ಓಂಕಾರ್ ಮೂವೀಸ್ ಬ್ಯಾನರ್’ ಮೂಲಕ ಈ ಸಿನಿಮಾಗೆ ಎನ್‌.ಎಸ್. ರಾಜ್​ಕುಮಾರ್ ಅವರು ಬಂಡವಾಳ ಹೂಡಿದ್ದಾರೆ. ಸಚಿನ್ ಬಸ್ರೂರು ಛಾಯಾಗ್ರಹಣ ಮಾಡಿದ್ದಾರೆ. ನಿರ್ದೇಶಕನ, ಸಂಗೀತ ಹಾಗೂ ಸಂಕಲನದ ಜವಾಬ್ದಾರಿಯನ್ನು ರವಿ ಬಸ್ರೂರು ನಿಭಾಯಿಸಿದ್ದಾರೆ.

‘ನಮ್ಮ ತಂಡದ 5ನೇ ಪ್ರಯತ್ನ ಕಡಲ್​ ಸಿನಿಮಾ. ಖಾಸಗಿ ಪ್ರದರ್ಶನ ಯಶಸ್ವಿ ಆದ ಬಳಿಕ ಇದನ್ನು ಬಿಡುಗಡೆ ಮಾಡಿ ಎಲ್ಲರಿಗೂ ತೋರಿಸಿ ಎಂಬ ಬೇಡಿಕೆ ಬಂತು. ಹಾಗಾಗಿ ಇದೇ 19ರಿಂದ ನಮ್ಮ ಕಡಲ್​ ಸಿನಿಮಾ ರಾಜ್ಯಾದ್ಯಂತ ರಿಲೀಸ್​ ಆಗಲಿದೆ. ನಮ್ಮ ಈ ಹಿಂದಿನ ಸಿನಿಮಾಗಳಿಗೆ ಬೆಂಬಲ ನೀಡಿದ ರೀತಿಯೇ ಈ ಸಿನಿಮಾಗೂ ನಿಮ್ಮ ಶುಭ ಹಾರೈಕೆ ಇರಲಿ. ಒಂದು ಸಿನಿಮಾದಿಂದ 2 ಸಾವಿರ ಜನರ ಬದುಕು ಕಟ್ಟುತ್ತದೆ. ಆ ಉದ್ದೇಶದಿಂದ ವರ್ಷಕ್ಕೊಂದು ಸಿನಿಮಾ ಮಾಡುವ ಹವ್ಯಾಸ ಇಟ್ಟುಕೊಂಡಿದ್ದೇವೆ. ಇದರಿಂದ ಒಂದಷ್ಟು ತಂತ್ರಜ್ಞರಿಗೆ, ಕಲಾವಿದರಿಗೆ ಬೆಳಕು ಸಿಗುತ್ತದೆ. ದಯವಿಟ್ಟು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ’ ಎಂದು ರವಿ ಬಸ್ರೂರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್